ಗೋದಾಸ್ತುತಿಃ (ಸಂಗ್ರಹ) - 24

ಆರ್ದ್ರಾಪರಾಧಿನಿ ಜನೇಪ್ಯಭಿರಕ್ಷಣಾರ್ಥಂ
ರಂಗೇಶ್ವರಸ್ಯ ರಮಯಾ ವಿನಿವೇದ್ಯಮಾನೇ |
ಪಾರ್ಶ್ವೇಪರಕ್ರ ಭವತೀ ಯದಿ ತತ್ರ ನಾಸೀತ್
ಪ್ರಾಯೇಣ ದೇವಿ ವದನಂ ಪರಿವರ್ತಿತಂ ಸ್ಯಾತ್ ||24||

ದೇವಿ = ಎಲೈ! ಗೋದಾದೇವಿಯೇ,
ಆರ್ದ್ರಾಪರಾಧಿನಿ = ಆಗತಾನೆ ಅಪರಾಧವೆನ್ನೆಸಗಿರುವ,
ಜನೇಪಿ = ಚೇತನರ ವಿಷಯದಲ್ಲಿಯೂ,
ಅಭಿರಕ್ಷಣಾರ್ಥಂ = ತಾನಾಗಿ ಎದುರುಗೊಂಡು ರಕ್ಷಿಸುವ ಸಲುವಾಗಿ,
ರಮಯಾ = ಮಹಾಲಕ್ಷ್ಮಿಯಿಂದ,
ರಂಗೇಶ್ವರಸ್ಯ = ರಂಗನಾಥನ ಸನ್ನಿಧಾನದಲ್ಲಿ,
ವಿನಿವೇದ್ಯಮಾನೇ = ವಿಜ್ಞಾಪಿಸಲ್ಪಡುತ್ತಿರಲು,
ತತ್ರ = ಅಲ್ಲಿ,
ಪರತ್ರ = ಬೇರೊಂದು,
ಪಾರ್ಶ್ವೇ = ಪಕ್ಕದಲ್ಲಿ,
ಯದಿ = ಒಂದು ವೇಳೆ,
ಭವತೀ = ನೀನಾದರೊ,
ನ ಅಸೀತ್ = ಇಲ್ಲದಿದ್ದರೆ,
ಪ್ರಾಯೇಣ = ಬಹುಶಃ,
ವದನಂ = ಆ ರಂಗನಾಥನ ಮುಖವಾದರೋ,
ಪರಿವರ್ತಿತಂ = ಬೇರೊಂದು ದಿಕ್ಕಿಗೆ ತಿರುಗಿ ಕೊಂಡುದುದಾಗಿ,
ಸ್ಯಾತ್ = ಆಗುತ್ತಿದ್ದಿತು

    ಎಲೈ! ಗೋದಾದೇವಿಯೇ, ಆಗ ತಾನೇ ಅಪರಾಧವನ್ನೆಸಗುತ್ತಿರುವ ಚೇತನರಲ್ಲಿಯೂ, ಅವರು ಕೇಳದಿದ್ದರೂ, ತಾನಾಗಿ ತನ್ನ ವಾತ್ಸಲ್ಯ, ದಯಾ, ಕ್ಷಮಾದಿಗುಣಗಳಿಂದ ಅವರನ್ನು ರಕ್ಷಿಸುವ ಸಲುವಾಗಿ, ಆ ಚೇತನರು ಆಬುದ್ಧಿ ಕೃತವಾಗಿ, ಆಕಸ್ಮಿಕವಾಗಿ ಮಾಡಿದ ಯಾದೃಚ್ಛಿಕ, ಪ್ರಾಸಂಗಿಕ ಸುಕೃತಗಳನ್ನು ರಂಗನಾಥನಲ್ಲಿ ಮಹಾಲಕ್ಷ್ಮಿಯು ವಿಜ್ಞಾಪಿಸುತ್ತಿರಲು, ಕರ್ಮಾನುಗುಣವಾಗಿ ಚೇತನರಿಗೆ ಫಲವನ್ನು ಕೊಡುವ ದಂಡಧರನಾದ ಪರಮಾತ್ಮನು ಮಹಾಲಕ್ಷ್ಮಿಯ ಕಡೆಯಿಂದ ಮತ್ತೊಂದು ಕಡೆಗೆ ತಿರುಗೋಣವೆಂದರೆ, ಆ ಪಾರ್ಶ್ವದಲ್ಲಿ ನೀನಿದ್ದು, ನೀನೂ ಆ ಚೇತನರನ್ನು ರಕ್ಷಿಸಿಯೇ ತೀರಬೇಕೆಂದು ಒತ್ತಾಯಪಡಿಸುವುದರಿಂದ ಪರಮಾತ್ಮನು ಬೇರೆ ಯಾವ ಕಡೆಯೂ ತಿರುಗದೆ ಮಹಾಲಕ್ಷ್ಮಿಯ ಮಾತಿಗೆ ಓಗೊಟ್ಟು ಆ ಚೇತನರ ಮೇಲೆ ತನ್ನ ಕೃಪಾಕಟಾಕ್ಷ ಬೀರಿ, ಅವರು ತನ್ನಲ್ಲಿ ಬಂದು ಶರಣಾಗತಿಮಾಡುವಂತೆ ಮಾಡಿ ರಕ್ಷಿಸುತ್ತಾನೆ. ಹೀಗಿರಲು, ಆ ಪರಮಾತ್ಮನ ಒಂದು ಪಾರ್ಶ್ವದಲ್ಲಿ ಒಂದು ವೇಳೆ ನೀನಿಲ್ಲದಿದ್ದರೆ ಅವನ ಮುಖವೇ ಬೇರೊಂದು ಕಡೆಗೆ ತಿರುಗಿ ಆ ಚೇತನರನ್ನು ನಿಗ್ರಹಿಸುತ್ತಿದ್ದನು.ಆದುದರಿಂದ ಚೇತನೋದ್ಧಾರವೆಂಬುದು ಪ್ರಧಾನವಾಗಿ ನಿಮ್ಮಿಬ್ಬರ ತಾಯಂದಿರಿಂದಲೇ ನಡೆಯುತ್ತದೆಯಲ್ಲವೇ ||24||

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