Posts

Showing posts from October, 2016

ಶ್ರೀ ಧನ್ವಂತರಿ ಸ್ತೋತ್ರಮ್

ನಮಾಮಿ ಧನ್ವಂತರಿಮಾದಿದೇವಂ ಸುರಾಸುರೈರ್ವಂದಿತ ಪಾದಪದ್ಮಮ್ | ಲೋಕೇ ಜರಾರುಗ್ಭಯಮೃತ್ಯು ನಾಶಂ ದಾತಾರಮೀಶಂ ವಿವಿಧೌಷಧೀನಾಂ ||೧|| ಭಾವಾರ್ಥ:-ಯಾವಾತನ ಪಾದಾರವಿಂದಗಳಿಗೆ ದೇವಾದಿದೇವತೆಗಳೂ,ಅಸುರರೂ ನಮಸ್ಕರಿಸುವರೋ ಅಂತಹಾ ಆದಿದೇವನಾಗಿರುವ ಹಾಗೂ ಜಗತ್ತಿನಲ್ಲಿ ರೋಗ,ಮುಪ್ಪುಗಳ ಭಯವನ್ನು ಮತ್ತು ಮರಣ ಭೀತಿಯನ್ನು ದೂರೀಕರಿಸುವ ಅಂತೆಯೇ ವಿವಿಧ ತೆರನಾದ ಔಷಧಿಗಳನ್ನು ಕರುಣಿಸುವ ಸ್ವಾಮಿಯಾಗಿರುವ ಧನ್ವಂತರಿಗೆ ನನ್ನ ಪ್ರಣಾಮಗಳು. ಅರಿ ಜಲಜ ಜಲೂಕಾ ರತ್ನ ಪೀಯೂಷ ಕುಂಭ- ಪ್ರಕಟಿತ ಕರಕಾಂತ: ಕಾಂತ ಪೀತಾಂಬರಾಢ್ಯ: | ಸಿತವಸನ ವಿರಾಜನ್ಮೌಲಿರಾರೋಗ್ಯದಾಯೀ ಶತಮುಖ ಮಣಿವರ್ಣ: ಪಾತು ಧನ್ವಂತರಿರ್ನ: ||೨|| ಭಾವಾರ್ಥ:-ಹಸ್ತಗಳಲ್ಲಿ ಅಮೃತಕಲಶದೊಡನೆ ಜಿಗಣೆ,ಚಕ್ರ,ಶಂಖಗಳನ್ನು ಧರಿಸಿ ಕಾಂತಿಯುತ ಪೀತಾಂಬರವನ್ನುಟ್ಟು, ಶ್ವೇತವಸನದ ರುಮಾಲಿನಿಂದ ಶೋಭಿಸುವ ಶಿರಸ್ಸು ಉಳ್ಳವನಾದ ಶರೀರವು ಇಂದ್ರನೀಲಮಣಿಯ ಬಣ್ಣ ಹೊಂದಿರುವ ಆರೋಗ್ಯದಾಯಿಯಾಗಿರುವ ಧನ್ವಂತರಿ ಸ್ವಾಮಿಯು ನಮ್ಮನ್ನು ರಕ್ಷಿಸಲಿ. ಚಂದ್ರೌಘಕಾಂತಿಂ ಅಮೃತೋರು ಕರೈರ್ಜಗಂತಿ ಸಂಜೀವಯಂತಂ ಅಮಿತಾತ್ಮ ಸುಖಂ ಪರೇಶಮ್ | ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ ಶೀತಾಂಶು ಮಂಡಲಗತಂ ಸ್ಮರತಾತ್ಮ ಸಂಸ್ಥಮ್ ||೩|| ಭಾವಾರ್ಥ:-ಬಹು ಚಂದ್ರರ ಸೌಂದರ್ಯವುಳ್ಳ,ತನ್ನ ಮೋಕ್ಷದಾಯಕವಾಗಿರುವ ಕಿರಣಗಳಿಂದ ಜಗತ್ತನ್ನು ಪುನರ್ಜ್ಜೀವನಗೊಳಿಸುತ್ತಲಿರುವ,ವಿಶಾಲವಾದ ಆತ್ಮಾನುಭೂತಿಯುಳ್ಳ,ಉನ್ನತ ಸ್ವಾಮಿಯಾಗಿರುವ,ಜ್ಞಾನಮುದ್ರೆಯನ್ನು

