Posts

Showing posts from June, 2016

ಹರಿಯೇ ಸರ್ವೋತ್ತಮನು (ಶ್ರೀಮಧ್ವಾಚಾರ್ಯರವರ ಕೃತಿ)

ಕುರು ಭುಙ್ಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾ ಸತತಮ್ | ಹರಿರೇವ ಪರೋ ಹರಿರೇವ ಗುರು ರ್ಹರಿರೇವ ಜಗತ್ಪಿತೃಮಾತೃಗತಿಃ ||1|| ಯಾವಾಗಲೂ ಶ್ರೀಹರಿಯ ಪಾದಕ್ಕೆರಗಿದ ಬುದ್ಧಿಯಿಂದೊಡಗೂಡಿ ಸ್ವಕರ್ಮವನ್ನು ಮಾಡಿ ಫಲವನ್ನನುಭವಿಸುತ್ತಿರು. ಹರಿಯೇ, ಸರ್ವೋತ್ತಮನು, ಹರಿಯೇ ಗುರುವು, ಹರಿಯೇ ಜಗತ್ತಿಗೆ ತಂದೆಯು, ತಾಯಿಯು, ಗತಿಯು. ನ ತತೋಸ್ತ್ಯಪರಂ ಜಗತೀಡ್ಯತಮಂ ಪರಮಾತ್ಪರತಃ ಪುರುಷೋತ್ತಮತಃ | ತದಲಂ ಬಹುಲೋಕವಿಚಿನ್ತನಯಾ ಪ್ರವಣಂ ಕುರು ಮಾನಸಮಿಶಪದೇ ||2|| ಜಗತ್ತಿನಲ್ಲಿ ಪರಾತ್ಪರನಾದ ಆ ಪುರುಷೋತ್ತಮನಿಗಿಂತಲೂ ಹೆಚ್ಚಾಗಿ ಸ್ತೋತ್ರಕ್ಕೆ ತಕ್ಕದ್ದು ಮತ್ತೊಂದು ಇಲ್ಲ ಆದ್ದರಿಂದ ಲೋಕಚಿಂತೆಯನ್ನು ಬಹುವಾಗಿ ಹಚ್ಚಿಕೊಳ್ಳುವದನ್ನು ಸಾಕುಮಾಡು ಈಶ್ವರನ ಪಾದದಲ್ಲಿಯೇ ಮನಸ್ಸನ್ನು ತಿರುಗಿಸಿಕೊ. ಯತತೋಪಿ ಹರೇಃ ಪದಸಂಸ್ಮರಣೇ ಸಕಲಂ ಹ್ಯಘಮಾಶು ಲಯಂ ವ್ರಜತಿ | ಸ್ಮರತಸ್ತು ವಿಮುಕ್ತಿಪದಂ ಪರಮಂ ಸ್ಫುಟಮೇಷ್ಯತಿ ತತ್ಕಿಮಪಾಕ್ರಿಯತೇ ||3|| ಹರಿಯ ಪಾದದ ನೆನಹಿಗೆಂದು ಪ್ರಯತ್ನಮಾಡಿದರೂ ಸಾಕು, ಅಂಥವನ ಪಾಪವೆಲ್ಲವೂ ಲಯವಾಗುವದು; ಸ್ಮರಣೆಯನ್ನೇ ಮಾಡುವವನಿಗಂತೂ ಎಲ್ಲಕ್ಕೂ ಹೆಚ್ಚಿನ ಮೋಕ್ಷ ಸ್ಥಾನವು ತಾನೇ ದೊರಕುವದು. ಇಂಥ ಸ್ಮರಣೆಯನ್ನು ಬಿಡುವದೇಕೆ? ಶೃಣುತಾಮಲಸತ್ಯವಚಃ ಪರಮಂ ಶಪಥೇರಿತಮುಚ್ಛ್ರಿತಬಾಹುಯುಗಮ್ | ನ ಹರೇಃ ಪರಮೋ ನ ಹರೇಃ ಸದೃಶಃ ಪರಮಂ ಸ ತು ಸರ್ವಚಿದಾತ್ಮಗಣಾತ್ ||4|| ಶಪಥಪೂರ್ವಕವಾಗಿ ಎರಡು ಕೈಗಳನ್ನೂ ಎತ್ತಿ ಸಾರಿಹೇಳಿದ ಈ ನಿರ್ದುಷ

