Posts

Showing posts from 2015

ರುದ್ರಭಾಷ್ಯಪ್ರಕಾಶ - 3ನೇ ಅನುವಾಕ (ಸಂಪೂರ್ಣ)

ನಮಃ ಸಹಮಾನಾಯ ಈಗ ಮೂರನೆಯ ಅನುವಾಕವನ್ನು ವಿಚಾರಮಾಡಬೇಕಾಗಿದೆ : ನಮಃ ಸಹಮಾನಾಯ ನಿವ್ಯಾಧಿನ ಆವ್ಯಾಧಿನೀನಾಂ ಪತಯೇ ನಮೋ ನಮಃ ಕಕುಭಾಯ ನಿಷಂಗಿಣೇ ಸ್ತೇನಾನಾಂ ಪತಯೇ ನಮೋ ನಮೋ ನಿಷಂಗಿಣ ಇಷುಧಿಮತೇ ತಸ್ಕರಾಣಾಂ ಪತಯೇ ನಮೋ ನಮೋ ವಂಚತೇ ಪರಿವಂಚತೇ ಸ್ತಾಯೂನಾಂ ಪತಯೇ ನಮೋ ನಮೋ ನಿಚೇರವೇ ಪರಿಚರಾಯಾರಣ್ಯಾನಾಂ ಪತಯೇ ನಮಃ ||     'ಸಹಮಾನನೂ ನಿವ್ಯಾಧಿಯೂ ಆವ್ಯಾಧಿನಿಗಳ ಪತಿಯೂ ಕಕುಭನೂ ನಿಷಂಗಿಯೂ, ಕಳ್ಳರ ಒಡೆಯನೂ, ನಿಷಂಗಿಯೂ, ಇಷುಧಿಮಂತನೂ ತಸ್ಕರಪತಿಯೂ ಆಗಿರುವ, ವಂಚನೆಪರಿವಂಚನೆಗಳನ್ನು ಮಾಡುವ ಸ್ತಾಯುಗಳ ಪತಿಯೂ ಆದ, ನಿಚೇರುವೂ ಪರಿಚರನೂ ಅರಣ್ಯಕರ ಪತಿಯೂ ಆದವನಿಗೆ ನಮಸ್ಕಾರ!'     ಈ ಮಂತ್ರಗಳಲ್ಲಿ ರಾಜಸತಾಮಸಪ್ರಕೃತಿಯ ಜನರೆಲ್ಲರಲ್ಲಿಯೂ ಅಂತರ್ಯಾಮಿಯಾಗಿದ್ದುಕೊಂಡಿರುವವನು ರುದ್ರನೇ - ಎಂದು ತಿಳಿಸಲಾಗಿದೆ. ರುದ್ರನು ಸರ್ವಾತ್ಮಕನೆಂದಮೇಲೆ ಯಾವದೊಂದು ಶರೀರವನ್ನಾಗಲಿ ಉಪಾಧಿಯನ್ನಾಗಲಿ ಬಿಡದೆ ಎಲ್ಲದರಲ್ಲಿಯೂ ವ್ಯಾಪಿಸಿಕೊಂಡಿರಬೇಕಷ್ಟೆ! ಆದ್ದರಿಂದ ಇಲ್ಲಿ ಸ್ತುತಿಮಾಡಿರುವ ಬಗೆಯನ್ನು ಸರಿಯಾದ ರೀತಿಯಿಂದ ಸಮನ್ವಯ ಮಾಡಿಕೊಳ್ಳಬೇಕು. 'ಭಗವಂತನು ಸರ್ವೇಶ್ವರನು' - ಎಂಬ ಶಬ್ದಕ್ಕೆ ಸಂಕೋಚವಿಲ್ಲದೆ ಎಲ್ಲಾ ಜೀವರುಗಳಿಗೂ ಒಡೆಯನು - ಎಂಬ ಅಭಿಪ್ರಾಯವನ್ನು ನೆನಪಿಟ್ಟುಕೊಂಡು ಅರ್ಥಮಾಡಿಕೊಳ್ಳಬೇಕು.     ಈಗ ಮೊದಲನೆಯ ವಿಶೇಷಣವನ್ನು ವಿಚಾರಮಾಡೋಣ ಸಹಮಾನನೆಂದರೆ ಶತ್ರುಗಳನ್ನು ಹಿಮ್ಮೆಟ್ಟಿಸುವವನು - ಎಂದು ಒಂದರ್ಥ ಭಗವಂತನ ವಿಷಯದ

