Posts

Showing posts from January, 2016

ತ್ಯಾಗರಾಜರು ಆಡುವ ತೀಕ್ಷ್ಣ ನುಡಿ - ಪರಸ್ತ್ರೀ ವ್ಯಾಮೋಹ

    ಸಾಧಾರಣವಾಗಿ ಪುರುಷರು ರಕ್ತಮಾಂಸಾದಿ ಮಾಲಿನ್ಯದಿಂದ ಕೂಡಿದ ಸ್ತ್ರೀ ಶರೀರದಿಂದ ಮೋಹಿತರಾಗುತ್ತಾರೆ. ಸ್ತ್ರೀಯರು ತಮ್ಮ ಹಾವಭಾವ ಮಾಯಾವಿಲಾಸದಿಂದ, ಕಣ್ಣೋಟವೆಂಬ ಬಾಣದಿಂದ ಪುರುಷನನ್ನು ಗೆದ್ದು ಎಷ್ಟೋ ಅಕೃತ್ಯಗಳಿಗೆ ಕಾರಣರಾಗುತ್ತಾರೆ. ಆದ್ದರಿಂದ 'ಎಲೈ ಮನಸ್ಸೇ, ಸ್ತ್ರೀಯರ ಶರೀರ ಕಂಡು ಮೋಸಹೋಗಬೇಡ' - ಇದು ಸ್ತ್ರೀಯರ ಅಪಾಯಕಾರೀ ಸ್ವಭಾವದ ಬಗೆಗೆ ತ್ಯಾಗರಾಜರು ಆಡುವ ತೀಕ್ಷ್ಣ ನುಡಿ. ಮೇನು ಜೂಚಿ ಮೋಸಪೋಕುಮೀ ಮನಸಾ ಲೋನಿ ಜಾಡ ಲೀಲಾಗು ಗಾದಾ ಹೀನಮೈನ ಮಲಮೂತ್ರ ರಕ್ತಮುಲ ಕಿರವಂಚು ಮಾಯಾಮಯಮೈನ ಚಾನ ಕನಲನೇಟಿ ಯಂಪಕೋಲ ಚೇತ ಗುಚ್ಚ ಚನುಲನೆಡಿ ಗಿರುಲ ಶಿರಮುನುಂಚಿ ಪನುಲ ಚೇತುರಟ .......         (ಮೇನುಜೂಚಿ)     ಮೇಲಿನ ಈ ಸಾಲುಗಳು ಪುರುಷನನ್ನು ಆಕರ್ಷಿಸುವಲ್ಲಿ ಸ್ತ್ರೀಗಿರುವ ಶಕ್ತಿಯನ್ನು ಮನದಟ್ಟು ಮಾಡುತ್ತದೆ. ಪುರುಷನ ಬದುಕನ್ನು ವ್ಯರ್ಥಗೊಳಿಸುವಲ್ಲಿ ಸ್ತ್ರೀಶಕ್ತಿ ಅದ್ಭುತವಾದು್ಉ. ಆಧ್ಯಾತ್ಮ ಸಾಧನೆಗೆ ಹೊರಟವನನ್ನೂ ದಾರಿತಪ್ಪಿಸಿ ಪ್ರಾಪಂಚಿಕ ಸ್ಥಿತಿಯಲ್ಲೇ ಓಲಾಡುವಂತೆ ಮಾಡುವ ಮೋಹವಿದು ಇಂತಹ ಮೋಹದಿಂದ ಪುರುಷನು ಔನ್ನತ್ಯಕ್ಕೆ ಏರುವ ಬದಲು ಅಧೋಗತಿಗೆ ಇಳಿಯುತ್ತಾನೆ. ಹೀಗೆಂದೇ ತ್ಯಾಗರಾಜರು ಸ್ತ್ರೀವ್ಯಾಮೋಹವನ್ನು ತುಚ್ಛೀಕರಿಸುತ್ತಾರೆ.     ತ್ಯಾಗರಾಜರಂತಹ ಅನುಭಾವಿಗಳ ಗುರಿ ಎಂದಿಗೂ ಅಧ್ಯಾತ್ಮವಾಗಿರುತ್ತದೆ. ಈ ಧ್ಯೇಯಸಾಧನೆಗೆ ಅಡ್ಡಿಬರುವ ಯಾವುದೇ ವಸ್ತುವನ್ನೂ ಅವರು ಮೊದಲು ಹಂತಗಳಲ್ಲೇ ಹೀಗಳೆಯುತ್ತಾರೆ. ಇದ

ಕನ್ನಡ "ಅನುಭವಾಮೃತ"ದಲ್ಲಿ ಅದ್ವೈತದರ್ಶನ

    ಭಾರತೀಯ ಆಧ್ಯಾತ್ಮಪ್ರಪಂಚದ ಮಹಾಚೇತನವಾಗಿ ಬೆಳಗಿದ ಶಂಕರಾಚಾರ್ಯರು ಅದ್ವೈತದರ್ಶನದ ಅಮರ ಸಂದೇಶವನ್ನು ನೀಡಿದ ವಿಭೂತಿಪುರುಷರು. ಆತ್ಮೋನ್ನತಿ, ದಾರ್ಶನಿಕ ಅಭೀಪ್ಸೆ, ಲೋಕಕಲ್ಯಾಣವೇ ಪರಮಾದರ್ಶವಾಗಿರುವ ಶಂಕರಾಚಾರ್ಯರು ಭಾರತೀಯ ವೇದಾಂತಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಅದ್ವೈತ ಸಂಪ್ರದಾಯವನ್ನು ಆಚರಣೆ ಮತ್ತು ಅನುಷ್ಠಾನಗಳಲ್ಲಿ ತಂದು ಭಾರತೀಯರ ಆಧ್ಯಾತ್ಮಿಕ ಜೀವನವನ್ನು ಉನ್ನಯನಗೊಳಿಸುವದು ಅವರ ಧ್ಯೇಯವಾಗಿತ್ತು ಆದ್ದರಿಂದಲೇ ಶಂಕರಾಚಾರ್ಯರು ಭಾರತದ ಬೇರೆ ಬೇರೆ ಭಾಗಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಪುರಿ, ದ್ವಾರಕಾ, ಬದರಿ, ಕಂಚಿ, ಶೃಂಗೇರಿ, ಸ್ವರ್ಣವಲ್ಲಿ ವೊದಲಾದ ಕೇಂದ್ರಗಳಲ್ಲಿ ಅದ್ವೈತಪೀಠಗಳು ನೆಲೆಗೊಂಡು ಆದಿಶಂಕರರ ವೇದಾಂತ ಸಂಪ್ರದಾಯವು ನಿರಂತರವಾಗಿ ಮುನ್ನಡೆದುಕೊಂಡು ಬಂದಿದೆ.     ಶಂಕರಾಚಾರ್ಯರ ವೇದಾಂತದರ್ಶನವನ್ನು ಸಾಹಿತ್ಯ ಮತ್ತು ತತ್ವಗ್ರಂಥಗಳ ಮೂಲಕ ಪ್ರಚುರಪಡಿಸುವಲ್ಲಿ ಕರ್ನಾಟಕದ ಕೊಡುಗೆ ಅನುಪಮವಾದದ್ದು. ಆದಿಶಂಕರರ ಶಿಷ್ಯರೂ, ಉದ್ದಾಮ ಪಂಡಿತರೂ ಆಗಿದ್ದ ಶೃಂಗೇರಿಮಠದ ಪ್ರಥಮ ಪೀಠಾಧಿಪತಿಗಳಾದ ಸುರೇಶ್ವರರು "ಬೃಹದಾರಣ್ಯಕ ಉಪನಿಷದ್ಭಾಷ್ಯ"ವನ್ನು ಹಾಗೂ "ನೈಷ್ಕರ್ಮಸಿದ್ಧಿ"ಯಂಥ ಪ್ರಮಾಣಗ್ರಂಥವನ್ನು ಕುರಿತು ಬೃಹತ್ ಪ್ರಮಾಣದ "ವಾರ್ತ್ತಿಕ" ಗ್ರಂಥವನ್ನು ರಚಿಸಿದ್ದಾರೆ. ಸುರೇಶ್ವರರ ನಂತರ ಬಂದ ಗುರುಪರಂಪರೆಯ ಸ್ವಾಮಿಗಳು ಮತ್ತು ಶಿಷ್ಯವರ್ಗ ಅದ್ವೈತ ವಾಙ್ಮಯಕ್ಕೆ ಸಂಬಂಧಿಸಿ

