Posts

Showing posts from September, 2016

ದೇವಿ ಸ್ಮರಣೆ

    ಪುರಾಣಗಳ ಅಭಿವ್ಯಕ್ತಿ ಮೊದಲು ವೇದಗಳಲ್ಲಿಯೇ ಆಗಿದೆ ಛಾಂದೋಗ್ಯೋಪನಿಷತ್ತಿನಲ್ಲಿ ಸನತ್ಕುಮಾರನಾರದ ಸಂವಾದದಲ್ಲಿ "ಋಗ್ವೇದಂ ಭಗವೋಧ್ಯೇಮಿ. ಇತಿಹಾಸಂ ಪುರಾಣಂ ಪಂಚಮಂ ವೇದಾನಾಂ ವೇದಮ್" || (ಛಾಂ 7-1-2)ರಲ್ಲಿ ಅಕಾಲದಲ್ಲಿ ಪ್ರಚಲಿತವಿದ್ದು ಶಾಸ್ತ್ರಗಳು ನಿರ್ದಿಷ್ಟವಾಗಿವೆ. "ಋಚಃ ಸಾಮಾನಿ ಛಂದಾಂಸಿ ಪುರಾಣಂ ಯಜುಷಾಸಹ|" (ಉಚ್ಛಿಷ್ಟನೆಂಬ ಋಷಿಯಿಂದ ನಾಲ್ಕು ವೇದಗಳ ನಂತರ ಪುರಾಣಗಳು ಉತ್ಪನ್ನವಾದವೆಂದು ಉಕ್ತವಾಗಿದೆ. ಆದರೆ ಮೂಲಪುರಾಣಗಳು ಈಗ ಉಪಲಬ್ದವಿಲ್ಲ. ಇವು ಯಾವದೋ ಒಂದು ಶತಮಾನಗಳ ನಿರ್ದಿಷ್ಟ ರಚನೆಗಳೂ ಅಲ್ಲ. ಯಾವಾಗ ವೇದಗಳ ಭಾಷೆಯು ಸಾಧಾರಣ ಜನತೆಗೆ ಅರ್ಥವಾಗದಾಯಿತೋ, ಆಗ ಅದರ ತತ್ತ್ವಗಳನ್ನು ಜನತೆಗೆ ತಿಳಿಸಲು ಪುರಾಣಗಳ ರಚನೆಯಾಯಿತು. ನಮಗೆ ಅರ್ಥವಾಗುವ ಭಾಷೆಯಲ್ಲಿ ರಚಿತವಾಗಿರುವದರಿಂದ ಅವು ಬೇಗ ನಮ್ಮ ಹೃದಯಕ್ಕೆ ಮುಟ್ಟುತ್ತವೆ. ಧಾರ್ಮಿಕದೃಷ್ಟಿಯಿಂದ ಪುರಾಣಗಳು ಅತ್ಯಂತ ಮಹತ್ತ್ವವಾದವುಗಳು ಆದ್ದರಿಂದಲೇ ಮಹಾಭಾರತದಲ್ಲಿ. ಇತಿಹಾಸ ಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್ | ಭಿಭೇತ್ಯಲ್ಪಶ್ರುತಾದ್ವೇದೋ ಮಾಮಯಂ ಪ್ರಹರಿಷ್ಯತಿ || ಎಂದಿರುವದು. ಆದ್ದರಿಂದ ಈ ಗ್ರಂಥಗಳ ಅಧ್ಯಯನ ಅತ್ಯಂತ ಅವಶ್ಯಕವಾಗಿದೆ.     ಪುರಾಣಗಳು ಮಹರ್ಷಿಗಳಿಂದ ಪರಂಪರೆಯಾಗಿ ನಮಗೆ ಬಂದು ಸೇರಿದ ಆಸ್ತಿ ಅವುಗಳಲ್ಲಿ ಭಾಗವತವು ತುಂಬ ಆದರಕ್ಕೆ ಪಾತ್ರವಾದ ಗ್ರಂಥ ಭಾಗವತದ ವಿಭಿನ್ನಸ್ವರೂಪದ ಎರಡು ಗ್ರಂಥಗಳು ದೊರೆಯುತ್ತವೆ. ಅಷ್ಟಾದಶಪುರಾ

