Posts

Showing posts from July, 2016

ಹೋಳಿ ಮತ್ತು ಬಣ್ಣದ ಮಾತು

Image
ಇಂದಿನ(1-8-16) ‪#‎ ವಿಶ್ವವಾಣಿ‬ ಕಥಾಕಾಲಂನಲ್ಲಿ "ಹೋಳಿ ಮತ್ತು ಬಣ್ಣದ ಮಾತು" ಧನ್ಯವಾದಗಳು Phaneesh Basavani ‪#‎ ವಿ‬ + ಅಂದು ಕಾಮನಹಬ್ಬದ ಸಂಭ್ರಮ, ಹುಡುಗರೂ, ಮುದುಕರೂ, ಕೆಲವು ಜನ ಹೆಣ್ಣು ಮಕ್ಕಳೂ ಕೂಡ ಕಾಮಣ್ಣನ ಮೇಲಣ ಭಂಡಭಂಡಪದಗಳನ್ನು ಹೇಳುತ್ತಾ, ಮನೆಮನೆಗೆ ನುಗ್ಗಿ ಸೌದೆಬೆರಣಿಗಳನ್ನು ಕದಿಯುತ್ತಾ ಅಲೆದಾಡುವುದೇ ರೂಡಿ. ದೊಡ್ಡವರೇ ಅವಕಾಶಕೊಟ್ಟ ಮೇಲೆ ಹುಡುಗರ ಕೋತಿಚೇಷ್ಟೆಗಳಿಗೆ ಕೊನೆಯೆಲ್ಲಿ ? ಆ ಹುಡುಗರು ಅಲ್ಲಲ್ಲಿ ಚೇಷ್ಟೆಗಳನ್ನು ಮಾಡುತ್ತಾ ಊರ ಮುಂದಕ್ಕೆ ಬಂದರು ಅಲ್ಲಿ ಅರಳಿಕಟ್ಟೆಯ ಮೇಲೆ ನೆಶ್ಯತಿಕ್ಕುತ್ತಾ ಕುಳಿತಿದ್ದ ಸರಗೂರಿನ ಸಂಗಣ್ಣನನ್ನು ಕಂಡರು. ಸಂಗಣ್ಣ ಸ್ವಲ್ಪ ಪೆದ್ದು, ಸ್ವಂತಬುದ್ಧಿಯಿಲ್ಲ. ಅವನನ್ನು ನೋಡಿದೊಡನೆಯೆ ಗುರು "ಎಲೋ ಪ್ರಸಾದ, ಸಿಕ್ಕಿದನಪ್ಪ ಎಳೆನಿಂಬೆಕಾಯಿ! ಏನಾದರೂ ಒಂದು ತಮಾಷೆಮಾಡಬೇಕಲ್ಲಾ! ಅದಕ್ಕೆಲ್ಲಾ ನೀನೇ ಸರಿ, ನಿನ್ನ ಬುದ್ಧಿಕಲಾಕೌಶಲ ಪ್ರಾರಂಭವಾಗಲಿ! ಹೂ, ಜಾಗ್ರತೆ!"ಎಂದ. ಹನುಮಂತದೇವರನ್ನು ಹೊಗಳಿದಷ್ಟೂ ಅವನಿಗೆ ಶೌರ್ಯ ಹೆಚ್ಚುತ್ತಿತಂತೆ; ನಮ್ಮ ಗುರುಗೂ ಅಷ್ಟೆ! ಪ್ರಸಾದ ಹೊಗಳುತ್ತಲೂ ಹುಡುಗರೆಲ್ಲ ಅವನನ್ನು ಮತ್ತಷ್ಟು ಉಬ್ಬಿಸಿ ಅಟ್ಟಕ್ಕೇರಿಸಿದರು. ಗುರುನೂ ಸ್ವಲ್ಪ ಯೋಚಿಸಿ "ನೀವೆಲ್ಲಾ ನಾನು ಮಾಡಿದ ಹಾಗೆ ಮಾಡಬೇಕು. ಎಲ್ಲರೂ ಗಂಭೀರವಾಗಿ ನನ್ನ ಹಿಂದೆ ಬನ್ನಿ, ತಿಳಿಯಿತೋ? ಎಂದು ಹೇಳುತ್ತಾ ಮೆಲ್ಲ ಮೆಲ್ಲಗೆ ಮಹದೇವ