ದಕ್ಷಿಣಾಮೂರ್ತಿಸ್ತೋತ್ರ - 5 - ದೇಹಾದಿಗಳಲ್ಲಿ ಆತ್ಮತ್ವಭ್ರಾನ್ತಿ

ದೇಹಂ ಪ್ರಾಣಮಪೀನ್ದ್ರಿಯಾಣ್ಯಪಿ ಚಲಾಂ ಬುದ್ಧಿಂ ಚ ಶೂನ್ಯಂ ವಿದುಃ ಸ್ತ್ರೀಬಾಲಾನ್ಧಜಡೋಪಮಾಸ್ತ್ವಹಮಿತಿ ಭ್ರಾನ್ತಾ ಭೃಶಂ ವಾದಿನಃ | ಮಾಯಾಶಕ್ತಿವಿಲಾಸಕಲ್ಪಿತಮಹಾವ್ಯಾಮೋಹಸಂಹಾರಿಣೇ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ||     ಪರಮಾತ್ಮನು ಸ್ವಯಂಪ್ರಕಾಶನೆಂದೂ ಆತನ ಚೈತನ್ಯಪ್ರಕಾಶದಿಂದಲೇ ಹೊರಗಿನ ವಸ್ತುಗಳೆಲ್ಲವೂ ನಮಗೆ ತೋರುತ್ತಿರುವವೆಂದೂ ಈವರೆಗೆ ತಿಳಿದುಕೊಂಡದ್ದಾಯಿತು. ವಿಷಯಗಳನ್ನು ಇಂದ್ರಿಯಗಳ ಮೂಲಕವಾಗಿ ಚೈತನ್ಯವು ಬೆಳಗುತ್ತಿರುವದರಿಂದಲೇ ವಿಷಯನಾನಾತ್ವವೂ ವಿಷಯವೈಚಿತ್ರ್ಯವೂ ಜ್ಞಾನ ನಾನಾತ್ವವೂ ಜ್ಞಾನವೈಚಿತ್ರ್ಯವೂ ನಮಗೆ ತೋರುತ್ತಿದೆಯೇ ಹೊರತು ಪರಮಾರ್ಥವಾಗಿ ಈ ನಾನಾತ್ವವೈಚಿತ್ರ್ಯಗಳು ಇರುವದಿಲ್ಲ - ಎಂದು ಇದರಿಂದ ತಾನೇ ಸಿದ್ಧವಾಗುತ್ತದೆ.     ಆದರೂ ಇಲ್ಲಿ ಒಂದು ಶಂಕೆಯುಂಟಾಗುತ್ತದೆ. ವ್ಯವಹೃದಲ್ಲಿ ಬೇರೆ ಬೇರೆಯ ವಸ್ತುಗಳನ್ನು ಅರಿಯುವಾಗ ನಮಗೆ ಇವನ್ನು ನೋಡುತ್ತೇನೆ ಕೇಳುತ್ತೇನೆ, ಮೂಸುತ್ತೇನೆ, ಮುಟ್ಟುತ್ತೇನೆ, ಅರಿಯುತ್ತೇನೆ - ಎಂದು ಮುಂತಾಗಿಯೇ ಅರಿವಾಗುತ್ತದೆ. ನನ್ನೊಳಗೆ ನಾನು ಅಲೋಚಿಸುತ್ತಿದೇನೆ, ನಿಶ್ಚಯಿಸುತ್ತೇನೆ, ಕಲ್ಪಿಸುತ್ತೇನೆ, ನೆನಪಿಸಿಕೊಳ್ಳುತ್ತೇನೆ - ಎಂದು ಮುಂತಾದ ವ್ಯವಹಾರಗಳೂ ನಮಗೆ ಆಗುತ್ತಿರುತ್ತವೆ. ಯಾವ ಜ್ಞಾನವಾಗಲಿ ಕೆಲಸವಾಗಲಿ ಇಲ್ಲದೆ ಇರುವ ಗಾಢ ನಿದ್ರೆಯ ವಿಷಯದಲ್ಲಿ ಕೂಡ ಸುಮ್ಮನಿದ್ದೆನು, ಏನನ್ನೂ ಮಾಡಲಿಲ್ಲ, ಏನನ್ನೂ ಅರಿಯಲಿಲ್ಲ ಎಂದೇ ಪರಮಾರ್ಶನವಾಗುತ್ತದೆ.