ಶ್ರೀ ಶ್ರೀಕಂಠೇಶ್ವರಸ್ವಾಮಿ - ನಂಜನಗೂಡು

ಪಾರ್ವತೀಪರಮೇಶ್ವರರು ಸಂಚಾರಮಾಡುತ್ತಿರುವಾಗ್ಗೆ, ಶ್ರೀ ಪಾರ್ವತಮ್ಮನವರು ತಮಗೆ ಸುಖದಾಯಕವಾದ ಕ್ಷೇತ್ರಗಳಲ್ಲಿ ಪರಮಪವಿತ್ರವಾದ ಮತ್ತು ಪರಮೋತ್ಕೃಷ್ಟವಾದ ಕ್ಷೇತ್ರವಾವುದೆಂದು ಕೇಳಿದ್ದಕ್ಕೆ, ಕಪಿಲಾ ಕೌಂಡಿನೀ ನದಿಗಳ ಸಂಗಮಸ್ಥಳವಾದ ಗರಳಪುರಿ ಕ್ಷೇತ್ರವೆ ಪರಮಪಾವನವಾದ ಕ್ಷೇತ್ರವು ಕೇಶೀರಾಕ್ಷಸಸಂಹಾರಕಾಲಕ್ಕೆ ಅಲ್ಲಿಗೆ ಹೋಗಿ ನೋಡೋಣವೆಂದು ಸ್ವಾಮಿಯವರು ಹೇಳಿದರು. ತ್ರಿಯಂಬಕ ರಾಕ್ಷಸನ ಮಗನಾದ ಕೇಶೀಯೆಂಬ ರಾಕ್ಷಸನು ಮಹಾಗರ್ವಿಯಾಗಿ ದೇವತೆಗಳನ್ನು ಋಷಿಗಳನ್ನು ಬಹಳವಾಗಿ ಹಿಂಸಿಸುತ್ತಾ, ಯಾಗಾದಿ ಕರ್ಮಗಳನ್ನು ಕೆಡಿಸುತ್ತಾ ಇದ್ದುದರಿಂದ ದೇವಗಣಗಳು ಬ್ರಹ್ಮನಲ್ಲಿಯೂ, ವಿಷ್ಣುವಿನಲ್ಲಿಯೂ ಮೊರೆಯಿಡಲು ಈ ರಾಕ್ಷಸ ಸಂಹಾರವು ಮಹದೇವನಿಗೆ ಹೊರತು ತಮಗಾಗಲೀ ಮತ್ತಾರಿಗಾಗಲೀ ಸಾಧ್ಯವಿಲ್ಲವೆಂದು ತಿಳಿಸಿ, ಅವರೊಡನೆ ತಾವು ಗಿರಿಜಾ ವಲ್ಲಭನ ಬಳಿಗೆ ಹೊರಟು ಕೇಳಿಕೊಳ್ಳಲು ಪರಮೇಶ್ವರನು ಅವರುಗಳಿಗೆಲ್ಲಾ ಕಪಿಲಾ ಕೌಂಡಿನಿ ಸಂಗಮದಲ್ಲಿ ಯಜ್ಞವನ್ನು ನೆರವೇರಿಸುವಂತೆ ಅಪ್ಪಣೆಕೊಟ್ಟನು. ಯಜ್ಞವನ್ನು ನಡೆಸುತ್ತಿರುವಲ್ಲಿ ಹವಿಸ್ಸನ್ನು ತಿನ್ನುವುದಕ್ಕೂ ಯಜ್ಞವನ್ನು ಕೆಡಿಸುವುದಕ್ಕೂ ಬಂದ ಕೇಶೀರಾಕ್ಷಸನನ್ನು ಪರಮೇಶ್ವರನು ಆ ಯಜ್ಞಕುಂಡದಲ್ಲಿಯೇ ಹಾಕಿ ಸೋಂಕಿದ ಎಲ್ಲರನ್ನು ಕೊಲ್ಲತೊಡಗಿತು. ಅದನ್ನು ಸಹ ಲೋಕೋಪಕ್ಕಾರಕ್ಕಾಗಿ ಸದಾಶಿವನೆ ಸವಿದನು. ಇದರಿಂದ ಪರಮೇಶ್ವರನಿಗೆ “ ಶ್ರೀ ಕಂಠ “ “ ನಂಜುಂಡ “ ಎಂಬ ಹೆಸರುಗಳುಂಟಾದುವು. ಶೌನಕಾದಿ ಋಷಿಗಳು ಸ