Kalyana Vrushti Sthavam - ಕಲ್ಯಾಣವೃಷ್ಟಿಸ್ತವಃ - Sri Adi Shankaracharya

ಕಲ್ಯಾಣವೃಷ್ಟಿಭಿರಿವಾಮೃತಪೂರಿತಾ ಭಿ | ರ್ಲಕ್ಷ್ಮೀಸ್ವಯಂವರಣಮಂಗಲದೀಪಿಕಾಭಿಃ || ಸೇವಾಭಿರಂಬ ತವ ಪಾದಸರೋಜ ಮೂಲೇ | ನಾಕಾರಿ ಕಿಂ ಮನಸಿ ಭಾಗ್ಯವತಾಂ ಜನಾನಾಮ್ ||1|| *** ಅಮೃತ ಗುಣ ಸಂಪನ್ನಳಾದ, ಮಂಗಳಕಾರಿಣಿ ವಿಷ್ಣು ಪತ್ನಿ ಲಕ್ಷ್ಮಿಯೇ, ನಿನ್ನ ಪಾದ ಕಮಲದ ಸೇವೆ ಮಾಡುವುದು ಜನರ ಎಂತಹ ಭಾಗ್ಯವು ||1|| *** Kalyana vrushtibi rivamrutha poorithaabhi, Lakshmi swayam varana mangala deepikabhi, Sevabhirambha, thava pada saroja moole, Naakari kim manasi bhagyavatham jananaam.             1 *** Hey mother, Which wishes in their mind, Are not fulfilled of those lucky people, Who are able to serve near your lotus like feet, Which are the rains of luck full of nectar, And which are like the lamps lit during, The marriage of Goddess Lakshmi. ************ ಏತಾವದೇವ ಜನನಿ ಸ್ಪೃಹಣೇಯಮಾಸ್ತೇ | ತ್ವದ್ವಂದನೇಷು ಸಲಿಲಸ್ಥಗಿತೇ ಚ ನೇತ್ರೇ || ಸಾನ್ನಿಧ್ಯಮುದ್ಯದರುಣಾಯುತ ಸೋದರಸ್ಯ | ತ್ವದ್ವಿಗ್ರಹಸ್ಯ ಪರಯಾ ಸುಧಯಾ ಪ್ಲುತಸ್ಯ  ||2|| *** ಜಗದೇಕಮಾತೆ, ಅರ್ಶುಪೂರಿತ ನಯನಗಳಿಂದ ಸ್ಮರಣೀಯಳಾದ, ಅರುಣ ಪ್ರಭೆಯುಳ್ಳ ನಿನ್ನ ಸ್ವರೂಪದಿಂದ ನನಗೆ ಅಮೃತ ಸಿಂಚನವಾಗಿದೆ ||2|| *** Ethavadeva janani spruhaneeyamasthe, Twath vanda

ಶ್ರೀರಾಮಕರ್ಣಾಮೃತಮ್ (ಶ್ರೀಶಂಕರಾಚಾರ್ಯಕೃತ)