ರುದ್ರಭಾಷ್ಯಪ್ರಕಾಶ - 2ನೇ ಅನುವಾಕ (ಸಂಪೂರ್ಣ)

ನಮೋ ಹಿರಣ್ಯಬಾಹವೇ     ಈಗ ಎರಡನೆಯ ಅನುವಾಕವನ್ನು ವಿಚಾರಮಾಡಬೇಕಾಗಿದೆ : ಇಲ್ಲಿಂದ ಪ್ರಾರಂಭಿಸಿ ಇನ್ನು ಎಂಟು ಅನುವಾಕಗಳವರೆಗೆ ಭಗವಂತನ ಸ್ತುತಿಯಿದೆ. ಈ ಸ್ತುತಿಯಲ್ಲಿ ರುದ್ರನ ಸರ್ವೇಶ್ವರತ್ವ, ಸರ್ವಾಂತರ್ಯಾಮಿತ್ವ, ಸರ್ವಾತ್ಮತ್ವ ಮುಂತಾದ ಗುಣಗಳನ್ನು ವರ್ಣಿಸಲಾಗಿದೆ. ಎರಡು, ಮೂರಿ, ನಾಲ್ಕನೆಯ ಅನುವಾಕಗಳ ಪೂರ ಎಂದರೆ 'ಶ್ವಪತಿಭ್ಯಶ್ಚ ವೋ ನಮಃ' ಎಂಬಲ್ಲಿಯವರೆಗಿನ ಮಂತ್ರಗಳು 'ಉಭಯತೋ ನಮಸ್ಕಾರ' ಮಂತ್ರಗಳಾಗಿವೆ; ಎಂದರೆ ಪ್ರಾರಂಭದಲ್ಲಿಯೂ ಕೊನೆಯಲ್ಲಿಯೂ 'ನಮಃ' ಎಂಬ ಶಬ್ದದಿಂದ ಕೂಡಿರುತ್ತವೆ. ಹೇಗೆಂದರೆ 'ನಮೋ ಹಿರಣ್ಯಬಾಹವೇ ಸೇನಾನ್ಯೇ ದಿಶಾಂ ಚ ಪತಯೇ ನಮಃ' ಎಂಬಿದು ಒಂದು ಮಂತ್ರವು. ಇಲ್ಲಿ ಎರಡೂ ಕಡೆ ನಮಶ್ಯಬ್ದವಿರುವದನ್ನು ಗಮನಿಸಬೇಕು. ಈಗ ಮಂತ್ರಗಳ ಅರ್ಥವನ್ನು ವಿಚಾರಮಾಡೋಣ. ನಮೋ ಹಿರಣ್ಯಬಾಹವೇ ಸೇನಾನ್ಯೇ ದಿಶಾಂ ಚ ಪತಯೇ ನಮೋ ನಮೋ ವೃಕ್ಷೇಭ್ಯೋ ಹರಿಕೇಶೇಭ್ಯಃ ಪಶೂನಾಂ ಪತಯೇ ನಮೋ ನಮಸ್ಸಸ್ಪಿಂಜರಾಯ ತ್ವಿಷೀಮತೇ ಪಥೀನಾಂ ಪತಯೇ ನಮೋ ನಮೋ ಬಭ್ಲುಶಾಯ ವಿವ್ಯಾಧಿನೇsನ್ನಾನಾಂ ಪತಯೇ ನಮಃ ||     'ಹಿರಣ್ಯಬಾಹುವೂ ಸೇನಾನಿಯೂ ದಿಕ್ಕುಗಳೊಡೆಯನೂ ಆದವನಿಗೆ ನಮಸ್ಕಾರ! ಹಸಿರಾದ ಕೇಶಗಳುಳ್ಳ ವೃಕ್ಷಗಳಿಗೂ ಪಶುಪತಿಗೂ ನಮಸ್ಕಾರ! ಸಸ್ಪಿಂಜರನೂ, ಕಾಂತಿಯುಕ್ತನೂ ಮಾರ್ಗಗಳಿಗೆ ಅಧಿಪತಿಯೂ ಆದವನಿಗೆ ನಮಸ್ಕಾರ! ವೃಷಭವಾಹನನಾಗಿಯೂ ವಿವ್ಯಾಧಿಯೂ ಅನ್ನಗಳೊಡೆಯನೂ ಆದವನಿಗೆ ನಮಸ್ಕಾರ!'     ಹಿರಣ್ಯಬ