ಸ್ಕಂದಪುರಾಣ ಅಧ್ಯಾಯ 12

ಸನತ್ಕುಮಾರ ಉವಾಚ | ತತಃ ಸ ಭಗವಾಂದೇವೋ ಬ್ರಹ್ಮಾ ತಾಮಾಹ ಸುಸ್ವರಮ್ | ದೇವಿ ಯೇನೈವ ಸೃಷ್ಟಾಸಿ ಮನಸಾ ಯಸ್ತ್ವಯಾ ವೃತಃ | ಸ ಭರ್ತಾ ತವ ದೇವೇಶೋ ಭವಿತಾ ಮಾ ತಪಃ ಕೃಥಾಃ || ತತಃ ಪ್ರದಕ್ಷಿಣಂ ಕೃತ್ವಾ ಬ್ರಹ್ಮಾ ವ್ಯಾಸ ಗಿರೇಃ ಸುತಾಮ್ | ಜಗಾಮಾದರ್ಶನಂ ತಸ್ಯಾಃ ಸಾ ಚಾಪಿ ವಿರರಾಮ ಹ || ಸಾ ದೇವೀ ಯುಕ್ತಮಿತ್ಯೇವಮುಕ್ತ್ವಾ ಸ್ವಸ್ಯಾಶ್ರಮಸ್ಯ ಹ | ದ್ವಾರಿ ಜಾತಮಶೋಕಂ ವೈ ಸಮುಪಾಶ್ರಿತ್ಯ ಸಂಸ್ಥಿತಾ || ಅಥಾಗಾಶ್ಚಂದ್ರತಿಲಕಸ್ತ್ರಿ ದಶಾರ್ತಿಹರೋ ಹರಃ | ವಿಕೃತಂ ರೂಪಮಾಸ್ಥಾಯ ಹ್ರಸ್ವೋ ಬಾಹುಕ ಏವ ಚ || ವಿಭುಗ್ನನಾಸಿಕೋ ಭೂತ್ವಾ ಕುಬ್ಜಃ ಕೇಶಾಂತಪಿಶ್ಣ್ಗಲಃ | ಉವಾಚ ವಿಕೃತಾಸ್ಯಶ್ಚ ದೇವಿ ತ್ವಾಂ ವರಯಾಮ್ಯಹಮ್ || ಅಥೋಮಾ ಯೋಗಸಂಸಿದ್ಧಾ ಜ್ಞಾತ್ವಾ ಶಂಕರಮಾಗತಮ್ | ಅಂತರ್ಭಾವಿಶುದ್ಧಾ ಸಾ ಕ್ರಿಯಾನುಷ್ಠಾನಲಿಪ್ಸಯಾ || ತಮುವಾಚಾರ್ಘ್ಯಮಾನಾಯ್ಯ ಮಧುಪರ್ಕೇಣ ಚೈವ ಹಿ | ಸಂಪೂಜ್ಯ ಸಸುಖಾಸೀನಂ ಬ್ರಾಹ್ಮಣಂ ಬ್ರಾಹ್ಮಣಪ್ರಿಯಾ || ದೇವ್ಯುವಾಚ | ಭಗವನ್ನಸ್ವತಂತ್ರಾಸ್ಮಿ ಪಿತಾ ಮೇಸ್ತ್ಯರಣೀ ತಥಾ | ತೌ ಪ್ರಭೂ ಮಮ ದಾನೇ ವೈ ಕನ್ಯಾಹಂ ದ್ವಿಜಪುಂಗವ || ಗತ್ವಾ ಯಾಚಸ್ವ ಪಿತರಂ ಮಮ ಶೈಲೇಂದ್ರಮವ್ಯಯಮ್ | ಸ ಚೇದ್ದದಾತಿ ಮಾಂ ವಿಪ್ರ ತುಭ್ಯಂ ತದ್ರುಚಿತಂ ಮಮ || ಸನತ್ಕುಮಾರ ಉವಾಚ | ತತಃ ಸ ಭಗವಾಂದೇವಸ್ತಥೈವ ವಿಕೃತಂ ಪ್ರಭುಃ | ಉವಾಚ ಶೈಲರಾಜಂ ತಮುಮಾಂ ಮೇ ಯಚ್ಛ ಶೈಲರಾಟ್ || ಸ ತಂ ವಿಕೃತರೂಪೇಣ ಜ್ಞಾತ್ವಾ ರುದ್ರಮಥಾವ್ಯಯಮ್ | ಭೀತಃ ಶಾಪಾಚ್ಛ ವಿಮನಾ ಇದಂ ವ

