Posts

Showing posts from March, 2017

ಶ್ರೀ ವೈಷ್ಣವ 108 ದಿವ್ಯದೇಶಗಳ ದಿವ್ಯದಂಪತಿಗಳು

    'ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ' ಎಂದು ದಾಸವರೇಣ್ಯರಾದ ಪುರಂದರ ದಾಸರು ಅಪ್ಪಣೆ ಕೊಟ್ಟಿದ್ದಾರೆ. ಅನೇಕ ಜನುಮಗಳ ನಂತರ ಲಭಿಸಿದ ಈ ಮಾನವ ಜನ್ಮ ಆದ್ದರಿಂದಲೇ ಈ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು. ಜನ್ಮಸಾರ್ಥಕ್ಯವನ್ನು ಪಡೆಯುವುದು ಹೇಗೆಂದು ತಿಳಿದುಕೊಳ್ಳುವುದು ಮಾನವನ ಪ್ರಥಮ ಕರ್ತವ್ಯ.     ಭಗವಂತನು ಸರ್ವಾಂತರ್ಯಾಮಿ. ಅವನು ಅನುಗ್ರಹಿಸಿದ ಈ ಜನ್ಮದಲ್ಲಿ ಅವನನ್ನು ಸ್ತುತಿಸಿ, ಧ್ಯಾನಿಸಿ, ಅವನ ನಾಮ ಜಪಮಾಡಿ, ಅವನು ಅರ್ಚಾರೂಪಿಯಾಗಿ ನಿಂತಿರುವ ದೇವಾಲಯಗಳನ್ನು ಸಂದರ್ಶಿಸಿ ಅವನ ಮೂರ್ತಿಗಳಲ್ಲಿ ದರ್ಶನವನ್ನು ಸಾಕ್ಷಾತ್ಕರಿಸಿಕೊಂಡು ಐಹಿಕ ಆಮುಷ್ಮಿಕ ಫಲಗಳನ್ನು ಪಡೆದು ಆ ದೇವನಲ್ಲಿಯೇ ಸೇರಿದರೆ ಮಾತ್ರ ಜನ್ಮ ಸಾರ್ಥಕವಾಗುವುದು.     ನಮ್ಮ ಭರತಖಂಡವು ಪುಣ್ಯಭೂಮಿ, ಭಾರತ ಮಾತೆಯು ಪಾವನಿ, ಆ ತಾಯಿಯು ಉದ್ದಗಲಕ್ಕು ವ್ಯಾಪಿಸಿರುವ ನದಿಗಳ, ಗಿರಿಪರ್ವತಗಳ, ನದೀಸಂಗಮಗಳಲ್ಲಿ ಕಾಣಿಸಿಗುವ ದೇವಾಲಯಗಳಲ್ಲಿ ಭಗವಂತನು ಆರ್ಚಾರೂಪಿಯಾಗಿ ನಿಂತು ದರ್ಶನಕ್ಕಾಗಿ ಬರುವ ಭಕ್ತವೃಂದಕ್ಕೆ ವರಗಳನ್ನು ದಯಪಾಲಿಸಿ ಇಷ್ಟಾರ್ಥ ಪ್ರಾಪ್ತಿಯನ್ನು ಅನಿಷ್ಠಾರ್ಥ ನಿವಾರಣೆಯನ್ನೂ ಉಂಟುಮಾಡುತ್ತಿದ್ದಾನೆ. ಆದ್ದರಿಂದ ಮಾನವರೆಲ್ಲರೂ ತೀರ್ಥಯಾತ್ರೆ ಮಾಡಿ ತೀರ್ಥಕ್ಷೇತ್ರಗಳನ್ನೂ ಪುಣ್ಯಸ್ಥಳಗಳನ್ನು ಸಂದರ್ಶಿಸಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡು ಜನ್ಮಸಾರ್ಥಕ ಪಡಿಸಿಕೊಳ್ಳಬೇಕು.     ಭಗವಂತನ ಸರ್ವವ್ಯಾಪಿಯಾದ್ದರಿಂದ