ದಕ್ಷಿಣಾಮೂರ್ತಿಸ್ತೋತ್ರ - 4. - ಪರಮಾತ್ಮನು ಸ್ವಯಂಪ್ರಕಾಶನು

ನಾನಾಚ್ಛಿದ್ರಘಟೋದರಸ್ಥಿತಮಹಾದೀಪಪ್ರಬಾಭಾಸ್ವರಂ ಜ್ಞಾನಂ ಯಸ್ಯ ತು ಚಕ್ಷುರಾದಿಕರಣದ್ವಾರಾ ಬಹಿಃ ಸ್ಪನ್ದತೇ | ಜಾನಾಮೀತಿ ತಮೇವ ಭಾನ್ತಮನುಭಾತ್ಯೇತತ್ಸಮಸ್ತಂ ಜಗತ್ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ||     "ಬಗೆಬಗೆಯ ರಂಧ್ರಗಳಿಂದ ಗಡಿಗೆಯೊಳಗಿರುವ ದೊಡ್ಡ ದೀಪದ ಬೆಳಕಿನಂತೆ ಹೊಳೆಯುವ ಯಾವನ ಜ್ಞಾನವೇ ಚಕ್ಷುರಾದೀಂದ್ರಿಯಗಳ ಮೂಲಕ ಹೊರಕ್ಕೆ ಹೊರಡುಬರುತ್ತಿರುವದೋ, 'ಅರಿಯುತ್ತಿದ್ದೇನೆ' ಎಂದು ಹೊಳೆಯುವ ಯಾವ ಆತನನ್ನೇ ಅನುಸರಿಸಿ ಈ ಜಗತ್ತೆಲ್ಲವೂ ತೋರಿಕೊಳ್ಳುತ್ತಿರುವದೋ, ಆ ಶ್ರೀಗುರುಮೂರ್ತಿಯಾದ ಶ್ರೀದಕ್ಷಿಣಾಮೂರ್ತಿಗೆ ನಮಸ್ಕಾರ' ಎಂಬುದು ಶ್ಲೋಕದ ಅಕ್ಷರಾರ್ಥ.     ಪರಮಾತ್ಮನ ಪ್ರಕಾಶವೇ ವಸ್ತುಗಳ ತೋರಿಕೆ; ಆ ಪರಮಾತ್ಮನು ನಾನು ಎಂದು ಸಾಕ್ಷಾತ್ತಾಗಿ ಅನುಭವಕ್ಕೆ ತಂದುಕೊಂಡರೆ ಮತ್ತೆ ಈ ಸಂಸಾರಸಾಗರದಲ್ಲಿ ನಾವು ಬೀಳುವ ಅಂಜಿಕೆಯಿಲ್ಲ ಇದನ್ನು ಹಿಂದಿನ ಶ್ಲೋಕದಲ್ಲಿ ಹೇಳಲಾಗಿದೆ.     ಆ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಉಪಾಯವೇನು? ಆ ಪರಮಾತ್ಮನು ನಾನು ಎಂಬ ನೇರಾದ ಅನುಭವವನ್ನು ಮಾಡಿಕೊಂಡು ಸಂಸಾರಸಾಗರದ ಪಾರವನ್ನು ಕಾಣುವ ಬಗೆ ಎಂತು? ಎಂಬ ಪ್ರಶ್ನೆಯು ಸಹಜವಾಗಿ ಎದ್ದುಕೊಳ್ಳುತ್ತದೆಯಷ್ಟೆ? ಅದಕ್ಕೆ ಈಗ ಉತ್ತರವನ್ನು ತಿಳಿಸಲಾಗುವದು.     ಪರಮಾತ್ಮನ ಬೆಳಕೇ ವಸ್ತುಗಳ ತೋರಿಕೆಯ ಬೆಳಕು ಎಂಬುದರ ಅರ್ಥವೇನು? ಇದನ್ನು ನಾವು ವಿಮರ್ಶೆಮಾಡತಕ್ಕದ್ದು ಅವಶ್ಯ ಏಕೆಂದರೆ ವಸ್ತುಗಳು ತೋರುವಾಗಲೆಲ್ಲ

ರುದ್ರಭಾಷ್ಯಪ್ರಕಾಶ - 1ನೇ ಅನುವಾಕ (ಸಂಪೂರ್ಣ)

