Posts

Showing posts from November, 2015

ನಮಸ್ತೇ ರುದ್ರ

     ರುದ್ರಾಧ್ಯಾಯದಲ್ಲಿ ಹನ್ನೊಂದು ಅನುವಾಕಗಳಿವೆ. ಅನುವಾಕಗಳೆಂದರೆ ಒಂದೊಂದು ಪ್ರಘಟ್ಟ (Para)ಗಳೆಂದು ಭಾವಿಸಬಹುದು. ಇಲ್ಲಿ ಮೊದಲನೆಯ ಅನುವಾಕದಲ್ಲಿ ಭಗವಂತನು ಪ್ರಸನ್ನನಾಗುವಂತೆ ಮಾಡಿಕೊಳ್ಳುವಿಕೆ, ಎರಡರಿಂದ ಒಂಬತ್ತರ ಪೂರ ಅನುವಾಕಗಳಲ್ಲಿ ಭಗವಂತನ ಸರ್ವೇಶ್ವರತ್ವ, ಸರ್ವಾತ್ಮಕತ್ವ, ಸರ್ವಾಮತರ್ಯಾಮಿತ್ವ - ಮುಂತಾದವುಗಳನ್ನು ತಿಳಿಸಿ ನಮಸ್ಕರಿಸುವಿಕೆ, ಹತ್ತನೆಯದರಲ್ಲಿ ಭಗವಂತನ ಪ್ರಾರ್ಥನೆ, ಹನ್ನೊಂದನೆಯದರಲ್ಲಿ ಭಗವದಂಶಸಂಭೂತರಾದ ರುದ್ರರುಗಳ ಸ್ತುತಿ - ಹೀಗೆ ಈ ರುದ್ರಾಧ್ಯಾಯವು ಹನ್ನೊಂದು ಅನುವಾಕಗಳಿಂದ ಕೂಡಿರುತ್ತದೆ.      ವಿದ್ಯೆಗಳಲ್ಲೆಲ್ಲ 'ಶ್ರುತಿ' (ವೇದ)ಯು ಹೆಚ್ಚಿನದು. ಶ್ರುತಿಯಲ್ಲಿ ರುದ್ರೈಕಾದಶಿನೀ ಎಂಬ ಭಾಗ. ಅದರಲ್ಲಿ 'ನಮಃ ಶಿವಾಯ' ಎಂಬ ಪಂಚಾಕ್ಷರೀ ಮಂತ್ರವು. ಅದರಲ್ಲಿಯೂ 'ಶಿವ' ಎಂಬೆರಡು ಅಕ್ಷರಗಳು ಹೆಚ್ಚಿನ ಸಾರವಾದದ್ದು - ಎಂದು ಒಂದು ಸ್ಮೃತಿವಾಕ್ಯವಿದೆ. 'ವಶ ಕಾನ್ತೌ' ಎಂಬ ಧಾತು ವಿನಿಂದಾದ 'ಶಿವ' ಎಂಬ ಶಬ್ದರೂಪವು 'ಲೋಕಾನಾಂ ಶಿವಂ (ಮಂಗಳಂ) ವಷ್ವೀತಿ ಶಿವಃ' - ಎಂಬ ವ್ಯುತ್ಪತ್ತಿಯಂತೆ ವರ್ಣವ್ಯತ್ಯಯವನ್ನು ಹೊಂದಿ 'ಶಿವ' ಎಂಬ ಭಗವಂತನ ದಿವ್ಯನಾಮವಾಗಿ ಹೊರಬಂದಿದೆ. ಶಿವ - ಎಂಬ ಶಬ್ದಕ್ಕೆ ಮಂಗಳವೆಂದೇ ಅರ್ಥವಿದೆ. ಅಮರಕೋಶದಲ್ಲಿ ಶ್ರೇಯಸಮ್, ಶಿವಮ್, ಭದ್ರಮ್, ಕಲ್ಯಾಣಮ್, ಮಂಗಳಮ್, ಶುಭಮ್ - ಎಂದು ಶಿವಶಬ್ದಕ್ಕೆ ಪರ್ಯಾಯವಾಗಿಯೇ ಉ