ಶ್ರೀರಾಮಃ ಸಕಲೇಶ್ವರೋ ಮಮ ಪಿತಾ ಮಾತಾ ಚ ಸೀತಾ ಮಮ ಭ್ರಾತಾ ಬ್ರಹ್ಮ ಸಖಾ ಪ್ರಭಂಜನಸುತಃ ಪತ್ನೀ ವಿರಕ್ತಿಃ ಪ್ರಿಯಾ | ವಿಶ್ವಾಮಿತ್ರವಿಭೀಷಣಾದಿವಶಗಾ ಮಿತ್ರಾಣಿ ಬೋಧಸ್ಸುತೋ ಭಕ್ತಿಃ ಶ್ರೀಹರಿಸಂಗತಾ ರತಿಸುಖಂ ವೈಕುಂಠಮಸ್ಮತ್ಪದಮ್ ||1||     ಎಲ್ಲರಿಗೂ ಒಡೆಯನಾದ ಶ್ರೀರಾಮನು ತನ್ನ ತಂದೆ, ಸೀತೆಯು ನನ್ನ ತಾಯಿ. ಬ್ರಹ್ಮನು ಸೋದರನು. ವಾಯುಪುತ್ರನಾದ(ಹನುಮಂತನು) ಸ್ನೇಹಿತನು. ವೈರಾಗ್ಯಳೆಂಬುವಳೇ ಪ್ರಿಯಳಾದ ಹೆಂತಿಯು. ವಿಶ್ವಾಮಿತ್ರ, ವಿಭೀಷಣರೇ ಮುಂತಾದ ಅನುಯಾಯಿಗಳೇ ನನ್ನ ಮಿತ್ರರು. ಜ್ಞಾನವೇ ಪುತ್ರನು. ಶ್ರೀಹರಿಯಲ್ಲಿ ಅನುರಕ್ತವಾದ ಭಕ್ತಿಯೇ ರತಿಸುಖವು, ವೈಕುಂಠವೇ ನಮ್ಮ ಊರು. ರಾಮಂ ಶ್ಯಾಮಾಭಿರಾಮಂ ರವಿಶಶಿನಯನಂ ಕೋಟಿಸೂರ್ಯಪ್ರಕಾಶಂ ದಿವ್ಯಂ ದಿವ್ಯಾಸ್ತ್ರಪಾಣಿಂ ಶರಮುಖಶರಧಿಂ ಚಾರುಕೋದಂಡಹಸ್ತಮ್ | ಕಾಲಂ ಕಾಲಾಗ್ನಿರುದ್ರಂ ರಿಪುಕುಲದಹನಂ ವಿಘ್ನವಿಚ್ಛೇದದಕ್ಷಂ ಭೀಮಂ ಭೀಮಾಟ್ಟಹಾಸಂ ಸಕಲಭಯಹರಂ ರಾಮಚಂದ್ರಂ ಭಜೇಹಮ್ ||2||         ಕಪ್ಪಾದ ದೇಹಕಾಂತಿಯುಳ್ಳ, ಸೂರ್ಯಚಂದ್ರರೇ ಕಣ್ಣಾಗಿ ಉಳ್ಳ, ಕೋಟಿ ಸೂರ್ಯರಂತೆ ಹೊಳೆಯುವ, ಪ್ರಕಾಶರೂಪನಾದ, ದಿವ್ಯವಾದ ಅಸ್ತ್ರಗಳನ್ನು ಹಿಡಿದಿರುವ, ಸಮುದ್ರದೋಪಾದಿಯ ಬಾಣಸಮೂಹವುಳ್ಳ, ಬಿಲ್ಲನ್ನು ಹಿಡಿದ ಸುಂದರವಾದ ಕೈಯುಳ್ಳ, (ರಾಕ್ಷಸರಿಗೆ) ಮೃತ್ಯುರೂಪನಾದ, ಕಾಲಾಗ್ನಿಯಂತೆ ಭಯಂಕರನಾದ, ಶತ್ರುಗಳ ಗುಂಪನ್ನು ಸುಡುವ, ಅಡ್ಡಿಗಳನ್ನು ತುಂಡುಮಾಡುವದರಲ್ಲಿ ಸಮರ್ಥನಾದ, ಭೀಮನೂ, ಅಂಜಿಕೆಯುಂಟು