ಓಂ || ನಮಸ್ತೇ ರುದ್ರ ಮನ್ಯವ ಉತೋ ತ ಇಷವೇ ನಮಃ | ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾಮುತ ತೇ ನಮಃ ||1|| "ಎಲೈ ರುದ್ರನೆ, ನಿನಗೆ ನಮಸ್ಕಾರವು ಮತ್ತು ನಿನ್ನ ಕೋಪಕ್ಕೆ ನಮಸ್ಕಾರ! ಮತ್ತು ನಿನ್ನ ಬಾಣಗಳಿಗೆ, ಧನಸ್ಸಿಗೆ ಹಾಗೂ ಧನುರ್ಬಾಣಗಳನ್ನು ಹಿಡಿದಿರುವ ಎರಡು ತೋಳುಗಳಿಗೆ ನಮಸ್ಕಾರ!"      ಭಕ್ತನು ಇಲ್ಲಿ ಮೊದಲು ರುದ್ರನ ಕೋಪಕ್ಕೆ ನಮಸ್ಕಾರವೆಂದಿರುತ್ತಾನೆ. ಸಕಲಕಲ್ಯಾಣಗುಣಪರಿಪೂರ್ಣನಾದ ಭಗವಂತನಲ್ಲಿ ಕೋಪವೇಕೆ ಉಂಟಾಯಿತು ? ಎಂದರೆ ಜೀವರುಗಳು ಮಾಡಿರುವ ಅಪರಾಧದಿಂದ - ಎಂದರ್ಥ. ಲೋಕರಕ್ಷಣೆಗಾಗಿ ಭಗವಂತನು ಶ್ರುತಿಸ್ಮೃತಿರೂಪವಾದ ತನ್ನ ಅಜ್ಞೆಗಳಿಂದ ಧರ್ಮವೆಂಬ ಕಟ್ಟಲೆಯನ್ನು ಎಲ್ಲಾ ಮನುಷ್ಯರುಗಳಿಗೂ ವಿಧಿಸಿರುತ್ತಾನೆ. ಈ ಕಟ್ಟುಪಾಡುಗಳು ಇಲ್ಲದೆಹೋದರೆ ಜಗತ್ತಿನ ಪರಿಪಾಲನೆಯು ಸಾಧ್ಯವಾಗಲಾರದು. ಆದರೆ ಈ ಜೀವನು ಕಾಮವಶನಾಗಿ ಭಗವಂತನನ್ನು ಮರೆತು ತಿರಸ್ಕರಿಸಿ ಸ್ವೇಚ್ಛೆಯಿಂದ ನಡೆಯುತ್ತಾ ಆತನ ಆಜ್ಞೆಗಳನ್ನು ಮೀರಿ ವರ್ತಿಸುತ್ತಿದಾನೆ. ಇಂಥವನ ವಿಷಯದಲ್ಲಿ ಭಗವಂತನ ಕೋಪವು ಸಾಧುವೇ ಆಗಿದೆ. ಎಲ್ಲಾ ಜೀವರುಗಳ ನಡುವೆ ನಾವೂ ಒಬ್ಬರಾದ್ದರಿಂದ ನಮ್ಮಲ್ಲಿಯೂ ಭಗವಂತನ ವಿಷಯಕ್ಕೆ ಅಪರಾಧಶತಗಳೇ ತುಂಬಿಕೊಂಡಿವೆ. ಆದ್ದರಿಂದ ಎಲೈ ರುದ್ರನೆ, ಪ್ರಸನ್ನನಾಗು, ಕೋಪಮಾಡಬೇಡ - ಎಂದು ಭಕ್ತನು ಪ್ರಾರ್ಥಿಸುತ್ತಿದಾನೆ. ಹಾಗೂ ನೀನು ಕೋಪದಿಂದ ನಮ್ಮ ಮೇಲೆ ಎತ್ತಿರುವ ಬಾಣ - ಧನಸ್ಸುಗಳಿಗೂ ನಮಸ್ಕಾರ ! ಅವುಗಳನ್ನು ಶಾಂತಗೊಳಿಸು - ಎಂದು ಬೇಡಲಾ

