Posts

Showing posts from February, 2016

ಸ್ಕಂದಪುರಾಣ ಅಧ್ಯಾಯ 16

ವ್ಯಾಸ ಉವಾಚ | ವರಾನ್ಸ ಉಬ್ಧ್ವಾ ಭಗವಾನ್ವಸಿಷ್ಠೋಸ್ಮತ್ಪಿತಾಮಹಃ | ಕಂ ಪುತ್ರಂ ಜನಯಾಮಾಸ ಆತ್ಮನಃ ಸದೃಶದ್ಯುತಿಮ್ || ಸನತ್ಕುಮಾರ ಉವಾಚ | ತೇನಾಸೌ ವರದಾನೇನ ದೇವದೇವಸ್ಯ ಶೂಲಿನಃ | ಅರುಂಧತ್ಯಾಮಜನಯತ್ತಪೋಯೋಗಬಲಾನ್ವಿತಮ್ | ಬ್ರಹ್ಮಿಷ್ಠಂ ಶಕ್ತಿನಾಮಾನಂ ಪುತ್ರಂ ಪುತ್ರಶತಾಗ್ರಜಮ್ || ತಸ್ಯ ಬಾಲ್ಯಾತ್ಪ್ರಭೃತ್ಯೇವ ವಾಸಿಷ್ಠಸ್ಯ ಮಹಾತ್ಮನಃ | ಪರೇಣ ಚೇತಸಾ ಭಕ್ತಿರಭವದ್ಗೋವೃಷಧ್ವಜೇ || ಸ ಕದಾಚಿದಪತ್ಯಾರ್ಥಮಾರಾಧಯದುಮಾಪತಿಮ್ | ತಸ್ಯ ತುಷ್ಟೋ ಮಹಾದೇವೋ ವರದೋಸ್ಮೀತ್ಯಭಾಷತ || ಅಥ ದೃಷ್ಟ್ವಾ ತಮೀಶಾನಮಿದಮಾಹಾನತಾನನಃ | ಕೇನ ಸ್ತೋಷ್ಯಾಮಿ ತೇ ದೇವ ಯಸ್ತ್ವಂ ಸರ್ವಜಗತ್ಪತಿಃ | ಸರ್ವಾಂಧಾರಯಸೇ ಲೋಕಾನಾತ್ಮನಾ ಸಮಯಾದ್ವಿಭೋ || ತ್ವಮೇವ ಭೋಕ್ತಾ ಭೋಜ್ಯಂ ಚ ಕರ್ತಾ ಕಾರ್ಯಂ ತಥಾ ಕ್ರಿಯಾ ಉತ್ಪಾದಕಸ್ತಥೋತ್ಪಾದ್ಯ ಉತ್ಪತ್ತಿಚ್ಚೈವ ಸರ್ವಶಃ || ಆತ್ಮಾನಂ ಪುತ್ರನಾಮಾನಂ ಮಮ ತುಲ್ಯಂ ಗುಣೈರ್ವಿಭೋ | ಇಚ್ಛಾಮಿ ದತ್ತಂ ದೇವೇಶ ಏಷ ಮೇ ದೀಯತಾಂ ವರಃ || ಸನತ್ಕುಮಾರ ಉವಾಚ | ತಮೇವಂವಾದಿನಂ ದೇವಃ ಪ್ರಹಸ್ಯ ವದತಾಂ ವರಃ | ಉವಾಚ ವಚಸಾ ವ್ಯಾಸ ದಿಶಃ ಸರ್ವಾ ವಿನಾದಯನ್ || ತ್ವಯಾಹಂ ಯಾಚಿತಃ ಶಕ್ತೇ ಸ ಚ ತೇ ಸಂಭವಿಷ್ಯತಿ | ತ್ವತ್ಸಮಃ ಸರ್ವವೇದಜ್ಞಸ್ತ್ವದೀಯೋ ಮುನಿಪುಂಗವ || ಬೀಜಾತ್ಮಾ ಚ ತಥೋದ್ಭೂತಃ ಸ್ವಯಮೇವಾಶ್ಣ್ಕುರಾತ್ಮನಾ | ಬೀಜಾತ್ಮನಾ ನ ಭವತಿ ಪರಿಣಾಮಾಂತರಂ ಗತಃ || ಏವಂ ಸ ಆತ್ಮನಾತ್ಮಾ ವಃ ಸಂಭೂತೋಪತ್ಯಸಂಜ್ಞಿತಃ | ಸ್ವೇನಾತ್ಮನಾ ನ ಭವಿತಾ ಪರಿಣ