ನವರಾತ್ರೆಯ ಮಹತ್ತ್ವ

    ನವರಾತ್ರೆಯಲ್ಲಿ ಜಪ, ಪಾರಾಯಣ, ಪೂಜೆ ಮುಂತಾದವುಗಳ ಅನುಷ್ಠಾನವನ್ನು ಮಾಡದೆ ಇರುವವರು ಆಸ್ತಿಕರಾದ ಸನಾತನಧರ್ಮಿಗಳಲ್ಲಿ ಬಹು ವಿರಳ. ಈ ದಿನಗಳಲ್ಲಿ ನಡೆಯಿಸುವ ಕರ್ಮವು ವೀರ್ಯವತ್ತರವಾಗುವದೆಂಬ ನಂಬಿಕೆಯು ನಮ್ಮಲ್ಲಿ ಅನೇಕರಿಗೆ ಇರುತ್ತದೆ. ದಿನಶುದ್ಧಿಯ ವಿಮರ್ಶೆಯನ್ನು ಕೂಡ ಮಾಡದೆ ವಿಜಯದಶಮಿಯ ದಿನ ಕೆಲವು ಕರ್ಮಗಳನ್ನು ಮಾಡಬಹುದೆಂಬ ಶ್ರದ್ಧೆಯು ಹಲವರಲ್ಲಿ ಬೇರೂರಿಕೊಂಡು ಬಿಟ್ಟಿರುತ್ತದೆ. ನವರಾತ್ರೆಯ ರಾಮನಿಗೆ ಪ್ರಿಯ ದರ್ಶನವನ್ನು ತಂದಿತು. ಅರ್ಜುನನಿಗೆ ಪೂರ್ಣವಿಜಯಕ್ಕೆ ಸೂಚಕವಾದ ಮೊಟ್ಟಮೊದಲನೆಯ ಗೆಲುವನ್ನು ಕೊಟ್ಟಿತು - ಎಂಬರ್ಥದ ಶ್ಲೋಕವನ್ನು ಜನರು ಈಗಲೂ ಹೇಳಿಕೊಳ್ಳುವರು. ರಾಮಾಯಣಭಾರತಗಳ ಧರ್ಮಯುದ್ಧದಿಂದ ಆದ ಜಗನ್ಮಂಗಲವನ್ನು ನೆನಪಿಗೆ ತಂದುಕೊಳ್ಳುವದಕ್ಕೆಂದು ಈಗಲೂ ಆಯುಧಪೂಜೆ, ಬನ್ನಿಯನ್ನು ಮುಡಿಯುವದು ಮುಂತಾದ ಆಚಾರಗಳು ನಡೆವಳಿಕೆಯಲ್ಲಿರುತ್ತವೆ. ಶರನ್ನವರಾತ್ರಿಯು ರಾಜರಿಗೆ, ಅದರಲ್ಲಿಯೂ ನಮ್ಮ ಕರ್ನಾಟಕದ ರಾಜರುಗಳಿಗೆ ಒಂದು ಗೆಲುವಿನ ಹಬ್ಬವಾಗಿತ್ತು.     ಧಾರ್ಮಿಕ ದೃಷ್ಟಿಯಿಂದಲೂ ನವರಾತ್ರೆಗೆ ಹೆಚ್ಚಿನ ಮಹತ್ತ್ವವಿರುತ್ತದೆ. ತಂತ್ರಶಾಸ್ತ್ರದಲ್ಲಿ ನಂಬಿಕೆಯಿರುವವರು ಇದನ್ನು ದೇವೀನವರಾತ್ರೆಯೆಂದು ಕರೆಯುತ್ತಾರೆ. ಪರಮೇಶ್ವರನ ಶಕ್ತಿಯಾದ ದೇವಿಯನ್ನು ಆವಾಹನೆಮಾಡಿ ಪೂಜಿಸುವ ವಿಧಾನವು ಈ ನವರಾತ್ರೆಯಲ್ಲಿ ವಿಶೇಷವಾದ ಆಚರಣೆಯಲ್ಲಿರುತ್ತದೆ. ಪರಮೇಶ್ವರನು ತನ್ನ ಸ್ವರೂಪದಲ್ಲಿರುವದಲ್ಲದೆ ತನ್ನ ಅಚಿಂತ್ಯವಾದ ಶಕ್ತಿಯಿಂದ

