Posts

Showing posts from February, 2017

ಹರಿದಾಸರು ಕಂಡ ರಾಘವೇಂದ್ರರು

    ರಾಘವೇಂದ್ರತೀರ್ಥರ ಜೀವನ ಹಾಗೂ ಅವರ ಹಿಂದಿನ ಅವತಾರಗಳು ಹರಿದಾಸರ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿ ಸೇರಿವೆ ಗುರುಸಾರ್ವಭೌಮರ ಜೀವನ ಪ್ರಕೃತ ಸಮಾಜಕ್ಕೆ ಯಾವ ವಿಧದಲ್ಲಿ ಆದರ್ಶಪ್ರಾಯವಾಗಿದೆ, ಅವರಲ್ಲಿ ಮಾನವನ ಬೇಡಿಕೆ ಯಾವುದಾಗಿರಬೇಕು, ಈ ಎಲ್ಲವನ್ನೂ ಹರಿದಾಸರು ತಮ್ಮ ಕೃತಿಗಳಲ್ಲಿ ಸ್ಪಷ್ಟಪಡಿಸಿರುವರು.     ಕೃತಯುಗದಲ್ಲಿ ಭಾಗವತ ಧರ್ಮವನ್ನು ಬಿತ್ತರಿಸಿದ ಪ್ರಹ್ಲಾದರೇ ಪುನಃ ಶ್ರೀಹರಿಯು ಆದೇಶದಂತೆ ಲೋಕದ ಉದ್ದಾರಕ್ಕಾಗಿ, ಧರ್ಮದ ಪುನಃ ಪ್ರತಿಷ್ಠಾಪನೆಗಾಗಿ ಕಲಿಯುಗದಲ್ಲಿ ವ್ಯಾಸ ತೀರ್ಥರಾಗಿಯೂ ನಂತರ ರಾಘವೇಂದ್ರತೀರ್ಥರಾಗಿಯೂ ಅವತರಿಸಿದರುವೆಂಬುದು ಹರಿದಾಸರ ಕೃತಿಗಳಿಂದ ಸ್ಪಷ್ಟವಾಗುವುದು.     ಭಾಗವತದ ಸಪ್ತಮ ಸ್ಕಂಧದ ನಾಯಕ ಪ್ರಹ್ಲಾದ, ಬಾಲ್ಯದಲ್ಲಿಯೇ ದೈತ್ಯಬಾಲಕರನ್ನು ಉದ್ಧರಿಸಿದ ಭಾಗವತೋತ್ತಮನು ಇವನು "ಕಾಮಾರೇ ಆಚರೇತ್ಪಾಜ್ಞಃ ಧರ್ಮಾನ್ ಭಾಗವತಾನಿಹ" ಎಂದು ಲೋಕಕ್ಕೆ ಸಂದೇಶ ನೀಡಿದ ವೈರಾಗ್ಯಮೂರ್ತಿ ಪ್ರಹ್ಲಾದ.     ಈ ಪ್ರಹ್ಲಾದನ ಎರಡನೇ ಅವತಾರವೆನಿಸಿದ ವ್ಯಾಸತೀರ್ಥರ ಜೀವನವೂ ಸಹ ವೈರಾಗ್ಯಕ್ಕೆ ಕೈಗನ್ನಡಿಯಾಗಿದೆ. ಬಾಲ್ಯದಲ್ಲಿಯೇ ಸನ್ಯಾಸಶ್ರಮದಲ್ಲಿ ಕಾಲಿಟ್ಟವರಿವರು. ಗುರುಗಳಾದ ಶ್ರೀಪಾದರಾಜರ ಆದೇಶದಂತೆ ಹಾಗೂ ಸಾಳುವ ನರಸಿಂಹನ ಪ್ರಾರ್ಥನೆಯಂತೆ 12 ವರ್ಷಗಳ ಕಾಲ ತಿರುಮಲೆಯಲ್ಲಿದ್ದು ಶ್ರೀನಿವಾಸನ ಪೂಜಾದಿಗಳನ್ನು ಮಾಡಿ, ಪುನಃ ಅರ್ಚಕ ಮನೆತನದವರಿಗೆ ಶ್ರೀನಿವಾಸನ ಪೂಜಾಸೌಭಾಗ್ಯವನ್ನು ಬಿಟ್ಟು ಕೊಟ್ಟವರು ಕೃಷ

