ಗೋದಾಸ್ತುತಿಃ (ಸಂಗ್ರಹ) - 20

ಧನ್ಯೇ ಸಮಸ್ತಜಗತಾಂ ಪಿತುರುತ್ತಮಾಂಗೇ
ತ್ವನ್ಮೌಳಿಮಾಲ್ಯ ಭರಸಂಭರಣೇನ ಭೂಯಃ |
ಇಂದೀವರಸ್ರಜಮಿವಾದಧತಿ ತ್ವದೀಯಾ-
ನ್ಯಾಕೇಕರಾಣಿ ಬಹುಮಾನವಿಲೋಕಿತಾನಿ ||20||

ಸಮಸ್ತ ಜಗತಾಂ = ಎಲ್ಲ ಲೋಕಗಳಿಗೂ,
ಪಿತುಃ = ತಂದೆಯಾದ ರಂಗನಾಥನು,
ಧನ್ಯೇ = ತನ್ನ ಸ್ಥಿತಿಯು ಸಾರ್ಥಕವಾದ
ಉತ್ತಮಾಂಗೇ=ತನ್ನ ಮುಡಿಯಲ್ಲಿ,
ತನ್ಮೌಳಿ ಮಾಲ್ಯಭರ = ನೀನು ಮಡಿದುಕೊಟ್ಟ ಮಾಲೆಗಳ ಭಾರವನ್ನು,
ಸಂಭರಣೇನ = ಆದರದಿಂದ ಧರಿಸಿದುದರಿಂದ
ಭೂಯಃ = ಮತ್ತೆ
ತ್ವದೀಯಾನಿ = ನಿನ್ನ
ಬಹುಮಾನ= ಆದರಪೂರ್ವಕವಾಗಿ,
ಆಕೇಕರಾಣಿ = ಅರ್ಧತೆರೆದು ಅರ್ಧಮುಚ್ಚಿದ ಕಣ್ಣಿನಲ್ಲಿ ಕಣ್ಣುಗುಡ್ಡೆಯನ್ನು ತಿರುಗಿಸುತ್ತಾ ನೋಡುವ
ವಿಲೋಚಿತಾನಿ = ದೃಷ್ಟಿಯಿಂದ,
ಇಂದೀವರಸ್ರಜಂ = ಮತ್ತೊಂದು ಕನ್ನೈದಿಲೆಯ ಮಾಲಿಕೆಯನ್ನು
ಆದಧತಿ ಇವ = ಧರಿಸಿದವನಂತೆ ಕಾಣುತ್ತಿದ್ದನು.

    ಎಲ್ಲ ಜಗತ್ತಿಗೂ ತಂದೆಯಾದ ರಂಗನಾಥನು, ಸಾರ್ಥಕ್ಯತೆಯನ್ನು ಪಡೆದ ತನ್ನ ಮುಡಿಯಲ್ಲಿ, ನೀನು ಮುಡಿದುಕೊಟ್ಟ ಮಾಲಿಕೆಗಳ ಭಾರವನ್ನು ಆದರದಿಂದ ಧರಿಸಿದುದನ್ನು ಕಂಡು, ನೀನಾದರೋ ನಿನ್ನ ಪ್ರೇಮಪೂರಿತವಾದ ಕಣ್ಣನ್ನು, ಕಡೆಗಣ್ಣಿನ ಕಡೆ ಮುಚ್ಚಿಕೊಂಡು, ಉಳಿದ ಭಾಗದಲ್ಲಿ ತೆರೆದುಕೊಂಡು ಕಣ್ಣಿನ ಗುಡ್ಡೆಗಳನ್ನು ತಿರುಗಿಸುತ್ತಾ ಅವನ ಬಿಂಬವನ್ನು ಅಡಿಯಿಂದ ಮುಡಿಯವರೆಗೂ ನೋಡಿದಾಗ ಕನ್ನೈದಿಲೆಯಂತಿರುವ ನಿನ್ನ ಕಣ್ಣಿನ ಕಟಾಕ್ಷವು ಅವನ ಬಿಂಬದ ಸುತ್ತಲೂ ಬೀಳಲಾಗಿ ಅದು ಪ್ರತಿಫಲಿತವಾಗಿ ನಿನ್ನ ಪ್ರಿಯನು ಮತ್ತೊಂದು ಕನ್ನೈದಿಲೆಯ ಮಾಲಿಕೆಯನ್ನೇ ಧರಿಸಿದವನಂತೆ ಕಾಣುತ್ತಿದ್ದನು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