ಗಾರ್ಧಭೋಪನ್ಯಾಸ

ನಮ್ಮೂರಿನಿಂದ ಕೋಟೆಗೆ ಹೋಗುವಾಗ ಸರಗೂರಿನ ಟೌನ್ ಹಾಲ್ ಮುಂದೆ ಹಾದು ಹೋಗಬೇಕಾಗಿತ್ತು. ಅದರ ಸುತ್ತಲಿನ ಕಾಂಪೌಂಡಿನ ಗೋಡೆ ಅರ್ಧರ್ಧ ಬಿದ್ದು ಹೋಗಿರುವದರಿಂದ ಅದೊಂದು ಹಾಳುಗೋಡೆಯ ಕ್ಷೇತ್ರವೆಂದು ತಿಳಿದೋ ಅಥವಾ ಮತ್ತೆ ಯಾವ ಭಾವನೆಯಿಂದಲೋ, ಮುಂಗಡೆಯ ಚೌಕದಲ್ಲಿ ನಾಲ್ಕೆಂಟು ಕತ್ತೆಗಳು ಬಿದ್ದುಕೊಂಡಿರುವದುಂಟು. ಒಂದೊಂದು ಸಲ ಅವುಗಳ ಇಂಪಿನ ಗಾನವು ಕೇಳಬರುವದೂ ಉಂಟು. ಆ ದಿನ ಎಂದಿಗಿಂತಲೂ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿಯೇ ಆ ಪ್ರಾಣಿಗಳು ಒಟ್ಟುಗೂಡಿದ್ದವು ಆದರೆ ಒಂದು ವಿಶೇಷ ಎಂದಿನಂತೆ ಅವುಗಳೆಲ್ಲ ಬಿಡಿಬೀಸಾಗಿ ಕಾಲುಚಾಚಿಕೊಂಡು ಮಲಗಿರಲಿಲ್ಲ. ಇನ್ನೇನು ಏಳುತ್ತವೆಯೋ ಎಂಬಂತೆ ಕೂತಿದ್ದವು. ಮನುಷ್ಯರು ಕೂತು ಕೊಳ್ಳುವ ಹಾಗಲ್ಲವೆಂದು ಹೇಳಬೇಕಾದದ್ದೇ ಇಲ್ಲ; ಕತ್ತೆಗಳು ಎದ್ದು ಕೂರುವ ಹಾಗೆ ಎಂದು ಮನಸ್ಸಿನಲ್ಲಿಯೇ ಚಿತ್ರಿಸಿಕೊಳ್ಳಿ ಕತ್ತೆ ಚಿತ್ರಗಾರನ ಮಿಂಡನಾದ್ದರಿಂದ ಹೊರಗೆ ಯಾವದಾದರೂ ಚಿತ್ರವನ್ನು ನೋಡಿ ತಿಳಿಯುವದಕ್ಕೆ ಆಗುವದಿಲ್ಲ ಕಣ್ಣಲ್ಲಿಯೇ ಕಾಣಬೇಕು, ಆ ಮೋಚಿನ ಆಸನವನ್ನ !     ಕತ್ತೆಗಳೆಲ್ಲವೂ ತಮ್ಮ ಲಂಬಕರ್ಣಗಳನ್ನು ನೆಟ್ಟಗೆ ನಿಗುರಿಸಿಕೊಂಡಿದ್ದವು ಅವುಗಳ ಮುಂದೆ ಒಂದು ಮುದಿಕತ್ತೆ ಎದ್ದು ನಿಂತುಕೊಂಡಿತ್ತು. ಅದು ಒಂದು ಸಲ ಗಂಟಲನ್ನು ಸರಿಮಾಡಿಕೊಂಡು - ಕಿರಿಚಿತು ಎನ್ನಲೆ? ಉಹೂ, ಇಲ್ಲ ಮನುಷ್ಯವಾಣಿಯಿಂದ "ಮಹನೀಯರೆ" ಎಂದಿತು !     ನನಗೆ ದಿಗ್ಭ್ರಮೆಯಾಯಿತು. "ಇದೇನು ಕನಸೊ, ಪಿತ್ಥವಿಕಾರವೊ? ಈಗ ನಾನು ಎ

ಸಂಕ್ಷೇಪ ರಾಮಾಯಣ

    ದಶರಥ ಅಂತ ಒಬ್ಬ, ಹಾಗೆಂದರೆ? ಕರ್ಮೇಂದ್ರಿಯಗಳು ಐದು, ಜ್ಞಾನೇಂದ್ರಿಯಗಳು ಐದು, ಇವು ಹತ್ತೂ ಸೇರಿಸಿ ರಥಮಾಡಿಕೊಂಡು ಹತ್ತಿ ಸವಾರಿಮಾಡಿದ ಅವನು ಅಂದರೆ ಇಂದ್ರಿಯಗಳನ್ನು ಸ್ವಾಧೀನಮಾಡಿಕೊಂಡವನು ಯಾರೇ ಆಗಲಿ ಅವನು ದಶರಥ. ಅಂಥವನು ಯಾವಾಗಲೂ ಸಂತೋಷವನ್ನೇ ಪಡೆಯುತ್ತಾನೆ. ಆ ಸಂತೋಷವೇ ರಾಮ; ಅವನೇ ಆನಂದ ಅವನ ತಮ್ಮಂದಿರು ಲಕ್ಷ್ಮಣ, ಭರತ, ಶತ್ರುಘ್ನ ಆನಂದದ ಬೆಳಕು ಮಹಾನಂದ, ಆತ್ಮಾನಂದ, ಬ್ರಹ್ಮಾನಂದ.         ಸೀತಮ್ಮನಿಗೆ ತಾಯಿ, ತಂದೆ ಇಲ್ಲ, ಹಾಗೇ ತಾನಾಗೇ ಬಂದವಳು. ಸೀತೆ ಜ್ಞಾನಾಂಬಿಕೆ. ಜನಕರಾಜ ಯಜ್ಞ ಮಾಡಿದ, ಸಾಧನೆಮಾಡಿದ, ಜ್ಞಾನಾಂಬಿಕೆ ಸಿಕ್ಕಳು. ರಾಮ ಧನಸ್ಸು ಮುರಿದ, ಧನಸ್ಸು ಎಂದರೆ ಶರೀರ ಇದನ್ನು ಮುರಿದ ಅಂದರೆ ಸ್ಥೂಲಶರೀರ ದಾಟಿಹೋಗಿ ಸೀತೆಯನ್ನು ಪಡೆದ ರಾಮ ಎಂದರೆ ಆನಂದ; ಸೀತೆ ಎಂದರೆ ಜ್ಞಾನ ಎರಡೂ ಬಂದದ್ದು ಅಂದರೆ ಜ್ಞಾನಾನಂದ ಎಂಬುದು ಮೂಡಿಬಂತು.     ಇನ್ನು ಮಾಯಾಮೃಗ, ಅದು ಜಿಂಕೆ. ಬಂಗಾರದ ಜಿಂಕೆ ಅಂದಮೇಲೆ ಇದ್ದಕಡೆ ಇರೋದಿಲ್ಲ ಅದನ್ನು ಹಿಡಿದುಕೊಂಡು ಬಾ ಎಂದಳು ಸೀತಮ್ಮ ರಾಮ ಕೊಂದೇಬಿಟ್ಟ ಅಂದರೆ ಈ ಜಗತ್ತಿನ ಐಶ್ವರ್ಯದ ಆಸೆ ಮಾಯೆ ಅದನ್ನು ಕೊಂದು ಬಿಟ್ಟ ಅಂದರೆ ಜ್ಞಾನಾನಂದ ಇದ್ದಲ್ಲಿ ಮಾಯೆ ಸತ್ತುಹೋಗುತ್ತದೆ ಎಂಬ ಮಾತು ಅದು.     ರಾವಣ ಹತ್ತು ತಲೆ. ಅದೇ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳು. ದಶರಥ ಅದನ್ನೇ ರಥಮಾಡಿಕೊಂಡು ಸವಾರಿ ಮಾಡಿದ, ಅಂದರೆ ಅದನ್ನು ತಾನು ಹೇಳಿದಂತೆ ಕೇಳುವಂತೆ ಸ್ವಾಧೀನಮಾಡಿಕೊಂಡಿದ್ದ, ಅದ