ಲಲಿತಾ ತ್ರಿಶತೀ -13 ಓಂ ಕಂದರ್ಪಜನಕಾಪಾಂಗವೀಕ್ಷಣಾಯೈ ನಮಃ

    ಅಪಾಂಗ ವೀಕ್ಷಣವೆಂದರೆ ಅಲ್ಪವಾದ ನೋಟವು, ದೇವಿಯು ಮನ್ಮಥನನ್ನು ಸೃಷ್ಟಿಸುವ ಅಲ್ಪಮಾತ್ರ ದರ್ಶನವುಳ್ಳವಳು, ಇದರಿಂದ ಕುರೂಪಿಗಳಾದ ಜಡ ಜನರು ದೇವಿಯ ಸಕೃದ್ದರ್ಶನಕ್ಕೆ ಪಾತ್ರರಾಗಿ ಮನ್ಮಥನಂತೆ ರೂಪ, ಯೌವನ, ಸಾಮರ್ಥ್ಯ, ಲಕ್ಷ್ಮೀ ಮುಂತಾದ ಅನೇಕ ಗುಣಪೂರ್ಣರಾಗುವರು, ಎಂಬ ದೇವಿಯ ಮಹಿಮೆಯು ವರ್ಣಿತವಾಗುವುದು ಅಥವಾ ಮನ್ಮಥನಿಗೆ ಜನಕನಾದ ನಾರಾಯಣನು ಹುಬ್ಬಿನ ಚಲನೆಯಿಂದ ಪ್ರೇರೇಪಿಸುವುದೆಂಬ ದೇವಿಯ ಅಪಾಂಗ ವೀಕ್ಷಣಕ್ಕೆ ಅಧೀನನಾಗಿ ಜಗದ್ರಕ್ಷಣಾದಿ ಕಾರ್ಯವನ್ನು ಆಚರಿಸಿ ಆಜ್ಞೆಯನ್ನು ಪಾಲಿಸುವನು, ಆದ್ದರಿಂದ ಆಜ್ಞಾಕರನಾದ ನಾರಾಯಣನುಳ್ಳವಳೂ ಅಥವಾ ಕಂದರ್ಪ ಜನಕಳಾದ ಮಹಾ ಲಕ್ಷ್ಮಿಯು ದೇವಿಯ ಅಪಾಂಗ ವೀಕ್ಷಣದಿಂದ ಪ್ರೇರಿಸಲ್ಪಡುವವಳಾಗಿ ಇರುವಳು ಅಥವಾ ಕಂದರ್ಪ ವಿಕಾರವನ್ನು ಉಂಟುಮಾಡುವ ಗಂಧ ಪುಷ್ಪ ಮೊದಲಾದ ಭೋಗ್ಯವಸ್ತುಗಳ ಸಮೃದ್ಧಿಯನ್ನು ಕೊಡುವ ಅಪಾಂಗ ದರ್ಶನವುಳ್ಳವಳು ಅಥವಾ ಚಂದ್ರನು ವಾಮನೇತ್ರ ರೂಫನಾಗಿರುವುದರಿಂದ ವೀಕ್ಷಣವು ಚಂದ್ರಿಕಾ ರೂಪವಾಗುವುದು. ಮನ್ಮಥ ವಿಕಾರ ಜನಕವಾದ ಚಂದ್ರಿಕೆಯನ್ನು ಚೆಲ್ಲುವ ವಾಮನೇತ್ರವುಳ್ಳವಳು ಅಥವಾ ಕಂದರ್ಪಜನಕ ಶಬ್ದಕ್ಕೆ ಲಕ್ಷಣಾ ವೃತ್ತಿಯಿಂದ ಲಕ್ಷ್ಮಿಯ ಆಧಾರವಾದ ಕಮಲ ಎಂದು ಅರ್ಥ. ಆ ಕಮಲದಂತಿರುವ ನೋಟದಿಂದ ಜಗತ್ಸಂಜೀವನವನ್ನುಂಟು ಮಾಡುವ ವೀಕ್ಷಣವುಳ್ಳವಳು. "ಅಪಾಂಗಾಭ್ಯಾಂ ವೀಕ್ಷಣಮ್, ಕಂದರ್ಪಸ್ಯ ಜನಕಂ ಅಪಾಂಗ ವೀಕ್ಷಣಂ ಯಸ್ಯಾಃ, ಕಂದರ್ಪ ಜನಕಃ ಅಪಾಂಗ ವೀಕ್ಷಣೇ ಯಸ್ಯಾಃ, ಕಂದರ್ಪ ಜನಕಾ ಅಪಾಂಗ

ಬ್ರಹ್ಮಾಂಡವೇ ಜೇನುಹಟ್ಟಿಯಂತೆ

    ಬೃಹದಾರಣ್ಯಕೋಪನಿಷತ್ತಿನಲ್ಲಿ ಮಧುವಿದ್ಯೆಯೆಂಬ ಒಂದು ಭಾಗವಿದೆ. ಇದು ಎರಡನೆಯ ಅಧ್ಯಾಯದ ಒಂದನೆಯ ಉಪವಿಭಾಗದಲ್ಲಿದೆ. ಆತ್ಮನಿಂದಲೇ ಈ ಜಗತ್ತೆಲ್ಲವೂ ಹುಟ್ಟಿದ್ದು, ಆತ್ಮನನ್ನೇ ಆಶ್ರಯಿಸಿಕೊಂಡು ಬದುಕಿದ್ದು ಕಡೆಗೆ ಆತ್ಮನಲ್ಲೇ ಲಯವಾಗುವದು- ಎಂಬಿದು ವೇದಾಂತಸಿದ್ಧಾಂತವು. ಹೀಗೆ ಆತ್ಮನೊಬ್ಬನೇ ಎಲ್ಲಕ್ಕೂ ಮೂಲಕಾರಣನೆಂಬುದನ್ನು ಗೊತ್ತುಪಡಿಸುವದಕ್ಕಾಗಿ ಮಧುವಿದ್ಯೆಯನ್ನು ಪ್ರಸ್ತಾಪಮಾಡಲಾಗಿದೆ. ಮಧು-ಎಂದರೆ ಜೇನು ಎಂದರ್ಥ. ಜೇನಿನಂತೆ ರುಚಿಕರವಾದ ಆತ್ಮವಿದ್ಯೆಯು ಮಧುವಿದ್ಯೆಯೆನಿಸಿಕೊಂಡಿರುವದು ಸೂಕ್ತವೇ ಆಗಿದೆ. ಜೇನು ಸಿದ್ಧವಾಗಬೇಕಾದರೆ ಜೇನುಹುಳುಗಳೆಲ್ಲವೂ ದುಡಿಯಬೇಕು. ಅವು ಪರಸ್ಪರವಾಗಿ ಹೊಂದಿಕೊಂಡು ಕೆಲಸಮಾಡುತ್ತಾ ಬೇರೆಬೇರೆಯ ಕಾಡುಗಳನ್ನು ತಿರುಗಿ ಬೇರೆಬೇರೆಯ ಗಿಡಮರಗಳ ಹೂಗಳಿಂದ ಬೇರೆಬೇರೆಯ ರುಚಿಯ ರಸಗಳನಸನು ಸಂಗ್ರಹಿಸಿ ತಂದು ಒಂದೇ ಗೂಡಿನಲ್ಲಿ ಕೂಡಿಸಿಟ್ಟಾಗ ಜೇನಾಗುವದು, ಹಾಗೆಯೇ ಈ ಪ್ರಪಂಚವೂ ಒಂದು ಜೇನುಗೂಡಾಗಿದೆ. ಇಲ್ಲಿ ನಾನಾವಿಧವಾದ ಜೀವರುಗಳಿದ್ದಾರೆ. ಇವರೆಲ್ಲರೂ ಜೇನುಹುಳುಗಳ ಸ್ಥಾನದಲ್ಲಿರುತ್ತಾರೆ. ಇವರ ಕರ್ಮಗಳು ಪರಸ್ಪರ ಹೊಂದಿಕೊಂಡು ಒಬ್ಬರಿಗೊಬ್ಬರಿಗೆ ಉಪಕಾರಕವಾಗುವಂತಿದ್ದರೆ ಮಾತ್ರವೇ ಈ ಪ್ರಪಂಚದಲ್ಲಿ ಸುಖವೆಂಬ ಜೇನನ್ನು ಎಲ್ಲರೂ ಸವಿಯಬಹುದಾಗಿದೆ. ಹೀಗೆ ಒಬ್ಬರನ್ನೊಬ್ಬರಿಗೆ ಕೂಡಿಸಿ ಅವರವರ ಕೆಲಸಗಳು ಹೊಂದಿಕೊಳ್ಳುವಂತೆ ಮಾಡಲು ಎಲ್ಲವನ್ನೂ ಉಂಟುಮಾಡಿರುವ ವಸ್ತುವು ಯಾವದೆಂಬುದರ ತಿಳಿವಳಿಕೆಯು ಬೇಕು. ಈ