ನಃ ಪ್ರಯಚ್ಛನ್ತು ಸೌಖ್ಯಮ್

     ರುದ್ರರು ಅನೇಕರೊ, ಒಬ್ಬನೊ? ಎಂಬ ಸಂಶಯವು ಬರುವದು ಸ್ವಾಭಾವಿಕವಾಗಿದೆ. ಏಕೆಂದರೆ ವೇದದಲ್ಲಿ ಒಂದುಕಡೆ 'ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ರುದ್ರನು ಒಬ್ಬನೇ - ಎಂದು ಸ್ತುತಿಸಿದೆ. ಮತ್ತೊಂದು ಕಡೆ 'ಸಹಸ್ರಾಣಿ ಸಹಸ್ರಶೋ ಯೇ ರುದ್ರಾಃ' ಎಂದು ರುದ್ರರು ಅನಂತಸಂಖ್ಯಾಕರು ಎಂದು ಹೇಳಿದೆ. ಪುರಾಣಗಳಲ್ಲಿ ದೇವತೆಗಳನ್ನು ಪಟ್ಟಿಮಾಡುವಾಗ 'ಏಕಾದಶರುದ್ರರು' - ಎಂದು ಹನ್ನೊಂದು ಜನರೆಂತ ಗೊತ್ತುಮಾಡಲಾಗಿದೆ. ಇವುಗಳಿಗೆಲ್ಲ ಏಕವಾಕ್ಯತೆಯು ಹೇಗೆ? ಎಂಬುದನ್ನು ವಿಚಾರಿಸೋಣ.      ಜಗತ್ ಸೃಷ್ಟಿಕ್ರಮವನ್ನು ವರ್ಣಿಸುವಾಗ ಪುರಾಣಗಳಲ್ಲಿ ಹೀಗಿದೆ : 'ಬ್ರಹ್ಮನ ಕೋಪದಿಂದ ರುದ್ರನು ಅವತರಿಸಿದನು. ಸೃಷ್ಟಿಕರ್ಮದಲ್ಲಿ ಸಹಕರಿಸಬೇಕೆಂದು ಬ್ರಹ್ಮನು ರುದ್ರನಿಗೆ ತಿಳಿಸಿದಾಗ ರುದ್ರನು ತನ್ನಂತೆಯೇ ಶರೀರ, ವೇಷ, ಭೂಷಣಗಳು, ಬಲ, ಮರಣವಿಲ್ಲದಿರುವಿಕೆ - ಮುಂತಾದ ಧರ್ಮಗಳಿಂದ ಕೂಡಿದ ಸಹಸ್ರಾರು ರುದ್ರರನ್ನು ಸೃಷ್ಟಿಸಿಬಿಟ್ಟನು. ಆಗ ಬ್ರಹ್ಮನು ನೋಡಿ ಈ ರುದ್ರನ ಸೃಷ್ಟಿಯು ಹೀಗೆಯೇ ಮುಂದುವರೆದುಬಿಟ್ಟರೆ ಎಲ್ಲರೂ ಅಮರರೇ ಆಗಿಬಿಡುವದರಿಂದ ಬ್ರಹ್ಮಾಂಡದಲ್ಲಿ ಜಾಗವಿಲ್ಲದೆಹೋಗುವದು ನಿಶ್ಚಯ- ಎಂತ ಭಾವಿಸಿ ಇನ್ನುಮುಂದೆ ಸೃಷ್ಟಿಮಾಡಕೂಡದೆಂದೂ ಈವರೆಗೆ ಸೃಷ್ಟರಾಗಿರುವ ರುದ್ರರಿಗೆ ಬ್ರಹ್ಮಾಂಡದಲ್ಲಿ ಬೇರೆಬೇರೆಯ ಸ್ಥಾನಗಳನ್ನು ಕಲ್ಪಿಸುವದಾಗಿಯೂ ತಿಳಿಸಿದನು. ಅದರಂತೆ ರುದ್ರರನ್ನು ಜಗತ್ತಿನಲ್ಲೆಲ್ಲ ಹರಡಿಬಿಟ್ಟನು. ಹೀಗೆ