ಗೋದಾಸ್ತುತಿಃ (ಸಂಗ್ರಹ) - 11

ದಿಕ್‌ದಕ್ಷಿಣಾಪಿ ಪರಿಪಕ್ತ್ತಿಮ ಪುಣ್ಯಲಭ್ಯಾತ್ ಸರ್ವೋತ್ತರಾಭವತಿ ದೇವಿ ತವಾವತಾರಾತ್ | ಯತ್ರೈವ ರಂಗಪತಿನಾ ಬಹುಮಾನಪೂರ್ವಂ ನಿದ್ರಾಳುನಾಪಿ ನಿಯತಃ ನಿಹಿತಾಃ ಕಟಾಕ್ಷಾಃ ||11|| ದೇವಿ! = ಎಲೈ! ಗೋದಾದೇವಿಯೇ, ದಕ್ಷಿಣಾದಿಕ್ ಅಪಿ = (ಯಾವ ಸುಭಕೆಲಸಗಳಿಗೂ ಅರ್ಹತೆಯಿಲ್ಲದ) ದಕ್ಷಿಣ ದಿಕ್ಕಾದರೋ, ಪರಿಪಕ್ತ್ರಿಮ = ಪಕ್ವವಾದ, ಪುಣ್ಯಲಭ್ಯಾತ್ = ಪುಣ್ಯಫಲಗಳನ್ನು ಹೊಂದಿದುದರಿಂದ ತವ = ನಿನ್ನ, ಅವತಾರಾತ್ = ಅವತಾರವು ಆ ದಿಕ್ಕಿನಲ್ಲಾದುದರಿಂದ, ಸರ್ವೋತ್ತರಾ = ಎಲ್ಲ ದಿಕ್ಕುಗಳಿಗಿಂತಲೂ ಮೇಲ್ಮೈಯುಳ್ಳದುದಾಗಿ (ಉತ್ತರದಿಕ್ಕಿಗಿಂತಲೂ ಮಹತ್ವ ಉಳ್ಳದುದಾಗಿ), ಭವತಿ = ಆಗಿದೆ, ಯತ್ರೈವ = ಯಾವ ನಿನ್ನ ಅವತಾರವಾದ ದಕ್ಷಿಣ ದಿಕ್ಕಿನಲ್ಲಾದರೋ, ನಿದ್ರಾಳುನಾ = ಉಭಯ ವಿಭೂತಿಗಳ ರಕ್ಷಣೆಯನ್ನು ಚಿಂತಿಸುತ್ತಾ ನಿದ್ರಿಸುವವನಂತಿರುವ, ರಂಗಪತಿನಾ ಅಪಿ = ಶ್ರೀರಂಗನಾಥನಿಂದಲೂ, ಬಹುಮಾನಪೂರ್ವಂ = ಅತ್ಯಾದರದಿಂದ, ನಿಹಿತಾಃ = ಬೀರುವ, ಕಟಾಕ್ಷಾಃ = ವೀಕ್ಷಣೆಯಾದರೋ, ನಿಯತಃ = ಕಟ್ಟಲ್ಪಟ್ಟಿದೆ.     ಎಲೈ! ಗೋದಾದೇವಿಯೇ, "ಪ್ರಾಚೀನಮುದೀಚೀನಂಮೇಧ್ಯಂ ಪ್ರತೀಚೀನಂದಕ್ಷಿಣಾಮೇಧ್ಯಂ" ಎಂದು ಶ್ರುತಿಯಲ್ಲೇ ಅಪವಿತ್ರವೆಂದು ಪ್ರತಿಪಾದಿತವಾಗಿ, ಶುಭಕೆಲಸಗಳಿಗೆ ಅನರ್ಹವಾದ ದಕ್ಷಿಣದಿಕ್ಕದರೋ ತನ್ನ ಪರಿಪಕ್ವವಾದ ಪುಣ್ಯಫಲದಿಂದ, ನೀನು ಆ ದಿಕ್ಕಿನಲ್ಲಿ ಅವತರಿಸುವಂತಾದುದರಿಂದ, ಎಲ್ಲ ದಿಕ್ಕುಗಳಿಗಿಂತಲೂ ಮೇಲ್ಮೈಯನ್ನು ಪಡೆಯಿತು ಅದ

ಮಹಾಶಿವರಾತ್ರಿಯ ತತ್ತ್ವ

    ಪ್ರತಿವರ್ಷವೂ ಮಾಘ ಬಹುಳ ಚತುರ್ದಶಿಯಂದು ಪ್ರಾಪ್ತವಾಗುವ ಮಹಾಶಿವರಾತ್ರಿಯ ಅನುಷ್ಠಾನವು ವಿಶ್ವಾದ್ಯಂತ ಅನೇಕ ಭಕ್ತರಿಂದ ಆಚರಿಸಲ್ಪಡುತ್ತದೆ. ಶಿವನ ಆರಾಧನೆಗೆ ಮುಖ್ಯವಾದ ದಿನವೇ ಶಿವರಾತ್ರಿಯು. ಇದು ಹಿಂದೂಪಂಚಾಂಗದ ಪ್ರಕಾರ ಪ್ರತಿ ಮಾಸದ ಕೃಷ್ಣಪಕ್ಷದ ಚತುರ್ದಶಿಯ ದಿನ ಪ್ರಾಪ್ತವಾಗುತ್ತದೆ. ಇದನ್ನು 'ಮಾಸಶಿವರಾತ್ರಿ'ಯೆಂದು ಕರೆಯುತ್ತಾರೆ, ಆದ್ದರಿಂದಲೇ ಮಾಘಮಾಸದಲ್ಲಿ ಬರುವ ಶಿವರಾತ್ರಿಗೆ 'ಮಹಾಶಿವರಾತ್ರಿ' ಎಂಬ ವಿಶೇಷವಾದ ಹೆಸರಿದೆ.     ರಾತ್ರಿಯು ಯಾವಾಗಲೂ ಜೀವರಿಗೆ ಭಯಂಕರವಾದುದು. ಎಲ್ಲಾ ಪದಾರ್ಥಗಳೂ ಕಗ್ಗತ್ತಲೆಯಲ್ಲಿ ಮುಳುಗಿರುವಾಗ ಏನೊಂದೂ ಕೆಲಸವು ಸಧ್ಯವಾಗುವದಿಲ್ಲ ಹಾಗೂ ಪ್ರಾಣಿಗಳಿಗೆಲ್ಲ ನಿದ್ರೆಯ ಸಮಯವೂ ರಾತ್ರಿಯೇ ಆಗಿದೆ ಕೆಲವೇ ಭೂತ ಪ್ರೇತಪಿಶಾಚಾದಿ ಸತ್ತ್ವಗಳಿಗೂ ಗೂಬೆ ಮುಂತಾದವುಗಳಿಗೂ ರಾತ್ರಿಯ ಚಟುವಟಿಕೆಯ ಕಾಲವಾಗಿರಬಹುದು, ಆದರೆ ಸಾಮಾನ್ಯವಾಗಿ ಎಲ್ಲರಿಗೂ ರಾತ್ರಿಯು ಅಮಂಗಳಕರವು ಹೀಗಿರುವಲ್ಲಿ 'ಶಿವರಾತ್ರಿ' ಎಂದು ರಾತ್ರಿಯನ್ನು ಮಂಗಳಕರವೆಂತ ಕರೆಯಲು ಕಾರಣವೇನು? ಆ ರಾತ್ರಿಗೆ ಮಂಗಳತ್ವವು ಉಂಟಾಗುವದಕ್ಕೆ ನಿಮಿತ್ತವೇನಾದರೂ ಇರಬಹುದೆ? ಎಂದು ಯಾರಾದರೂ ಕೇಳಬಹುದಾಗಿದೆ. ಇದಕ್ಕೆ ಉತ್ತರವನ್ನು ಒಂದು ಗೀತಾಶ್ಲೋಕದಿಂದ ಕಂಡುಹಿಡಿಯಲು ಯತ್ನಿಸೋಣ. ಹೇಗೆಂದರೆ: 'ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮಿ' ಎಂಬ ಪದ್ಯವು ಗೀತಾಪಾಠಕರಿಗೆಲ್ಲ ಪರಿಚಿತವೇ ಆಗಿದೆ. ಎಲ್ಲಾ