ಶ್ರೀಮಹಾಲಕ್ಷ್ಮೀ ಅಕ್ಷರಮಾಲಿಕಾನಾಮಾವಲೀ

॥ ಶ್ರೀಮಹಾಲಕ್ಷ್ಮೀ ಅಕ್ಷರಮಾಲಿಕಾನಾಮಾವಲೀ ॥ ॥ ಶ್ರಿಯೈ ನಮಃ ॥ ಅಶೇಷಜಗದೀಶಿತ್ರಿ ಅಕಿಂಚನ ಮನೋಹರೇ । ಅಕಾರಾದಿಕ್ಷಕಾರಾಂತ ನಾಮಭಿಃ ಪೂಜಯಾಮ್ಯಹಮ್ ॥ ಸರ್ವಮಂಗಲಮಾಂಗಲ್ಯೇ ಸರ್ವಾಭೀಷ್ಟಫಲಪ್ರದೇ । ತ್ವಯೈವಪ್ರೇರಿತೋ ದೇವಿ ಅರ್ಚನಾಂ ಕರವಾಣ್ಯಹಮ್ ॥ ಸರ್ವ ಮಂಗಲಸಂಸ್ಕಾರಸಂಭೃತಾಂ ಪರಮಾಂ ಶುಭಾಮ್ । ಹರಿದ್ರಾಚೂರ್ಣ ಸಂಪನ್ನಾಂ ಅರ್ಚನಾಂ ಸ್ವೀಕುರು ಸ್ವಯಮ್ ॥ ಓಂ ಅಕಾರಲಕ್ಷ್ಮ್ಯೈ ನಮಃ । ಓಂ ಅಚ್ಯುತಲಕ್ಷ್ಮ್ಯೈ ನಮಃ । ಓಂ ಅನ್ನಲಕ್ಷ್ಮ್ಯೈ ನಮಃ । ಓಂ ಅನಂತಲಕ್ಷ್ಮ್ಯೈ ನಮಃ । ಓಂ ಅನುಗ್ರಹಲಕ್ಷ್ಮ್ಯೈ ನಮಃ । ಓಂ ಅಮರಲಕ್ಷ್ಮ್ಯೈ ನಮಃ । ಓಂ ಅಮೃತಲಕ್ಷ್ಮ್ಯೈ ನಮಃ । ಓಂ ಅಮೋಘಲಕ್ಷ್ಮ್ಯೈ ನಮಃ । ಓಂ ಅಷ್ಟಲಕ್ಷ್ಮ್ಯೈ ನಮಃ । ಓಂ ಅಕ್ಷರಲಕ್ಷ್ಮ್ಯೈ ನಮಃ । ಓಂ ಆತ್ಮಲಕ್ಷ್ಮ್ಯೈ ನಮಃ । ಓಂ ಆದಿಲಕ್ಷ್ಮ್ಯೈ ನಮಃ । ಓಂ ಆನಂದಲಕ್ಷ್ಮ್ಯೈ ನಮಃ । ಓಂ ಆರ್ದ್ರಲಕ್ಷ್ಮ್ಯೈ ನಮಃ । ಓಂ ಆರೋಗ್ಯಲಕ್ಷ್ಮ್ಯೈ ನಮಃ । ಓಂ ಇಚ್ಛಾಲಕ್ಷ್ಮ್ಯೈ ನಮಃ । ಓಂ ಇಭಲಕ್ಷ್ಮ್ಯೈ ನಮಃ । ಓಂ ಇಂದುಲಕ್ಷ್ಮ್ಯೈ ನಮಃ । ಓಂ ಇಷ್ಟಲಕ್ಷ್ಮ್ಯೈ ನಮಃ । ಓಂ ಈಡಿತಲಕ್ಷ್ಮ್ಯೈ ನಮಃ । ಓಂ ಉಕಾರಲಕ್ಷ್ಮ್ಯೈ ನಮಃ । ಓಂ ಉತ್ತಮಲಕ್ಷ್ಮ್ಯೈ ನಮಃ । ಓಂ ಉದ್ಯಾನಲಕ್ಷ್ಮ್ಯೈ ನಮಃ । ಓಂ ಉದ್ಯೋಗಲಕ್ಷ್ಮ್ಯೈ ನಮಃ । ಓಂ ಉಮಾಲಕ್ಷ್ಮ್ಯೈ ನಮ