Sharada Bhujanga Prayata Stotram - By Adi Guru Sri Adi Shankara Bhagavatpada

ಶಾರದಾಭುಜಂಗ ಪ್ರಯಾತಾಷ್ಟಕಮ್ ಸುವಕ್ಷೋಜಕುಂಭಾಂ ಸುಧಾಪೂರ್ಣಕುಂಭಾಂ | ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಮ್ || ಸದಾಸ್ಯೇಂದು ಬಿಂಬಾಂ ಸದಾನೋಷ್ಠಬಿಂಬಾಂ | ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||1|| ವಕ್ಷಸ್ಥಳದಲ್ಲಿ ತುಂಬಿದ ಅಮೃತ ಕಳಶವನ್ನು ಹೊಂದಿರುವ, ಪ್ರಸಾದ ಪುಣ್ಯಗಳಿಗೆ ಅವಲಂಬಿತಳಾದ ಸದಾ ಚಂದ್ರನಂತೆ ಅರಳಿದ ತುಟಿಯಿಂದ ಹಸನ್ಮಖಿಯಾದ, ನನ್ನ ತಾಯಿ ಶಾರದಾಂಬೆಯನ್ನು ಭಜಿಸುತ್ತೇನೆ. ಕಟಾಕ್ಷೇ ದಯಾರ್ದ್ರಾಂ ಕರೇ ಜ್ಞಾನ ಮುದ್ರಾಂ | ಕಲಾಭಿರ್ವಿನಿದ್ರಾಂ ಕಲಾಪೈಃ ಸುಭದ್ರಾಮ್ || ಪುರಸ್ತ್ರೀಂ ವಿನಿದ್ರಾಂ ಪುರಸ್ತುಂಗ ಭದ್ರಾಂ | ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||2|| ದಯಾಮಯ ನೋಟವುಳ್ಳ, ಕೈಯಲ್ಲಿ ಜ್ಞಾನಮುದ್ರೆ ಇರುವ, ಕಲಾಸಕ್ತಳಾದ, ಸುಭದ್ರವಾಗಿ ಕಾರ್ಯ ನಿರ್ವಹಿಸುವ, ಸದಾ ಜಾಗರೂಕಳಾದ, ತುಂಗಾ ತೀರದ ಶೃಂಗೇರಿ ಪುರದಲ್ಲಿ ವಾಸಿಸುವ, ತಾಯಿ ಶಾರದಾಂಬೆಯನ್ನು ಭಜಿಸುತ್ತೇನೆ. ಲಲಾಮಾಂಕಘಾಲಾಂ ಲಸದ್ಗಾನಲೋಲಾಂ | ಸ್ವಭಕ್ತೈಕ ಪಾಲಾಂ ಯಶಃ ಶ್ರೀಕಪೋಲಾಂ || ಕರೇತ್ವಕ್ಷಮಾಲಾಂ ಕನತ್ಪ್ರತ್ನಲೋಲಾಂ | ಭಜೇ ಶಾರದಾಂಬಾಮಜಸ್ರಂ ಮದಂಬಾಮ್ ||3|| ಹಣೆಯಲ್ಲಿ ಕುಂಕುಮ ಧರಿಸಿರುವ, ಒಳ್ಳೆಯ ಗಾನದಲ್ಲಿ ಆಸಕ್ತಳಾದ, ಭಕ್ತರನ್ನು ಪಾಲಿಸುವವಳಾದ, ಯಶಸ್ಸು ಮತ್ತು ಲಕ್ಷ್ಮಿ ಎಂಬ ಕಪೋಲಗಳುಳ್ಳ ಕೈಯಲ್ಲಿ ಅಕ್ಷರಮಾಲೆಯನ್ನು ಪಿಡಿದಿರುವ, ತಾಯಿ ಶಾರದಾಂಬೆಯನ್ನು ಭಜಿಸುತ್ತೇನೆ. ಸುಸೀಮಂತವೇಣೀಂ ದೃಶಾ ನಿರ್ಜಿತೈಣೀಂ | ರಮತ್ಕೀರವಾಣೀಂ