ಸ್ಕಂದಪುರಾಣ ಅಧ್ಯಾಯ 11

ಸನತ್ಕುಮಾರ ಉವಾಚ | ಕದಾಚಿತ್ಸ್ವಗೃಹಂ ಪ್ರಾಪ್ತಂ ಕಶ್ಯಪಂ ದ್ವಿಪದಾಂ ವರಮ್ | ಅಪೃಚ್ಛದ್ಧಿಮವಾನ್ಪ್ರಶ್ನಂ ಲೋಕೇ ಖ್ಯಾತಿಕರಂ ನಂ ಕಿಮ್ || ಕೇನಾಕ್ಷಯಾಶ್ಚ ಲೋಕಾಃ ಸ್ಯುಃ ಖ್ಯಾತಿಶ್ಚ ಪರಮಾ ಮುನೇ | ತಥೈವ ಚಾರ್ಚನೀಯತ್ವಂ ಸತ್ಸು ತಂ ಕಥಯಸ್ವ ಮೇ || ಕಶ್ಯಪ ಉವಾಚ | ಅಪತ್ಯೇನ ಮಹಾಬಾಹೋ ಸರ್ವಮೇತದವಾಪ್ಯತೇ | ಮಮ ಖ್ಯಾತಿರಪತ್ಯೇನ ಬ್ರಹ್ಮಣೋ ಋಷಿಭಿಶ್ಚ ಹ || ಕಿಂ ನ ಪಶ್ಯಸಿ ಶೈಲೇಂದ್ರ ಯತೋ ಮಾಂ ಪರಿಪೃಚ್ಛಸಿ | ವರ್ತಯಿಷ್ಯಾಮಿ ತಚ್ಚಾಪಿ ಯನ್ಮೇ ದೃಷ್ಟಂ ಪುರಾಚಲ || ವಾರಾಣಸೀಮಹಂ ಗಚ್ಛನ್ನಪಶ್ಯಂ ಸಂಸ್ಥಿತಂ ದಿವಿ | ವಿಮಾನಂ ಸ್ವನವದ್ದಿವ್ಯಮನೌಪಮ್ಯಮನಿಂದಿತಮ್ || ತಸ್ಯಾಧಸ್ತಾದಾರ್ತನಾದಂ ಗರ್ತಾಸ್ಥಾನೇ ಶೃಣೋಮ್ಯಹಮ್ | ತಾನಹಂ ತಪಸಾ ಜ್ಞಾತ್ವಾ ತತ್ರೈವಾಂತರ್ಹಿತಃ ಸ್ಥಿತಃ || ಅಥಾಗಾತ್ತತ್ರ ಶೈಲೇಂದ್ರ ವಿಪ್ರೋ ನಿಯಮವಾಂಛುಚಿಃ | ತೀರ್ಥಾಭಿಷೇಕಪೂತಾತ್ಮಾ ಪರೇ ತಪಸಿ ಸಂಸ್ಥಿತಃ || ಅಥ ಸ ವ್ರಜಮಾನಸ್ತು ವ್ಯಾಘ್ರೇಣಾಭೀಷಿತೋ ದ್ವಿಜಃ | ವಿವೇಶ ತಂ ತದಾ ದೇಶಂ ಸಾ ಗರ್ತಾ ಯತ್ರ ಭೂಧರ || ಗರ್ತಾಯಾಂ ವೀರಣಸ್ತಂಬೇ ಲಂಬಮಾನಾಂಸ್ತದಾ ಮುನೀನ್ | ಅಪಶ್ಯದಾರ್ತೋ ದುಃಖಾರ್ತಾನಪೃಚ್ಛತ್ತಾಂಶ್ಚ ಸ ದ್ವಿಜಃ || ಕೇ ಯೂಯಂ ವೀರಣಸ್ತಂಬೇ ಲಂಬಮಾನಾ ಹ್ಯಧೋಮುಖಾಃ | ದುಃಖಿತಾಃ ಕೇನ ಮೋಕ್ಷಶ್ಚ ಯುಷ್ಮಾಕಂ ಭವಿತಾನಘಾಃ || ಪಿತರ ಊಚುಃ | ವಯಂ ತೇಕೃತಪುಣ್ಯಸ್ಯ ಪಿತರಃ ಸಪಿತಾಮಹಾಃ | ಪ್ರಪಿತಾಮಹಾಶ್ಚ ಕ್ಲಿಶ್ಯಾಮಸ್ತವ ದುಷ್ಟೇವ ಕರ್ಮಣಾ || ನರಕೋಯಂ ಮಹಾಭಾಗ ಗರ್ತಾ

ಗಣಿತದಲ್ಲಿ ಅನಂತದ ಪರಿಕಲ್ಪನೆ

ಆಸ್ಮಿನ್ ವಿಕಾರಃ ಖಹರೇಣ ರಾಶಾವಪಿ ಪ್ರವಿಷ್ಟೇಷ್ಟಪಿ ನಿಃಸೃತೇಷು | ಬಹಷ್ವಪಿ ಸ್ಯಾಲ್ಸಯಸೃಷ್ಟಿಕಾಲೇ ಅನಂತೇ ಅಚ್ಯುತೇ ಭೂತಗಣೇಷು ಯದ್ವತ್ ||             - ಭಾಸ್ಕರಾಚಾರ್ಯನ "ಬೀಜಗಣಿತಂ"     "ಅನಂತನೂ ಅವ್ಯಯನೂ ಆದ ಪರಮಾತ್ಮನಿಂದ ಎಲ್ಲವೂ ಸೃಷ್ಟಿ ಕಾಲದಲ್ಲಿ ಹೊರಹೊಮ್ಮುತ್ತದೆ ಪ್ರಳಯ ಕಾಲದಲ್ಲಿ ಎಲ್ಲವೂ ಪುನಃ ಆ ಅನಂತಾತ್ಮಕನಾದ ಪರಮಾತ್ಮನನ್ನೇ ಸೇರುತ್ತದೆ ಆದರೆ ಇವುಗಳಿಂದ ಆತನು ಏನೊಂದು ವ್ಯತ್ಯಾಸವನ್ನು ಹೊಂದುವುದಿಲ್ಲ ಹೀಗೆಯೇ ಸಂಖ್ಯೆಗಳನ್ನು ಖಹರಕ್ಕೆ (ಅನಂತಕ್ಕೆ) ಕೂಡಿಸುವುದರಿಂದ ಅಥವಾ ಕಳೆಯುವುದರಿಂದ ಏನೂ ವ್ಯತ್ಯಾಸಗಳಾಗುವುದಿಲ್ಲ."     ಹನ್ನೆರಡನೇ ಶತಮಾನದಲ್ಲಿದ್ದು ಗಣಿತ ಮತ್ತು ಖಗೋಳ ಶಾಸ್ತ್ರಗಳನ್ನು ಬೆಳೆಸಿ ಬೆಳಗಿಸಿದ ಕರ್ನಾಟಕದವನೇ ಆದ ಖ್ಯಾತಗಣಿತಜ್ಞ ಭಾಸ್ಕರಾಚಾರ್ಯನು ಅನಂತದ ಗುಣವನ್ನು ಬಹಳ ಸ್ವಾರಸ್ಯವಾಗಿ ಈ ಮೇಲಿನ ಶ್ಲೋಕದಲ್ಲಿ ಆತನದೇ ಆದ ವಿಶೇಷವಾದ ಕಾವ್ಯಶೈಲಿಯಲ್ಲಿ ಬಣ್ಣಿಸಿದ್ದಾರೆ. ಭಾಸ್ಕರನು ಅನಂತವನ್ನು "ಖಹರ" ಎಂದು ಕರೆದಿದ್ದಾರೆ. ಖಹರ ಎಂದರೆ ಶೂನ್ಯವನ್ನು ಛೇದದಲ್ಲಿ ಹೊಂದಿರುವಂತಹದು ಎಂದರ್ಥ.     "ಅನಂತದ ವಿಜ್ಞಾನವೇ ಗಣಿತಶಾಸ್ತ್ರ" ಎಂದು ಖ್ಯಾತ ಗಣಿತಜ್ಞ ಹರ್ಮನ್ ವೈಲ್ ಬಣ್ಣಿಸಿದ್ದಾನೆ. ಸಹಸ್ರಾರು ವರ್ಷಗಳಿಂದ ಅನಂತದ ಕಲ್ಪನೆಯು ಗಣಿತಶಾಸ್ತ್ರಜ್ಞರಿಗೆ ಮಾತ್ರವಲ್ಲದೆ ತತ್ತ್ವಜ್ಞಾನಿಗಳಿಗೂ ಮತ್ತು ನಿಸರ್ಗ ಪ್ರೇಮಿಗಳಿಗೂ ಬಹಳ ರೋಚಕವೂ ರೋಮ