ದಾನಗಳ ಫಲ (ಸತ್ಪಾತ್ರರಿಗೆ)

    ನಮ್ಮ ವೈದಿಕ ಸಂಸ್ಕೃತಿಯಲ್ಲಿ ದಾನಕ್ಕೆ ವಿಶಿಷ್ಟವಾದ ಮಹತ್ವವಿದೆ. ಶ್ರುತಿಯಲ್ಲಿ ಸತ್ಯ, ತಪಸ್ಸು, ದಮ ಎಂಬುದಾಗಿ ಜ್ಞಾನ ಸಾದನಗಳನ್ನು ನಿರೂಪಣೆ ಮಾಡುತ್ತಾ ದಾನದ ಬಗ್ಗೆ ಈ ರೀತಿಯಾಗಿ ಹೇಳಿದೆ. ದಾನಂ ಯಜ್ಞನಾಂ ವರೂಥಂ ದಕ್ಷಿಣಾ | ಲೋಕೇ ದಾತಾರಗ್ಂ ಸರ್ವಭೂತಾನ್ಯುಪ ಜೀವನ್ತಿ | ದಾನೇನಾರಾತೀರಪಾನುದಂತ | ದಾನೇನ ದ್ವಿಷಂತೋ ಮಿತ್ರಾ ಭವನ್ತಿ | ದಾನೇ ಸರ್ವಂ ಪ್ರತಿಷ್ಠಿತಮ್ | ತಸ್ಮಾದ್ದಾನಂ ಪರಮಂ ವದನ್ತಿ | ಯಜ್ಞಗಳ ಸಂಬಂಧಿಯಾದ ಗೋಹಿರಣ್ಯಾದಿದಕ್ಷಿಣೆಯು ಶ್ರೇಷ್ಠವಾದ ದಾನವಾಗಿದೆ. ಲೋಕದಲ್ಲಿಯೂ ಕೂಡ ದಾನಶೀಲಮನುಷ್ಯನನ್ನು ಮೂಢ-ವಿದ್ವಾಂಸರೆನ್ನದೇ ಎಲ್ಲರೂ ಆಶ್ರಯಿಸುತ್ತಾರೆ (ತಮಗೆ ಅಡ್ಡಬಂದ) ಶತ್ರುಗಳನ್ನು ಕೂಡ ದಾನದಿಂದ ದೂರ ತಳ್ಳುತ್ತಾರೆ. ದಾನದಿಂದ ಪ್ರಬಲ ಶತ್ರುಗಳೂ ಮಿತ್ರರಾಗುತ್ತಾರೆ. ದಾನದಲ್ಲಿ ಎಲ್ಲವೂ ನೆಲೆಗೊಂಡಿದೆ. ಆದ್ದರಿಂದ ದಾನವನ್ನು (ಜ್ಞಾನ ಸಾಧನೆಗಳಲ್ಲಿ) ಪರಮ ಸಾಧನವನ್ನಾಗಿ ಹೇಳುತ್ತಾರೆ.     ಮನುಸ್ಮೃತಿಯ 4ನೇ ಅಧ್ಯಾಯದಲ್ಲಿ ಯಾವ-ಯಾವ ವಸ್ತುಗಳ ದಾನದಿಂದ ಯಾವ ಯಾವ ಫಲಗಳನ್ನು ಹೊಂದುತ್ತಾನೆಂದು ತಿಳಿಸುವುದಕ್ಕೂ ಮೊದಲು ಹೀಗೆ ಹೇಳಿದ್ದಾರೆ. ದಾನಧರ್ಮಂ ನಿಷೇವೇತ ನಿತ್ಯಮೈಷ್ಟಿಕ ಪೌರ್ತಿಕಮ್ | ಪರಿತುಷ್ಟೇನ ಭಾವೇನ ಪಾತ್ರಮಾಸಾಧ್ಯ ಶಕ್ತಿತಃ || (4-227ಮ.ಸ್ಮೃ) ಯಾವಾಗಲೂ ಇಷ್ಟಾಪೂರ್ತರೂಪವಾದ ದಾನವೆಂಬ ಧರ್ಮವನ್ನು ಸರಿಯಾದ ಪಾತ್ರವನ್ನು ಸಮೀಪಿಸಿ ಯಥಾಶಕ್ತಿಯಾಗಿ ಸಂತೋಷದಿಂದ ಮಾಡಬೇಕು. ಯತ್ಕಿಂಚಿದಪಿ ದಾತವ್ಯ