ದೇವಿಮಹಾತ್ಮ್ಯೆ ತತ್ವ

    ತಮೋಗುಣಾತ್ಮಕ ವಿಷ್ಣುವಿನ(ಸಮಾಧಿ)ಯ ರೂಪವಾದ ತಾರ್ಕಿಕ ಗುರುಗಳ ಉಪದೇಶ ಶ್ರವಣದಿಂದ ಪ್ರಮಾಣಗತ, ಪ್ರಮೇಯಗತ ಸಂಶಯಗಳೆಂಬ ಮಧುಕೈಟಭರು ಕಿವಿಯಿಂದ ಹುಟ್ಟಿದರು. ಅವರು ಹುಟ್ಟಿದೊಡನೆಯೇ ಚತುರ್ಮುಖಬ್ರಹ್ಮನೆಂಬ ಸಾಧನ ಚತುಷ್ಟಯ ಸಂಪನ್ನನಾದ (ವೋಕ್ಷಸಾಧಕನಾದ) ಅಧಿಕಾರಿಯನ್ನು ಪೀಡಿಸಿದರು. ಆತ ಬ್ರಹ್ಮನೆಂಬ ಅಧಿಕಾರಿಯು ಗುರುರ್ವಿಷ್ಣುಃ ಎಂಬಂತೆ ತಮೋಗುಣದಿಂದೆಚ್ಚೆತ್ತ ಶುದ್ಧಸತ್ವಗುಣವೆಂಬ ಸದ್ಗುರುನಾಥನಿಗೆ ಶರಣುಹೋಗಿ ಉಪಕ್ರಮೋಪಸಂಹಾರ, ಅಭ್ಯಾಸ, ಅಪೂರ್ವತ, ಫಲ, ಅರ್ಥವಾದ, ಉಪಪತ್ತಿಗಳೆಂಬ ಷಡ್ಲಿಂಗಗಳ ಸಹಾಯದಿಂದ ಶ್ರುತಿ (ಉಪನಿಷತ್ತು)ಗಳನ್ನು ಶ್ರವಣಮಾಡಲು, ಸದ್ಗುರುರೂಪ ವಿಷ್ಣುವಿನ ಉಪದೇಶದಂತೆ ಭೇದಬಾಧಕ ಅಭೇದಕಸಾಧಕ ಮುಕ್ತ, ಮನನವೆಂಬ ಸುದರ್ಶನಚಕ್ರದಿಂದ ಆ ಪ್ರಮಾಣ, ಪ್ರಮೇಯ, ಸಂಶಯಗಳೆಂಬ ಮಧುಕೈಟಭರು ಹತರಾದರು ಆಗ ಬ್ರಹ್ಮನೆಂಬ ಅಧಿಕಾರಿಯೂ ಸಂತುಷ್ಟನಾದನು.     ಮಹಿಷಾಸುರನು ರಾಜ್ಯಲೋಭದಿಂದ ಮೃತನಾದನು. ಅಹಂಸ್ಪೂರ್ತಿಯೇ ಮಹಿಷಾಸುರನು. ಈ ವೃತ್ತಿಯ ನೇತ್ರಕ್ಕೆ ಸಂಬಂಧಪಡುವದೇ ಚಿಕ್ಷುರಾಖ್ಯನು. ಜಿಹ್ವೇಂದ್ರಿಯದ್ವಾರ ರಸವನಾಸ್ವಾದಿಸುವದೇ ರಸಿಲೋಮ. ಸಂಕಲ್ಪವಿಕಲ್ಪಾತ್ಮಕ ಮನಸ್ಸೇ ಬಿಡಾಲನು. ಕ್ರೋಧವೇ ರುದಾಗ್ರನು. ಈ ವೃತ್ತಿಗಳು ದೈವೀಸಂಪತ್ತುಳ್ಳ ಮುಮುಕ್ಷುಗಳೆಂಬ ದೇವತೆಗಳನ್ನು ಪೀಡಿಸಲು, ಆಗ ಜ್ಞಾನಶಕ್ತಿಸ್ವರೂಪನಾದ ಗುರುವೆಂಬ ದೇವಿಗೆ ಶರಣು ಹೋಗಲು, ಆ ದೇವಿಯು ಆ ವೃತ್ತಿಗಳೆಂಬ ರಾಕ್ಷಸರನ್ನುಲಯಪಡಿಸಲು, ಮುಮುಕ್ಷುಗಳೆಂಬ ದೇವತೆ