ಪಿಪ್ಪಲಾದ ಕೃತಂ ಶ್ರೀಶನಿ ಸ್ತೋತ್ರಮ್ (ಸ್ಕಂದ ಪುರಾಣೋಕ್ತ)

ಪಿಪ್ಪಲಾದ ಉವಾಚ – ನಮಸ್ತೇ ಕ್ರೋಧಸಂಸ್ಥಾಯ ಪಿಂಗಲಾಯ ನಮೋಽಸ್ತುತೇ | ನಮಸ್ತೇ ಬಭ್ರುರೂಪಾಯ ಕೃಷ್ಣಾಯ ಚ ನಮೋಽಸ್ತುತೇ || ೧ || ನಮಸ್ತೇ ರೌದ್ರದೇಹಾಯ ನಮಸ್ತೇ ಚಾಂತಕಾಯ ಚ | ನಮಸ್ತೇ ಯಮಸಂಜ್ಞಾಯ ನಮಸ್ತೇ ಸೌರಯೇ ವಿಭೋ || ೨ || ನಮಸ್ತೇ ಮಂದಸಂಜ್ಞಾಯ ಶನೈಶ್ಚರ ನಮೋಽಸ್ತುತೇ | ಪ್ರಸಾದಂ ಕುರುದೇವೇಶ ದೀನಸ್ಯ ಪ್ರಣತಸ್ಯ ಚ || ೩ || ಶನಿರುವಾಚ – ಪರಿತುಷ್ಟೋಽಸ್ಮಿತೇ ವತ್ಸ ಸ್ತೋತ್ರೇಣಾನೇನ ಸಾಂಪ್ರತಂ | ವರಂ ವರಯ ಭದ್ರಂತೇ ಯೇನ ಯಚ್ಛಾಮಿ ಸಾಂಪ್ರತಂ || ೪ || ಪಿಪ್ಪಲಾದ ಉವಾಚ – ಅದ್ಯ ಪ್ರಭೃತಿ ನೋ ಪೀಡಾ ಬಾಲಾನಾಂ ಸೂರ್ಯನಂದನ | ತ್ವಯಾ ಕಾರ್ಯಾ ಮಹಾಭಾಗ ಸ್ವಕೀಯಾ ಚ ಕಥಂಚನ || ೫ || ಯಾವದ್ವರ್ಷಾಷ್ಟಮಂ ಜಾತಂ ಮಮವಾಕ್ಯೇನ ಸೂರ್ಯಜ | ಸ್ತೋತ್ರೇಣಾನೇನ ಯೋಽತ್ರ ತ್ವಾಂ ಸ್ತೂಯಾತ್ ಪ್ರಾತಃ ಸಮುತ್ಥಿತಃ || ೬ || ತಸ್ಯ ಪೀಡಾ ನ ಕರ್ತವ್ಯಾ ತ್ವಯಾ ಭಾಸ್ಕರನಂದನ | ತವ ವಾರೇ ಚ ಸಂಜಾತೇ ತೈಲಾಭ್ಯಂಗಂ ಕರೋತಿ ಯಃ || ೭ || ದಿನಾಷ್ಟಕಂ ನ ಕರ್ತವ್ಯಾ ತಸ್ಯ ಪೀಡಾ ಕಥಂಚನ ಯಸ್ತಾಂ ಲೋಹಮಯಂ ಕೃತ್ವಾ ತೈಲಮಧ್ಯೇ ಹ್ಯಧೋಮುಖಂ | ಧಾರಯೇತ್ತೇನ ತೈಲೇನ ತತಃ ಸ್ನಾನಂ ಸಮಾಚರೇತ್ ತಸ್ಯ ಪೀಡಾ ನ ಕರ್ತವ್ಯಾ ದೇಯೋ ಲಾಭೋ ಮಹೀಭುಜ || ೮ || ಅಧ್ಯರ್ಧಾಷ್ಟಮಿಕಾಯೋಗೇ ತಾವಕೇ ಸಂಸ್ಥಿತೇ ನರಃ | ತವವಾರೇ ತು ಸಂಪ್ರಾಪ್ತೇ ಯಸ್ತಿಲಾಂ ಲೋಹ ಸಂಯುತಾನ್ | ಸ್ವಶಕ್ತ್ಯಾ ರಾತಿ ನೋ ತಸ್ಯ ಪೀಡಾ ಕಾರ್ಯಾ ತ್ವಯಾ ವಿಭೋ || ೯ || ಕ