ಮೋಕ್ಷ

ಸಾಮಾನ್ಯವಾಗಿ ನಮ್ಮಲ್ಲಿ ಮೋಕ್ಷದ ಬಗ್ಗೆ ಎಲ್ಲರಿಗೂ ಒಂದು ಕುತೂಹಲವಿದೆ. ಆದರೆ, ಮೋಕ್ಷವೆಂದರೇನು ಎನ್ನುವುದನ್ನು ನಮ್ಮಲ್ಲಿ ಹೆಚ್ಚಿನವರು ತಿಳಿದು ಕೊಂಡಿಲ್ಲ. ಹನ್ನೆರಡನೇ ಶತಮಾನದಲ್ಲಿ ಕಾಶ್ಮೀರದಲ್ಲಿ ಇದ್ದ ಮಹತ್ವದ ಜ್ಞಾನಿಯಾದ ಅಭಿನವಗುಪ್ತ ಒಂದು ಪುಸ್ತಕ ಬರೆದಿದ್ದಾನೆ. ಅದರ ಹೆಸರು 'ತಂತ್ರಾಲೋಕ'. ಅದರಲ್ಲಿ ಅಭಿನವಗುಪ್ತನು ಹೇಳಿರುವ ಪ್ರಕಾರ, ''ಆತ್ಯಂತಿಕ ಸ್ವಾತಂತ್ರ್ಯದ ಮಟ್ಟಕ್ಕೆ ಏರುವುದೇ ನಿಜವಾದ ಮೋಕ್ಷ''. ಒಬ್ಬ ಸಾಧಕನು ಯೋಗಿಯಾಗುವುದೆಂದರೆ ಇದೇ. ಅಂದರೆ, ಆತನಿಗೆ ಒಂದು ವಿಶ್ವಾತ್ಮಕವಾದ ಪ್ರಜ್ಞೆ ಬಂದಿರುತ್ತದೆ. ಅದನ್ನು ಈ ಲೌಕಿಕ ಜಗತ್ತಿನ ಯಾವೊಂದು ವಸ್ತುವೂ ಪ್ರಭಾವಿಸುವುದು ಸಾಧ್ಯವಿಲ್ಲ. ಒಬ್ಬ ಯೋಗಿಯು ಸಂಪೂರ್ಣವಾಗಿ ತನ್ನ ಅಂತರಂಗದಲ್ಲಿ ಆಧ್ಯಾತ್ಮಿಕವಾದ ಜಾಗೃತಿಯನ್ನು ಹೊಂದಿದಾಗ ಮಾತ್ರ ಈ ಪ್ರಕ್ರಿಯೆ ಆರಂಭವಾಗುತ್ತದೆ. ಆಗ ಆತ ತನ್ನ ಒಳಗಿರುವ ದೈವಿಕ ಪ್ರಜ್ಞೆಯಲ್ಲಿ ಆನಂದವನ್ನು ಕಾಣುತ್ತಾನೆ. ಆ ಕ್ಷಣದಲ್ಲಿ ಅವನು ತನ್ನ ಅಂತರಂಗದ ಪ್ರಪಂಚದಿಂದ ಹೊರಬಂದು ಈ ಬಾಹ್ಯ ಲೋಕವನ್ನು ಅನುಭವಿಸುತ್ತಾನೆ. ಒಬ್ಬ ಯೋಗಿಯ ಕಣ್ಣಿಗೆ ಕೂಡ ನಮ್ಮನಿಮ್ಮಂತೆಯೇ ಒಂದು ಕುರ್ಚಿಯೋ, ಒಂದು ಮರವೋ ಅನುಭವಕ್ಕೆ ಬಂದೀತು. ಆದರೆ, ಆ ಅನುಭವವು ಆತನ ಆಂತರ್ಯದ ದೈವಿಕ ಪ್ರಜ್ಞೆಯಿಂದ ತುಂಬಿರುತ್ತದೆ. ಆತ ಎಲ್ಲೆಲ್ಲಿ ನೋಡಿದರೂ ಇದೇ ಅನುಭವ ಉಂಟಾಗುತ್ತಿರುತ್ತದೆ. ಇದಾದಮೇಲೆ ಆತ ಮತ್ತೆ ತನ್ನ ಕ

"ತಾನು ಮುಡಿದುದನ್ನು ದೇವರಿಗೆ ಅರ್ಪಿಸಿದ ದೇವಿ"