Importance of Mangala Sutra

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ: | ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಾಽಫಲಾ: ಕಿಯಾ: | यत्र नार्यस्तु पूज्यंते रमंते तत्र देवता: । यत्रैतास्तु न पूज्यंते सर्वास्तत्राऽफला: किया: । Where there is respect for the women, there stays all the devata. Where there is no respect for women, there all the kriya are waste. Now a days, it is said that " the women are ignored.  They are not recognised in the world.  They should be treated equally on par with the men".    But it is recognised by our subhaashita kaaras and sanaatana dharmaas also. Recently in some places some section of people are trying to say that the "maangalya is not necessary as it may dictate the adheenatva of a women by a man.".  No.  It is not adheenatva of a woman, but is the sanaatana dharma, or the protection for a women or it is the daampatya - i.e., understanding of each other.   ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನ:| ಕಂಠೇ ಬದ್ನಾಮಿ ಸುಭಗೆ ಸಂಜೀವ ಶರದ ಶತಮ್ | मांगल्यं तंतुनाने

ಹಯಗ್ರೀವ

ಜ್ಞಾನಾನಂದ-ಮಯಮ್ ದೇವಮ್ ನಿರ್ಮಲಸ್ಪಟಿಕಾಕೃತಿಮ್ | ಆಧಾರಮ್ ಸರ್ವವಿದ್ಯಾನಾಮ್ ಹಯಗ್ರೀವಮ್ ಉಪಾಸ್ಮಹೆ || ಎಂಬುದು ವಿದ್ಯಾರ್ಜನೆಗೆ ತೊಡಗುವವರ ನಾಲಿಗೆಯಲ್ಲಿ  ಅನಾದಿಕಾಲದಿಂದಲೂ ನಲಿಯುತ್ತಿರುವ ಪ್ರಾರ್ಥನೆ.  ಸ್ಪಟಿಕದಂತೆ ನಿರ್ಮಲ ಸ್ವರೂಪರಾದ ಶ್ರೀಹಯಗ್ರೀವರು ಸಕಲ ವಿದ್ಯೆ ಜ್ಞಾನಗಳ ಆಧಾರ. ನಮ್ಮ ಅಜ್ಞಾನಗಳನ್ನು ದೂರಮಾಡಿ ಸುಜ್ಞಾನವನ್ನು ದಯಪಾಲಿಸು ಎಂದು ಶ್ರೀಲಕ್ಷ್ಮೀಹಯಗ್ರೀವರಿಗೆ ನಮಿಸುವ ಪ್ರಾರ್ಥನೆ ಇದಾಗಿದೆ.  ಹಯಗ್ರೀವ ದೇವರು ಕುದುರೆ ಮುಖ ಉಳ್ಳವನು.  ದೇಗುಲಗಳಲ್ಲಿ ಈ ಹಯಗ್ರೀವ ದೇವರ ಜೊತೆಯಲ್ಲಿ ದೇವತೆ ಲಕ್ಷ್ಮಿಯ ಜೊತೆಗಾರಿಕೆಯೂ ಕಾಣುವುದರಿಂದ ಇದು ಮಹಾವಿಷ್ಣುವಿನ ಅವತಾರ ಎಂಬುದು  ಸುಲಭವಾಗಿ ಅರಿವಿಗೆ ಬರುತ್ತದೆ. ಪಂಚರಾತ್ರ ಆಗಮಗಳಲ್ಲಿ ದೊರಕುವ ಈ ಸ್ತೋತ್ರದಿಂದ  ಮೊದಲ್ಗೊಂಡಂತೆ, ಮಹಾಭಾರತದ ಕಥಾನಕಗಳ ವರೆಗೆ  ಹಯಗ್ರೀವ ದೇವರ ಕುರಿತಾದ ವರ್ಣನೆಗಳು, ಭಕ್ತಿ ಹಿರಿಮೆಗಳು  ಅನಾದಿಕಾಲದಿಂದ ಹರಿದು ಬಂದಿದೆ.  ಬ್ರಹ್ಮನಿಂದ ವೇದಗಳನ್ನು ಕದ್ದೊಯ್ದ ಮಧು ಮತ್ತು ಕೈಟಭರೆಂಬ ರಾಕ್ಷಸರ ಸಂಹಾರ ಮಾಡಲು ವಿಷ್ಣುವೆತ್ತಿದ ಅವತಾರವೇ ಹಯಗ್ರೀವ ರೂಪ ಎಂಬುದು ಅನಾದಿ ಕಾಲದಿಂದ ಹರಿದು ಬಂದ ಚಿಂತನೆಯಾಗಿದೆ.  ಪರಮಾತ್ಮನ ಈ   ಹಯಗ್ರೀವ ಅವತಾರ ಲೋಕಕ್ಕೆ ಸಂದಿದ್ದು  ವೇದಗಳ ಸಂರಕ್ಷಣೆಗಾಗಿ.  ಜ್ಞಾನಾರ್ಜನೆಯ ಶ್ರೇಷ್ಠತೆಯ ಪ್ರತಿಷ್ಟಾಪನೆಗಾಗಿ.  ಈ ಕತೆಯನ್ನು ಒಂದು ರೂಪಕವಾಗಿ ಪರಿಗಣಿಸುವುದಾದರೆ ಪರಿಶುದ್ಧ ಜ್ಞಾನ ಎಂ