ಗುರುಕೃಪಾಸಂಪಾದನೆ

    ಶ್ರೀ ಶೇಷಾಚಲಸಾಧುಗಳಿಗೆ ಶ್ರೀ ಶೃಂಗೇರಿಜಗದ್ಗುರುಗಳವರು ಅನುಗ್ರಹ ಮಾಡಿದ ವಿಚಾರವು 'ಆನಂದವನ' ಮಹಾಸಂಪುಟದಲ್ಲಿನ ಒಂದು ಲೇಖನದಲ್ಲಿ ವಿಸ್ತಾರವಾಗಿ ನಿರೂಪಿಸಲ್ಪಟ್ಟಿದೆ. ಅದರ ಸಾರಾಂಶವು ಹೀಗಿದೆ :-     ಶ್ರೀ ಶೇಷಾಚಲಸದ್ಗುರುಗಳು ಒಬ್ಬ ಯೋಗ್ಯಗುರುಗಳನ್ನು ಹುಡುಕುತ್ತಿದ್ದರು. ಗುರೂಪದೇಶವಿಲ್ಲದೆ ಜ್ಞಾನಸಂಪಾದನೆಯಿಲ್ಲ-ಎಂಬುದನ್ನು ಜಗತ್ತಿಗೆ ತೋರಿಸಬೇಕಾಗಿತ್ತು. ಶ್ರೀ ಶಂಕರಭಗವತ್ಪಾದರಿಗಿಂತಲೂ ಜ್ಞಾನೋಪದೇಶಕ್ಕೆ ಅರ್ಹರಾದ ಗುರುಗಳು ಮತ್ತೆ ಇನ್ನು ಯಾರಿದ್ದಾರು? ಎಂದು ಭಾವಿಸಿ ಶೃಂಗೇರಿ ಕ್ಷೇತ್ರಕ್ಕೆ ಪ್ರವಾಸವನ್ನು ಕೈಗೊಂಡು ಬಂದು ಜಗದ್ಗುರುಗಳನ್ನು ದರ್ಶನಮಾಡಿ ಕೆಲವು ಕಾಲ ಅವರ ಕೃಪಾನುಗ್ರಹಕಾಂಕ್ಷಿಗಳಾಗಿ ಅಲ್ಲಿಯೇ ನಿಂತರು. ತಮ್ಮ ನಿಯಮದಂತೆ ಮಧುಕರಿಭಿಕ್ಷಾನ್ನವನ್ನೇ ಕೈಗೊಂಡಿದ್ದರು. ಮಠದಲ್ಲಿ ಊಟ ಮಾಡುತ್ತಿರಲಿಲ್ಲ ಆದರೆ ಗುರುಗಳು ಭಿಕ್ಷೆಯನ್ನು ಸ್ವೀಕರಿಸಿ ಕೈತೊಳೆಯಲು ಹೊರಗೆ ಬರುವ ಸಮಯವನ್ನೇ ಕಾಯುತ್ತಿದ್ದು ಅವರು ಕೈಕಾಲುಗಳನ್ನು ತೊಳೆದುಕೊಂಡು ಒಳಕ್ಕೆ ಹೋದ ಅನಂತರ ಆ ನೀರನ್ನು ತಲೆ-ಮೈಗೆಲ್ಲ ಪ್ರತಿದಿನವೂ ಸವರಿಕೊಳ್ಳುತ್ತಿದ್ದರು. ಮೂರು ತಿಂಗಳ ಕಾಲ ಹೀಗೆ ಮಾಡಿದರೂ ಇನ್ನೂ ಗುರುಕರಪೆಯಾಗಲಿಲ್ಲವಲ್ಲ ಎಂದು ಯೋಚಿಸುತ್ತಿರುವಷ್ಟರಲ್ಲಿ ಸರ್ವಜ್ಞರಾದ ಗುರುಗಳು ಇದನ್ನರಿತುಕೊಂಡು ಒಂದು ದಿನ ಅರ್ಧಗಂಟೆ ಮುಂಚೆಯೇ ಕಾಲುತೊಳೆಯಲು ಹೊರಬಂದವರು ಸಾಧುಗಳನ್ನು ಕಂಡು "ಈ ದಿನ ನೀನು ನಮ್ಮೊಡನೆ ಸಹಪಂಕ್ತಿ ಭೋಜನಕ್