ಪೆರಿ ಆಳ್ವಾರ್ ಎಂಬುವವರೊಬ್ಬರು ಪರಮ ದೈವ ಭಕ್ತರಾಗಿದ್ದರು. ಆಳ್ವಾರ್ ಎಂದರೆ ಭಗವಂತನಲ್ಲಿ ಗಾಢ ಭಕ್ತಿಯುಳ್ಳವರು ಎಂದು ಅರ್ಥ. ರಂಗನಾಥ ಅವರ ಆರಾಧ್ಯ ದೈವ. ಪ್ರತಿ ದಿನವೂ ಹೂ ಮಾಲೆಯನ್ನು ಕಟ್ಟಿ ದೇವರಿಗೆ ಅರ್ಪಿಸುವುದು ಅವರ ದಿನಚರಿಯಾಗಿತ್ತು. ಅದಕ್ಕಾಗಿ ಅವರು ಒಂದು ಹೂ ತೋಟವನ್ನೇ ಬೆಳೆಸಿದ್ದರು. ಒಂದು ದಿನ ಅವರು ತಮ್ಮ ತೋಟದಲ್ಲಿ ಹೂವು ಬಿಡಿಸುತ್ತಿದ್ದಾಗ, ಸೊಂಪಾಗಿ ಬೆಳೆದ ತುಳಸಿ ಗಿಡವೊಂದರ ಕೆಳಗೆ ಮುದ್ದಾದ ಹೆಣ್ಣು ಶಿಶುವೊಂದು ಮಲಗಿದ್ದುದನ್ನು ಕಂಡು ಆಶ್ಚರ್ಯಗೊಂಡರು. ಮಕ್ಕಳಿಲ್ಲದ ಆಳ್ವಾರರು ಪರಮಾನದಿಂದ ಆ ಶಿಶುವನ್ನು ಮನಗೆ ತಂದು, ಪ್ರೀತಿಯಿಂದ ಆಂಡಾಳ್ ಎಂದು ಕರೆದರು. ತುಂಬಾ ಮಮತೆಯಿಂದ ಆಧ್ಯಾತ್ಮಿಕ ವಾತಾವರಣದಲ್ಲಿ ಬೆಳೆಸಿದರು. ಆಂಡಾಳ್ ಸುಂದರಿಯೂ ಕೋಮಲೆಯೂ ಆಗಿ ಬೆಳೆದಳು. ಚಿಕ್ಕಂದಿನಿಂದಲೇ ಅವಳಿಗೆ ಶ್ರೀಕೃಷ್ಣನಲ್ಲಿ ಅಪ್ರತಿಮ ಭಕ್ತಿ, ಪ್ರೇಮಗಳು ಮೂಡಿದವು. ದಿನವೂ ತಂದೆ ತೋಟದಿಂದ ಆರಿಸಿ ತರುವ ಸುಗಂಧ ಪುಷ್ಪಗಳಿಂದ ಸುಂದರವಾಗಿ ಮಾಲೆಯನ್ನು ಕಟ್ಟುತ್ತಿದ್ದಳು. ತನ್ನ ಇಷ್ಟ ದೈವಕ್ಕೆ ಅರ್ಪಿಸುವಷ್ಟು ಸೊಗಸಾಗಿ ಬಂದಿದೆಯೋ ಇಲ್ಲವೋ ಎಂದು ನೋಡಲು ತಾನು ಮೊದಲು ಮುಡಿದು ಕನ್ನಡಿಯಲ್ಲಿ ನೋಡಿಕೊಂಡು ಪರೀಕ್ಷಿಸಿ, ನಂತರ ತಂದೆಯ ಕೈಗೆ ಕೊಡುತ್ತಿದ್ದಳು. ಒಂದು ದಿನ ಆಳ್ವಾರರಿಗೆ ಹೂ ಮಾಲೆಯಲ್ಲಿ ನೀಳವಾದ ಕೂದಲೆಳೆ ಕಂಡು ಬಂದಿತು. ಆ ಮಾಲೆ ಅಶುದ್ಧವೆಂದು ಅಂದು ದೇವರಿಗೆ ಹೂ ಮಾಲೆ ಅರ್ಪಿಸಲೇ ಇಲ್ಲ. ಆಂಡಾಳ

ಹನುಮಾನ್ ಚಾಲೀಸಾ

ಶ್ರೀಮದಾಂಜನೇಯನು ಸಮಸ್ತ ದೇವತೆಗಳ ಸ್ವರೂಪವಾಗಿದ್ದಾನೆ. ಸಾಕ್ಷಾತ್ ಪರಮೇಶ್ವರನೇ ಶ್ರೀರಾಮ ಮಹಿಮೆಯನ್ನು, ಅನನ್ಯ ಭಕ್ತಿಯನ್ನು, ಜ್ಞಾನವನ್ನು, ಆದರ್ಶ ಭಕ್ತಿಮಯ ಪವಿತ್ರ ಜೀವನವನ್ನು ಪ್ರಪಂಚಕ್ಕೆ ತೋರಿಸಲು ಹನುಮಂತನಾಗಿ ಅವತರಿಸಿದ್ದಾನೆ.     ರಾಮನಾಮ ಮಹಿಮೆಯನ್ನು ಜಗತ್ತಿಗೆ ಸಾರಿದವನು ಹನುಮಂತನು. ರಾಮನಾಮದ ಮೇಲಿರುವ ನಿರುಪಮ ಶ್ರದ್ಧಾಭಕ್ತಿಯಿಂದಲೇ ಹನುಮಂತನು ಶತಯೋಜನ ವಿಸ್ತಾರವಾದ ಮಹಾಸಮುದ್ರವನ್ನು ಅನಾಯಾಸವಾಗಿ ದಾಟಿದನು. ಶ್ರೀರಾಮನಿಗಿಂತಲೂ ಶ್ರೀರಾಮನಾಮದ ಮಹಿಮೆಯೇ ಹಿರಿದೆಂದು ಸಾರಿದ ಅಸಮಾನ ರಾಮಭಕ್ತನು. "ರಾಮತ್ವತ್ತೋಧಿಕಂ ನಾಮ ಇತಿ ಮನ್ಯಾಮ ಹೇವಯಂ, ತ್ವಯೈಕಾತಾರಿತಾಯೋಧ್ಯಾನಾಮ್ನಾತುಭುವನತ್ರಯಂ"     ರಾಮಚಂದ್ರಾ! ನಿನಗಿಂತಲೂ ನಿನ್ನ ನಾಮವು ದೊಡ್ಡದೆಂದು ನಾವು ನಂಬುತ್ತೇವೆ. ಏಕೆಂದರೇ ನೀನು ಅಯೋಧ್ಯಾಪುರವಾಸಿಗಳನ್ನು ಮಾತ್ರ ಉದ್ದರಿಸಿದೆ. ನಿನ್ನ ನಾಮವಾದರೋ ಮೂರು ಲೋಕಗಳನ್ನು ಉದ್ಧರಿಸುತ್ತದೆ. ಶ್ರೀರಾಮನಿಗೆ ಆಂಜನೇಯನು ಅನನ್ಯಭಕ್ತ ಶಿರೋಮಣಿ. "ಯತ್ರ ಯತ್ರ ರಘುನಾಥ ಕೀರ್ತನಂ, ತತ್ರ ತತ್ರ ಕೃತಮಸ್ತಕಾಂಜಲಿಂ, ಬಾಷ್ಪವಾರಿ ಪರಿಪೂರ್ಣ ಲೋಚನಂ". ಎಲ್ಲೆಲ್ಲಿ ರಾಮನಾಮ ಸಂಕೀರ್ತನೆ ನಡೆಯುವುದೋ ಅಲ್ಲೆಲ್ಲ ಹನುಮಂತನು ತಲೆಯ ಮೇಲೆ ಕೈಜೋಡಿಸಿಕೊಂಡು ಆನಂದಬಾಷ್ಪಗಳನ್ನು ಸುರಿಸುವನು.     ಹನುಮಂತನನ್ನು ಕಂಡರೆ ಭೂತಪ್ರೇತ ಪಿಶಾಚಿ ಬ್ರಹ್ಮರಾಕ್ಷಸಾದಿ ದುಷ್ಟ ಶಕ್ತಿಗಳು ಓಡಿ ಹೋಗುವವು. ಇದು ಎಲ್ಲರ ಅನು