ಗೋದಾಸ್ತುತಿಃ (ಸಂಗ್ರಹ) - 10

ತಾತಸ್ತುತೇ ಮಧುಭಿದಃ ಸ್ತುತಿಲೇಶವಸ್ಯಾತ್ ಕರ್ಣಾಮೃತೈಃ ಸ್ತುತಿಶತೈರನವಾಪ್ತಪೂರ್ವಮ್ | ತ್ವನ್ಮೌಳಿಗಂಧಸುಭಗಾಮುಪಹೃತ್ಯಮಾಲಾಂ ಲೇಭೇಮಹತ್ತರಪದಾನುಗುಣಂ ಪ್ರಸಾದಮ್ ||10|| (ಎಲೈ ಗೋದಾದೇವಿಯೇ) ತೇ = ನಿನ್ನ, ತಾತ = ತಂದೆಯಾದ ವಿಷ್ಣು ಚಿತ್ತರಾದರೋ, ಸ್ತುತಿಲೇಶವಶ್ಯಾತ್ = ಅತ್ಯಲ್ಪವಾಗಿ ಸ್ತುತಿಸುವುದರಿಂದಲೇ ವಶನಾಗುವ, ಮಧುಭಿದಃ = ಮಧುಸೂದನನಿಂದ, ಕರ್ಣಾಮೃತೈಃ = (ಅವನ) ಕಿವಿಗಳಿಗೆ ಅಮೃತಪ್ರಾಯವಾದ, ಸ್ತುತಿಶತೈಃ = ನೂರಾರು ಸ್ತೋತ್ರರೂಪವಾದ ಪದ್ಯಮಾಲಿಕೆಗಳನ್ನು ಹಾಡುವಿಕೆಯಿಂದಲೂ, ಪೂರ್ವಂ = ಮೊದಲು, ಅನವಾಪ್ತ = ಹೊಂದದಿದ್ದ, ಮಹತ್ತರಪದಾನುಗುಣಂ = ಪೆರಿಯಾಳ್ವಾರೆಂಬ ಅತಿ ಮಹತ್ವದಿಂದ ಕೂಡಿದ ಪದವಿಯನ್ನು ಪಡೆಯಲು ಅನುಗುಣವಾದ, ಪ್ರಸಾದಂ = ಅನುಗ್ರಹವನ್ನು, ತ್ವನ್ಮೌಳಿ = ನಿನ್ನ ಮುಡಿಯ, ಗಂಧ=ಪರಿಮಳದಿಂದ, ಸುಭಗಾಂ = ಸುಂದರವಾದ, ಮಾಲಾಂ = (ನೀನು ಮುಡಿದು ಕೊಟ್ಟ) ಮಾಲಿಕೆಯನ್ನು, ಉಪಹೃತ್ಯ = ರಂಗನಾಥನಿಗೆ ತಂದುಕೊಟ್ಟು, ಲೇಭೇ = ಪಡೆದರು.     ಎಲೈ! ಗೋದಾದೇವಿಯೇ, ನಿನ್ನ ತಂದೆಯಾದ ವಿಷ್ಣುಚಿತ್ತರಾದರೋ, ಅತ್ಯಲ್ಪವಾದ ಸ್ತುತಿಗಳಿಗೆ ವಶನಾಗುವ ಆ ಮಧುಸೂದನನಿಂದ, ಅವನನ್ನು ಅವನ ಕಿವಿಗಿಂಪಾಗಿ ಅಮೃತಪ್ರಾಯವಾದ ನೂರಾರು ಪದ್ಯಗಳಿಂದ ಸ್ತುತಿಯೂ ಹಿಂದೆ (ಯಾವ ಒಬ್ಬ ಆಳ್ವಾರರೂ) ಪಡೆಯದಿದ್ದ 'ಪೆರಿಯಾಳ್ವಾರ್' ಎಂಬ ಮಹತ್ತರವಾದ ಪದವಿಯನ್ನು ಪಡೆಯಲು ಅನುಗುಣವಾದ, ಅವನ ಅನುಗ್ರಹವನ್ನು, ನಿನ್ನ ಮುಡಿಯ ಸ