ಸ್ಕಂದಪುರಾಣ ಅಧ್ಯಾಯ 21

ಸನತ್ಕುಮಾರ ಉವಾಚ | ನಿರ್ಗತೋಥ ತತೋ ನಂದೀ ಜಗಾಮ ಸರಿತಾಂ ವರಾಮ್ | ಭುವನಾಮಿತಿ ವಿಖ್ಯಾತಾಂ ಸರ್ವಲೋಕಸುಖಾವಹಾಮ್ || ತಾಂ ಪ್ರವಿಶ್ಯ ತತೋ ಧೀಮಾನೇಕಾಗ್ರೋ ಹ್ರದಮಾಸ್ಥಿತಃ | ಸ ಜಜಾಪ ತದಾ ರುದ್ರಾನ್ಮೃತ್ಯೋರ್ಭೀತಃ ಸಮಾಹಿತಃ || ಜಪತಾ ತೇನ ತತ್ರೈವ ತತ್ಪರೇಣ ತದಾಶಿಷಾ | ಕೋಟಿರೇಕಾ ಯದಾ ಜಪ್ತಾ ತದಾ ದೇವಸ್ತುತೋಷ ಹ || ತಮಾಗತ್ಯಾಹ ಭಗವಾಂಛರ್ವ ಉಗ್ರಃ ಕಪರ್ದಿಮಾನ್ | ನಂದಿಂಸ್ತುಷ್ಟೋಸ್ಮಿ ಭದ್ರಂ ತೇ ವರಂ ವೃಣು ಯಥೇಪ್ಸಿತಮ್ || ಉವಾಚ ಪ್ರಣತೋ ಭೂತ್ವಾ ಪ್ರಣತಾರ್ತಿಹರಂ ಹರಮ್ | ದ್ವಿತೀಯಾಂ ಜಪ್ತುಮಿಚ್ಛಾಮಿ ಕೋಟಿಂ ಭಗವತಾಂ ವಿಭೋ | ಏವಮಸ್ತ್ವಿತಿ ದೇವೋಪಿ ಪ್ರೋಜ್ಯಾಗಚ್ಛದ್ಯಥಾಗತಮ್ || ಸನತ್ಕುಮಾರ ಉವಾಚ | ಸೋವತೀರ್ಯ ತತೋ ಭೂಯಃ ಪ್ರಯತಾತ್ಮಾ ತಥೈವ ಹ | ಜಜಾಪ ಕೋಟಿಮನ್ಯಾಂ ತು ರುದ್ರಮೇವಾನುಚಿಂತಯನ್ || ದ್ವಿತೀಯಾಯಾಂ ತತಃ ಕೋಟ್ಯಾಂ ಸಂಪೂರ್ಣಾಯಾಂ ವೃಷಧ್ವಜಃ | ಅಭ್ಯಾಜಗಾಮ ತಂ ಚೈವ ವರದೋಸ್ಮೀತ್ಯಭಾಷತ || ಸ ಪ್ರಾಹ ಭಗವನ್ಕೋಟಿಂ ತೃತೀಯಾಮಪಿ ಕಾಲಹನ್ | ಜಪ್ತುಮಿಚ್ಛಾಮಿ ದೇವೇಶ ತ್ವತ್ಪ್ರಸಾದಾದಹಂ ವಿಭೋ || ಏವಮಸ್ತ್ವಿತಿ ಭೂಯೋಪಿ ಭಗವನ್ಪ್ರತ್ಯುವಾಚ ಹ | ಉಕ್ತ್ವಾ ಜಗಾಮ ಸ್ವಂ ವೇಶ್ಮ ದೇವ್ಯಾ ಸಹ ಮಹಾದ್ಯುತಿಃ || ತತಸ್ತೃತೀಯಾಂ ರುದ್ರಾಣಾಂ ಕೋಟಿಮನ್ಯಾಂ ಜಜಾಪ ಹ | ಯುಗಾಂತಾದಿತ್ಯಸಂಕಾಶಸ್ತತ ಸಮಭವದ್ದ್ವಿಜಃ || ತಸ್ಯ ಕೋಟೀತ್ರಯೇ ವ್ಯಾಸ ಸಮಾಪ್ತೆ ಜ್ವಲನತ್ವಿಷಃ | ಯುಗಾಂತಾದಿತ್ಯಸಂಕಾಶಸ್ತತಃ ಸಮಭವದ್ದ್ವಿಜಃ || ತಸ್ಯ ಕೋಟೀತ್ರಯೇ