ದೀಪಾವಳಿಯ ಆತ್ಮಚಿಂತನ

    ತಮಸೋ ಮಾ ಜ್ಯೋತಿರ್ಗಮಯಃ ಇದು ನಮ್ಮ ವೇದಋಷಿಗಳ ನಿರಂತ ಮೊರೆ. ಕತ್ತಲಿನಿಂದ ಬೆಳಕಿನೆಡೆಗೆ ನಮ್ಮನ್ನು ನಡೆಸು ಎಂದು ಅವರು ವೇದಪುರುಷನನ್ನು ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ಜೀವನ ಅನುಭವಕ್ಕೆ ಬಂದಂತೆ, ಕತ್ತಲು ಭೀತಿದಾಯಕ, ಕಾಣಬೇಕಾದ ವಸ್ತುಗಳನ್ನೂ ಕಾಣದಂತೆ ಮುಸುಕಿಬಿಡುತ್ತದೆ - ಇದು ಅಜ್ಞಾನ, ಎದುರಿನಲ್ಲಿಯೇ ಇರುವ ಮರವನ್ನು ಯಾವದೋ ಭೂತದಂತೆ ಭ್ರಮಿಸುವಂತೆ ಮಾಡುತ್ತದೆ - ಇದು ಅಧ್ಯಾಸ. ಒಂದನ್ನು ಮತ್ತೊಂದಾಗಿ ತಿಳಿಯುವಂತೆ ಕಣ್ಣುಕಟ್ಟು ಮಾಡುತ್ತದೆ. ನಮ್ಮ ಹೃದಯವಾಸಿಯೇ ಅದು ತೇಜಃಪುಂಜವೇ ಆದ, ಅಷ್ಟೇಕೆ ನಾವೇ ಆದ ಪರಂಜ್ಯೋತಿಯನ್ನು ನಮ್ಮಿಂದ ಮರೆಮಾಡಿಬಿಡುತ್ತದೆ. ಇದು ಸ್ವಸ್ವರೂಪ ವಿಸ್ಮೃತಿ. ಇಂತಹ ತಮಸ್ಸು ಯಾರಿಗೆ ಪ್ರಿಯ? ಯಾರಿಗೆ ಹಿತ? ಪ್ರಾಯಶಃ ಚೋರರು, ಪರರ ವಿತ್ತಾಪಹಾರಿಗಳು, ಅಸಭ್ಯ-ಅಧರ್ಮಕಾಮಿಗಳು ಕತ್ತಲನ್ನು ಬಯಸಬಹುದು - ಕತ್ತಲಿಗಾಗಿ ಹಾರೈಸಬಹುದಷ್ಟೆ, ಬೆಳಕಿಗಾಗಿ ಕಾತರರಾಗಿರುವವರ ಪಾಲಿಗೆ ತಮಸ್ಸು ಎಂಬ ಅಸುರೀಶಕ್ತಿ - ತಮಸ್ಸು ಅಂಧಕಾಸುರ. ನಮ್ಮನ್ನೇ ನಮ್ಮಿಂದ ಮರೆಸುವ ಮಹಾರಕ್ಕಸ-ಸ್ಯಾಟನ್, ಸೈತಾನ, ಅವನ ಬಲೆಗೆ ಬೀಳವದೇ ನರಕ. ಆ ಅಂಧಃತಮದ ಒಡೆಯ ನರಕಾಸುರ ಅವನನ್ನು ಸಂಹರಿಸಿ ಲೋಕವನ್ನು ಸಂರಕ್ಷಿಸಿದ ಮಹಾವಿಷ್ಣು ಕಾರ್ತಿಕ ಬಹುಳ ಚತುರ್ದಶಿಯಂದು ದೀಪಾವಳಿ ಉತ್ಸವದ ಮೊದಲ ಸಂಭ್ರಮ ಅದು ಮರುದಿನವೇ ಮತ್ತೊಮ್ಮೆ ಅಮಾವಾಸ್ಯೆ ಮತ್ತೆ ಕತ್ತಲು! ಇದು ಲೋಕವ್ಯಾಪಾರ.     ನರಕಾಸುರ ಕಣ್ಣಿಗೆ ಕಂಡ ಅಸುರ. ಪ್ರಾಗ್ಜೋತಿಷಪು