ಸರಸ್ವತೀರಹಸ್ಯ ಉಪನಿಷತ್

ಮಂಗಲ - ವಾಙ್ಮೆ ಮನಸಿ ಪ್ರತಿಷ್ಠಿತಾ |ಮನೋ ಮೇ ವಾಚಿ ಪ್ರತಿಷ್ಠಿತಂ|ಆವಿರಾವೀರ್ಮ ಏಧಿ|ವೇದಸ್ಯಮ ಆಣೀಸ್ಥಃ| ಶ್ರುತಂ ಮೆ ಮಾ ಪ್ರಹಾಸೀಃ|ಅನೇನ ಅಧೀತೇನ ಅಹೋರಾತ್ರಾನ್ ಸಂದಧಾಮಿ,|||ಋತಂ ವದಿಷ್ಯಾಮಿ |ಸತ್ಯಂ ವದಿಷ್ಯಾಮಿ | ತನ್ಮಾಮವತು|ತದ್ವಕ್ತಾರಮವತು|ಅವತು ಮಾಂ|ಅವತು ವಕ್ತಾರಂ ಅವತು ವಕ್ತಾರಂ||ಓಂ ಶಾಂತಿಃ ಶಾಂತಿಃ ಶಾಂತಿಃ|| ಪದವಿಭಾಗ - ವಾಕ್.ಮೇ, ಮನಸಿ, ಪ್ರತಿಷ್ಠಿತಾ, |ಮನಃ, ಮೇ, ವಾಚಿ, ಪ್ರತಿಷ್ಠಿತಮ್,|ಆವಿಃ,ಆವಿಃ,ಮೇ, ಏಧಿ,|ವೇದಸ್ಯ,ಮೇ, ಆಣೀಸ್ಥಃ,|ಶ್ರುತಂ, ಮೆ, ಮಾ, ಪ್ರಹಾಸೀಃ,|ಅನೇನ, ಅಧೀತೇನ, ಅಹೋರಾತ್ರಾನ್, ಸಂದಧಾಮಿ,||ಋತಂ, ವದಿಷ್ಯಾಮಿ, ಸತ್ಯಂವದಿಷ್ಯಾಮಿ ತತ್,ಮಾಮ್,ಅವತು,ತತ್,ವಕ್ತಾರಮ್,ಅವತು,ಅವತು, ಮಾಂ,|ಅವತು, ವಕ್ತಾರಂ , ಅವತು, ವಕ್ತಾರಂ,|| ಓಂ ಶಾಂತಿಃ, ಶಾಂತಿಃ,ಶಾಂತಿಃ|| ಅರ್ಥ - ನನ್ನ ಮಾತು ಮನಸ್ಸಿನಲ್ಲಿ ನೆಲಸಲಿ. ಮನಸ್ಸು ಮಾತಿನಲ್ಲಿ ನೆಲಸಲಿ.ಪ್ರಕಾಶಮಾನವಾದ ಚೈತನ್ಯವು ಮನಸ್ಸಿನಲ್ಲಿ ವೃದ್ಧಿಸಲಿ ವೇದವಾಕ್ಯಗಳಲ್ಲಿ ನಿರೂಪಿಸಿರುವ ಸೂಕ್ಷ್ಮವಾದ ವಸ್ತುವು ತಿಳಿಯುವಂತೆ ಮಾಡಿರಿ.ಕೇಳಿರುವ ವಾಕ್ಯಾರ್ಥವು ಮರೆಯದೇ ಇರಲಿ.ವಾಕ್ಯಾರ್ಥವನ್ನು ಅನುಸಂಧಾನ ಮಾಡುತ್ತಾ ಹಗಲುರಾತ್ರಿಗಳನ್ನು ಕಳೆಯುತ್ತೇನೆ. ವೇದವಾಕ್ಯಗಳಿಗೆ ಅನುಸಾರವಾಗಿ ನಿಶ್ಚಯವಾಗಿ ತಿಳಿದಿರುವದನ್ನು ಹೇಳುತ್ತೇನೆ.ಹೀಗೆ ಅರಿತಿರುವ ವಿಷಯದ ಆಚರಣೆಯನ್ನು ಹೇಳುತ್ತೇನೆ.ಬ್ರಹ್ಮವು ನನ್ನನ್ನು ರಕ್ಷಿಸಲಿ.ಗುರುವನ್ನು ರಕ್ಷಿಸಲಿ. ತಾಪತ್ರಯಗಳು ಶಾಂತ

ಆಚಾರ್ಯತ್ರಯರ ಸಂದೇಶಗಳು

    ದಕ್ಷಿಣದೇಶದಲ್ಲಿ ಸುಪ್ರಸಿದ್ಧರಾಗಿರುವ ವೇದಾಂತಾರ್ಚಾರುಗಳಲ್ಲಿ ಶ್ರೀಮಧ್ವಾಚಾರ್ಯರು, ಶ್ರೀರಾಮಾನುಜಾಚಾರ್ಯರು, ಶ್ರೀಶಂಕರಾಚಾರ್ಯರು - ಈ ಮೂವರ ಸಂದೇಶಗಳು ಈಗಲೂ ಜಿಜ್ಞಾಸುಗಳಿಗೆ ಹಿತವೂ ಪಥ್ಯವೂ ಆಗಿರುತ್ತವೆ. ಈ ಮೂವರ ಸಂದೇಶಗಳನ್ನು ಗುಣೋಪಸಂಹಾರನ್ಯಾಯದಿಂದ ಮನನಮಾಡಿ ಐಕ್ಯತೆಯನ್ನು ಕಾಪಾಡಿಕೊಳ್ಳುವ ಕಾಲವು ಇದಾಗಿರುತ್ತದೆ. ಆದ್ದರಿಂದ ಈ ಆಚಾರ್ಯವರ್ಯರುಗಳ ಉಪದೇಶಗಳನ್ನು ಸಂಕ್ಷಿಪ್ತವಾಗಿ ಮನನಮಾಡಿ ಸಮನ್ವಯವನ್ನು ಸಾಧಿಸಿಕೊಳ್ಳೊಣ.     ಶ್ರೀಮಧ್ವಾಚಾರ್ಯರು ಶ್ರೀಹರಿಯೇ ಸರ್ವೋತ್ತಮನೂ ಜಗತ್‌ಪ್ರಭುವೂ ಆಗಿದ್ದು ಜೀವರುಗಳೆಲ್ಲರೂ ಅವನ ಅನುಚರರೆಂದೂ ಹರಿಭಕ್ತಿಯಿಂದಲೇ ಜೀವರು ಉದ್ಧಾರವಾಗಬೇಕೆಂದೂ ಬೋಧಿಸಿದ್ದಾರೆ. ಈ ಉಪದೇಶವು ಈಗಿನ ಜನಸಾಮಾನ್ಯರಿಗೆ ಮನನೀಯವಾಗಿದೆ. ಸಂಸ್ಕೃತಭಾಷೆಯಲ್ಲಿರುವ ಶಾಸ್ತ್ರಗ್ರಂಥಗಳನ್ನು ವ್ಯಾಸಂಗ ಮಾಡಿ ವೇದೋಕ್ತವಾದ ಕರ್ಮೋಪಾಸನೆಗಳನ್ನು ಕೈಗೊಂಡು ಪರಮಪುರುಷಾರ್ಥವನ್ನು ಪಡೆಯುವಂಥ ಸಾಧಕರು ಈಗ ತೀರ ವಿರಳರಾಗಿರುತ್ತಾರೆ. ಕಲಿಪ್ರಭಾವದಿಂದ ಈಗ ಯಾವ ವೈದಿಕಯಜ್ಞ, ದಾನ, ತಪಾದಿಗಳಾಗಲಿ, ಕರ್ಮಸಂನ್ಯಾಸ ಪೂರ್ವಕವಾದ ಧ್ಯಾನ, ಮನನ, ವಿಚಾರ, ಅನುಸಂಧಾನಾದಿಗಳಾಗಲಿ ಯೋಗ್ಯ ರೀತಿಯಲ್ಲಿ ನಡೆಯಲು ಅವಕಾಶವಿಲ್ಲ. ಜನರ ಅಂತಃಕರಣ, ಜೀವನಕ್ರಮ, ಸಂಪಾದನೆ ಎಲ್ಲವೂ ಕಲುಷಿತವಾಗಿವೆ. ಆದ್ದರಿಂದ ಶ್ರೀಹರಿಯ ನಾಮಕೀರ್ತನೆ, ಸ್ಮರಣೆ ಭಕ್ತಿ - ಇವುಗಳೇ ಸುಲಭಸಾಧ್ಯವಾಗಿವೆ ಮತ್ತು ಸಾಧಕರಿಗೆ ಮನಸ್ಸನ್ನು ಏಕಾಗ್ರಗೊಳಿಸಲು ಆಲಂಬನವ