ಮಣ್ಣೆತ್ತಿನ ಅಮವಾಸ್ಯೆ

#ಮಣ್ಣೆತ್ತಿನ_ಅಮವಾಸ್ಯೆ : ಮಳೆ ಬೆಳೆ ಚೆನ್ನಾಗಿ ಆಗಲೆಂದು ಕೃಷಿಕರು ಬೇಡಿಕೊಳ್ಳುವ ಹಬ್ಬ. ಉತ್ತರ ಕರ್ನಾಟಕದಲ್ಲಿ ಜ್ಯೇಷ್ಠ ಬಹುಳ ಅಮವಾಸ್ಯೆಗೆ ಮಣ್ಣೆತ್ತಿನ ಅಮವಾಸ್ಯೆ ಎಂದು ಕರೆಯುತ್ತಾರೆ. ಹಳ್ಳಿಯ ಹೆಣ್ಣು ಮಕ್ಕಳು ಅರಳೆಲೆ ಬಸವನನ್ನು ಎಲೆಯ ಮಂಟಪದಲ್ಲಿ ಸಿಂಗಾರ ಮಾಡಿ ಪೂಜೆ ಮಾಡಿ ಹಾಡು ಹೇಳುತ್ತಾರೆ. ಕನ್ನಡದ  ಜಾನಪದ ಸಂಶೋಧನಾ ಪ್ರಬಂಧಕಾರ ಬಾದಾಮಿ ತಾಲೂಕು ಕೆರೂರಿನ ಡಾ.ಬಿ,ಎಸ್,ಗದ್ದಗಿಮಠರು ಸಂಗ್ರಹಿಸಿದ ಹೆಣ್ಣು ಮಕ್ಕಳು ಹಾಡುವ ಅರಳೆಲೆ ಬಸವನ ಪದ ಹೀಗಿದೆ. ಒಂದು ಸುತ್ತಿನ ಕ್ವಾಟಿ ಅದರೊಳು ಹೊಂದಿ ನಿಂತನು ಬಸವ ಬಸವಕ ಬಸವೆನ್ನಿರೆ ಬಸವನ ಪಾದಕ ಶರಣನ್ನಿರೆ ಎರಡು ಸುತ್ತಿನ ಕ್ವಾಟಿ ಅದರೊಳು ಸೊಡರು ತೂಗುವ ಬಸವ ಬಸವಕ ಬಸವೆನ್ನಿರೆ ಬಸವನ ಪಾದಕ ಶರಣನ್ನಿರೆ ಮೂರು ಸುತ್ತಿನ ಕ್ವಾಟಿ ಅದರೊಳು ಮೂರ್ತಗೊಂಡನ ಬಸವ ಬಸವಕ ಬಸವೆನ್ನಿರೆ ಬಸವನ ಪಾದಕ ಶರಣನ್ನಿರೆ ನಾಲ್ಕು ಸುತ್ತಿನ ಕ್ವಾಟಿ ಅದರೊಳು ನ್ಯಾಯಮೂರ್ತಿಯು ಬಸವ ಬಸವಕ ಬಸವೆನ್ನಿರೆ ಬಸವನ ಪಾದಕ ಶರಣನ್ನಿರೆ ಐದು ಸುತ್ತಿನ ಕ್ವಾಟಿ ಅದರೊಳು ಐಕ್ಯಮೂರ್ತಿಯು ಬಸವ ಬಸವಕ ಬಸವೆನ್ನಿರೆ ಬಸವನ ಪಾದಕ ಶರಣನ್ನಿರೆ ಆರು ಸುತ್ತಿನ ಕ್ವಾಟಿ ಅದರೊಳು ಅರಳಿ ನಿಂತಾನ ಬಸವ ಬಸವಕ ಬಸವೆನ್ನಿರೆ ಬಸವನ ಪಾದಕ ಶರಣನ್ನಿರೆ ಏಳು ಸುತ್ತಿನ ಕ್ವಾಟಿ ಅದರೊಳು ಜಗವನಾಳುವ ಬಸವ ಬಸವಕ ಬಸವೆನ್ನಿರೆ ಬಸವನ ಪಾದಕ ಶರಣನ್ನಿರೆ ಎಂಟು ಸುತ್ತಿನ ಕ್ವಾಟಿ ಶಿವನಿಗೆ ಕಂಟಲೆತ್ತೇನೋ ಬ

ಆಷಾಡದ ಮುಂಜಾವು..

