ಆಚಾರ್ಯ ಶ್ರೀ ಶಂಕರರು ರಚಿಸಿದ ಸಂಸ್ಕೃತ ಸ್ತೋತ್ರಸಾಹಿತ್ಯದ ಪರ್ವತಶ್ರೇಣಿಗಳಲ್ಲಿ ಸೌ೦ದರ್ಯಲಹರಿ ಶಿಖರಪ್ರಾಯದಲ್ಲಿದೆ. ಒಂದೊಂದೂ ತನ್ನ ವೈಶಿಷ್ಟ್ಯವನ್ನು ಮೆರೆಯುತ್ತಿರುವ ಈ ನೂರು ಚೌಪದಿಗಳಲ್ಲಿ, ಮೊದಲ ಪ್ರಾಸ್ತಾವಿಕ ಪದ್ಯಗಳ ಬಳಿಕ, ಸುಂದರ ಭಾವಗೀತೆಯೊಂದು ಹೀಗಿದೆ: ಭವಾನಿ ತ್ವಂ ದಾಸೇ ಮಯಿ ವಿತರ ದೃಷ್ಟಿ೦ ಸಕರುಣಾ- ಮಿತಿ ಸ್ತೋತುಂ ವಾಂಛನ್ ಕಥಯತಿ ಭವಾನಿ ತ್ವಮಿತಿ ಯ: | ತದೈವ ತ್ವಂ ತಸ್ಮೈ ದಿಶಸಿ ನಿಜಸಾಯುಜ್ಯಪದವೀ೦ ಮುಕುಂದಬ್ರಹ್ಮೇಂದ್ರಸ್ಫುಟಮುಕುಟನೀರಾಜಿತಪದಾಮ್||22|| ( 'ಭವಾನಿ, ತ್ವಂ, ದಾಸೇ ಮಯಿ, ವಿತರ ದೃಷ್ಟಿ೦ ಸಕರುಣಾಮ್"- ಇತಿ ಸ್ತೋತುಂ ವಾಂಛನ್, ಕಥಯತಿ- 'ಭವಾನಿ ತ್ವಂ"- ಇತಿ ಯ: | ತದಾ ಏವ ತ್ವಂ ತಸ್ಮೈ ದಿಶಸಿ ನಿಜ-ಸಾಯುಜ್ಯ-ಪದವೀ೦ ಮುಕುಂದ-ಬ್ರಹ್ಮೇಂದ್ರ-ಸ್ಫುಟ-ಮುಕುಟ-ನೀರಾಜಿತ-ಪದಾಮ್||) ಇದಕ್ಕೆ ಅನ್ವಯಾನುಸಾರ ಈ ರೀತಿಯ ಗದ್ಯರೂಪವನ್ನು ಕೊಡಬಹುದು: 'ಭವಾನಿ, ಮಯಿ ದಾಸೇ, ತ್ವಂ, ಸಕರುಣಾಮ್ ದೃಷ್ಟಿ೦ ವಿತರ"- ಇತಿ ಸ್ತೋತುಂ ವಾಂಛನ್, 'ಭವಾನಿ ತ್ವಂ"- ಇತಿ ಯ: ಕಥಯತಿ, ತಸ್ಮೈ ತ್ವಂ ಮುಕುಂದ-ಬ್ರಹ್ಮೇಂದ್ರ-ಸ್ಫುಟ-ಮುಕುಟ-ನೀರಾಜಿತ-ಪದಾಮ್ ನಿಜ-ಸಾಯುಜ್ಯ-ಪದವೀ೦ ತದಾ ಏವ ದಿಶಸಿ|| 'ಅಮ್ಮಾ ದೇವಿ, ನೀನು ನಿನ್ನ ಕರುಣಾಪೂರಿತ ನೋಟವನ್ನು ಈ ದಾಸನ ಮೇಲೆ ಬೀರು!"- ಎಂದು ಹೇಳಲು ಇಚ್ಛಿಸುತ್ತ, ಯಾರಾದರೂ 'ಅಮ್ಮಾ ನೀನು .. .."- ಎಂದೊಡನೆ,