ಹನುಮಾನ್ ಚಾಲೀಸಾ

ಶ್ರೀಮದಾಂಜನೇಯನು ಸಮಸ್ತ ದೇವತೆಗಳ ಸ್ವರೂಪವಾಗಿದ್ದಾನೆ. ಸಾಕ್ಷಾತ್ ಪರಮೇಶ್ವರನೇ ಶ್ರೀರಾಮ ಮಹಿಮೆಯನ್ನು, ಅನನ್ಯ ಭಕ್ತಿಯನ್ನು, ಜ್ಞಾನವನ್ನು, ಆದರ್ಶ ಭಕ್ತಿಮಯ ಪವಿತ್ರ ಜೀವನವನ್ನು ಪ್ರಪಂಚಕ್ಕೆ ತೋರಿಸಲು ಹನುಮಂತನಾಗಿ ಅವತರಿಸಿದ್ದಾನೆ.     ರಾಮನಾಮ ಮಹಿಮೆಯನ್ನು ಜಗತ್ತಿಗೆ ಸಾರಿದವನು ಹನುಮಂತನು. ರಾಮನಾಮದ ಮೇಲಿರುವ ನಿರುಪಮ ಶ್ರದ್ಧಾಭಕ್ತಿಯಿಂದಲೇ ಹನುಮಂತನು ಶತಯೋಜನ ವಿಸ್ತಾರವಾದ ಮಹಾಸಮುದ್ರವನ್ನು ಅನಾಯಾಸವಾಗಿ ದಾಟಿದನು. ಶ್ರೀರಾಮನಿಗಿಂತಲೂ ಶ್ರೀರಾಮನಾಮದ ಮಹಿಮೆಯೇ ಹಿರಿದೆಂದು ಸಾರಿದ ಅಸಮಾನ ರಾಮಭಕ್ತನು. "ರಾಮತ್ವತ್ತೋಧಿಕಂ ನಾಮ ಇತಿ ಮನ್ಯಾಮ ಹೇವಯಂ, ತ್ವಯೈಕಾತಾರಿತಾಯೋಧ್ಯಾನಾಮ್ನಾತುಭುವನತ್ರಯಂ"     ರಾಮಚಂದ್ರಾ! ನಿನಗಿಂತಲೂ ನಿನ್ನ ನಾಮವು ದೊಡ್ಡದೆಂದು ನಾವು ನಂಬುತ್ತೇವೆ. ಏಕೆಂದರೇ ನೀನು ಅಯೋಧ್ಯಾಪುರವಾಸಿಗಳನ್ನು ಮಾತ್ರ ಉದ್ದರಿಸಿದೆ. ನಿನ್ನ ನಾಮವಾದರೋ ಮೂರು ಲೋಕಗಳನ್ನು ಉದ್ಧರಿಸುತ್ತದೆ. ಶ್ರೀರಾಮನಿಗೆ ಆಂಜನೇಯನು ಅನನ್ಯಭಕ್ತ ಶಿರೋಮಣಿ. "ಯತ್ರ ಯತ್ರ ರಘುನಾಥ ಕೀರ್ತನಂ, ತತ್ರ ತತ್ರ ಕೃತಮಸ್ತಕಾಂಜಲಿಂ, ಬಾಷ್ಪವಾರಿ ಪರಿಪೂರ್ಣ ಲೋಚನಂ". ಎಲ್ಲೆಲ್ಲಿ ರಾಮನಾಮ ಸಂಕೀರ್ತನೆ ನಡೆಯುವುದೋ ಅಲ್ಲೆಲ್ಲ ಹನುಮಂತನು ತಲೆಯ ಮೇಲೆ ಕೈಜೋಡಿಸಿಕೊಂಡು ಆನಂದಬಾಷ್ಪಗಳನ್ನು ಸುರಿಸುವನು.     ಹನುಮಂತನನ್ನು ಕಂಡರೆ ಭೂತಪ್ರೇತ ಪಿಶಾಚಿ ಬ್ರಹ್ಮರಾಕ್ಷಸಾದಿ ದುಷ್ಟ ಶಕ್ತಿಗಳು ಓಡಿ ಹೋಗುವವು. ಇದು ಎಲ್ಲರ ಅನುಭವಕ