ದೀಪಾವಳಿ-ಗೀತಾಜಯಂತಿ

    ಪ್ರತಿವರ್ಷವೂ ಕಾರ್ತಿಕಮಾಸದಲ್ಲಿ ದೀಪಾವಳಿಯು ಬರುತ್ತದೆ. ಮಾರ್ಗಶೀರ ಮಾಸದಲ್ಲಿ ಗೀತಾಜಯಂತಿಯು ಬರುತ್ತದೆ. ದೀಪಾವಳಿಯನ್ನು ಬಹು ಮಟ್ಟಿಗೆ ಎಲ್ಲರೂ ಅನುಷ್ಠಿಸುತ್ತಾರೆ. ಆಗ್ಗೆ ಅಭ್ಯಂಗನಸ್ನಾನ, ಹೊಸಬಟ್ಟೆಗಳನ್ನು ಉಡುವದು, ಪಟಾಕಿಗಳನ್ನು ಸುಡುವದು, ಬಂಧು-ಮಿತ್ರರೊಡನೆ ಕಲೆತು ಮೃಷ್ಟಾನ್ನಭೋಜನಮಾಡುವದು ಮುಂತಾದವುಗಳನ್ನು ಜನರು ಆಚರಿಸುತ್ತಾರೆ, ಪತ್ರಿಕಾಪ್ರಪಂಚದವರು 'ವಿಶೇಷಾಂಕ'ಗಳನ್ನು ಹೊರಡಿಸಿ ಜನರನ್ನು ಆಕರ್ಷಿಸುತ್ತಾರೆ. ವಿದ್ಯುಚ್ಛಕ್ತಿಯ ವಿವಿಧವಾದ ದೀಫಗಳನ್ನು ಬೆಳಗಿಸಿ ಕೆಲವರು ತಮ್ಮ ಗೃಹಗಳನ್ನೂ ದೇವಾಲಯ- ಸಭಾಮಂದಿರಗಳನ್ನೂ ಅಲಂಕರಿಸುತ್ತಾರೆ. ಆದರೆ ಅನಂತರ ಪ್ರಾಪ್ತವಾಗುವ 'ಗೀತಾಜಯಂತಿ'ಯನ್ನು ಮಾತ್ರ ಎಲ್ಲಿಯೋ ಕೆಲವರು ನಡೆಯಿಸುತ್ತಾರೆ. ಜಹುಜನರಿಗೆ ಗೀತಾಜಯಂತಿ ಎಂಬ ಹಬ್ಬಮೊಂದಿದೆ ಎಂಬುದೇ ತಿಳಿದಿಲ್ಲ. ಪತ್ರಿಕೆಗಳವರು ಎಲ್ಲಾ ವಿಧವಾದ ಜಾಹಿರಾತುಗಳು, ಕಥೆಗಳು, ನಾಟಕ, ವಿಡಂಬನೆ, ರಾಜಕೀಯ, ವರ್ಷಬವಿಷ್ಯ, ಸಿನೆಮ-ಕ್ರೀಡಾಸುದ್ದಿಗಳು ಮುಂತಾದ ವಿಪುಲ ಸಾಹಿತ್ಯವನ್ನು ಪ್ರಕಟಿಸಿ ಪ್ರಚಾರಮಾಡುತ್ತಾರಾದರೂ 'ಯಾವ ವಿಶೇಷಸಂಚಿಕೆಯಲ್ಲೂ - ಅದು ಎಷ್ಟೇ ಗಾತ್ರದ್ದಿರಲಿ ಅರ್ಧ ಪುಟದಷ್ಟು ಕೂಡ ಗೀತೆಯ ವಿಚಾರಗಳಿರುವದಿಲ್ಲ ಅಧ್ಯಾತ್ಮವಿದ್ಯಾಪೀಠಗಳಾದ ಮಠಗಳಲ್ಲಿ ಕೂಡ ವಿನಾಯಕಚತುರ್ಥಿ, ಶಂಕರಜಯಂತಿ, ಶರನ್ನವರಾತ್ರಿ, ಮಧ್ವನವಮಿ, ತಿರುನಕ್ಷತ್ರಗಳಲ್ಲಿ ಉತ್ಸವಗಳು ನಡೆಯುವಂತೆ ಗೀತಾಜಯಂತಿ ಉತ್ಸವವು ವೈಭವದಿಂದ