ಗುರುಪೂರ್ಣಿಮೆಯ ತತ್ತ್ವ

ಯಸ್ಮಾತ್ ಪರತರಂ ನಾಸ್ತಿ ನೇತಿ ನೇತೀತಿ ವೈ ಶ್ರುತಿಃ | ಮನಸಾ ವಚಸಾ ಚೈವ ಸರ್ವದಾರಾಧಯೇದ್ ಗುರುಮ್ ||     ಗುರುಗೀತೆಯ ಈ ಉಪದೇಶವು ಸರ್ವರಿಗೂ ಮನನೀಯವಾಗಿದೆ. ಮಾನವನಿಗೆ ಹುಟ್ಟಿನಿಂದ ಜೀವಿತಕಾಲವು ಪೂರ ಗುರುವಿನ ಅವಶ್ಯಕತೆ ಇದೆ. ತಾನು ಎಲ್ಲವನ್ನೂ ತಿಳಿದು, ಬೇರೊಬ್ಬರು ತನ್ನನ್ನು ಗುರುವೆಂದು ಗೌರವಿಸಿದರೂ ಸಂಬೋಧಿಸಿದರೂ ಪ್ರಾಜ್ಞನಾದವನು ನಾಚಿಕೆ ಪಟ್ಟುಕೊಳ್ಳುತ್ತಾನೆ. ಏಕೆಂದರೆ ಕಲಿಯಬೇಕಾದದ್ದು ಆಪಾರವಾಗಿದ್ದರೂ ಜನರು ನನ್ನನ್ನೇಕೆ ಗುರುವೆಂದು ಸಂಬೋಧಿಸುತ್ತಾರೆ? ನನಗೇಕೆ ನಮಸ್ಕರಿಸುತ್ತಾರೆ? ಎಂಬಿದೇ ಅವನ ಅಭಿಪ್ರಾಯವಾಗಿರುತ್ತದೆ. ಇದು ಸರಿ ನಮ್ರನಾಗುವದರಿಂದಲೇ ಉನ್ನತಿಯನ್ನು ಹೇಗೆ ಫಲಭರಿತವಾದ ಗಿಡಗಳು ಬಗ್ಗುವವೋ, ಹಾಗೆ ಬಗ್ಗುವದರಿಂದಲೇ ಅವು ಜನರಿಗೆ ಪ್ರಿಯವಾಗುವವೋ ಹಾಗೆ - ಮಾನವನೂ ಗೌರವವನ್ನು ಪಡೆಯುತ್ತಾನೆ. ಗೌಡಪಾದರೂ ತಮ್ಮ ಕಾರಿಕೆಗಳಲ್ಲಿ 'ವಿಪ್ರಾಣಾಂ ವಿನಯೋ ಹ್ಯೇಷಃ' (ವಿನಯವೆಂಬಿದೇ ವಿಪ್ರತ್ವದ ಗುರುತು) ಎಂದಿದ್ದಾರೆ. ಕನ್ನಡದಲ್ಲಿಯೂ ಇದೇ ಅರ್ಥದಲ್ಲಿ 'ತುಂಬಿದ ಕೊಡ ತುಳುಕುವದಿಲ್ಲ' ಎಂಬ ಗಾದೆಯನ್ನು ಬಳಸುತ್ತಾರೆ. ಇಂಥ ವ್ಯಕ್ತಿಗಳು ಕೇವಲ ವ್ಯಕ್ತಿಗಳಲ್ಲ ಭಗವಂತನ ವಿಭೂತಿಗಳೆನಿಸಿದ ಶಕ್ತಿಗಳು - ಎಂದು ತಿಳಿಯಬೇಕು. ಇಂಥವರನ್ನು ಗುರುತಿಸುವವರೂ ಸಹ ಅಷ್ಟೇ ದೊಡ್ಡವರಾಗಿತ್ತಾರೆ. ಈ ವರ್ಗದ ಮಹಾತ್ಮರನ್ನೆಲ್ಲ 'ಗುರು' ಎಂಬ ಪವಿತ್ರ ನಾಮದಿಂದ ನಮ್ಮ ಹಿಂದೂಸಂಸ್ಕೃತಿಯಲ್ಲಿ ಕರೆಯಲಾಗಿದೆ