ಸ್ಕಂದಪುರಾಣ ಅಧ್ಯಾಯ 15

ಸನತ್ಕುಮಾರ ಉವಾಚ | ಪ್ರವಿಷ್ಟೇ ಭವನಂ ದೇವೇ ಸೂಪವಿಷ್ಟೇ ವರಾಸನೇ | ಸ ಬಹಿರ್ಮನ್ಮಥಃ ಕ್ರೂರೋ ದೇವಂ ವೇದ್ಧುಮನಾಭವತ್ || ತಮನಾಚಾರಸಂಯುಕ್ತಂ ದುರಾತ್ಮಾನಂ ಕುಲಾಧಮಮ್ | ಲೋಕಾನ್ಸರ್ವಾಂಸ್ತಾಪಯಾನಂ ಸರ್ವೇಷ್ವಕರುಣಾತ್ಮಕಮ್ || ಋಷೀಣಾಂ ವಿಘ್ನಕರ್ತಾರಂ ನಿಯಮಾನಾಂ ವ್ರತೈಃ ಸಹ | ಚಕ್ರಾಹ್ವಯಸ್ಯ ರೂಪೇಣ ರತ್ಯಾ ಸಹ ತಮಾಗತಮ್ || ಅಥಾತತಾಯಿನಂ ವ್ಯಾಸ ವೇದ್ಧುಕಾಮಂ ಸುರೇಶ್ವರಮ್ | ನಯನೇನ ತೃತೀಯೇನ ಸಾವಜ್ಞಂ ತಮವೈಕ್ಷತ || ತತೋಸ್ಯ ನೇತ್ರಜೋ ವಹ್ನಿರ್ಜ್ವಾಲಾಮಾಲಾಸಹಸ್ರವಾನ್ | ಸಂವೃತ್ಯ ರತಿಭರ್ತಾರಮದಹತ್ಸಪರಿಚ್ಛದಮ್ || ಸ ದಹ್ಯಮಾನಃ ಕರುಣಮಾತೋಕ್ರೋಶತ ವಿಸ್ವರಮ್ | ಪ್ರಸಾದಯಂಶ್ಚ ತಂ ದೇವಂ ಪಪಾತ ಸ ಮಹೀತಲೇ || ಆಶು ಸೋಗ್ನಿಪರೀತಾಶ್ಣ್ಗೋ ಮನ್ಮಥೋ ಲೋಕತಾಪನಃ | ಪಪಾತ ಭಸ್ಮಸಾಚ್ಚೈವ ಕ್ಷಣೇನ ಸಮಪದ್ಯತ || ಪತ್ನೀ ತು ಕರುಣಂ ತಸ್ಯ ವಿಲಲಾಪ ಸುದುಃಖಿತಾ | ದೇವಂ ದೇವೀಂ ಚ ದುಃಖಾರ್ತಾ ಅಯಾಚತ್ಕರುಣಾಯತೀ || ತಸ್ಯಾಶ್ಚ ಕರುಣಾಂ ಶ್ರುತ್ವಾ ದೇವೌ ತೌ ಕರುಣಾತ್ಮಕೌ | ಊಚತುಸ್ತಾಂ ಸಮಾಲೋಕ್ಯ ಸಮಾಶ್ವಾಸ್ಯ ಚ ದುಃಖಿತಾಮ್ || ದಗ್ಧ ಏಷ ಧ್ರುವಂ ಭದ್ರೇ ನಾಸ್ಯೋತ್ಪತ್ತಿರಿಹೇಷ್ಯತೇ | ಅಶರೀರೋಪಿ ತೇ ಕಾಲೇ ಕಾರ್ಯಂ ಸರ್ವಂ ಕರಿಷ್ಯತಿ || ಯದಾ ತು ವಿಷ್ಣುರ್ಭವಿತಾ ವಸುದೇವಸುತಃ ಶುಭೇ | ತದಾ ತಸ್ಯ ಸುತೋಯಂ ಸ್ಯಾತ್ಪತಿಸ್ತೇ ಸ ಭವಿಷ್ಯತಿ || ಸನತ್ಕುಮಾರ ಉವಾಚ | ತತಃ ಸಾ ತಂ ವರಂ ಲಬ್ಧ್ವಾ ಕಾಮಪತ್ನೀ ಶುಭಾನನಾ | ಜಗಾಮೇಷ್ಟಂ ತದಾ ದೇಶಂ ಪ್ರೀತಿಯುಕ್ತಾ ಗ