ಲಲಿತಾ ತ್ರಿಶತೀ - 15 ಓಂ ಕಲಿದೋಷಹರಾಯೈ ನಮಃ

Image

ಸಪ್ತ ಶ್ಲೋಕೀ ಗೀತಾ

ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರನ್ | ಯ: ಪ್ರಯಾತಿ ತ್ಯಜನ್ ದೇಹಂ ಸ ಯಾತಿ ಪರಮಾಂ ಗತಿಮ್ ||೧||     ಓಂ ಎಂಬ ಏಕಾಕ್ಷರ ರೂಪದ ಬ್ರಹ್ಮನ ಹೆಸರನ್ನು ಉಚ್ಚರಿಸುತ್ತಾ ಹಾಗೂ ಓಂಕಾರಕ್ಕೆ ಅರ್ಥ ಸ್ವರೂಪನೂ ಆಗಿರುವ ನನ್ನನ್ನು ಸ್ಮರಿಸುತ್ತಾ ಯಾವಾತನು ದೇಹವನ್ನು ತ್ಯಜಿಸುವನೋ ಅವನು ಅತ್ಯುನ್ನತ ಶ್ರೇಷ್ಠ ಪದವಿಯೆನಿಸಿದ ಮೋಕ್ಷವನ್ನು ಪಡೆಯುವನು. ಸ್ಥಾನೇ ಹೃಷಿಕೇಶ ತವ ಪ್ರಕೀರ್ತ್ಯಾ ಜಗತ್ಪ್ರಹೃಷ್ಯತ್ಯನುರಾಜತೇ ಚ | ರಕ್ಷಾಂಸಿ ಭೀತಾನಿ ದಿಶೋ ಧವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾ: ||೨||     ಎಲೈ ಹೃಷಿಕೇಶ! ನಿನ್ನ ಗುಣಗಳ ಸಂಕೀರ್ತನೆಯಿಂದ ಬ್ರಹ್ಮಾಂಡವು ಸ್ವಚ್ಚವಾಗಿದೆ ಮತ್ತು ಸ್ನೇಹಪೂರಿತವಾಗಿದೆ.ಹಾಗೂ ಅದು ಸರಿಯಾದುದೂ ಆಗಿದೆ. ಈ ರಕ್ಕಸರು ಭಯಭೀತರಾಗಿ ಸಮಸ್ತ ದಿಸೆಗಳತ್ತ ಓಡುತ್ತಲಿರುವರು. ಹೀಗಿರುತ್ತಾ ಸಮಸ್ತ ಸಿದ್ಧಗಣ ಸೇನೆಯು ನಿನಗೆ ನಮಸ್ಕರಿಸುತ್ತಲಿವೆ. ಸರ್ವತ: ಪಾಣಿಪಾದಂ ತತ್ಸರ್ವತೋಕ್ಷಿ ಶಿರೋಮುಖಮ್ | ಸರ್ವತ: ಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ ||೩||     ಅವನು ಸಮಸ್ತ ಕಡೆಗೂ ಹಸ್ತ ಪಾದಗಳುಳ್ಳವನು;ಹಾಗೆಯೇ ಎಲ್ಲ ಕಡೆಗೂ ಕಣ್ಣು.ತಲೆ,ಮುಖಗಳುಳ್ಳವನು.ಅವನು ಸರ್ವತ್ರ ವ್ಯಾಪಕಸ್ವರೂಪನಾಗಿ ಶ್ರವಣೇಂದ್ರಿಯಗಳುಳ್ಳವನೂ ಆಗಿರುವನು. ಅವನು ಸಮಸ್ತ ಬ್ರಹ್ಮಾಂಡವನ್ನು ವ್ಯಾಪಿಸಿಕೊಂಡವನು. ಕವಿಂ ಪುರಾಣಮನುಶಾಸಿತಾರಮಣೋರಣೀಯಾಂ ಸಮನುಸ್ಮರೇದ್ಯ: | ಸರ್ವಸ್ಯ ದಾತಾರಮಚಿಂತ್ಯರೂಪಮಾದಿತ್ಯವರ್ಣಂ ತಮಸ: ಪರಸ್ತಾತ್