ರುದ್ರಭಾಷ್ಯಪ್ರಕಾಶ - 5ನೇ ಅನುವಾಕ (ಸಂಪೂರ್ಣ)

ನಮೋ ಭವಾಯ ಚ     ರುದ್ರಾಧ್ಯಾಯದ ಐದನೆಯ ಅನುವಾಕವನ್ನು ಈಗ ವಿಚಾರಮಾಡ ಬೇಕಾಗಿದೆ. ಈ ಅನುವಾಕದ ಮೊದಲನೆಯ ಮಂತ್ರಭಾಗವು ಹೀಗೆದೆ : ನಮೋ ಭವಾಯ ಚ ರುದ್ರಾಯ ಚ ನಮಃ ಶರ್ವಾಯ ಚ ಪಶು ಪತಯೇ ಚ ನಮೋ ನೀಲಗ್ರೀವಾಯ ಚ ಶಿತಿಕಂಠಾಯ ಚ ನಮಃ ಕಪ ರ್ದಿನೇ ಚ ವ್ಯುಪ್ತಕೇಶಾಯ ಚ ನಮಃ ಸಹಸ್ರಾಕ್ಷಾಯ ಚ ಶತಧನ್ವನೇ ಚ ||     "ಭವನಿಗೂ ರುದ್ರನಿಗೂ ಶರ್ವನಿಗೂ ಪಶುಪತಿಗೂ ನೀಲಗ್ರೀವನಿಗೂ ಶಿತಿಕಂಠನಿಗೂ ಕಪರ್ದಿಗೂ ವ್ಯುಪ್ತಕೇಶನಿಗೂ ಸಹಸ್ರಾಕ್ಷನಿಗೂ ಶತಧನ್ವನಿಗೂ ನಮಸ್ಕಾರವು"     ಈ ಅನುವಾಕಗಳಲ್ಲಿ ನಮಃ ಶಬ್ದವು ಒಮ್ಮೆ ಮಾತ್ರ ಪ್ರಯುಕ್ತವಾಗುತ್ತದೆ. ಎಂದರೆ ಉಭಯತೋನಮಸ್ಕಾರಮಂತ್ರಗಳಂತೆ ಇಲ್ಲಿ ಹಿಂದೆಯೂ ಮುಂದೆಯೂ ಎರಡುಸಲ ನಮಃ ಶಬ್ದವು ಬರುವದಿಲ್ಲ ಮತ್ತು ಎರಡೆರಡು ನಾಮಗಳಿಗೆ ಒಂದೊಂದು ನಮಃ ಶಬ್ದವಿರುತ್ತದೆ ಆದ್ದರಿಂದ 'ನಮೋ ಭವಾಯ ಚ ರುದ್ರಾಯ ಚ' ಎಂದು ನಮಸ್ಕಾರಾದಿಯಾಗಿರುವದು ಒಂದು ಮಂತ್ರವು ಇದರಂತೆಯೇ 'ನಮಃ ಶರ್ವಾಯ ಚ ಪಶುಪತಯೇ ಚ' ಎಂದು ಮುಂತಾಗಿ ಮುಂದಿನ ಮಂತ್ರಗಳನ್ನೂ ತಿಳಿಯಬೇಕು.     ಈಗ ಈ ಸ್ತುತಿಯ ಅರ್ಥವನ್ನು ವಿಚಾರಮಾಡೋಣ ಹಿಂದಿನ ಅನುವಾಕದಲ್ಲಿ ಸರ್ವಾತ್ಮನಾದ ಪರಮೇಶ್ವರನನ್ನು ಎಲ್ಲಾ ರೂಪಗಳಿಂದಲೂ ಕಂಡು ನಮಸ್ಕರಿಸಿದ್ದಾಯಿತು ಈಗಲಾದರೊ ಭಗವಂತನಿಗೆ ಮಾತ್ರವೇ ಮಿಸಲಾಗಿರುವ ಗುಣಕರ್ಮರೂಪಗಳಿಂದ ಸ್ತುತಿಸಲಾಗುತ್ತದೆ ಇದು 'ದ್ರಾಪೇ' ಎಂಬವರೆಗಿನ ಮಂತ್ರದವರೆಗೂ ಮುಂದುವರೆಯುತ್ತದೆ ಇಲ್ಲಿ ಈಗ ಮೊದಲನೆ

ದಕ್ಷಿಣಾಮೂರ್ತಿಸ್ತೋತ್ರ - 10 - ಸರ್ವಾತ್ಮಭಾವ

ಸರ್ವಾತ್ಮತ್ವಮಿತಿ ಸ್ಫುಟೀಕೃತಮಿದಂ ಯಸ್ಮಾದಮುಷ್ಮಿಂಸ್ತವೇ ತೇನಾಸ್ಯ ಶ್ರವಣಾತ್ತದರ್ಥಮನನಾದ್ಧ್ಯಾನಾಚ್ಛಸಂಕೀರ್ತನಾತ್ | ಸರ್ವಾತ್ಮತ್ವಮಹಾವಿಭೂತಿಸಹಿತಂ ಸ್ಯಾದೀಶ್ವರತ್ವಂ ಸ್ವತಃ ಸಿಧ್ಯೇತ್ತತ್ಪುನರಷ್ಟಧಾ ಪರಿಣತಂ ಚೈಶ್ವರ್ಯಮವ್ಯಾಹತಮ್ ||10||     ಸ್ತೋತ್ರದ ಅರ್ಥವನ್ನು ಅನುಭವಕ್ಕೆ ತಂದುಕೊಂಡವನಿಗೆ ಆಗುವ ಫಲವನ್ನು ಇಲ್ಲಿ ಹೇಳಿರುತ್ತದೆ. "ಈ ಸ್ತೋತ್ರದಲ್ಲಿ ಸರ್ವಾತ್ಮಕತ್ವವನ್ನು ಹೀಗೆ ಸ್ಫುಟಗೊಳಿಸಲಾಗಿರುವದಷ್ಟೆ? ಆದ್ದರಿಂದ ಇದನ್ನು ಶ್ರವಣಮಾಡಿ, ಇದೇ ಅರ್ಥವನ್ನು ಮನನಮಾಡಿಕೊಂಡು, ಅದನ್ನೇ ಧ್ಯಾನಮಾಡುತ್ತಾ, ಸಂಕೀರ್ತನ ಮಾಡುವದರಿಂದ 'ಸರ್ವಾತ್ಮತ್ವ'ವೆಂಬ ಮಹಾವಿಭೂತಿಯಿಂದೊಡಗೂಡಿ ಈಶ್ವರತ್ವವು ಉಂಟಾಗುವದು. ಎಂಟು ಬಗೆಯಾಗಿ ಪರಿಣಮಿಸುವ ಯಾವ ಅಡ್ಡಿಯೂ ಇಲ್ಲದ ಐಶ್ವರ್ಯವೂ ತಾನೇ ಸಿದ್ಧಿಸುವದು" ಎಂಬುದು ಶ್ಲೋಕದ ಅಕ್ಷರಾರ್ಥವು.     ಪರಮಾತ್ಮನೇ ಪರಮಾರ್ಥತತ್ತ್ವವು, ಅವನಿಗಿಂತ ಬೇರೆಯಾಗಿರುವದು ಮತ್ತೆ ಯಾವದೂ ಇರುವದೇ ಇಲ್ಲ; ಈ ಜಗತ್ತೆಲ್ಲವೂ ಆತನ ಮಹಿಮೆಯೇ ಎಂಬುದು ಈ ಸ್ತೋತ್ರದ ಒಟ್ಟರ್ಥವಷ್ಟೆ? ಈ ಅರ್ಥವನ್ನು ಅರಿತುಕೊಂಡ ಪ್ರತಿಯೊಬ್ಬನಿಗೂ 'ನನ್ನ ಆತ್ಮನು ಆ ಪರಮಾತ್ಮನೇ' ಎಂಬ ಅನುಭವವು ಉಂಟಾಗಿ ಬಿಡುತ್ತದೆಯಾದ್ದರಿಂದ ಅವನಿಗೆ ಬೇಕಾದ ಪುರುಷಾರ್ಥವು ಮತ್ತೆ ಯಾವದೂ ಉಳಿಯುವದಿಲ್ಲವೆಂಬುದು ಸ್ಪಷ್ಟವಾಗಿದೆ ಆದರೆ ಈ ಸ್ತೋತ್ರವನ್ನು ಸುಮ್ಮನೆ ಓದಿದ ಮಾತ್ರದಿಂದ ಇಂಥ ಅನುಭವವು ಬರಲಾರದೆಂಬುದನ್ನು