ಗೋದಾಸ್ತುತಿಃ (ಸಂಗ್ರಹ) - 29

ಇತಿ ವಿಕಸಿತಭಕ್ತೇಃ ಉತ್ಥಿತಾಂ ವೆಂಕಟೇಶಾತ್ ಬಹುಗುಣರಮಣೀಯಾಂ ವಕ್ತಿಗೋದಾಸ್ತುತಿಂ ಯಃ | ಸ ಭವತಿ ಬಹುಮಾನ್ಯಃ ಶ್ರೀಮತೋ ರಂಗಭರ್ತ್ತುಃ ಚರಣಕಮಲಸೇವಾಂ ಶಾಶ್ವತೀಮಭ್ಯುಷ್ಯನ್ ||29|| ವಿಕಸಿತಭಕ್ತೀಃ = ಅರಳಿದ ಭಕ್ತಿಯುಳ್ಳ, ವೇಂಕಟೀಶಾತ್ = ವೇಂಕಟನಾಥನೆಂಬ ಕವಿಯಿಂದ, ಇತಿ = ಈ ಮೇಲೆ ಹೇಳಿರುವ (ರೀತಿಯಲ್ಲಿ) 28 ಶ್ಲೋಕಗಳಲ್ಲಿ, ಉತ್ಥಿತಾಂ = ಹೊರ ಹೊಮ್ಮಿದ, ಬಹುಗುಣರಮಣೀಯಾಂ = ಗೋದಾದೇವಿಯ ಅನೇಕ ವಿಧವಾದ ಕಲ್ಯಾಣಗುಣಗಳಿಂದ ಕೂಡಿ ಸುಂದರವಾಗಿರುವ, ಗೋದಾಸ್ತುತಿಂ = ಗೋದಾಸ್ತುತಿಂ - ಹೆಸರುಳ್ಳ ಈ ಗೋದಾಸ್ತೋತ್ರವನ್ನು, ಯಃ = ಯಾವನು, ವಕ್ತಿ=ಹೇಳುತ್ತಾನೆಯೊ, ಸ್ತಃ = ಅವನು, ಶ್ರೀಮತಃ = ಶ್ರಿಯಃಪತಿಯಾದ, ರಂಗಭರ್ತುಃ = ರಂಗನಾಥನ, ಶಾಶ್ವತೀಂ = ಎಂದೆಂದಿಗೂ ಶಾಶ್ವತವಾದ, ಚರಣಕಮಲಸೇವಾಂ = ಆಡಿದಾವರೆಗಳ ಕೈಂಕರ್ಯವನ್ನು, ಅಭ್ಯುಪೈಷ್ಯನ್ = ಹೊಂದಿದವನಾಗಿ, ಬಹುಮಾನ್ಯಃ = ಎಲ್ಲರಿಂದಲೂ ಗೌರವಕ್ಕೆ ಪಾತ್ರನಾಗಿ, ಭವತಿ = ಆಗುತ್ತಾನೆ.     ವಿಕಾಸಗೊಂಡ ಭಕ್ತಿಯುಳ್ಳ ವೆಂಕಟನಾಥರಿಂದ, ಈ ಮೇಲೆ ಹೇಳಿರುವ 28 ಪದ್ಯಗಳಲ್ಲಿ ಹೊರಹೊಮ್ಮಿದ, ಗೋದಾದೇವಿಯ ಅನೇಕ ವಿಧವಾದ ಕಲ್ಯಾಣ ಗುಣಗಳಿಂದ ಕೂಡಿ ಸುಂದರವಾಗಿರುವ ಈ ಗೋದಾಸ್ತುತಿಯನ್ನು ಯಾರು ಹೇಳುತ್ತಾರೆಯೋ ಅವರು ಶ್ರಿಯಃಪತಿಯಾದ ಶ್ರೀರಂಗನಾಥನ ಅಡಿದಾವರೆಗಳ ಕೈಂಕರ್ಯವನ್ನು ಎಂದೆಂದಿಗೂ ಶಾಶ್ವತವಾಗಿ ಹೊಂದಿ, ಭಗವಂತನ ಕೃಪೆಗೆ ಪಾತ್ರನಾಗಿ, ಎಲ್ಲರಿಂದಲೂ ಗೌರವಕ್ಕೆ ಪಾತ್ರನಾಗಿರುತ್ತಾನೆ. ಇಲ್ಲಿ ಶ್ರೀಮದ್