ಸಂಕಷ್ಟನಾಶನ ವಿಷ್ಣು ಸ್ತೋತ್ರಮ್

ನಾರದ ಉವಾಚ:- ಪುನರ್ದೈತ್ಯಂ ಸಮಾಯಾಂತಂ ದೃಷ್ಟ್ವಾ ದೇವಾ: ಸವಾಸವಾ: | ಭಯಪ್ರಕಂಪಿತಾ: ಸರ್ವೆ ವಿಷ್ಣುಂ ಸ್ತೋತುಂ ಪ್ರಚಕ್ರಮು: ||೧|| ನಾರದರು ಹೇಳಿದರು:- ಪುನ: ಬರುತ್ತಿರುವ ದೈತ್ಯರನ್ನು ಕಂಡು ಇಂದ್ರನೊಟ್ಟಿಗೆ ದೇವತೆಯರೆಲ್ಲರೂ ಭೀತಿಗೊಳಗಾಗಿ ವಿಷ್ಣುವನ್ನು ಸ್ತುತಿಸಲು ಪ್ರಾರಂಬಿಸಿದರು. ದೇವಾ ಊಚು:- ನಮೋ ಮತ್ಸ್ಯಕೂರ್ಮಾದಿ ನಾನಾ ಸ್ವರೂಪೈ: ಸದಾಭಕ್ತ ಕಾರ್ಯೋದ್ಯತಾಯಾರ್ತಿಹಂತ್ರೇ | ವಿಧಾತ್ರಾದಿ ಸರ್ಗಸ್ಥಿತಿಧ್ವಂಸಕರ್ತೆ ಗದಾಶಂಖಪದ್ಮಾದಿ ಹಸ್ತಾಯ ತೇಸ್ತು ||೨|| ದೇವತೆಗಳು ಹೇಳುವರು:- ಮತ್ಸ್ಯ-ಕೂರ್ಮ ಮೊದಲಾದ ನಾನಾಸ್ವರೂಪಗಳಿಂದ ಸಮಸ್ತಕಾಲವೂ ಭಕ್ತರ ಕಾರ್ಯಗಳಲ್ಲಿ ನಿರತನಾಗಿ ಅವರ ದುರಭಿಮಾನವನ್ನು ಅಳಿಸಿ ಉತ್ಪತ್ತಿ,ಸ್ಥಿತಿ,ಮತ್ತು ನಾಶಗಳಿಗೆ ಸ್ವಾಮಿಯಾದವನೂ,ಕೈಗಳಲ್ಲಿ ಗದೆ,ಶಂಖ,ಪದ್ಮ,ಚಕ್ರಗಳನ್ನು ಹಿಡಿದಿರುವವನೂ ಆಗಿರುವ ವಿಷ್ಣುವೇ ನಿನಗೆ ಪ್ರಣಾಮಗಳು. ರಮಾವಲ್ಲಭಾಯಾsಸುರಾಣಾಂ ನಿಹಂತ್ರೇ ಭುಜಂಗಾರಿಯಾನಾಯ ಪೀತಾಂಬರಾಯ | ಮಖಾದಿಕ್ರಿಯಾಪಾಕಕರ್ತ್ರೆ ವಿಕರ್ತ್ರೆ ಶರಣ್ಯಾಯ ತಸ್ಮೈ ನತಾ: ಸ್ಮೋ ನತಾ ಸ್ಮ: ||೩||     ರಮಾವಲ್ಲಭನಿಗೆ,ಅಸುರ ಸಂಹಾರಕನಿಗೆ,ಗರುಢವಾಹನನಿಗೆ,ಪೀತಾಂಬರಧಾರಿಗೆ,ಯಜ್ಞಾದಿ ಕಾರ್ಯಗಳ ಪ್ರತಿಫಲದಾಯಕನಿಗೆ,ಶರಣರನ್ನು ರಕ್ಷಿಸುವವನಿಗೆ ನಾವು ನಮಸ್ಕರಿಸುವೆವು. ನಮೋ ದೈತ್ಯಸಂತಾಪಿತಾಮರ್ತೃ ದು:ಖಾಚಲ ಧ್ವಂಸದಂಭೋಲಯೇ ವಿಷ್ಣವೇ ತೇ | ಭುಜಂಗೇಶತಲ್ಪೇಶಯಾರ್ಕ ಚಂದ್ರ ದ್ವಿನೇತ್ರಾಯ ತಸ್ಮೈ ನತಾ: ಸ್ಮೋ ನತಾ ಸ್ಮ

ಶ್ರೀ ವಿಷ್ಣು ಶತನಾಮಸ್ತೋತ್ರಮ್

ನಾರದ ಉವಾಚ:- ಓಂ ವಾಸುದೇವಂ ಹೃಷೀಕೇಶಂ ವಾಮನಂ ಜಲಶಾಯಿನಮ್ | ಜನಾರ್ಧನಂ ಹರಿಂ ಕೃಷ್ಣಂ ಶ್ರೀವಕ್ಷಂ ಗರುಢ ಧ್ವಜಮ್ ||೧|| ನಾರದರು ಹೇಳಿದ್ದು:- ವಾಸುದೇವ,ಹೃಷೀಕೇಶ,ವಾಮನ,ಜಲಧಿಶಯನ,ಜನಾರ್ಧನ,ಹರಿ,ಕೃಷ್ಣ,ಶ್ರೀವಕ್ಷ,ಗರುಢಧ್ವಜ...... ವಾರಾಹಂ ಪುಂಡರೀಕಾಕ್ಷಂ ನೃಸಿಂಹಂ ನರಕಾಂತಕಮ್ | ಅವ್ಯಕ್ತಂ ಶಾಶ್ವತಂ ವಿಷ್ಣುಮನಂತಮಜಮವ್ಯಯಮ್ ||೨||     ವಾರಾಹ,ಪುಂಡರೀಕಾಕ್ಷ,ನೃಸಿಂಹ,ನರಕಾಂತಕ,ಅವ್ಯಕ್ತ,ಶಾಶ್ವತ,ವಿಷ್ಣು,ಅನಂತ, ಅಜ,ಅವ್ಯಯ.............. ನಾರಾಯಣಂ ಗದಾಧ್ಯಕ್ಷಂ ಗೋವಿಂದಂ,ಕೀರ್ತಿಭಾಜನಮ್ | ಗೋವರ್ಧನೋದ್ಧರಂ ದೇವಂ ಭೂಧರಂ ಭುವನೇಶ್ವರಮ್ ||೩||     ನಾರಾಯಣ,ಗದಾಧ್ಯಕ್ಷ,ಗೋವಿಂದ,ಕೀರ್ತಿಭಾಜನ,ಗೋವರ್ಧನೋದ್ಧಾರಕ ದೇವ,ಭೂಧರ,ಭುವನೇಶ್ವರ......... ವೇತ್ತಾರಂ,ಯಜ್ಞಪುರುಷಂ ಯಜ್ಞೇಶಂ ಯಜ್ಞವಾಹಕಮ್ | ಚಕ್ರಪಾಣಿಂ ಗದಾಪಾಣಿಂ ಶಂಖಪಾಣಿಂ ನರೋತ್ತಮಮ್ ||೪||     ವೇತ್ತಾರ,ಯಜ್ಞಪುರುಷ,ಯಜ್ಞೇಶ,ಯಜ್ಞವಾಹಕ,ಚಕ್ರಪಾಣಿ,ಗದಾಪಾಣಿ, ಶಂಖಪಾಣಿ,ನರೋತ್ತಮ........... ವೈಕುಂಠಂ ದುಷ್ಟದಮನಂ ಭೂಗರ್ಭಂ ಪೀತವಾಸಮ್ | ತ್ರಿವಿಕ್ರಮಂ ತ್ರಿಕಾಲಜ್ಞಂ ತ್ರಿಮೂರ್ತಿಂ ನಂದಿಕೇಶ್ವರಮ್ ||೫||     ವೈಕುಂಠ,ದುಷ್ಟದಮನ,ಭೂಗರ್ಭ,ಪೀತಾಂಬರಧಾರಿ,ತ್ರಿವಿಕ್ರಮ,ತ್ರಿಕಾಲಜ್ಞ, ತ್ರಿಮೂರ್ತಿ, ನಂದಿಕೇಶ್ವರ........ ರಾಮಂ ರಾಮಂ ಹಯಗ್ರೀವಂ ಭೀಮಂ ರೌದ್ರಂ ಭವೋದ್ಭವಮ್ | ಶ್ರೀಪತಿಂ ಶ್ರೀಧರಂ ಶ್ರೀಶಂ ಮಂಗಲಂ ಮಂಗಲಾಯುಧಮ್ ||೬||     ರಾಮ,ಪರಶುರಾಮ,ಹಯಗ್ರೀವ,ಭೀಮ,