ಸ್ಕಂದಪುರಾಣ ಅಧ್ಯಾಯ 10

ಸನತ್ಕುಮಾರ ಉವಾಚ | ಸಾ ದೇವೀ ತ್ರ್ಯಂಬಕಪ್ರೋಕ್ತಾ ತತಾಪ ಸುಚಿರಂ ತಪಃ | ನಿರಾಹಾರಾ ಕದಾಚಿಚ್ಚ ಏಕಪರ್ಣಾಶನಾ ಪುನಃ | ವಾಯ್ವಾಹಾರಾ ಪುನಶ್ಚಾಪಿ ಅಬ್ಭಕ್ಷಾ ಭೂಯ ಏವ ಚ | ತಾಂ ತಪಶ್ಚರಣೇ ಯುಕ್ತಾಂ ಬ್ರಹ್ಮಾ ಜ್ಞಾತ್ವಾತಿಭಾಸ್ವರಾಮ್ | ಉವಾಚ ಬ್ರೂಹಿ ತುಷ್ಟೋಸ್ಮಿ ದೇವಿ ಕಿಂ ಕರವಾಣಿ ತೇ || ಸಾಬ್ರವೀತ್ ತ್ರ್ಯಂಬಕಂ ದೇವಂ ಪತಿಂ ಪ್ರಪ್ಯೇಂದುವರ್ಚಸಮ್ | ವಿಚರೇಯಂ ಸುಖಂ ದೇವ ಸರ್ವಾ/ಲ್ಲೋಕಾನ್ನಮಸ್ತವ || ಬ್ರಹ್ಮೋವಾಚ | ನ ಹಿ ಯೇನ ಶರೀರೇಣ ಕ್ರಿಯತೇ ಪರಮಂ ತಪಃ | ತೇನೈವ ಪರಮೇಶೋಸೌ ಪತಿಃ ಶಂಭುರವಾಪ್ಯತೇ || ತಸ್ಮಾದ್ಧಿ ಯೋಗಾದ್ಭವತೀ ದಕ್ಷಸ್ಯೇಹ ಪ್ರಜಾಪತೇಃ | ಜಾಯಸ್ವ ದುಹತಾ ಭೂತ್ವಾ ಪತಿಂ ರುದ್ರಮವಾಪ್ಸ್ಯಸಿ || ತತಃ ಸಾ ತದ್ವಚಃ ಶ್ರುತ್ವಾ ಯೋಗಾದ್ದೇವೀ ಮನಸ್ವಿನೀ | ದಕ್ಷಸ್ಯ ದುಹಿತಾ ಜಜ್ಞೇ ಸತೀ ನಾಮಾತಿಯೋಗಿನೀ || ತಾಂ ದಕ್ಷಸ್‌ತ್ರ್ಯಂಬಕಾಯೈವ ದದೌ ಭಾರ್ಯಾಮನಿಂದಿತಾಮ್ | ಬ್ರಹ್ಮಣೋ ವಚನಾದ್ಯಸ್ಯಾಂ ಮಾನಸಾನಸೃಜತ್ಸುತಾನ್ || ಆತ್ಮತುಲ್ಯಬಲಾಂದೀಪ್ತಾಂಜರಾಮರಣವರ್ಜಿತಾನ್ | ಅನೇಕಾನಿ ಸಹಸ್ರಾಣಿ ರುದ್ರಾಣಾಮಮಿತೌಜಸಾಮ್ || ತಾಂದೃಷ್ಟ್ವಾ ಸೃಜ್ಯಮಾನಾಂಶ್ಚ ಬ್ರಹ್ಮಾ ತಂ ಪ್ರತ್ಯಷೇಧಯತ್ | ಮಾ ಸ್ರಾಕ್ಷೀರ್ದೇವದೇವೇಶ ಪ್ರಜಾ ಮೃತ್ಯುವಿವರ್ಜಿತಾಃ || ಅನ್ಯಾಃ ಸೃಜಸ್ವ ಭದ್ರಂ ತೇ ಪ್ರಜಾ ಮೃತ್ಯುಸಮನ್ವಿತಾಃ | ತೇನ ಚೋಕ್ತಂ ಸ್ಥಿತೋಸ್ಮೀತಿ ಸ್ಥಾಣುಸ್ತೇನ ತತಃ ಸ್ಮೃತಃ || ದೇವ ಉವಾಚ | ನ ಸ್ರಕ್ಷ್ಯೇ ಮೃತ್ಯುಸಂಯುಕ್ತಾಃ ಪ್ರಜಾ ಬ್ರಹ್ಮನ್ಕ