ಸಂಧ್ಯಾವಂದನೆ

    ಸಂಧ್ಯೆ ಎಂಬುದು ಕಾಲವಾಚಕಶಬ್ದವು. ಹಗಲುರಾತ್ರಿಗಳಂತೆ ಪ್ರತಿದಿನವೂ ಸಂಧ್ಯೆಯು ಬೆಳಗ್ಗೆ ಹಾಗೂ ಸಾಯಂಕಾಲಗಲ್ಲಿ ಪ್ರಾಪ್ತವಾಗುತ್ತಿರುವದು ಮಾನವನ ಆಯುಷ್ಯದಲ್ಲಿ ಅತ್ಯಂತಬೆಲೆಬಾಳುವ ವಸ್ತುವೆಂದರೆ ಕಾಲವು, ಇದನ್ನು ಒಬ್ಬರಿಗೊಬ್ಬರು ಕೊಟ್ಟು ತೆಗೆದುಕೊಳ್ಳುವದು ಕೂಡ ಸಾಧ್ಯವಾಗುವದಿಲ್ಲ ವ್ಯವಹಾರದ ಸಮಯದಲ್ಲಿ ಹಣದ ಕೊರತೆಯಾದರೆ ಬೇರೊಬ್ಬರಿಂದ ಎರವಲು ಪಡೆಯಬಹುದು ಆದರೆ ಕಾಲವು ಸಾಲದೆ ಹೋದರೆ ಬೇರೊಬ್ಬರಿಂದ ತೆಗೆದುಕೊಳ್ಳಲಾದೀತೆ? ಅವಿವೇಕಿಗಳಿಗೆ ಕಾಲದ ಬೆಲೆಯೇ ತಿಳಿದಿರುವದಿಲ್ಲ ವಿವೇಕಿಗಳೆನಿಸಿಕೊಂಡವರಿಗೂ ಕಾಲವನ್ನು ಈ ಪ್ರಪಂಚದ ಸುಖಕ್ಕಾಗಿ ಮಿಸಲಿಡುವಂತೆಯೇ ಸ್ವಲ್ಪಭಾಗವನ್ನಾದರೂ ನಾವು ದೇಹವನ್ನು ಬಿಟ್ಟ ಅನಂತರ ಹೊಂದಬೇಕಾಗಿರವ ಪ್ರಪಂಚದ ಸುಖಕ್ಕಾಗಿ ಮಿಸಲಿಡಬೇಕೆಂಬುದು ಶಾಸ್ತ್ರ-ಗುರುಗಳ ಮಾರ್ಗದರ್ಶನವಿಲ್ಲದೆ ಹೊಳೆಯುವಂತಿಲ್ಲ ಆದ್ದರಿಂದ ನಾವು ಮೊದಲು ಕಾಲದ ಅಮೂಲ್ಯವಾದ ಬೆಲೆಯನ್ನರಿತು ಪ್ರತಿದಿನವೂ ಸ್ವಲ್ಪಹೊತ್ತನ್ನಾದರೂ ನಮ್ಮ ಆತ್ಮಕಲ್ಯಾಣಕ್ಕಾಗಿ ಬಳಸಿಕೊಳ್ಳಲು ಮಿಸಲಿರಿಸಿಕೊಳ್ಳಬೇಕು.     ಕರ್ಮಗಳನ್ನೆಲ್ಲ ನಾವು ಕಾಲನಿಯಮಕ್ಕೆ ಒಳಪಟ್ಟೇ ಮಾಡುವೆವು. ಯಾವ ಕರ್ಮಗಳಿಗೆ ಒಂದು ದಿನವೂ ಬಿಡುವಿರುವದಿಲ್ಲವೋ ಅಂಥವನ್ನು ನಿತ್ಯಕರ್ಮಗಳೆನ್ನಬಹುದು, ಆದರೆ ಆಹಾರಸೇವನೆ, ನಿದ್ರೆ, ಜಲಮಲವಿಸರ್ಜನೆ - ಮುಂತಾದವು ಪ್ರತಿದಿನವೂ ಪ್ರತಿಯೊಬ್ಬನಿಗೂ ಅನಿವಾರ್ಯವಾದರೂ ನಿತ್ಯಕರ್ಮಗಳೆನಿಸುವದಿಲ್ಲ, ಏಕೆಂದರೆ ಇವು ಪ್ರಾಣಿಗಳಿಗೂ ಮನುಷ್ಯರಿಗೂ ಸ