ವಿಷ್ಣೋರಷ್ಟಾವಿಂಶತಿನಾಮ ಸ್ತೋತ್ರಮ್

Image
ಅರ್ಜುನ ಉವಾಚ:- ಕಿಂ ನು ನಾಮ ಸಹಸ್ರಾಣಿ ಜಪಂತೆ ಚ ಪುನ: ಪುನ: | ಯಾನಿ ನಾಮಾನಿ ದಿವ್ಯಾನಿ ತಾನಿ ಚಾssಚಕ್ಷ್ವ ಕೇಶವ ||೧||     ಅರ್ಜುನನು ಕೇಳುವನು: ಕೇಶವಾ! ಮನುಜರು ಒಂದೇ ತೆರನಾಗಿ ನಿನ್ನ ಒಂದು ಸಾವಿರ ನಾಮಗಳನ್ನು ಯಾಕಾಗಿ ಪುನ: ಪುನ: ಜಪಿಸುತ್ತಾರೆ? ನಿನ್ನ ಆ ದಿವ್ಯ ನಾಮಗಳ ಬಗ್ಗೆ ವಿವರಿಸಿ ಹೇಳುವಂತವನಾಗು. ಭಗವಾನುವಾಚ:- ಮತ್ಸ್ಯಂ ಕೂರ್ಮಂ ವರಾಹಂ ಚ ವಾಮನಂ ಚ ಜನಾರ್ದನಮ್ | ಗೋವಿಂದಂ ಪುಂಡರೀಕಾಕ್ಷಂ ಮಾಧವಂ ಮಧುಸೂದನಮ್ ||೨||     ಭಗವಂತನು ಹೇಳುತ್ತಾನೆ: ಅರ್ಜುನಾ; ಮತ್ಸ್ಯ,ಕೂರ್ಮ; ವರಾಹ,ವಾಮನ, ಜನಾರ್ದನ,ಗೋವಿಂದ,ಪುಂಡರೀಕಾಕ್ಷ,ಮಾಧವ,ಮಧುಸೂದನ----- ಪದ್ಮನಾಭಂ ಸಹಸ್ರಾಕ್ಷಂ ವನಮಾಲಿಂ ಹಲಾಯುಧಮ್ | ಗೋವರ್ಧನಂ ಹೃಷೀಕೇಶಂ ವೈಕುಂಠಂ ಪುರುಷೋತ್ತಮ್ ||೩||     ಪದ್ಮನಾಭ, ಸಹಸ್ರಾಕ್ಷ, ವನಮಾಲಿ, ಹಲಾಯುಧ, ಗೋವರ್ಧನ, ಹೃಷೀಕೇಶ, ವೈಕುಂಠ, ಪುರುಷೋತ್ತಮ----------- ವಿಶ್ವರೂಪಂ ವಾಸುದೇವಂ ರಾಮಂ ನಾರಾಯಣಂ ಹರಿಮ್ | ದಾಮೋದರಂ ಶ್ರೀಧರಂ ಚ ವೇದಾಂಗಂ ಗರುಢಧ್ವಜಮ್ ||೪||     ವಿಶ್ವರೂಪ, ವಾಸುದೇವ, ರಾಮ, ನಾರಾಯಣ, ಹರಿ, ದಾಮೋದರ, ಶ್ರೀಧರ, ವೇದಾಂಗ, ಗರುಢಧ್ವಜ---------- ಅನಂತಂ ಕೃಷ್ಣಗೋಪಾಲಂ ಜಪತೋ ನಾಸ್ತಿ ಪಾತಕಮ್ | ಗವಾಂ ಕೋಟಿಪ್ರದಾನಸ್ಯ ಅಶ್ವಮೇಧಶತಸ್ಯ ಚ ||೫||     ಅನಂತ, ಕೃಷ್ಣಗೋಪಾಲ ಎಂಬೀ ಇಪ್ಪತ್ತೆಂಟು ನಾಮಗಳನ್ನು ಜಪಿಸುವಂತಹವನ ಪಾಪಗಳೆಲ್ಲಾ ನಶಿಸಿ ಹೋಗುತ್ತವೆ. ಆತನಿಗೆ ಒಂದು ಕೋಟಿ ಗೋದಾನ, ಒಂದು ನೂರು