ದಕ್ಷಿಣಾಮೂರ್ತಿಸ್ತೋತ್ರ - 9 - ಪರಮೇಶ್ವರನ ಸರ್ವಾತ್ಮಕತ್ವ

ಭೂರಮ್ಭಾಂಸ್ಯನಲೋನಿಲೋಮ್ಬರಮಹರ್ನಾಥೋ ಹಿಮಾಂಶುಃ ಪುಮಾನ್ ಇತ್ಯಾಭಾತಿ ಚರಾಚರಾತ್ಮಕಮಿದಂ ಯಸ್ಮೈವ ಮೂರ್ತ್ಯಷ್ಟಕಮ್ | ನಾನ್ಯತ್ಕಞ್ಚನ ವಿದ್ಯತೇ ವಿಮೃಶತಾಂ ಯಸ್ಮಾತ್ಪರಸ್ಮಾದ್ವಿಭೋ - ಸ್ತಸ್ಮೈಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ||     ಈವರೆಗೆ ಪ್ರತಿಪಾದಿಸಿರುವದರ ಸಾರವಿಷ್ಟು : ಪರಮೇಶ್ವರನು ನಮ್ಮಗಳೆಲ್ಲರ ಆತ್ಮನೇ ಆಗಿರುತ್ತಾನೆ. ಪರಮಾತ್ಮನಲ್ಲಿ  ಅವಿದ್ಯಾಕಲ್ಪಿತವಾಗಿರುವ ನಾಮರೂಪ ಮಾಯೆಯ ವಿಕಾರವೇ ಈ ಜಗತ್ತು. ವ್ಯಾಕೃತ (ಬಿಡಿಬಿಡಿಯಾಗಿ ತೋರುವ) ನಾಮರೂಪಪ್ರಪಂಚ, ಅವ್ಯಾಕೃತ (ಬೀಜರೂಪವಾಗಿರುವ) ನಾಮರೂಪಪ್ರಪಂಚ ಎಂಬೀ ಎರಡು ಉಪಾಧಿಗಳಿಂದೊಡಗೂಡಿದ ಪರಮಾತ್ಮನು - ಮಾಯಾವಿಯು ಅಥವಾ ಒಬ್ಬ ಮಹಾಯೋಗಿಯು ತಾನೊಬ್ಬನೇ ಇದ್ದರೂ ಬಗೆಬಗೆಯ ಚೇತನಾ ಚೇತನಪದಾರ್ಥಗಳಾಗಿ ತೋರಿಕೊಳ್ಳುವಂತೆ ಗೊತ್ತಾದ ದೇಶಕಾಲನಿಮಿತ್ತಗಳುಳ್ಲ ಕ್ರಿಯಾಕಾರಕಫಲರೂಪವಾಗಿ ತೋರಿಸಿಕೊಳ್ಳುತ್ತಿರುತ್ತಾನೆ ಆತನ ಚೈತನ್ಯದ ಪ್ರಕಾಶದಿಂದಲೇ ಜಗತ್ತಿನಲ್ಲಿರುವ ಮಾಯಿಕಪದಾರ್ಥಗಳೆಲ್ಲ ತೋರಿಕೊಳ್ಳುತ್ತಿರುವವು ಆತನೇ ಸಾಧಕರಿಗೆ ಗುರುರೂಪದಿಂದ ಬಂದು ನೀನೇ ಈ ಜಗತ್ತಿಗೆ ಕಾರಣವಾಗಿರುವ ಸದ್ಬ್ರಹ್ಮವು ಎಂದು ಬೋಧಿಸುತ್ತಾನೆ. ಆ ಭೋಧೆಯಿಂದ ತಮ್ಮ ಪರಮಾರ್ಥಸ್ವರೂಪವನ್ನು ನೇರಾಗಿ ಅನುಭವಕ್ಕೆ ತಂದುಕೊಂಡವರು ಮತ್ತೆ ಸಂಸಾರದಲ್ಲಿ ಜೀವರಾಗಿ ಹುಟ್ಟುವದಿಲ್ಲ ಜೀವರು 'ಇಗೊ, ಇದನ್ನು ನಾನು ಇಂಥ ಕರಣದಿಂದ ಅರಿತುಕೊಂಡೆನು' ಎಂದು ಭಾವಿಸುತ್ತಿರುವದಕ್ಕೆ ಆ ಪರಮಾತ್ಮನ ಚ