ಚುಮು ಚುಮು ಬೆಳಕ ಕಿವುಚಿ ಆಷಾಡದ ಕಾಳಿ ಹಿಪ್ಪೆ ಹಿಂಡಿ ರಸ ತೆಗೆದ ಮಸುಕು ಮಸುಕ ಬೇಲಿ ಹರಿದಂತೆ ಕನ್ನೆ ಮುಗ್ದತೆಯ ಆವರಣ ಕುಲುಕಿ ಪಲುಕು ಪಲುಕಾಗರಳುತಿದೆ ಮನದ್ಯುತಿ ಕಲಕಿ || ಸಿಲುಕಿ ಹೋದ ಅರೆ ಮಬ್ಬಲಿ ಕಳುವಾದ ಹೊತ್ತು ಬೆಳಕು ಹರಿವುದೊ ತೊರೆವುದೊ ಯಾರಿಗೆ ಗೊತ್ತು? ಮುಸುಕಲಿ ಕವಿದ ಮೋಡ ಗಿಡ ಮರವೂ ನಿಗೂಢ ಭೂತಾಕಾರದಿ ಹೊತ್ತ ಆಕಾರಗಳೆ ಭೀತಿಯ ಗಾಢ || ಅಲ್ಲೆಲ್ಲೊ ಮಾಮರ ಯಾತನೆ ಇಲ್ಲೆಲ್ಲೊ ಕಲರವ ಗಿಡಗಂಟಿಗಳ ಬೆರೆಸಿ ನಿಸರ್ಗದ ಚಿತ್ತಾರ ನಿರ್ಭಾವ ಹುಡುಕುತಲದರೊಳಗೇನನೊ ನಡೆದಿಹ ಅವನೊಬ್ಬ ಕವಿಯೊ ಜ್ಞಾನಿ ವಿಜ್ಞಾನಿಯೊ ಕೊಲೆಗಡುಕಗು ಹಬ್ಬ || ಸವರಿ ತಂಗಾಳಿ ಚಲನೆ ಮುತ್ತಿಟ್ಟಂತೆ ಪ್ರಿಯ ಲಲನೆ ಕಚಗುಳಿಯಿಟ್ಟಾಡಿಸುತ ಕುರುಳಿಗೆ ಸ್ವೇಚ್ಛಾ ಸಂಚಲನೆ ಸುಯ್ದೆ ದಣಿದು ಬೇಸತ್ತು ಬೆವರಿ ಹನಿ ಪೋಣಿಸಿ ಇಬ್ಬನಿ ಒಡಲ ನೋವೆಲ್ಲ ಧಾರೆ ಹುಲ್ಲುಲ್ಲು ಗರಿಕೆಯಲು ಕಂಬನಿ || ಭೀತಿ ನಿರ್ಭೀತಿ ಭಾವ ಕೊಳಚೆ, ಬೆಳಕಾಯ್ತು ಒಗೆಯಾಚೆ ಅದುರಿಸುವ ಚಳಿಯ ಹೊದ್ದ ಸಖಿಗು ಬಿಡದೆ ಕಂಪಿಸುತೆ ಮೆಲ್ಲಮೆಲ್ಲನೆ ಕಿರಣ ಅರಳರಳಿ, ಮಳ್ಳಿಯ ಮೈಗಾಭರಣ ಸರಿದು ಹತ್ತಿರ ಅಪ್ಪುಗೆ, ಚುಂಬನದೆ ಕದಪಲಿ ತೋರಣ ||