Ganesha Pancharatnam

ಮುದಾಕರಾತ್ತಮೋದಕಂ ಸದಾ ವಿಮುಕ್ತಿ ಸಾಧಕಂ | ಕಲಾಧರಾವತಂಸಕಂ ವಿಲಾಸಿ ಲೋಕರಕ್ಷಕಮ್ || ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ | ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಂ ||1|| ಸಂತೋಷದಿಂದ ಕಡುಬನ್ನು ಕೈಯಲ್ಲಿ ಹಿಡಿದಿರುವವನೂ, ಮೋಕ್ಷಸಾಧಕನೂ, ಶಿರಸ್ಸಿನಲ್ಲಿ ಚಂದ್ರನನ್ನು ಧರಿಸಿದವನೂ, ಲೀಲೆಯೆಂದು ತಿಳಿದು ಲೋಕವನ್ನು ರಕ್ಷಿಸುವವನೂ, ಅನಾಥರನ್ನು ಕಾಪಾಡುವವನೂ, ಗಜಾಸುರನನ್ನು ಸಂಹರಿಸಿದವನೂ, ನಮಿಸಿದ ಭಕ್ತರ ಸಂಕಷ್ಟಗಳನ್ನು ಪರಿಹರಿಸುವವನೂ ಆದ ಆ ವಿನಾಯಕನನ್ನು (ನಾನು) ನಮಿಸುತ್ತೇನೆ. ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ | ನಮತ್ಸುರಾರಿನಿರ್ಜರಂ ನತಾಧಿಕಾಪದುದ್ಧರಮ್ || ಸುರೇಶ್ವರಂನಿಧೀಶ್ವರಂ ಗಜೇಶ್ವರಂ ಗಣೇಶ್ವರಂ | ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಂ ||2|| ವಿನಯದಿಂದ ಶರಣಾಗದವರಿಗೆ ಅತಿ ಭಯಾಕರನೂ, ಉದಯಿಸುವ ಸೂರ್ಯನಂತೆ ವಿರಾಜಿಸುವವನೂ, ದೈತ್ಯರು ಮತ್ತು ದೇವತೆಗಳಿಂದ ವಂದಿತನೂ, ಭಕ್ತರ ಎಲ್ಲ ವಿಪತ್ತುಗಳನ್ನೂ ಪರಿಹರಿಸುವವನೂ, ದೇವತೆಗಳ ಅಧಿಪತಿಯೂ ಎಲ್ಲ ನಿಧಿಗಳ ಒಡೆಯನೂ, ಗಜರಾಜನೂ, ಗಣೇಶ್ವರನೂ, ಪರಾತ್ಪರನೂ ಆದ ಗಣಪತಿಯನ್ನು ಸದಾ (ನಾನು) ಆಶ್ರಯಿಸುತ್ತೇನೆ. ಸಮಸ್ತ ಲೋಕ ಶಂಕರಂ ನಿರಸ್ತದೈತ್ಯ ಕುಂಜರಂ | ದರೇತರೋದರಂ ವರಂ ವರೇಭವಕ್ತ್ರ ಮಕ್ಷರಮ್ || ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ | ಮನಸ್ಕರಂ ನಮಸ್ಕೃರೋಮಿ ಭಾಸ್ವರಮ್ ||3|| ಎಲ್ಲ ಲೋಕಗಳಿಗೂ ಕಲ್ಯಾಣ ಮಾಡುವವನೂ, ಗಜಾಸುರನನ್ನು ಸಂಹರಿಸ