ಶ್ರೀ ವಿಷ್ಣೋ: ಷೋಡಶನಾಮ ಸ್ತೋತ್ರಮ್

Image
ಔಷಧೇ ಚಿಂತಯೇದ್ವಿಷ್ಣುಂ ಭೋಜನೇಚ ಜನಾರ್ಧನಮ್ | ಶಯನೇ ಪದ್ಮನಾಭಂಚ ವಿವಾಹೇ ಚ ಪ್ರಜಾಪತಿಮ್ ||೧||     ಔಷಧಿಯನ್ನು ಸ್ವೀಕರಿಸುವ ಕಾಲದಲ್ಲಿ ವಿಷ್ಣುವನ್ನು, ಆಹಾರವನ್ನು ಸ್ವೀಕರಿಸುವಾಗ ಜನಾರ್ಧನನನ್ನು,ಮಲಗುವ ಸಮಯದಲ್ಲಿ ಪದ್ಮನಾಭನನ್ನು, ವಿವಾಹದ ಸಮಯದಲ್ಲಿ ಪ್ರಜಾಪತಿಯನ್ನು ಸ್ಮರಿಸಬೇಕು. ಯುದ್ಧೇ ಚಕ್ರಧರಂದೇವಂ ಪ್ರವಾಸೇ ಚ ತ್ರಿವಿಕ್ರಮಮ್ | ನಾರಾಯಣಂ ತನು ತ್ಯಾಗೇ ಶ್ರೀಧರಂ ಪ್ರಿಯಸಂಗಮೇ ||೨||     ಯುದ್ಧ ಕಾಲದಲ್ಲಿ ಚಕ್ರಧರ ದೇವನನ್ನು,ಪ್ರವಾಸ ಸಮಯದಲ್ಲಿ ತ್ರಿವಿಕ್ರಮನನ್ನು, ಶರೀರ ತ್ಯಾಗ ಮಾಡುವಾಗ ನಾರಾಯಣನನ್ನು, ಪ್ರೀತಿಯ ವ್ಯಕ್ತಿಗಳು ಸೇರುವಾಗ ಶ್ರೀಧರನನ್ನು ಸ್ಮರಿಸಬೇಕು. ದು:ಸ್ವಪ್ನೇ ಸ್ಮರ ಗೋವಿಂದಂ ಸಂಕಟೇ ಮಧುಸೂಧನಮ್ | ಕಾನನೇ ನಾರಸಿಂಹಂ ಚ ಪಾವಕೇ ಜಲಶಾಯಿನಮ್ ||೩||     ಘೋರ ಕನಸ್ಸುಗಳನ್ನು ಕಂಡಾಗ ಗೋವಿಂದನನ್ನು,ಸಂಕಷ್ಟದ ಸಮಯದಲ್ಲಿ ಮಧುಸೂಧನನನ್ನು,ಘೋರಾರಣ್ಯದಲ್ಲಿ ನಾರಸಿಂಹನನ್ನು, ಅಗ್ನಿ ದುರಿತದಲ್ಲಿ ಜಲಶಾಯಿಯನ್ನು ಸ್ಮರಿಸಬೇಕು. ಜಲಮಧ್ಯೇ ವರಾಹಂ ಚ ಪರ್ವತೇ ರಘುನಂದನಮ್ | ಗಮನೇ ವಾಮನಂ ಚೈವ ಸರ್ವ ಕಾರ್ಯೇಷು ಮಾಧವಮ್ ||೪||     ನೀರಿನ ನಡುವೆ ಸಿಲುಕಿದಾಗ ವರಾಹರೂಪಿಯನ್ನು, ಪರ್ವತ ಪ್ರದೇಶದಲ್ಲಿ ರಘುನಂದನನನ್ನು, ದಾರಿಯಲ್ಲಿ ಸಾಗುತ್ತಿರುವ ಸಮಯದಲ್ಲಿ ವಾಮನನನ್ನು, ಮತ್ತು ಸಮಸ್ತ ಕಾರ್ಯಗಳಲ್ಲಿ ಮಾಧವನನ್ನು ಸ್ಮರಿಸಬೇಕು. ಷೋಡಶೈತಾನಿ ನಾಮಾನಿ ಪ್ರಾತರುತ್ತಾಯ ಯ: ಪಠೇತ್ | ಸರ್ವ ಪಾಪವಿನಿರ್ಮುಕ್ತೋ ವಿ