ಹಿಂದೂ ದೇವಾಲಯಗಳಲ್ಲಿ ಪ್ರಧಾನದ್ವಾರಗಳ ಹಾಗೂ ಗರ್ಭಗೃಹಗಳ ಮೇಲೆ ಗೋಪುರ

ಹಿಂದೂ ದೇವಾಲಯಗಳಲ್ಲಿ ಪ್ರಧಾನದ್ವಾರಗಳ ಹಾಗೂ ಗರ್ಭಗೃಹಗಳ ಮೇಲೆ ಗೋಪುರಗಳಿರುವದನ್ನು ನಾವೆಲ್ಲರೂ ನೋಡಿರುತ್ತೇವೆ. ಗರ್ಭಗೃಹಗಳ ಮೇಲಿರುವ ಪ್ರಾಸಾದಶಿಖರಗಳನ್ನು 'ವಿಮಾನ'ಗಳೆಂದೂ ಆಗಮಶಾಸ್ತ್ರದಲ್ಲಿ ಕರೆದಿದ್ದಾರೆ. ಈ ವಿಮಾನಗಳ ನಿರ್ಮಾಣದ ಅವಶ್ಯಕತೆ ಏನು? ಎಂಬಿದನ್ನು ವಿಚಾರಮಾಡುವದರಿಂದ ಲಾಭವುಂಟು. ಏಕೆಂದರೆ ಇಂಥ ಕಲಿಗಾಲದಲ್ಲಿಯೂ ಈಗಲೂ ಹೊಸ ಹೊಸ ದೇವಾಲಯಗಳೂ ಗೋಪುರಗಳೂ ನಿರ್ಮಾಣವಾಗುತ್ತಿವೆ. ಇವುಗಳ ಪ್ರಯೋಜನವೇನು? ಸಾಮಾನ್ಯವಾಗಿ ದೇವಾಲಯಗಳಲ್ಲಿ ಮೂಲವಿಗ್ರಹ ಹಾಗೂ ಉತ್ಸವಮೂರ್ತಿಗಳು ಇದ್ದುಕೊಂಡಿರುವವು. ಸರ್ವವ್ಯಾಪಕನಾದ ಭಗವಂತನಿಗೆ ಇಂಥ ಸ್ಥಾನವು ಮಾತ್ರ ಮಿಸಲು ಎಂಬುದೇನೂ ಇರುವದಿಲ್ಲ. ಅವನು ಎಲ್ಲಾ ಕಡೆಯಲ್ಲಿಯೂ ತುಂಬಿಕೊಂಡು ನಮ್ಮೆಲ್ಲರ ಒಳಗೂ ಇದ್ದುಕೊಂಡಿರುವನಾದರೂ ಅಜ್ಞರಿಗೆ ಅವನ ಅರಿವು ಉಂಟಾಗುವದಕ್ಕಾಗಿ ಸ್ಥಾನವಿಶೇಷಗಳ್ಲಲಿ ಅವನನ್ನು ಆವಾಹಿಸಿ ಪೂಜಿಸುವ ಪದ್ಧತಿಯು ಬೆಳೆದುಬಂದಿದೆ. ಗಾಳಿಯ ನಡುವೆಯೇ ನಾವು ಕುಳಿತಿದ್ದರೂ ಸ್ವಲ್ಪ ಸೆಕೆಯಾದಾಗ ಬೀಸಣಿಗೆಯನ್ನು ಬೀಸಿಕೊಂಡು ಗಾಳಿಯನ್ನು ಅನುಭವಿಸುವಂತೆ ದೇವಾಲಯಗಳಲ್ಲಿಯಾದರೂ ನಮಗೆ ದೇವತಾಮೂರ್ತಿಗಳ ಸನ್ನಿಧಿಯಲ್ಲಿ ಭಗವದ್ ಭಾವನೆಯು ಬರಲೆಂದೂ ಆ ದೇವರನ್ನು ಪೂಜಿಸಿ ನಮಸ್ಕರಿಸಿ ನಾವು ಕೃತಾರ್ಥರಾಗಲೆಂದೂ ದಯೆಯಿಂದ ಋಷಿಮುನಿಗಳು ಈ ಉಪಾಯಗಳನ್ನು ಸೂಚಿಸಿದ್ದಾರೆ. ಇದೇ ದೇವಾಲಯಗಳ ಸ್ಥಾಪನೆಯ ಉದ್ದೇಶವು. ಇನ್ನು ದೇವಾಲಯಗಳಲ್ಲಿ ಉತ್ಸವಮೂರ್ತಿಯನ್ನ

ಸಂತ ಶ್ರೀ ಕನಕದಾಸರ ಬಂಡೆ

ಮಂಡ್ಯ ಜಿಲ್ಲೆ, ಶ್ರೀ ರಂಗಪಟ್ಟಣ ತಾಲೂಕಿನ, ಮಹಾದೇವಪುರ ಪುರಾತನ ಹಳ್ಳಿ. ಅಲ್ಲಿ ಕಾವೇರಿ ನದಿ ಹರಿದಿದೆ. ಕನಕದಾಸರು ತಿರುಪತಿಯ ಯಾತ್ರೆಗೆ ಹೊರಟಾಗಲೆ, ಅಲ್ಲಿ ನದಿದಾಟುವ ಅವಶ್ಯಕತೆ ಇತ್ತು. ಅಲ್ಲಿಯೇ ಇದ್ದ ದೋಣಿಯಲ್ಲಿ ಕುಳಿತರು. ಅವರ ಮೈಯೆಲ್ಲಾ ಕಜ್ಜಿ(ಗಾಯ)ಗಳಾಗಿದ್ದರಿಂದ ದೋಣಿಯಿಂದ ಹೀಯಾಳಿಸಿ ಅಂಬಿಗರು ಇಳಿಸಿದರು. ನೊಂದ ಕನಕದಾಸರು ‘ಸಾವಿರ ಗಳಿಸಿದರೂ ಸಂಜೆಗೆ ಲಯವಾಗಲಿ ನಳ್ಳಿ ಗುಳ್ಳಿಯಂತೆ ಮಕ್ಕಳಾಗಲಿ’ ಎಂದು ಶಾಪವಿತ್ತರು. ಪಕ್ಕದ ತೋಟದಲ್ಲಿ ಒಂದು ಬಾಳೆಎಲೆಯನ್ನು ಕೇಳಿದರು. ಆ ತೋಟದ ಒಡೆಯ ಅವರನ್ನು ಬೈದು ಹೊರದೂಡಿದ. ಇಲ್ಲಿ ಬಾಳೆ ಬೆಳೆದರು ಫಲಕೊಡದೇ ಇರಲೆಂ ದು ಶಾಪವಿತ್ತರು. ಈಗಲೂ ಬಾಳೆ ಅಲ್ಲಿ ಫಲ ಕೊಡುವುದಿಲ್ಲ ಎಂಬುದು ಜನರ ನಂಬಿಕೆ. ಈಗ ಅದು ಪಾಳು ಬಿದ್ದಿದೆ. ಪಕ್ಕದ ತೋಟದಲ್ಲಿ ಬಾಳೆ ಎಲೆ ಪಡೆದು, ಅದರ ಮೇಲೆ ಕುಳಿತು ನದಿ ದಾಟಿದರು. ಇದನ್ನು ನೋಡಿದ ಅಲ್ಲಿಯ ಅಂಬಿಗರು ನೀವು ಸಾಮಾನ್ಯರಲ್ಲ, ಮಹಾಪುರುಷರು ನಮ್ಮ ದೋಣಿಗೆ ಶಾಪ ಕೊಡದಿರಿ ಎಂದು ಮೊರೆ ಹೋದರು. ನನ್ನ ಹೆಸರಿನಿಂದ ವರ್ಷದಲ್ಲಿ ನಾಲ್ಕು ಜನರಿಗಾದರೂ ಊಟ ಹಾಕಿರಿ, ಇಲ್ಲಿ ಯಾವುದೇ ರೀತಿ ದೋಣಿ ಅಪಘಾತ ಸಂಭವಿಸುವುದಿಲ್ಲವೆಂದು ಶುಭಹಾರೈಸಿ ಪ್ರಯಾಣ ಬೆಳೆಸಿದರು. ಅಲ್ಲಿ ಇಂದಿಗೂ ಯಾವುದೇ ತೆರನಾಗಿ ದೋಣಿ ಅಪಘಾತವಾಗಿಲ್ಲ. ನದಿಯ ಮಧ್ಯದಲ್ಲಿ ಒಂದು ಬಂಡೆ ಇದೆ. ಮಂಡಿಯೂರಿ ಕುಳಿತ ಕಾಲಿನ ಹಾಗೂ ಕೈ ಗುರುತು ಮೂಡಿವೆ. ಅವೇ ಸಂತ ಶ್ರೀ ಕನಕದಾಸರ ಗುರುತು.