ಶ್ರೀ ಜಗನ್ನಾಥ ದಾಸರು

ಜುಲೈ 8ರಂದು ಶ್ರೀ ಜಗನ್ನಾಥ ದಾಸರು ಜನಿಸಿದ ಪರಮ ಪವಿತ್ರ ಬ್ಯಾಗವಟ್ ಕ್ಷೇತ್ರದಲ್ಲಿ. “ಹರಿಕಥಾಮೃತಸಾರ”ದ ಕರ್ತೃ ಶ್ರೀ ಜಗನ್ನಾಥದಾಸರು ಅನೇಕ ದೇವರನಾಮಗಳನ್ನು ರಚಿಸಿರುವುದಲ್ಲದೆ, ತ್ರಿಪದಿ ಛ೦ದಸ್ಸಿನ ನೂರಾರು ತತ್ವಸುವ್ವಾಲಿಗಳನ್ನು ಭಾಮಿನೀ ಷಟ್ಪದಿಯಲ್ಲಿ (೯೮೮) ರಚಿಸಿದವರು. ಜಗನ್ನಾಥದಾಸರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬ್ಯಾಗವಟ್ಟಿ ಎ೦ಬ ಗ್ರಾಮದಲ್ಲಿ ೨೭.೭.೧೭೨೮ ರ೦ದು ತಿರುಪತಿಯ ಶ್ರೀನಿವಾಸನ ದಯೆಯಿ೦ದ (ಕೀಲಕನಾಮ ಸಂವತ್ಸರ - ಶ್ರಾವಣ ಶುದ್ಧ ಬಿದಿಗೆ) ಜನಿಸಿದರು. ಮಾಧ್ವ ಬ್ರಾಹ್ಮಣ ಮನೆತನದ ಇವರ ತಂದೆ ನರಸಿಂಹಾಚಾರ್ಯರು, ತಾಯಿ ಲಕ್ಷ್ಮೀಬಾಯಿ. ಇವರ ಪೂರ್ವಾಶ್ರಮದ ಹೆಸರು ಶ್ರೀನಿವಾಸಾಚಾರ್ಯ. ತಂದೆತಾಯಿಗಳ ಒಬ್ಬನೇ ಮಗನಾಗಿದ್ದು, ಗೃಹಸ್ಥಾಶ್ರಮದಲ್ಲಿ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದರೆಂದು ತಿಳಿದುಬಂದಿದೆ. ಶ್ರೀನಿವಾಸನ ವಿದ್ಯಾಭ್ಯಾಸ ಮ೦ತ್ರಾಲಯದ ಸುಪ್ರಸಿಧ್ಧ ಶ್ರೀ ರಾಘವೇ೦ದ್ರ ಸ್ವಾಮಿಗಳವರ ಶ್ರೀ ಮಠದ ಪೀಠದಲ್ಲಿ ಅ೦ದು ವಿರಾಜಮಾನರಾಗಿದ್ದ ಶ್ರೀ ವರದೇ೦ದ್ರ ತೀರ್ಥ ಶ್ರೀಪಾದ೦ಗಳವರಲ್ಲಿ ನಡೆದಿದ್ದು, “ಆಚಾರ್ಯ” ಪಟ್ಟವನ್ನು ಪಡೆದ ನಂತರ ಮಾನ್ವಿಗೆ ಬ೦ದು ಶಿಷ್ಯರಿಗೆ ಪಾಠವನ್ನು ಹೇಳುತ್ತಾ ಗುರುಕುಲದ ಒಡೆಯರಾಗಿ ಘನಪ೦ಡಿತರೆ೦ದು ಪ್ರಸಿದ್ಧರಾದರು. ಇವರು ವರದೇಂದ್ರ ತೀರ್ಥರು ಮತ್ತು ಗೋಪಾಲದಾಸರನ್ನು ಗುರುಗಳಾಗಿ ಸ್ವೀಕರಿಸಿದ್ದರೆಂದೂ ತಿಳಿದುಬಂದಿದೆ. ಜಗನ್ನಾಥ ವಿಠಲ ಎಂಬುದು ಜಗನ್ನಾಥದಾಸರ ಅಂಕಿತ. ಚಂದ್ರಭಾಗಾ

ನಾಗರಪಂಚಮಿ

ಹಿಂದೂ ಧರ್ಮವು ಸತ್ಯವನ್ನು ಹುಡುಕುವುದರ ಸುತ್ತ ನೆಲೆಗೊಂಡಿರುವ ಒಂದು ನಂಬಿಕೆಯಾಗಿದೆ. ಹಿಂದೂಗಳಿಗೆ ಇದು ಜೀವನವನ್ನು ಮತ್ತು ಪ್ರಕೃತಿಯ ಶಕ್ತಿಗಳನ್ನು ಪೂಜಿಸುವ ಒಂದು ಮಾರ್ಗವಾಗಿ ಪ್ರಾಚೀನ ಕಾಲದಿಂದಲು ನಡೆದು ಬಂದಿದೆ. ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಬರುವ ಐದನೆ ದಿನ ಅಂದರೆ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಬರುತ್ತದೆ. ಈ ಹಬ್ಬವನ್ನು ಇದೇ ತಿಂಗಳುಗಳಲ್ಲಿ ಆಚರಿಸಲು ಹಿಂದಿರುವ ಪ್ರಧಾನ ಕಾರಣವೆಂದರೆ, ಈ ಸಮಯದಲ್ಲಿ ಹಾವುಗಳು ಜನರಿಗೆ ಭಯಭೀತಿಯನ್ನುಂಟು ಮಾಡಿರುತ್ತವೆ. ಮಳೆಯ ಕಾರಣದಿಂದ ಬಿಲಗಳಲ್ಲಿ ನೀರು ತುಂಬಿಕೊಂಡಾಗ ಹೊರ ಬರುವ ಹಾವುಗಳು ಜನರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಹಾವುಗಳಿಗೆ ಹಾಲೆರೆದು ಪೂಜಿಸಲಾಗುತ್ತದೆ. ನಂಬಿಕೆಗಳ ಪ್ರಕಾರ ಶ್ರೀ ಕೃಷ್ಣನು ಕಾಳಿಯ ಎಂಬ ಹಾವಿನ ಉಪಟಳದಿಂದ ಜನರನ್ನು ರಕ್ಷಿಸಿದನು. ಆ ಕತೆ ಹೀಗಿದೆ;- ಒಂದು ದಿನ ಬಾಲಕ ಕೃಷ್ಣನು ಯಮುನಾ ನದಿಯ ತೀರದಲ್ಲಿ ಆಡುತ್ತಿದ್ದನು. ಆಗ ಅವನು ಆಟವಾಡುತ್ತಿದ್ದ ಚೆಂಡು ನದಿ ದಂಡೆಯಲ್ಲಿದ್ದ ಮರದ ಕಾಂಡದಲ್ಲಿ ಸಿಕ್ಕಿ ಹಾಕಿಕೊಂಡಿತು. ಆ ಚೆಂಡನ್ನು ಎತ್ತಿಕೊಳ್ಳಲು ಹೋದಾಗ ಕೃಷ್ಣನು ಜಾರಿ ನದಿಯಲ್ಲಿ ಬಿದ್ದನು. ಆಗ ಕಾಳಿಯ ಎಂಬ ಹಾವು ಅವನ ಮೇಲೆ ಆಕ್ರಮಣ ಮಾಡಿತು. ಆಗ ಕೃಷ್ಣನು ಆ ಹಾವಿನ ವಿರುದ್ಧ ಹೋರಾಟ ಮಾಡಿದನು. ಸ್ವಲ್ಪ ಸಮಯದ ನಂತರ ಆ ಹಾವಿಗೆ ಕೃಷ್ಣನು ಸಾಮಾನ್