ಶ್ರೀಮಹಾಗಣೇಶ ಪಂಚರತ್ನ ಸ್ತೋತ್ರಮ್

Image
ಮುದಾಕರಾತ್ತ ಮೋದಕಂ ಸದಾ ವಿಮುಕ್ತಿಸಾಧಕಂ ಕಲಾಧರಾವತಂಸಕಂ ವಿಲಾಸಿ ಲೋಕ ರಕ್ಷಕಂ | ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್ ||೧||     ಮಂದಹಾಸದಿಂದ ಕೂಡಿದವನಾಗಿ ಮೋದಕವನ್ನು ಕೈಯಲ್ಲಿ ಧರಿಸಿರುವ,ಸದಾ ಮೋಕ್ಕ್ಷವನ್ನು ಕರುಣಿಸುವುದರಲ್ಲಿ ನಿರತನಾಗಿರುವ,ಶಿರದಲ್ಲಿ ಚಂದ್ರನನ್ನು ಆಭರಣೋಪಾದಿಯಲ್ಲಿ ಧರಿಸಿರುವ,ಭಕ್ತಿ ವಿಲಾಸದಲ್ಲಿ ತತ್ಪರರಾದವರನ್ನು ತನ್ನ ಲೀಲಾಮಾತ್ರದಿಂದಲೇ ಪೊರೆಯುವ,ಅನಾಥರ ಏಕಮಾತ್ರ ದಿಕ್ಕಾದ,ಲೋಕ ಕಂಠಕನಾದ ಇಭಾಸುರ ಸಂಹಾರಿಯಾದ,ಶರಣು ಹೊಕ್ಕವರ ಅಶುಭಗಳನ್ನು ತ್ವರಿತವಾಗಿ ನಾಶಗೊಳಿಸುವ ಆ ಸಿದ್ಧಿವಿನಾಯಕನಿಗೆ ನಾನು ನಮಸ್ಕರಿಸುತ್ತೇನೆ. ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ ನಮಸ್ಸುರಾರಿ ನಿರ್ಜರಂ ನತಾಧಿಕಾಪದುದ್ಧರಮ್ | ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ ||೨||     ದುರಹಂಕಾರಿಗಳಿಗೆ ಅತಿಭೀಕರನೂ,ಆಗತಾನೇ ಉದಯಿಸುತ್ತಿರುವ ಉದಯಸೂರ್ಯನ ಕಾಂತಿಯನ್ನು ಹೊಂದಿರುವ,ಶರಣಾಗತರಾದ ದೇವದಾನವರ ಘೋರಸಂಕಟಗಳವಿನಾಶಕನಾಗಿರುವ,ಸುರೇಶ್ವರನೂ,ನಿಧೀಶ್ವರನೂ,ಗಜೇಶ್ವರನೂ,ಗಣೇಶ್ವರನೂ,ಮಹೇಶ್ವರನೂ,ಪವಿತ್ರತಮನೂ ಆಗಿರುವ ಆ ಸಿದ್ಧಿದಾಯಕ ವಿನಾಯಕನನ್ನು ನಾನು ಸದಾ ಆಶ್ರಯಿಸುತ್ತೇನೆ. ಸಮಸ್ತಲೋಕ ಶಂಕರಂ ನಿರಸ್ತದೈತ್ಯಕುಂಜರಂ ದರೇತರೋದರಂ ವರಂ ವರೇಭವಕ್ತ್ರಮಕ್ಷರಮ್ | ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ ಮನಸ್ಕರಂ ನಮಸ್ಕೃತಾಂ ನಮಸ್ಕರೋಮ

ಮಹಾ ಮೃತ್ಯುಂಜಯ ಸ್ತೋತ್ರಮ್

Image
ರುದ್ರಂ ಪಶುಪತಿಂ ಸ್ಥಾಣುಂ ನೀಲಕಂಠಂ ಉಮಾಪತಿಂ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||೧||     ರುದ್ರನನ್ನನು,ಪಶುಪತಿಯನ್ನು,ಸ್ಥಿರರೂಪೀಶಿವನನ್ನು,ನೀಲಕಂಠನನ್ನು, ಉಮಾಪತಿಯನ್ನು,ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ? ಕಾಲಕಂಠಂ ಕಾಲಮೂರ್ತಿಂ ಕಾಲಾಗ್ನಿಂ ಕಾಲನಾಶನಮ್ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||೨||     ಕಾಲಕಂಠನನ್ನು,ಕಾಲಮೂರ್ತಿಯನ್ನು,ಕಾಲಾಗ್ನಿಯನ್ನು,ಕಾಲನಾಶಕನನ್ನು ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ? ವಾಮದೇವಂ ಮಹಾದೇವಂ ಲೋಕನಾಥಂ ಜಗದ್ಗುರುಮ್ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||೩||     ವಾಮದೇವನನ್ನು,ಲೋಕನಾಥನನ್ನು,ಜಗದ್ಗುರುವನ್ನು,ದೇವದೇವನಾದ ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ? ದೇವದೇವಂ ಜಗನ್ನಾಥಂ ದೇವೇಶಂ ವೃಷಭಧ್ವಜಮ್ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||೪||     ದೇವದೇವನಾದಜಗನ್ನಾಥನನ್ನುದೇವೇಶನಾದ ಪರಮಶಿವನನ್ನು,ವೃಷಭಧ್ವಜನನ್ನು,ಮಹಾದೇವನನ್ನುನಾನುಶಿರಸಾನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ? ಗಂಗಾಧರಂ ಮಹಾದೇವಂ ಶಂಕರಂ ಶೂಲಪಾಣಿನಮ್ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||೫||     ಗಂಗಾಧರನನ್ನು,ಶಂಕರನನ್ನು, ಶೂಲಪಾಣಿಯನ್ನು ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನ

ಶ್ರೀ ಧನ್ವಂತರಿ ಸ್ತೋತ್ರಮ್

Image
ನಮಾಮಿ ಧನ್ವಂತರಿಮಾದಿದೇವಂ ಸುರಾಸುರೈರ್ವಂದಿತ ಪಾದಪದ್ಮಮ್ | ಲೋಕೇ ಜರಾರುಗ್ಭಯಮೃತ್ಯು ನಾಶಂ ದಾತಾರಮೀಶಂ ವಿವಿಧೌಷಧೀನಾಂ ||೧||     ಯಾವಾತನ ಪಾದಾರವಿಂದಗಳಿಗೆ ದೇವಾದಿದೇವತೆಗಳೂ,ಅಸುರರೂ ನಮಸ್ಕರಿಸುವರೋ ಅಂತಹಾ ಆದಿದೇವನಾಗಿರುವ ಹಾಗೂ ಜಗತ್ತಿನಲ್ಲಿ ರೋಗ,ಮುಪ್ಪುಗಳ ಭಯವನ್ನು ಮತ್ತು ಮರಣ ಭೀತಿಯನ್ನು ದೂರೀಕರಿಸುವ ಅಂತೆಯೇ ವಿವಿಧ ತೆರನಾದ ಔಷಧಿಗಳನ್ನು ಕರುಣಿಸುವ ಸ್ವಾಮಿಯಾಗಿರುವ ಧನ್ವಂತರಿಗೆ ನನ್ನ ಪ್ರಣಾಮಗಳು. ಅರಿ ಜಲಜ ಜಲೂಕಾ ರತ್ನ ಪೀಯೂಷ ಕುಂಭ- ಪ್ರಕಟಿತ ಕರಕಾಂತ: ಕಾಂತ ಪೀತಾಂಬರಾಢ್ಯ: | ಸಿತವಸನ ವಿರಾಜನ್ಮೌಲಿರಾರೋಗ್ಯದಾಯೀ ಶತಮುಖ ಮಣಿವರ್ಣ: ಪಾತು ಧನ್ವಂತರಿರ್ನ: ||೨||     ಹಸ್ತಗಳಲ್ಲಿ ಅಮೃತಕಲಶದೊಡನೆ ಜಿಗಣೆ,ಚಕ್ರ,ಶಂಖಗಳನ್ನು ಧರಿಸಿ ಕಾಂತಿಯುತ ಪೀತಾಂಬರವನ್ನುಟ್ಟು, ಶ್ವೇತವಸನದ ರುಮಾಲಿನಿಂದ ಶೋಭಿಸುವ ಶಿರಸ್ಸು ಉಳ್ಳವನಾದ ಶರೀರವು ಇಂದ್ರನೀಲಮಣಿಯ ಬಣ್ಣ ಹೊಂದಿರುವ ಆರೋಗ್ಯದಾಯಿಯಾಗಿರುವ ಧನ್ವಂತರಿ ಸ್ವಾಮಿಯು ನಮ್ಮನ್ನು ರಕ್ಷಿಸಲಿ. ಚಂದ್ರೌಘಕಾಂತಿಂ ಅಮೃತೋರು ಕರೈರ್ಜಗಂತಿ ಸಂಜೀವಯಂತಂ ಅಮಿತಾತ್ಮ ಸುಖಂ ಪರೇಶಮ್ | ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ ಶೀತಾಂಶು ಮಂಡಲಗತಂ ಸ್ಮರತಾತ್ಮ ಸಂಸ್ಥಮ್ ||೩||     ಬಹು ಚಂದ್ರರ ಸೌಂದರ್ಯವುಳ್ಳ,ತನ್ನ ಮೋಕ್ಷದಾಯಕವಾಗಿರುವ ಕಿರಣಗಳಿಂದ ಜಗತ್ತನ್ನು ಪುನರ್ಜ್ಜೀವನಗೊಳಿಸುತ್ತಲಿರುವ,ವಿಶಾಲವಾದ ಆತ್ಮಾನುಭೂತಿಯುಳ್ಳ,ಉನ್ನತ ಸ್ವಾಮಿಯಾಗಿರುವ,ಜ್ಞಾನಮುದ್ರೆಯನ್ನು ಮತ್ತು ಮೋಕ್ಷಕು