ಪಿತೃಪಕ್ಷ

    ಭಾದ್ರಪದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯುತ್ತಾರೆ. ಈ ಪಕ್ಷದಲ್ಲಿ ಶ್ರಾದ್ಧವನ್ನು ಮಾಡುವದೂ ಪಿತೃತರ್ಪಣವನ್ನು ಅನುಷ್ಠಿಸುವದೂ ಪಿತೃಗಳಿಗೆ ತೃಪ್ತಿಯನ್ನುಂಟುಮಾಡುತ್ತದೆ ಎಂದು ಹಿಂದುಗಳ ನಂಬಿಕೆ. ಪೌರಾಣಿಕ ನಿದರ್ಶನ ಮಹಾಭಾರತದ ನಾಯಕರಲ್ಲಿ ಒಬ್ಬನಾದ ಕರ್ಣ, ಯುದ್ಧದಲ್ಲಿ ಅರ್ಜುನನಿಂದ ಹತನಾದ. ದೇವದೂತರು ಈತನನ್ನು ಸ್ವರ್ಗಲೋಕಕ್ಕೆ ಕರೆದೊಯ್ಯುವಾಗ ದಾರಿ ಮಧ್ಯೆ ಈತನಿಗೆ ತಿನ್ನಲು ಏನೂ ಸಿಗುವುದಿಲ್ಲ. ಬದಲಾಗಿ ಎಲ್ಲೆಲ್ಲೂ ನೋಡಿದರೂ ಬೆಳ್ಳಿ, ಬಂಗಾರ, ವಜ್ರ ವೈಡೂರ್ಯಗಳು ಮಾತ್ರ ಕಾಣಸಿಗುತ್ತವೆ. ಇದರಿಂದ ಕರ್ಣ ಮನನೊಂದು ಮೃತ್ಯು ದೇವ ಯಮನನ್ನು ಪ್ರಾರ್ಥಿಸುತ್ತಾನೆ. ಕರ್ಣನ ಪ್ರಾರ್ಥನೆಗೆ ಯಮ ಪ್ರತ್ಯಕ್ಷನಾಗಿ ಭಾದ್ರಪದ ಮಾಸದ ಮಹಾಲಯ ಪಕ್ಷದ ದಿನದಂದು ದಾನ ಮಾಡಲು ಹೇಳುತ್ತಾನೆ. ಯಮನ ಆದೇಶದಂತೆ, ಕರ್ಣ ಮತ್ತೆ ಭೂಮಿಗೆ ಹಿಂತಿರುಗಿ ಭಾದ್ರಪದ ಮಾಸದ ಮಹಾಲಯ ಪಕ್ಷದ ದಿನಗಳಲ್ಲಿ ತನ್ನ ಹಿರಿಯರಿಗೆ, ಬಡವರಿಗೆ ಅನ್ನ, ವಸ್ತ್ರದಾನವನ್ನು ಮಾಡುತ್ತಾನೆ. ಇದರಿಂದ ಪಿತೃಗಳು ಸಂತುಷ್ಟರಾಗಿ ಆತನನ್ನು ಹರಸುತ್ತಾರೆ. ಇವರ ಆಶೀರ್ವಾದದಿಂದ ಕರ್ಣ ಯಾವುದೇ ತೊಂದರೆ ಇಲ್ಲದೇ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.     ವೇದಗಳಲ್ಲಿ ದೇವಯಾನ, ಪಿತೃಯಾನ - ಎಂಬ ಎರಡು ಕರ್ಮಗತಿಗಳನ್ನು ವರ್ಣಿಸಿರುತ್ತದೆ. ಉಪಾಸಕರಾದವರು ದೇವಲೋಕಗಳಿಗೆ ಹೋಗಿ ಅಲ್ಲಿ ದೇವತೆಗಳ ಸಾಮಿಪ್ಯ, ಸಾಲೋಕ್ಯ, ಸಾಯುಜ್ಯ - ಎಂಬ ಫಲಗಳನ್ನು ಅನುಭವಿಸುತ್