ಸ್ಕಂದಪುರಾಣ ಅಧ್ಯಾಯ 20

ವ್ಯಾಸ ಉವಾಚ | ಉಮಾಹರೌ ತು ದೇವೇಶೌ ಚಕ್ರತುರ್ಯಚ್ಚ ಸಂಗತೌ | ತನ್ಮೇಸರ್ವಮಶೇಷೇಣ ಕಥಯಸ್ವ ಮಹಾಮುನೇ || ಸನತ್ಕುಮಾರ ಉವಾಚ | ಉಮಾಹರೌ ತು ಸಂಗಮ್ಯ ಪರಸ್ಪರಮನಿಂದಿತೌ | ಶಲಶ್ಣ್ಕಸ್ಯಾನ್ವಯೇ ವಿಪ್ರಂ ಯುಯುಜಾತೇ ವರೇಣ ಹ || ಸ ಚಾಪ್ಯಯೋನಿಜಃ ಪುತ್ರ ಆರಾದ್ಯ ಪರಮೇಶ್ವರಮ್ | ರುದ್ರೇಣ ಸಮತಾಂ ಲಬ್ಧ್ವಾ ಮಹಾಗಣಪತಿರ್ಬಭೌ || ವ್ಯಾಸ ಉವಾಚ || ಕಥಂ ನಂದೀ ಸಮುತ್ಪನ್ನಃ ಕಥಂ ಚಾರಾಧ್ಯ ಶಂಕರಮ್ | ಸಮಾನತ್ವಮಗಾಚ್ಛಂಭೋಃ ಪ್ರತೀಹಾರತ್ವಮೇವ ಚ || ಸನತ್ಕುಮಾರ ಉವಾಚ | ಅಭೂದೃಷ್ಟಿಃ ಸ ಧರ್ಮಾತ್ಮಾ ಶಿಲಾದೋ ನಾಮ ವೀರ್ಯವಾನ್ | ತಸ್ಯಾಭೂಚ್ಛಿಲಕೈರ್ವೃತ್ತಿಃ ಶಿಲಾದಸ್ತೇನ ಸೋಭವತ್ || ಅಪಶ್ಯಲ್ಲಂಬಮಾನಾಂಸ್ತು ಗರ್ತಾಯಾಂ ಸ ಪಿತ್ ರ್ಂದ್ವಿಜಃ | ವಿಚ್ಛಿನ್ನಸಂತತೀನ್ಘೋರಂ ನಿರಯಂ ವೈ ಪ್ರಪೇತುಷಃ || ತೈರುಕ್ತೋಪತ್ಯಕಾಮೈಸ್ತು ದೇವಂ ಲೋಕೇಶಮವ್ಯಯಮ್ | ಆರಾಧಯ ಮಹಾದೇವಂ ಸುತಾರ್ಥಂ ದ್ವಜಸತ್ತಮ || ತಸ್ಯ ವರ್ಷಸಹಸ್ರೇಣ ತಪ್ಯಮಾನಸ್ಯ ಶೂಲಧೃಕ್ | ಶರ್ವಃ ಸೋಮೋ ಗಣವೃತೋ ವರದೋಸ್ಮೀತ್ಯಭಾಷತ || ತಂ ದೃಷ್ಟ್ವಾ ಸೋಮಮೀಶೇಶಂ ಪ್ರಣತಃ ಪಾದಯೋರ್ವಿಭೋಃ | ಹರ್ಷಗದ್ಗದಯಾ ವಾಚಾ ತುಷ್ಟಾವ ವಿಬುಧೇಶ್ವರಮ್ || ನಮಃ ಪರಮದೇವಾಯ ಮಹೇಶಾಯ ಮಹಾತ್ಮನೇ | ಸ್ರಷ್ಟ್ರೇ ಸರ್ವಸುರೇಶಾನಾಂ ಬ್ರಹ್ಮಣಃ ಪತಯೇ ನಮಃ || ನಮಃ ಕಾಮಾಶ್ಣ್ಗನಾಶಾಯ ಯೋಗಸಂಭವಹೇತವೇ | ನಮಃ ಪರ್ವತವಾಸಾಯ ಧ್ಯಾನಗಮ್ಯಾಯ ವೇಧಸೇ || ಋಷೀಣಾಂ ಪತಯೇ ನಿತ್ಯಂ ದೇವಾನಾಂ ಪತಯೇ ನಮಃ |

ರುದ್ರಭಾಷ್ಯಪ್ರಕಾಶ - 8ನೇ ಅನುವಾಕ (ಸಂಪೂರ್ಣ)