ಸರಸ್ವತೀ ವ್ರತ

    ವ್ರತವಿವೇಕದಂತೆ ಪೂಜೆಯನ್ನು ಪುಸ್ತಕಮಂಡಲದಲ್ಲಿ ಆಶ್ವಯುಜ ಶುಕ್ಲ ಪಕ್ಷದಲ್ಲಿ ಮೂಲಾನಕ್ಷತ್ರದ ದಿನ ಮಾಡಬೇಕೆಂದು ಹೇಳಿದೆ. ಜಗನ್ಮೂಲಳಾದ ಪ್ರಕೃತಿಮಾತೆಯೇ ಸರಸ್ವತಿಯೆಂದು ತಿಳಿಸಲು ಈ ನಕ್ಷತ್ರವನ್ನು ಪೂಜೆಗೆ ಹೇಳಿರಬಹುದು. ಆ ದಿನದಿಂದ ನಾಲ್ಕು ದಿನಗಳು ದೇವೀಪೂಜೆಗೆ ಪ್ರಶಸ್ತವೆಂದೂ ತಿಳಿಸಿದೆ. ಶ್ರವಣನಕ್ಷತ್ರದ ಕೊನೆಯಲ್ಲಿ ವಿಸರ್ಜನೆಮಾಡಬೇಕೆಂಬುದು ನಿಯಮವು. ಪುಸ್ತಕಮಂಡಲದಲ್ಲಿ ಸದಾಕಾಲವೂ ದೇವಿಯ ಸಾನ್ನಿಧ್ಯವಿದ್ದೇ ಇರುತ್ತದೆ. ಪೂಜೆಗಾಗಿ ಮಾತ್ರ ನಾವು ಆಗ್ಗೆ ಭಾವನೆಮಾಡಿಕೊಳ್ಳಬೇಕಾಗಿದೆ. ಹಿಂದಿನ ಕಾಲಕ್ಕೆ ಸೂತಿಕಾಗೃಹದಿಂದ 11ದಿನ ಶಿಶುವಿಗೆ ಸ್ನಾನಮಾಡಿಸಿ ಒಳಕ್ಕೆ ಕರೆದು ಕೊಂಡಾಗ ಮೊರದಲ್ಲಿ ಮಲಗಿಸಿ ತಲೆದಿಂಬಿನಂತೆ ಒಂದು ಪುಸ್ತಕವನ್ನು ಮಸ್ತಕದ ಸಮಿಪದಲ್ಲಿಡುತ್ತಿದ್ದರು, ಈಗಿನ ನಾಗರಿಕತೆಯ ಪ್ರಭಾವದಿಂದ ಇದು ಲೋಪವಾಗಿದೆ, ಈ ಆಚರಣೆಗೆ ಮಗುವು ವಿದ್ಯಾವಂತನಾಗಲೆಂಬುದೇ ಹಿಂದಿನವರ ಉದ್ದೇಶವಾಗಿರಬೇಕು ಇರಲಿ, ಹೀಗೆ ಪುಸ್ತಕಮಂಡಲದಲ್ಲಿ ಕುರಿತ ದಿನದಲ್ಲಿ ದೇವಿಯನ್ನು ಆವಾಹಿಸಿ ಪೂಜಿಸಬೇಕು, ಪೂಜಾದ್ರವ್ಯಗಳ ಸಂಖ್ಯೆಯು ಎಲ್ಲವೂ ಹದಿನಾಲ್ಕು ಇರಬೇಕೆಂದು ವಿಧಿಸಿದೆ, ಹದಿನಾಲ್ಕು ವಿದ್ಯೆಗಳಲ್ಲಿ ನಿಪುಣನಾದವನನ್ನು ಚತುರ್ದಶವಿದ್ಯಾಪಾರಂಗತನೆನ್ನುವರು. ಸರಸ್ವತಿಯ ಆರಾಧಕನಿಗೆ ಈ ಫಲವುಂಟಾಗಲು ಹೀಗೆ ವಿಧಿಸಿದೆ. ಈಗ ದೇವಿಯ ಧ್ಯಾನಶ್ಲೋಕವನ್ನು ನೋಡೋಣ. ವಿದ್ಯಾತ್ಮಾನಮಶೇಷಲೋಕಜನನೀಂ ದೇವೀಮಿಮಾಮಿಷ್ಟದಾಂ ಇಚ್ಚಾಕಲ್ಪಿತಭೂಷಣಾಂ ತ್ರಿಣ