ಗೋದಾಸ್ತುತಿಃ (ಸಂಗ್ರಹ) - 9

ಮಾತಃ ಸಮುತ್ಥಿತಮತೀಮಧಿವಿಷ್ಣುಚಿತ್ತಂ ವಿಶ್ವೋಪಜೀವ್ಯಮಮೃತಂ ವಚಸಾ ದುಹಾನಾಮ್ | ತಾಪಚ್ಛಿದಂ ಹಿಮರುಚೇರಿವ ಮೂರ್ತಿತಮನ್ಯಾಂ ಸನ್ತಃ ಪಯೋಧಿದುಹಿತುಃ ಸಹಜಾಂ ವಿದುಸ್ತ್ವಾಮ್ ||9|| ಮಾತಃ = ಎಲೈ! ತಾಯಿಯೇ! ಅಧಿವಿಷ್ಣುಚಿತ್ತಂ = ವಿಷ್ಣುಚಿತ್ತರನ್ನಾಶ್ರಯಿಸಿ (ಅವರ ಮನೆಯಲ್ಲಿ), ಸಮುತ್ಥಿತವತೀಂ = ಅವತರಿಸಿ ತೋರಿಕೊಂಡ, ವಿಶ್ವೋಪಜೀವ್ಯಂ = ಯಾವ ಭೇದಭಾವವೂ ಇಲ್ಲದೆ ಪ್ರಪಂಚದಲ್ಲಿನ ಎಲ್ಲ ಚೇತನರೂ ಉಜ್ಜೀವಿಸಲು (ಮಾಡಲೇಬೇಕಾದ 'ಶರಣಾಗತಿ' ಎಂಬ), ಅಮೃತಂ = ಜನ್ಮಪುರಣರಾಹತ್ಯವನ್ನುಂಟುಮಾಡುವ ಅಮೃತಪ್ರಾಯವಾದ ಉಪಾಯಾನುಷ್ಠಾನಕ್ರಮವನ್ನು, ವಚಸಾ = ಮಾತಿನಿಂದ (ನಿನ್ನ ಶ್ರೀ ಸೂಕ್ತಿಗಳಿಂದ), ದುಹಾನಾಮ್ = ಕರೆದ (ಪ್ರಕಾಶಪಡಿಸಿದ), ತಾಪಚ್ಛಿದಂ = ತಾಪವನ್ನು ಹೋಗಲಾಡಿಸುವ, ಹಿಮರುಚೇಃ = ಶೀತಕಾರಣನಾದ ಚಂದ್ರನ, ಅನ್ಯಾಂ = ಬೇರೊಂದು, ಮೂರ್ತಿಮಿವ = ಮೂರ್ತಿಯಂತಿರುವ, ತ್ವಾಂ = ನಿನ್ನನ್ನು, ಸನ್ತಃ = ಸತ್ಪುರುಷರು, ಪಯೋಧಿದುಹತುಃ = ಸಮುದ್ರರಾಜನ ಮಗಳಾದ ಮಹಾಲಕ್ಷ್ಮಿಯ, ಸಹಜಾಂ = ಜೊತೆಯಲ್ಲಿಯೇ ಹುಟ್ಟಿದವಳೆಂದು, ವಿದುಃ = ತಿಳಿದಿದ್ದಾರೆ.     ವಿಷ್ಣುಚಿತ್ತರ ಮನೆಯಲ್ಲಿ ಅವತರಿಸಿದ ಗೋದಾದೇವಿಯಾದರೋ, ಪ್ರಪಂಚದಲ್ಲಿನ ಎಲ್ಲ ಚೇತನರೂ ಉಜ್ಜೀವಿಸಿ ಪರಿಪೂರ್ಣ ಬ್ರಹ್ಮಾನಂದವನ್ನು ಪಡೆಯಲು ಮಾಡಲೇಬೇಕಾದ, ಅತಿ ಸುಲಭವಾಗಿಯೂ ಸುಕರವಾಗಿಯೂ ಇರುವ 'ಶರಣಾಗತಿ' - ಎಂಬ ಉಪಾಯ ಮತ್ತು ಅದರ ಅನುಷ್ಠಾನಕ್ರಮವನ್ನು ತ

|| ಶ್ರೀ ಪಂಚಮುಖಿ ಹನುಮಾನ್ ಕವಚ ಸ್ತೋತ್ರಂ ||

ಓಂ ಅಸ್ಯ ಶ್ರೀ ಪಂಚಮುಖಿ ಹನುಮತ್ ಕವಚ ಸ್ತೋತ್ರ ಮಹಾ ಮಂತ್ರಸ್ಯ ಬ್ರಹ್ಮಾ ಋಷಿ: | ಗಾಯತ್ರೀ ಛಂದ: | ಶ್ರೀ ಹನುಮಾನ್ ದೇವತಾ | ರಾಂ ಬೀಜಂ | ಮಂ ಶಕ್ತಿ: |ಚಂದ್ರ ಇತಿ ಕೀಲಕಂ | ಓಂ ರೌಂ ಕವಚಾಯ ಹುಂ |ಹ್ರೌಂ ಅಸ್ತ್ರಾಯ ಫಟ್ || ಭಾವಾರ್ಥ:- ಪಂಚಮುಖಿ ಹನುಮಾನ್ ಕವಚ ಸ್ತೋತ್ರ ಮಹಾ ಮಂತ್ರದ ಋಷಿ  ಬ್ರಹ್ಮ . ಇದು ಗಾಯತ್ರೀ ಛಂದಸ್ಸಿನಲ್ಲಿ ಇದ್ದು  ಹನುಮಂತನು ಇದರ ಉಪಾಸ್ಯ ದೇವತೆ.  "ರಾಂ" ಇದರ ಬೀಜಾಕ್ಷರ.  "ಮಂ"  ಇದರ ಶಕ್ತಿ;  "ಚಂದ್ರ" ಎಂಬುದು ಇದರ ಕೀಲಕ. "ರೌಂ" ಇದರ ಕವಚ.  "ಹ್ರೌಂ" ಈ ಸ್ತೋತ್ರಕ್ಕೆ ಬಾಣದ ಹಾಗೆ ಬಲ ಕೊಡುತ್ತದೆ.  " ಫಟ್ " ಇದಕ್ಕೆ ರಕ್ಷಾತ್ಮಕವಾಗಿದೆ. ಈಶ್ವರ ಉವಾಚ ಭಾವಾರ್ಥ :- ಈಶ್ವರನು ಪಾರ್ವತೀ ದೇವಿಗೆ ಹೇಳುವನು ಅಥ ಧ್ಯಾನಂ ಪ್ರವಕ್ಷ್ಯಾಮಿ ಶೃಣು ಸರ್ವಾಂಗ ಸುಂದರಂ | ಯತ್ಕೃತ್ವಾ ದೇವ ದೇವೇಶಿ ಧ್ಯಾನ: ಹನುಮತ: ಪ್ರಿಯಂ ||೧|| ಪಂಚವಕ್ತ್ರಂ ಮಹಾಬೀಮಂ ಕಪಿಯೂಥ ಸಮನ್ವಿತಂ | ಬಾಹುಬಿರ್ದಶಭಿರ್ಯುಕ್ತಂ ಸರ್ವ ಕಾಮಾರ್ಥ ಸಿದ್ಧಿದಂ ||೨|| ಪೂರ್ವಂತು ವಾನರಂ ವಕ್ತ್ರಂ ಕೋಟಿಸೂರ್ಯ ಸಮಪ್ರಭಂ | ದಂಷ್ಠ್ರಾಕರಾಲವದನಂ ಭ್ರುಕುಟೀ ಕುಟಿಲೇಕ್ಷಣಂ ||೩|| ಅಸ್ಯೈವ ದಕ್ಷಿಣಂ ವಕ್ತ್ರಂ ನಾರಸಿಂಹ ಮಹಾದ್ಭುತಂ | ಅತ್ಯುಗ್ರ ತೇಜೋವಪುಷಂ ಭೀಷಣಂ ಭಯನಾಶನಂ |