ರುದ್ರಾಧ್ಯಾಯದ ಎಂಟನೆಯ ಅನುವಾಕವನ್ನು ಈಗ ವಿಚಾರಮಾಡ ಬೇಕಾಗಿದೆ. ಹಿಂದಿನ ಅನುವಾಕದಲ್ಲಿ ಸರ್ವಾತ್ಮಕನೂ ಸರ್ವಾಂತರ್ಯಾಮಿಯೂ ಆದ ಭಗವಂತನನ್ನು ಸ್ತುತಿಸಲಾಯಿತು. ಈಗ ಎಲ್ಲಾ ಲೋಕದ ಜನರಿಂದಲೂ ಉಪಾಸ್ಯನಾದವನೂ ಸಂಸಾರಬಂಧವನ್ನು ಕಳೆಯುವ ಬ್ರಹ್ಮವಿದ್ಯೆಯನ್ನು ಕೊಡುವವನೂ ಆದ ಭಗವಂತನನ್ನು ಸ್ತುತಿಸಲಾಗುವದು.     ನಮಃ ಸೋಮಾಯ ಚ ರುದ್ರಾಯ ಚ ನಮಸ್ತಾಮ್ರಾಯ ಚಾರುಣಾಯ ಚ || 'ಸೋಮನಿಗೂ ರುದ್ರನಿಗೂ ತಾಮ್ರನಿಗೂ ಅರುಣನಿಗೂ ನಮಸ್ಕಾರ!'     ಇಲ್ಲಿ ರುದ್ರನಾದ ಸೋಮನಿಗೆ ನಮಸ್ಕಾರ - ಎಂದು ಅನ್ವಯಮಾಡಿ ಕೊಳ್ಳಬೇಕು. ರುದ್ರನೆಂದರೆ ಸಂಸಾರದುಃಖ(ರೋದನ)ವನ್ನು ಹೋಗಲಾಡಿಸುವವನು ಎಂದಭಿಪ್ರಾಯ. ಭಗವಂತನನ್ನು ಅರಿತುಕೊಳ್ಳದೆ ದುಃಖವನ್ನು ದಾಟುವದು ಸಾಧ್ಯವೇ ಇಲ್ಲ ಆದರೆ ಆ ದೇವನನ್ನು ಅರಿತುಕೊಳ್ಳುವದಾದರೂ ಹೇಗೆ? ಎಂದರೆ ಉಮೆಯ ಕೃಪೆಯಿಂದ - ಎಂದಭಿಪ್ರಾಯ. ಉಮೆಯನ್ನು ನಿತ್ಯವೂ ಹೊಂದಿರುವವನೇ - ಉಮಾಸಹಿತನಾದವನೇ - ಸೋಮನು. ಉಮಾ- ಎಂಬುದು ಓಮ್ ಎಂಬ ಪ್ರಣವಮಂತ್ರದ ಭಾಗವು. ಅ-ಉ-ಮ ಸೇರಿ ಓಂ ಆಗಿರುವದು. ಅದರಲ್ಲಿ ಉಮಾ ಎಂಬಿದೇ ದೇವಿಯ ತತ್ತ್ವವು ಆದ್ದರಿಂದಲೇ ದೇವಿಯನ್ನು "ಓಂಕಾರರೂಪಿಣೀ" ಎಂದು ಕರೆಯುತ್ತಾರೆ. ಈ ದೇವಿಯೇ ಬ್ರಹ್ಮವಿದ್ಯೋಪದೇಶಕಳು. ಈಕೆಯ ಪ್ರಸಾದದಿಂದಲೇ ಸೋಮನಾದ ಪರಮೇಶ್ವರನ ಜ್ಞಾನವು ನಮಗೆ ಪ್ರಾಪ್ತವಾಗುವದು ಅಂತೂ ಬ್ರಹ್ಮವಿದ್ಯಾರೂಪಿಣಿಯಾದ ಉಮಾದೇವೀಸಹಿತನಾದ ಸೋಮನಿಗೆ ನಮಸ್ಕಾರ ಎಂಬಿದು ಮಂತ್ರಾರ್ಥವು.     ಉಮಾದೇವಿ

ಗೋದಾಸ್ತುತಿಃ (ಸಂಗ್ರಹ) - 28

ಶತಮಖಮಣಿನೀಲಾ ಚಾರುಕಲ್ಹಾರಹಸ್ತಾ ಸ್ತನಭರ ನಮಿತಾಂಗೀ ಸಾನ್ದ್ರವಾತ್ಸಲ್ಯಸಿಂಧುಃ | ಅಲಕವಿನಿಹಿತಾಭಿಃ ಸ್ರಗ್ಭಿರಾಕೃಷ್ಟನಾಥಾ ವಿಲಸತು ಹೃದಿ ಗೋದಾ ವಿಷ್ಣುಚಿತ್ತಾತ್ಮಜ್ಞಾನಃ ||28|| ಶತಮುಖಮಣಿನಿಲಾ = ಇಂದ್ರನೀಲಮಣಿಯಂತೆ ನೀಲವರ್ಣದಿಂದ ಕೂಡಿರುವವಳೂ, ಚಾರುಕಲ್ಹಾರಹಸ್ತಾ = ಸುಂದರವಾದ ಕಲ್ಹಾರ ಪುಷ್ಪವನ್ನು ಕೈಯಲ್ಲಿ ಹಿಡಿದಿರುವವಳೂ, ಸ್ತನಭರ=ಸ್ತನಕಲಷಗಳ ಭಾರದಿಂದ, ನಮಿತಾಂಗಿ=ಬಾಗಿದ ದೇಹವುಳ್ಳವಳೂ, ಸಾಂದ್ರವಾತ್ಸಲ್ಯಸಿಂಧು=ಗಾಢವಾದ ವಾತ್ಸಲ್ಯಗುಣದ ಕಡಲಿನಂತಿರುವವಳೂ, ಅಲಕವಿನಿಹಿತಾಭಿಃ=ತನ್ನ ಮುಂಗುರುಳುಗಳೊಡನೆ ಮುಡಿದು ತೆಗೆದುಕೊಟ್ಟ, ಸ್ರಗ್ಭಿಃ=ಮಾಲಿಕೆಗಳಿಂದ, ಆಕೃಷ್ಟನಾಥಾ=ತನ್ನ ಪತಿಯಾದ ರಂಗನಾಥನನ್ನೇ ಆಕರ್ಷಿಸಿದವಳು, ವಿಷ್ಣುಚಿತ್ತಾತ್ಮಜಾ=ಪೆರಿಯಾಳ್ವಾರರ ಮಗಳೂ ಆದ, ಗೋದಾ=ಗೋದಾ ದೇವಿಯು, ನಃ=ನಮ್ಮ, ಹೃದಿ=ಮನಸ್ಸಿನಲ್ಲಿ, ವಿಲಸತು=ಪ್ರಕಾಶಿಸುತ್ತಿರಲಿ     ಇಂದ್ರ ನೀಲಮಣಿಯಂತೆ ನೀಲವರ್ಣದಿಂದ ಕೂಡಿರುವವಳೂ, ಸುಂದರವಾದ ಕಲ್ಹಾರಪುಷ್ಪವನ್ನು ಕೈಯಲ್ಲಿಪಿಡಿದಿರುವವಳೂ, ಸ್ತನಕಲಷಗಳ ಭಾರದಿಂದ ಬಗ್ಗಿದ ದೇಹವುಳ್ಳವಳೂ, ಗಾಢವಾದ ವಾತ್ಸಲ್ಯಗುಣದ ಕಡಲಿನಂತಿರುವವಳೂ, ತನ್ನ ಮುಂಗುರುಳುಗಳೊಡನೆ ತಾನು ಮುಡಿದು ತೆಗೆದುಕೊಟ್ಟ ಮಾಲಿಕೆಗಳಿಂದಲೇ ತನ್ನ ಪತಿಯಾದ ರಂಗನಾಥನನ್ನೂ ತನ್ನ ಕಡೆಗೆ ಆಕರ್ಷಿಸಿಕೊಂಡವಳೂ ಆದ ಪೆರಿಯಾಳ್ವರವರ ಮಗಳಾದ ಗೋದಾದೇವಿಯು, ನಮ್ಮ ಹೃದಯದಲ್ಲಿ ನಿರಂತರವಾಗಿ ಪ್ರಕಾಶಿಸುತ್ತಿರಲಿ.