ಉಮಾ ಮಹೇಶ್ವರ ಸ್ತೋತ್ರಮ್

ನಮಃ ಶಿವಾಭ್ಯಾಂ ನವಯೌವನಾಭ್ಯಾಂ ಪರಸ್ಪರಾಶ್ಲಿಷ್ಟವಪುರ್ಧರಾಭ್ಯಾಮ್ | ನಗೇಂದ್ರಕನ್ಯಾವೃಷಕೇತನಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ || 1 || ನಮಃ ಶಿವಾಭ್ಯಾಂ ಸರಸೋತ್ಸವಾಭ್ಯಾಂ ನಮಸ್ಕೃತಾಭೀಷ್ಟವರಪ್ರದಾಭ್ಯಾಮ್ | ನಾರಾಯಣೇನಾರ್ಚಿತಪಾದುಕಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ || 2 ||  ನಮಃ ಶಿವಾಭ್ಯಾಂ ವೃಷವಾಹನಾಭ್ಯಾಂ ವಿರಿಂಚಿವಿಷ್ಣ್ವಿಂದ್ರಸುಪೂಜಿತಾಭ್ಯಾಮ್ | ವಿಭೂತಿಪಾಟೀರವಿಲೇಪನಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ || 3 ||  ನಮಃ ಶಿವಾಭ್ಯಾಂ ಜಗದೀಶ್ವರಾಭ್ಯಾಂ ಜಗತ್ಪತಿಭ್ಯಾಂ ಜಯವಿಗ್ರಹಾಭ್ಯಾಮ್ | ಜಂಭಾರಿಮುಖ್ಯೈರಭಿವಂದಿತಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ || 4 ||  ನಮಃ ಶಿವಾಭ್ಯಾಂ ಪರಮೌಷಧಾಭ್ಯಾಂ ಪಂಚಾಕ್ಷರೀಪಂಜರರಂಜಿತಾಭ್ಯಾಮ್ | ಪ್ರಪಂಚಸೃಷ್ಟಿಸ್ಥಿತಿಸಂಹೃತಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ || 5 ||  ನಮಃ ಶಿವಾಭ್ಯಾಮತಿಸುಂದರಾಭ್ಯಾಂ ಅತ್ಯಂತಮಾಸಕ್ತಹೃದಂಬುಜಾಭ್ಯಾಮ್ | ಅಶೇಷಲೋಕೈಕಹಿತಂಕರಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ || 6 ||  ನಮಃ ಶಿವಾಭ್ಯಾಂ ಕಲಿನಾಶನಾಭ್ಯಾಂ ಕಂಕಾಳಕಲ್ಯಾಣವಪುರ್ಧರಾಭ್ಯಾಮ್ | ಕೈಲಾಸಶೈಲಸ್ಥಿತದೇವತಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ || 7 ||  ನಮಃ ಶಿವಾಭ್ಯಾಮಶುಭಾಪಹಾಭ್ಯಾಂ ಅಶೇಷಲೋಕೈಕವಿಶೇಷಿತಾಭ್ಯಾಮ್ | ಅಕುಂಠಿತಾಭ್ಯಾಂ ಸ್ಮೃತಿಸಂಭೃತಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ || 8 ||  ನಮಃ ಶಿವಾಭ್ಯಾಂ ರಥವಾಹನಾಭ್ಯಾಂ ರವೀಂದುವ