ಸ್ಕಂದಪುರಾಣ ಅಧ್ಯಾಯ 9

ಸನತ್ಕುಮಾರ ಉವಾಚ | ತೇ ದೃಷ್ಟ್ವಾ ದೇವದೇವೇಶಂ ಸರ್ವೇ ಸಬ್ರಹ್ಮಕಾಃ ಸುರಾಃ | ಅಸ್ತುವನ್ವಾಗ್ಭಿರಿಷ್ಟಾಭಿಃ ಪ್ರಣಮ್ಯ ವೃಷವಾಹನಮ್ || ಪಿತಾಮಹ ಉವಾಚ | ನಮಃ ಶಿವಾಯ ಸೋಮಾಯ ಭಕ್ತಾನಾಂ ಭಯಹಾರಿಣೇ | ನಮಃ ಶೂಲಾಗ್ರಹಸ್ತಾಯ ಕಮಂಡಲುಧರಾಯ ಚ || ದಂಡಿನೇ ನೀಲಕಂಠಾಯ ಕರಾಲದಶನಾಯ ಚ | ತ್ರೇತಾಗ್ನಿದೀಪ್ತನೇತ್ರಾಯ ತ್ರಿನೇತ್ರಾಯ ಹರಾಯ ಚ || ನಮಃ ಪಿನಾಕಿನೇ ಚೈವ ನಮೋಸ್ತ್ವಶನಿಧಾರಿಣೇ | ವ್ಯಾಲಯಜ್ಞೋಪವೀತಾಯ ಕುಂಡಲಾಭರಣಾಯ ಚ || ನಮಶ್ಚಕ್ರಧರಾಯೈವ ವ್ಯಾಘ್ರಚರ್ಮಧರಾಯ ಚ | ಕೃಷ್ಣಾಜಿನೋತ್ತರೀಯಾಯ ಸರ್ಪಮೇಖಲಿನೇ ತಥಾ || ವರದಾತ್ರೇ ಚ ರುದ್ರಾಯ ಸರಸ್ವತೀಸೃಜೇ ತಥಾ | ಸೋಮಸೂರ್ಯರ್ಕ್ಷಮಾಲಾಯ ಅಕ್ಷಸೂತ್ರಕರಾಯ ಚ || ಜ್ವಾಲಾಮಾಲಾಸಹಸ್ರಾಯ ಊರ್ಧ್ವಲಿಶ್ಣ್ಗಾಯ ವೈ ನಮಃ | ನಮಃ ಪರ್ವತವಾಸಾಯ ಶಿರೋಹರ್ತ್ರೇ ಚ ಮೇ ಪುರಾ || ಹಾಲಾಹಲವಿನಾಶಾಯ ಕಪಾಲವರಧಾರಿಣೇ | ವಿಮಾನವರವಾಹಾಯ ಜನಕಾಯ ಮಮೈವ ಚ | ವರದಾಯ ವರಿಷ್ಠಾಯ ಶ್ಮಶಾನರತಯೇ ನಮಃ || ನಮೋ ನರಸ್ಯ ಕರ್ತ್ರೇ ಚ ಸ್ಥಿತಿಕರ್ತ್ರೇ ನಮಃ ಸದಾ | ಉತ್ಪತ್ತಿಪ್ರಲಯಾನಾಂ ಚ ಕರ್ತ್ರೇ ಸರ್ವಸಹಾಯ ಚ || ಋಷಿದೈವತನಾಥಾಯ ಸರ್ವಭೂತಾಧಿಪಾಯ ಚ | ಶಿವಃ ಸೌಮ್ಯಶ್ಚ ದೇವೇಶ ಭವ ನೋ ಭಕ್ತವತ್ಸಲ || ಸನತ್ಕುಮಾರ ಉವಾಚ | ಬ್ರಹ್ಮಣ್ಯಥೈವಂ ಸ್ತುವತಿ ದೇವದೇವಃ ಸ ಲೋಕಪಃ | ಉವಾಚ ತುಷ್ಟಸ್ತಾಂದೇವಾನೃಷೀಂಶ್ಚ ತಪಸೈಧಿತಾನ್ || ತುಷ್ಟೋಸ್ಮ್ಯನೇನ ವಃ ಸಮ್ಯಕ್ತಪಸಾ ಋಷಿದೇವತಾಃ | ವರಂ ಬ್ರೂತ ಪ್ರದಾಸ್ಯಾಮಿ ಸುನಿಶ್ಚಿಂತ್ಯ ಸ ಉಚ್ಯತಾ

ದಕ್ಷಿಣಾಮೂರ್ತಿಸ್ತೋತ್ರ - 8. ಜಗತ್ತಿನಲ್ಲಿ ದೃಶ್ಯಗಳಿಗಿರುವ ವಿಥ್ಯಾಸಂಬಂಧ

ವಿಶ್ವಂ ಪಶ್ಯತಿ ಕಾರ್ಯಕಾರಣತಯಾ ಸ್ವಸ್ವಾಮಿಸಂಬನ್ಧತಃ ಶಿಷ್ಯಾಚಾರ್ಯತಯಾ ತಥೈವ ಪಿತೃಪುತ್ರಾದ್ಯಾತ್ಮನಾ ಭೇದತಃ | ಸ್ವಪ್ನೇ ಜಾಗ್ರತಿ ವಾ ಯ ಏಷ ಪುರುಷೋ ಮಾಯಾಪರಿಭ್ರಾಮಿತ- ಸ್ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ||     'ಕಾರ್ಯಕಾರಣಸಂಬಂಧವುಳ್ಳದ್ದು, ನಾನುನನ್ನದೆಂಬ ಸಂಬಂಧವುಳ್ಳದ್ದು, ಶಿಷ್ಯ, ಆಚಾರ್ಯ - ಎಂಬ ಸಂಬಂಧವುಳ್ಳದ್ದು - ಹೀಗೆ ಕನಸಿನಲ್ಲಾಗಲಿ ಎಚ್ಚರದಲ್ಲಾಗಲಿ ಮಾಯೆಯಿಂದ ಭ್ರಾಂತಿಗೊಳಿಸಲ್ಪಟ್ಟು ಈ ಯಾವ ಪುರುಷನು ವಿಶ್ವವನ್ನು ಭಿನ್ನಭಿನ್ನಸಂಬಂಧದಿಂದ ಕೂಡಿದ್ದನ್ನಾಗಿ ಕಾಣುತ್ತಿರುವನೋ ಆ ಶ್ರೀಗುರುಮೂರ್ತಿಯಾದ ಶ್ರೀದಕ್ಷಿಣಾಮುರ್ತಿಗೆ ಈ ನಮಸ್ಕಾರವು!' ಎಂದು ಶ್ಲೋಕಾರ್ಥ.     ಹಿಂದಿನ ಏಳು ಶ್ಲೋಕಗಳಲ್ಲಿ ಆತ್ಮನು ಒಬ್ಬನೇ ಪರಮಾರ್ಥಸತ್ಯ ಸ್ವರೂಪನಾದವನು; ಅವನಲ್ಲಿ ಹುಸಿತೋರಿಕೆಯ ಪ್ರಪಂಚವು ಕಲ್ಪತವಾಗಿರುತ್ತದೆ ನಿಜವಾಗಿ ಅವನಿಗಿಂತ ಬೇರೆಯಾಗಿರುವ ಎರಡನೆಯ ವಸ್ತುವೇ ಇಲ್ಲ. ಈ ತತ್ತ್ವವನ್ನು ಗುರುಮೂರ್ತಿಯ ರೂಪದಲ್ಲಿರುವ ಶ್ರೀದಕ್ಷಿಣಾಮೂರ್ತಿ ಪರಮೇಶ್ವರನ ಅನುಗ್ರಹದಿಂದ ಮನಗಾಣಬೇಕು ಎಂದು ಬಗೆಬಗೆಯ ವಿಚಾರಗಳಿಂದ ತಿಳಿಸಿ ಕೊಟ್ಟದ್ದಾಯಿತು: ಈ ತತ್ತ್ವವನ್ನು ನಾವು ಮನಗಾಣುವದಾದರೂ ಹೇಗೆ? ಎಲ್ಲವೂ ಅದ್ವಿತೀಯಬ್ರಹ್ಮವೇ ಆದರೆ ಯಾರಿಗೆ ಯಾರಿಂದ ಉಪದೇಶ? ಯಾರು ಅಜ್ಞರು, ಯಾರು ತಜ್ಞರು? ಯಾರಿಗೆ ಬಂಧ, ಯಾರಿಗೆ ಮೋಕ್ಷ? ಎಲ್ಲವೂ ಅದ್ವೈತವಾದ ಆತ್ಮತತ್ತ್ವವೊಂದೇ ಎಂದಾದರೆ ಜಗತ್ತಿನ ವ್ಯವಹಾರವೆಲ್