ದಕ್ಷಿಣಾಮೂರ್ತಿಸ್ತೋತ್ರ - 3. ಚೇತನಾಚೇತನಾತ್ಮಕಜಗತ್ತು ಪರಮಾತ್ಮನೇ

ಯಸ್ಯೈವ ಸ್ಫುರಣಂ ಸದಾತ್ಮಕಮಸತ್ಕಲ್ಪಾರ್ಥಗಂ ಭಾಸತೇ ಸಾಕ್ಷಾತ್ತತ್ತ್ವಮಸೀತಿ ವೇದವಚಸಾ ಯೋ ಬೋಧಯತ್ಯಾಶ್ರಿತಾನ್ | ಯತ್ಸಾಕ್ಷಾತ್ಕರಣಾದ್ಭವೇನ್ನ ಪುನರಾವೃತ್ತಿರ್ಭವಾವ್ಭೋನಿಧೌ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ||     ಬೀಜದೊಳಗೆ ಅವ್ಯಕ್ತವಾಗಿರುವ ಅಂಕುರಾದಿಗಳಂತೆ ಜಗತ್ತು ಪರಮಾತ್ಮನಲ್ಲಿಯೇ ವಿಕಲ್ಪಗಳಿಲ್ಲದೆ ಇದ್ದುಕೊಂಡಿದ್ದು ಮಾಯಾಕಲ್ಪಿತವಾದ ದೇಶಕಾಲಾದಿಗಳಿಂದ ಬಗೆಬಗೆಯಾಗಿ ಅವನನ್ನೇ ಆಶ್ರಯಿಸಿಕೊಂಡು ಕಾಣಿಸುತ್ತಿರುವದಾದ್ದರಿಂದ, ಪರಮಾತ್ಮನಿಗಿಂತ ಬೇರೆಯಾಗಿ ಅದು ಇರುವದೇ ಇಲ್ಲ ನಿಜವಾಗಿ ನಾಮರೂಪಾದಿವಿಕಲ್ಪಗಳಿಂದೊಡಗೂಡಿ ಜಗತ್ತು ತೋರುತ್ತಿರುವಾಗಲೂ ಅದು ಪರಮಾತ್ಮರೂಪದಿಂದಲೇ ಇರುತ್ತಿರುವದು ಪರಮಾತ್ಮನತ್ತ ಚಿತ್ತದೃಷ್ಟಿಯನ್ನು ಹೊರಳಿಸಲಾರದ ಅವಿವೇಕಿಗಳಿಗೆ ಮಾತ್ರವೇ ಮಾಯಾವಿಲಾಸವಾದ ಈ ಜಗಚ್ಚಿತ್ರವು ಕಾಣುತ್ತಿದ್ದರೂ ಒಳಹೊಕ್ಕು ನೋಡಬಲ್ಲವರಿಗೆ ಬೇರೆಬೇರೆಯ ಆಕಾರಗಳಿಂದೊಡಗೂಡಿದ ಚಿತ್ರದೃಶ್ಯಗಳೆಲ್ಲವೂ ಆಧಾರವಾದ ಬಟ್ಟೆ ಅಥವಾ ಗೋಡೆಗಿಂತ ವ್ಯತಿರಿಕ್ತವಾಗಿಲ್ಲದಂತೆ - ಇದೆಲ್ಲವೂ ನಿಜವಾಗಿ ಪರಮಾತ್ಮನೇ ಆಗಿರುತ್ತದೆ ಎಂದು ತಿಳಿಸಿದ್ದಾಯಿತು.     ಈ ವಿಷಯದಲ್ಲಿ ಒಂದು ಶಂಕೆ ಏಳಬಹುದು : ಪರಮಾತ್ಮನು 'ಸತ್ಯಂ ಜ್ಞಾನಮನನ್ತಂ ಬ್ರಹ್ಮ' (ತೈ 2-1) ಎಂಬ ಶ್ರುತಿಯ ಪ್ರಾಮಾಣ್ಯದಿಂದ ಪರಮಾರ್ಥವಾಗಿ ಸತ್ಯರೂಪನಾಗಿರುತ್ತಾನೆ; ಅವನ ಇರವಿಗೆ ಎಂದಿಗೂ ಹೋಕವಿಲ್ಲ ಜಗತ್ತಿಗೆ ಅಂಥ ಸತ್ಯತ್ವವಿಲ್ಲ ಏಕೆಂದರೆ ಇದರ

What is there in Vedas?

Veda means Knowledge. Its an ultimate truth about the Nature - Prakruthi. It has "All Subjects" which are "All Time" and "All Place" truth. Vedas came from infinite and remain immortal even after dissolution of the whole Earth. This is because Veda is not just a text, its Naada - the Wave of bliss. We can see the collection of verses in Veda. These are the particular pattern of waves noted by various great sages during their research (Tapasya) on the Nature. Veda is an experimented, experienced, proved and accepted publication of complete research on what ever the topic you consider. If a modern researcher says, I have invented a new thing; for him/her it is new. But Veda has explained the basic theory. So Veda is complete, truth, justice, breath of society, food, life and knowledge. Let me list some of the topics present in Vedas.     Pancha Bhootatmaka Prakruthi - 5 Elemental Nature         Srusti - Creation         Sththi - Maintenance         Laya  -