ಹರಪನಹಳ್ಳಿ ಭೀಮವ್ವ

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಸ ಸಾಹಿತ್ಯದ ಕೊಡುಗೆ ವೈಶಿಷ್ಟ್ಯಪೂರ್ಣವಾದದ್ದು. ಕರ್ನಾಟಕದ ಧಾರ್ಮಿಕ ಸಾಂಸ್ಕೃತಿಕ ಇತಿಹಾಸದಲ್ಲಿ ಹರಿದಾಸರ ಸ್ಥಾನವೂ ಅಷ್ಟೇ ವಿಶಿಷ್ಟತೆಯಿಂದ ಕೂಡಿದೆ. ಇವರ ಕೀರ್ತನೆಗಳಲ್ಲಿ ಲೋಕಾನುಭವವಿದೆ. ಅಷ್ಟೇ ಅಲ್ಲ, ಲೌಕಿಕ ವಿಡಂಬನೆಯ ಮೂಲಕ ಜನರ ಮಾನಸಿಕ ವಿಕಾಸ ಸಾಧಿಸುವ ಗುಣವೂ ಇದೆ. ಭೀಮವ್ವನವರು 1823ರ ಜುಲೈ 6ನೇ ತಾರೀಖು ನಾರಾಯಣ ದೇವರ ಕೆರೆ ಎಂಬ ಊರಲ್ಲಿ ನರೇಭಟ್ಟರ ವಂಶದ ರಘುನಾಥಾಚಾರ್ಯ ಮತ್ತು ರಾಘಮ್ಮ ದಂಪತಿಗಳ ಮಗಳಾಗಿ ಜನಿಸಿದರು. ಇವರ ಹುಟ್ಟುಹೆಸರು ಕಮಲಾಕ್ಷಿ. ಇವರು ಹುಟ್ಟಿದ ಕೆಲವಾರು ತಿಂಗಳುಗಳವರೆಗೆ ಇವರ ಮೈಮೇಲೆ ಚಕ್ರಗಳೂ ಕಾಲುಗಳಲ್ಲಿ ಪದ್ಮಗಳೂ ಇದ್ದುವಂತೆ. ಪುಟ್ಟ ಮಗು ಅಳತೊಡಗಿದಾಗಳೆಲ್ಲಾ ತೊಟ್ಟಿಲು ತೂಗುತ್ತಾ ಹರಿನಾಮ ಹಾಡಿದರೆ ಕೂಡಲೇ ಸುಮ್ಮನಾಗುತ್ತಿತ್ತಂತೆ. ಭೀಮವ್ವನ ನೆನಪಿನ ಶಕ್ತಿಯೂ ಘನವಾಗಿತ್ತು. ಹಾಗಾಗಿಯೇ ಅವರು ಸಾವಿರಾರು ಕೀರ್ತನೆಗಳನ್ನೂ ನೂರಾರು ನುಡಿಗಳ ಕಥನ ಕೀರ್ತನೆಗಳನ್ನೂ ಬಾಯಿಯಿಂದಲೇ ನಿರರ್ಗಳವಾಗಿ ಹೇಳುತ್ತಿದ್ದರು. ಮಗು ಆರು ವರ್ಷದವಳಿರುವಾಗಲೇ ಆಕೆಗೆ ಶ್ರೀ ವೇದವ್ಯಾಸ ದೇವರ ದರ್ಶನವಾಗಿತ್ತು. ಅಂದಿನಿಂದಲೇ ಅವಳಲ್ಲಿ ಗುರುತರ ಬದಲಾವಣೆ ಕಾಣಿಸಿಕೊಂಡಿತ್ತು. ಈಕೆಗೆ 11 ವರ್ಷವಾದಾಗ ರಾಯದುರ್ಗ ತಾಲೂಕಿನ ಹರೇ ಸಮುದ್ರ ಗ್ರಾಮದ ಗೋಪಾಲಪ್ಪ ಎಂಬುವರ ವಂಶದ ಮುನಿಯಪ್ಪನವರ ಜೊತೆ ಮದುವೆಯಾಯಿತು. ವರನ ವಯಸ್ಸು 45 ವರ್ಷ. ಅವರ