ಶಾಕ್ತ ತಂತ್ರಗಳು

ಭಾರತೀಯ ಸಂಸ್ಕೃತಿಗೆ ತಂತ್ರವು ಕೊಡುಗೆ ನೀಡಿರುವುದು ಅನೇಕ ಮುಖಗಳಲ್ಲಿ ಆದರೆ ವಿಶೇಷವಾಗಿ ಶಾಕ್ತಮತಕ್ಕೂ ತಂತ್ರಕ್ಕೂ ಇರುವ ಸಂಬಂಧ ತೀವ್ರ ಸ್ವರೂಪದ್ದು. ಭಾರತದಲ್ಲಿ ಶಕ್ತಿಪೂಜೆ ವೈದಿಕ (ವೇದ ಮೂಲ)ವೋ ಅಲ್ಲವೋ ಎಂಬದರ ಬಗ್ಗೆ ವಿದ್ವಾಂಸರಲ್ಲಿ ಭಿನ್ನ ಮತಗಳಿವೆ. “ಭಾರತೀಯ ತಾಂತ್ರಿಕ ಗ್ರಂಥಗಳೆಲ್ಲವೂ ವೇದ ಪ್ರಾಮಾಣ್ಯವನ್ನು ಅಂಗೀಕರಿಸಿವೆ’’ ಎಂಬ ಶ್ರೀಕಂಠಶಾಸ್ತ್ರೀಯವರ ಮಾತು ಚಚ್‌ಪದ (೧೯೭೫, ಪುಟ ೧೭೦). ಭಾರತದಂತೆ ವಿದೇಶದ ಸಂಸ್ಕೃತಿಗಳಲ್ಲೂ ಶಕ್ತಿಯನ್ನು ತಾಯಿ ಎಂದು ಸ್ವೀಕರಿಸಿ ಪೂಜಿಸುವ ಪದ್ಧತಿಯಿದೆ. ಸುಮೇರಿಯ, ಅಸ್ಸೀರಿಯ, ಫ್ರಿಜಿಯ, ಈಜಿಪ್ಟ್, ಸಿರಿಯಾ ದೇಶಗಳಲ್ಲಿನ ಶಕ್ತಿಪೂಜೆಯಲ್ಲಿ ದ್ವೈತಭಾವ ಮತ್ತು ದೇಹದ ಪುನರುತ್ಥಾನ ತತ್ವಗಳಿಗೆ ಸ್ಥಾನವಿದೆ. ಭಾರತದ ಶಾಕ್ತಮತದಲ್ಲಿ ಮುಖ್ಯವಾಗಿ ಕರ್ಮಷ ಪುನರ್ಜನ್ಮಗಳಿಗೆ ಹೆಚ್ಚಿನ ಸ್ಥಾನವಿದೆ (ಅದೇ, ೧೯೭೫, ಪುಟ ೧೭೦-೭೧). ವೈದಿಕ ಮತದಲ್ಲಿ ಶಕ್ತಿಪೂಜೆ ಮತ್ತು ತಂತ್ರ ಸಾಹಿತ್ಯ ಮುಖ್ಯವಾಗಿ ಬೆಳೆದಿರುವುದು ಶ್ರೀ ಚಕ್ರ ಪೂಜೆ ಮತ್ತು ದೇವಾಲಯ ನಿರ್ಮಾಣ, ಶಿಲ್ಪಶಾಸ್ತ್ರದ ಸಂದಭಲ್‌ಲಿ. ವೈದಿಕ ವಾಙ್ಮಯದಲ್ಲಿ ಮಂತ್ರ, ಯಂತ್ರ, ನ್ಯಾಸ, ದೀಕ್ಷೆ, ಶ್ರೀ ಚಕ್ರ ಮೊದಲಾದ ಅಂಶಗಳಿಗೆ ಮಹತ್ವ ಹೆಚ್ಚು. ಬೌದ್ಧ ಮತ್ತು ವೈದಿಕರಲ್ಲಿ ಮಂಡಲಗಳಿಗೆ ಸಾಧನೆಯಲ್ಲಿ ಮತ್ತು ಚಿತ್ರಕಲೆಯಲ್ಲಿ ವಿಶೇಷ ಸ್ಥಾನವಿದೆ. ಶ್ರೀ ಚಕ್ರ ಒಂದು ಯಂತ್ರವಾಗಿದ್ದು ಅದರ ಮಧ್ಯದಲ್ಲಿರುವ ಬಿಂದುವಿನ ಮಂಡಲ/ವೃತ್ತಕ್ಕೆ

ಆಶಾಡ ಮಾಸದ ಮಹತ್ವ:

ಆಶಾಡ ಮಾಸದಲ್ಲಿ ತಾಪಿ ನದಿಯಲ್ಲಿ ಸ್ನಾನ ಮಾಡಬೇಕು ಎಂದು ಶಾಸ್ತ್ರದಲ್ಲಿದೆ. ಆದರೆ ಈಗ ತಾಪಿ ಎನ್ನುವ ನದಿಯೇ ಇಲ್ಲಾ. ಸ್ನಾನ ಮಾಡುವ ಜಲದಲ್ಲಿಯೇ ತಾಪಿ ನದಿಯ ಚಿಂತನೆ ಮಾಡಿ ಸ್ನಾನಿಸಬೇಕು. ಮಹಾ ನದಿಯಾದ ತಾಪಿಯು ಸೂರ್ಯನ ಮಗಳಾಗಿದ್ದು ಸರ್ವ ಗುಣ ಸಂಪನ್ನಳು ಆಗಿದ್ದಾಳೆ. ಪುಣ್ಯಪ್ರದವಾದ ಜಲವುಳ್ಳ ತಾಪೀಂದು. ಸರ್ವರ ಪಾಪಗಳನ್ನೂ ಕಳೆಯುವಾಗ ಅವಳಿಗೆ ಅದೆಂತು ದೋಶವು ಬರುವುದು? ಕೃತಯುಗದ ಆದಿಯಲ್ಲಿ ಇವಳ ಜನ್ಮವು ಆಶಾಡ ಮಾಸದಲ್ಲಿ ಆದ ಪ್ರಯುಕ್ತ ಆ ಮಾಸದಲ್ಲಿ ತಾಪಿ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪ ನಾಶವಾಗುವುದು. ಹಿಂದಕ್ಕೆ ತಾಪಿ ನದಿಯೊಂದಿಗೆ ದೇವ ನದಿಯಾದ ಗಂಗೆಯ ಸ್ಪರ್ಧೆಯು ಏರ್ಪಟ್ಟಾಗ ಗುಣಗಳಿಂದ ಅಧಿಕವಾದ ಪವಿತ್ರ ತಾಪಿ ನದಿಯು ಗಂಗೆಗಿಂತಲೂ ಶ್ರೇಷ್ಠವಾಗಿರುವವಳೆಂದು ನಿರ್ಣಯವಾಗಿತ್ತು. ಅದೇ ಸಂಧರ್ಭದಲ್ಲಿ ಒಬ್ಬ ಬ್ರಾಹ್ಮಣನು ಗಂಗೆಯು ತನ್ನ ಪಾಪವನ್ನು ಕಳೆಯುವಳೆಂದು ತಿಳಿದು ಗಂಗಾ ಸ್ನಾನಕ್ಕೆ ಬಂದನು. ಅಲ್ಲಿರುವಾಗ ಗಂಗೆಗಿಂತಲೂ ತಾಪಿ ನದಿಯು ಹೆಚ್ಚಿನ ಮಹಾತ್ಮೆವುಳ್ಳದ್ದಾಗಿದೆ ಎಂದು ತಿಳಿದು ಗಂಗೆಯಲ್ಲಿ ಸ್ನಾನ ಮಾಡದೇ ಆ ಬ್ರಾಹ್ಮಣನು ತಾಪಿ ನದಿಗೆ ಹೋಗಿ, ಅದನ್ನೇ ಆಶ್ರಯಿಸಿದನು. ಅಲ್ಲಿ ಮೂರು ದಿನ ನದೀ ಸ್ನಾನ ಮಾಡುವ ಮಾತ್ರದಿಂದ ಅವನ ಚಾಂಡಾಲತ್ವವೂ ಬ್ರಹ್ಮ ಹತ್ಯೆಯೂ ಸಂಪೂರ್ಣ ನಾಶವಾಯಿತು. ಅಂದಿನಿಂದ ಮುನಿಗಳೆಲ್ಲರೂ ಜಹ್ನುವಿನ ಮಗಳಾದ ಗಂಗೆಯಲ್ಲಿ ಸ್ನಾನ ಮಾಡುವುದನ್ನು ಬಿಟ್ಟು ಸೂರ್ಯಪುತ್ರುಯಾದ ತಾಪಿಯನ್ನು ಸ್ತುತಿಸು