Posts

Showing posts from October, 2015

ವಿವೇಕಚೂಡಾಮಣಿ 3-3 ದೈವಾನುಗ್ರಹ

ದುರ್ಲಭಂ ತ್ರಯಮೇವೈತದ್ದೇವಾನುಗ್ರಹಹೇತುಕಮ್| ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ|| ಮನುಷ್ಯತ್ವ, ಮೋಕ್ಷವನ್ನು ಪಡೆಯಬೇಕೆಂಬ ಉತ್ಕಟೇಚ್ಛೆ, ಮತ್ತು ಮಹಾಪುರುಷರ ಆಶ್ರಯ - ಇವು ಮೂರೂ ಪಡೆಯಲು ಕಷ್ಟಸಾಧ್ಯವಾದವು. ಅವು ಭಗವಂತನ ಅನುಗ್ರಹದಿಂದ ಮಾತ್ರ ದೊರೆಯುವಂತಹವು.

ವಿವೇಕ ಚೂಡಾಮಣಿ 2-2

2. ಆದ್ಯಾತ್ಮಿಕ ಜೀವನದ ಮಹತ್ಮೆ ಜಂತೂನಾಂ ನರಜನ್ಮದುರ್ಲಭಮತಃ ಪುಂಸ್ತ್ವಂ ತತೋ ವಿಪ್ರತಾ | ತಸ್ಮಾದ್ವೈದಿಕಧರ್ಮಮಾರ್ಗಪರತಾ ವಿದ್ವತ್ತ್ವಮಸ್ಮತ್ ಪರಮ್ | ಆತ್ಮನಾತ್ಮವಿವೇಚನಂ ಸ್ವನುಭವೋ ಬ್ರಹ್ಮಾತ್ಮನಾ ಸಂಸ್ಥಿತಿಃ | ಮುಕ್ತಿರ್ನೋ ಶತಕೋಟಿಜನ್ಮಸುಕ್ರತ್ಯೆಃ ಪುಣ್ಯೈರ್ವಿನಾ ಲಭ್ಯತೇ ||2|| ಪ್ರಾಣಿಗಳಲ್ಲಿ ಮನುಷ್ಯನಾಗಿ ಹುಟ್ಟುವುದು ದುರ್ಲಭ. ಅದಕ್ಕಿಂತ ಪುರುಷತ್ವವಿರುವ ಜನ್ಮವು ಮತ್ತೂ ದುರ್ಲಭ. ಅದಕ್ಕಿಂತಲೂ ಸಾತ್ವಿಕ ಸ್ವಭಾವ (ವಿಪ್ರತಾ)ವಿರುವ ಹುಟ್ಟು ಮತ್ತೂ ವಿರಳ. ವಿಪ್ರತ್ವಕ್ಕಿಂತಲೂ ವೈದಿಕಮಾರ್ಗದಲ್ಲಿ ನಿಷ್ಠೆಯುಳ್ಳವನಾಗಿರುವುದು ಇನ್ನೂ ಅಪರೂಪ. ಅದಕ್ಕಿಂತಲೂ ಶ್ರೇಷ್ಠವಾದದ್ದು ವಿದ್ವತ್ತು; ಎಂದರೆ, ಶಾಸ್ತ್ರಗಳಲ್ಲಿ ಅಡಗಿರುವ ಆಳವಾದ ಯಥಾರ್ಥಾಜ್ಞಾನವನ್ನು ಪಡೆದಿರುವುದು ಇನ್ನೂ ಕಷ್ಟ. ಆತ್ಮ ಮತ್ತು ಅನಾತ್ಮಗಳ ವಿವೇಕಜ್ಞಾನ, ಆಧ್ಯಾತ್ಮ ವಿದ್ಯೆಯಲ್ಲಿ ಗಾಢ ಅನುಭವ, ತನ್ನಲ್ಲಿರುವ ಆತ್ಮವೇ ಎಲ್ಲರಲ್ಲಿಯೂ ಇರುವುದೆಂಬ ಭಾವನೆ (ಬ್ರಹ್ಮಭಾವದಲ್ಲಿರುವುದು) - ಇವು ಕ್ರಮವಾಗಿ ಒಂದಕ್ಕಿಂತ ಇನ್ನೊಂದು ಶ್ರೇಷ್ಠವಾದದ್ದು. ಈ ಫಲವು (ಮುಕ್ತಿಯು) ನೂರುಕೋಟಿ ಜನ್ಮಗಳಲ್ಲಿ ಸಂಪಾದಿಸಿದ ಪುಣ್ಯಗಳಿಂದಲ್ಲದೆ ಬೇರೆ ಯಾವುದರಿಂದಲೂ ಲಭಿಸುವುದಿಲ್ಲ.

ದೈವ ವಿವಾಹ

ಯಜ್ಞೇ ತು ವಿತತೇ ಸಮ್ಯಗ್ರತ್ವಿಜೇ ಕರ್ಮಕುರ್ವತೇ | ಅಲಂಕ್ರತ್ಯ ಸುತಾ ದಾನಂ ದೈವಂ ಕರ್ಮವಿಚಕ್ಷತೇ || ಯಜ್ಞಗಳನ್ನು ಮಾಡುತ್ತಿರುವ ಶ್ರೋತ್ರಿಯನಾದವನಿಗೆ ಕನ್ಯೆಯನ್ನು ಅಲಂಕರಿಸಿ ದಾನ ಕೊಡುವುದು 'ದೈವವಿವಾಹ'ವಾಗಿದೆ.