ಶಕ್ತಿಪೀಠಗಳು

    ದೇವಿಯು ಹಲವು ರೀತಿಗಳಲ್ಲಿ ವ್ಯಕ್ತಗೊಳ್ಳುತ್ತಾಳೆ, ಭಕ್ತರು ಅದನ್ನು ತಿಳಿಯ ಬೇಕು, ದೇವಿಯ ಅಭಿವ್ಯಕ್ತವಾದ, ಪವಿತ್ರವಾದ ಸ್ಥಳಗಳನ್ನು ಪೀಠಗಳೆನ್ನುತ್ತೇವೆ.     ಭಾರತದಲ್ಲಿ ಹಲವಾರು ಶಕ್ತಿ ಪೀಠಗಳಿವೆ. ಹೀಗೆ ಪವಿತ್ರವಾದ ಸ್ಥಳಗಳಲ್ಲಿ ದೇವಿಯನ್ನು ಪೂಜಿಸಿ ಕೋಟ್ಯಂತರ ಭಕ್ತರು ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. ಪುರಾಣಗಳಲ್ಲಿ ಹಲವಾರು ರೀತಿಯಲ್ಲಿ ಈ ಶಕ್ತಿಪೀಠಗಳ ವರ್ಣನೆಯನ್ನು ಕಾಣುತ್ತೇವೆ.     ನಮ್ಮ ಬಯಕೆಗಳನ್ನು ನೆರವೇರಿಸಿಕೊಳ್ಳಲು ನಾವು ದೇವಿಯನ್ನು ಪೂಜಿಸುತ್ತೇವೆ. ಮೋಕ್ಷ ಪ್ರಾಪ್ತಿಗಾಗಿ ದೇವಿಯನ್ನು ಪೂಜಿಸುವುದು ಎಲ್ಲದಕ್ಕಿಂತ ಶ್ರೇಷ್ಠವಾದುದು. ಒಂದು ಸಾರಿ ಈ ಸಂಸಾರ ಬಂಧನದಿಂದ ಬಿಡುಗಡೆ ದೊರೆಯಿತೆಂದರೆ ಸಾಕು ಉಳಿದ ಬಯಕೆಗಳೆಲ್ಲವೂ ಇಲ್ಲವಾಗುತ್ತವೆ. ಆದುದರಿಂದ ಮೋಕ್ಷಾರ್ಥಿಯಾಗಿ ದೇವಿಯನ್ನು ಬೇಡುವುದು ಎಲ್ಲದಕ್ಕಿಂತ ಮಿಗಿಲಾದುದು.     ಋಗ್ವೇದದಲ್ಲಿ ಉಕ್ತವಾಗಿರುವ ದಕ್ಷಯಜ್ಞದ ಕಥೆಯು ಮುಂದೆ ಹಲವಾರು ಪುರಾಣಗಳಲ್ಲಿ ವಿಸ್ತೃತಗೊಂಡು ಬೆಳೆದಿದೆ ದಕ್ಷ ಪ್ರಜಾಪತಿಯು ಯಜ್ಞವನ್ನು ಮಾಡಿದನು ಎಂಬ ಇತಿಹಾಸವು ಮಹಾಭಾರತದಲ್ಲಿಯೂ, ಮತ್ಯೃ, ಪದ್ಮ, ಕೂರ್ಮ ಮತ್ತು ಬ್ರಹ್ಮಾಂಡ ಪುರಾಣಗಳಲ್ಲಿ ವಿವರವಾಗಿ ವಿಸ್ತೃತವಾಗಿದೆ. ಕಾಳಿದಾಸನು ಕುಮಾರ ಸಂಭವ ಎಂಬ ಕಾವ್ಯವನ್ನೇ ರಚಿಸಿರುತ್ತಾನೆ.     ಸತಿಯು ದಕ್ಷಪ್ರಜಾಪತಿಯ ಮಗಳು. ದಕ್ಷ ಪ್ರಜಾಪತಿಯು ಒಂದು ಯಜ್ಞವನ್ನು ಮಾಡಿದನು. ಆ ಯಜ್ಞಕ್ಕೆ ತನ್ನ ಮಗಳಾದ ಸತಿಯನ್ನು ಆಹ್ವಾನಿಸಲ