ವಿವೇಕ ಚೂಡಾಮಣಿ 1-1

ಸರ್ವವೇದಾಂತ ಸಿದ್ದಾಂತ ಗೋಚರಂ ತಮಗೋಚರಮ್| ಗೋವಿಂದಂ ಪರಮಾನಂದಂ ಸದ್ಗುರುಂ ಪ್ರಣತೋಸ್ಮ್ಯಹಮ್||1|| ಸಕಲ ಉಪನಿಷತ್ತುಗಳ ಸಿದ್ದಾಂತಕ್ಕೆ ವಿಷಯನಾಗಿರುವವನೂ (ವಾಕ್ಕು ಮತ್ತು ಮನಸ್ಸುಗಳಿಗೆ) ಆಜ್ಞೇಯನೂ, ಪರಮಾನಂದಸ್ವರೂಪನೂ, ಸದ್ಗೂರುವೂ ಆದ ಗೋವಿಂದನಿಗೆ ನಾನು ನಮುಸ್ಕರಿಸುತ್ತೇನೆ.

ಪರಮಾರ್ಥ, ಸಮ್ಯಗ್ಜ್ಞಾನ

1.  ಅಪಿ ಚ ಸಮ್ಯಗ್ಜ್ಞಾನಾನ್ಮೋಕ್ಷಃ ಇತಿ ಸರ್ವೇಷಾಂ ಮೋಕ್ಷವಾದಿನಾಮ್ ಅಭ್ಯುಪಗಮಃ | ತಚ್ಚ ಸಮ್ಯಗ್ಜ್ಞಾನಮ್ ಏಕ ರೂಪಂ ವಸ್ತುತನ್ತ್ರಮ್ | ಏಕರೂಪೇಣ ಹಿ ಅವಸ್ಥಿತೋ ಯೋರ್ಥಃ ಸ ಪರಮಾರ್ಥಃ | ಲೋಕೇ ತದ್ವಿಷಯಂ ಜ್ಞಾನಂ ಸಮ್ಯಗ್ಜ್ಞಾನಮ್ ಇತ್ಯುಚ್ಯತೇ | ಯಥಾ 'ಅಗ್ನಿರುಷ್ಣಃ' ಇತಿ | ತತ್ರ ಏವಂ ಸತಿ ಸಮ್ಯಗ್ಜ್ಞಾನೇ ಪುರುಷಾಣಾಂ ವಿಪ್ರತಿಪತ್ತಿಃ ಅನುಪಪನ್ನಾ ||   ಭಾವಾರ್ಥ :- ಇದಲ್ಲದೆ ಸಮ್ಯಗ್ಜ್ಞಾನದಿಂದ ಮೋಕ್ಷವಾಗುವದೆಂದು ಎಲ್ಲಾವಾದಿಗಳೂ ಒಪ್ಪಿರುತ್ತಾರೆ. ಆ ಸಮ್ಯಗ್ಜ್ಞಾನವೆಂಬುದು ಒಂದೇ ರೂಪದ್ದಾಗಿರುತ್ತದೆ, ವಸ್ತುತಂತ್ರವಾಗಿರುತ್ತದೆ. ಒಂದೇ ರೂಪದಿಂದ ಇದ್ದು ಕೊಂಡಿರುವ ವಸ್ತುವಲ್ಲವೆ, ಪರಮಾರ್ಥವು? ಲೋಕದಲ್ಲಿ ಅದರ ವಿಷಯವಾದ ಜ್ಞಾನವೇ ಸಮ್ಯಗ್ಜ್ಞಾನವೆನಿಸುತ್ತದೆ. ಉದಾಹರಣೆಗೆ 'ಬೆಂಕಿಯು ಬಿಸಿ' ಎಂಬ ಜ್ಞಾನವು ಅಂಥದ್ದು. ಇದು ಹೀಗಿರುವದರಿಂದ ಸಮ್ಯಗ್ಜ್ಞಾನದ ವಿಷಯದಲ್ಲಿ ಜನರಿಗೆ ವಿರುದ್ಧವಾದ ಅಭಿಪ್ರಾಯಗಳಿರುವದು ಸರಿಯಲ್ಲ. ವಿವರಣೆ :- ತತ್ತ್ವವಿಚಾರಕ್ಕೆಲ್ಲ ತಳಹದಿಯಾಗಿರುವ ಮೂರು ವಿಷಯಗಳನ್ನು ಇಲ್ಲಿ ಹೇಳಿದೆ. ತತ್ತ್ವಕ್ಕೆ 'ಪರಮಾರ್ಥ'ವೆಂಬುದು ಇನ್ನೊಂದು ಹೆಸರು. ಪರಮಾರ್ಥವೆಂದರೆ ಯಾವಾಗಲೂ ಎಲ್ಲೆಲ್ಲಿಯೂ ಒಂದೇ ರೂಪದಲ್ಲಿರುವ ವಸ್ತು. ಅದನ್ನೇ 'ಸತ್ಯ'ವೆಂದು ಜನರು ಬಗೆಯುತ್ತಾರೆ. ಅದನ್ನು ತಿಳಿಸಿ ಕೊಡುವ ಜ್ಞಾನವೇ ಸಮ್ಯಗ್ಜ್ಞಾನ, ಸರಿಯಾದ ತಿಳಿವಳಿಕೆ. ಉದಾಹರಣೆಗೆ  ಬೆಂಕಿಯು ಯ