ಶ್ರೀದತ್ತಾತ್ರೇಯ ಧ್ಯಾನಸ್ತೋತ್ರಮ್

Image
ಭೂತಪ್ರೇತಪಿಶಾಚಾದ್ಯಾ ಯಸ್ಯ ಸ್ಮರಣಮಾತ್ರತ: | ದೂರಾದೇವ ಪಲಾಯಂತೇ ದತ್ತಾತ್ರೇಯಂ ನಮಾಮಿ ತಮ್ ||೧||     ಯಾರ ಸ್ಮರಣೆ ಮಾತ್ರದಿಂದಲೇ ಭೂತ ಪ್ರೇತ ಪಿಶಾಚಾದಿಗಳು ದೂರವಾಗುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ. ಯನ್ನಾಮಸ್ಮರಣಾದ್ದೈನ್ಯಂ ಪಾಪಂ ತಾಪಶ್ಚ ನಶ್ಯತಿ | ಭೀತಿಗ್ರಹಾರ್ತಿದು:ಸ್ವಪ್ನಂ ದತ್ತಾತ್ರೇಯಂ ನಮಾಮಿ ತಮ್ ||೨||     ಯಾವಾತನ ಸ್ಮರಣೆ ಮಾತ್ರದಿಂದಲೇ ಪಾಪ,ದೈನ್ಯ,ತಾಪತ್ರಯ,ದು:ಸ್ವಪ್ನಾದಿಗಳು ಪರಿಹಾರಗೊಳ್ಳುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ. ದದ್ರು-ಸ್ಪೋಟಕ ಕುಷ್ಠಾದಿ- ಮಹಾಮಾರೀ ವಿಷೂಚಿಕಾ | ನಶ್ಯಂತ್ಯನ್ಯೇಪಿ ರೋಗಾಶ್ಚ ದತ್ತಾತ್ರೇಯಂ ನಮಾಮಿ ತಮ್ ||೩||     ಚರ್ಮರೋಗ-ಗೌಪ್ಯವಾಗಿರುವ ಕುಷ್ಠರೋಗ-ಸಾಂಸರ್ಗಿಕ ರೋಗವಾಗಿರುವ ಬಲಿಷ್ಟವಾದ ಮಾರಿಕಾಬೇನೆ[ಕಾಲೆರಾ]ಗಳನ್ನು ನಾಶಮಾಡುವುದರೊಂದಿಗೆ ಇತರ ರೋಗಗಳನ್ನೂ ನಾಶಮಾಡುವ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ. ಸಂಗಜಾ ದೇಶಕಾಲೋತ್ಥಾ ಅಪಿ ಸಾಂಕ್ರಾಮಿಕಾ ಗದಾ: | ಶಾಮ್ಯಂತಿ ಯತ್ ಸ್ಮರಣತೋ ದತ್ತಾತ್ರೇಯಂ ನಮಾಮಿ ತಮ್ ||೪||     ಸಂಸರ್ಗದಿಂದ ಉಂಟಾಗುವ ಹಾಗೂ ದೇಶಕಾಲ-ನಿಸರ್ಗ ದೋಷಗಳಿಂದುಂಟಾಗುವ ರೋಗಾದಿಗಳು;ವಿಪತ್ತುಗಳಿಗೆ ಸಿಲುಕುವುದರಿಂಟಾಗಬಹುದಾದ ಹಾನಿಗಳು;ಸಾಂಕ್ರಾಮಿಕರೋಗಗಳು,ಆಯುಧಗಳಿಂದುಂಟಾಗಬಹುದಾದ ಬಲಿಷ್ಠವಾದ ಹಾನಿಗಳೆಲ್ಲವೂ ಯಾರ ಸ್ಮರಣೆ ಮಾತ್ರದಿಂದಲೇ ನಾಶವಾಗುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ. ಸ

ಶ್ರೀ ಗಾಯತ್ರೀ ಸ್ತೋತ್ರಮ್

ನಮಸ್ತೇ ದೇವಿ ಗಾಯತ್ರಿ ಸಾವಿತ್ರಿ ತ್ರಿಪದೇsಕ್ಷರೇ | ಅಜರೇ ಅಮರೇ ಮಾತತ್ರಾಹಿ ಮಾಮ್ ಭವಸಾಗರಾತ್ ||೧||     ಹೇ! ತಾಯೇ; ಈ ಭವ ಸಾಗರದಿಂದ ನನ್ನನ್ನು ಕಾಪಾಡು.ಮೂರು ಅಕ್ಷರಗಳಿರುವ ನೀನು ಗಾಯತ್ರಿಯೂ,ಸಾವಿತ್ರಿಯೂ ಆಗಿದ್ದು ಮುಪ್ಪಿಲ್ಲದವಳೂ ಆಗಿರುವುದಲ್ಲದೆ ಅಮರಳೂ ಆಗಿರುವೆ. ಮಾತೆಯೇ ನಿನಗಿದೋ ಪ್ರಣಾಮಗಳು. ನಮಸ್ತೇ ಸೂರ್ಯಸಂಕಾಶೇ ಸೂರ್ಯಸಾವಿತ್ರಿಕೆಮಾತೃಕೇ | ಬ್ರಹ್ಮವಿದ್ಯೆ ಮಹಾವಿದ್ಯೆ ವೇದಮಾತೇನಮೋಸ್ತುತೇ ||೨||     ತಾಯಿಯೇ;ವೇದಮಾತೆಯೇ,ಮಹಾವಿದ್ಯಾಪ್ರದಾಯಿನಿಯೇ,ಬ್ರಹ್ಮ ವಿದ್ಯಾಪಾರಂಗತಳೇ,ಸೂರ್ಯನೊಡನೆ ಸದಾ ಇರುವ ಮಾತೆಯೇ ನಿನಗಿದೋ ಪ್ರಣಾಮಗಳು. ಅನಂತಕೋಟಿ ಬ್ರಹ್ಮಾಂಡವ್ಯಾಪಿನಿ ಬ್ರಹ್ಮಚಾರಿಣಿ | ನಿತ್ಯಾನಂದೇ ಮಹಾಮಾಯೇ ಪರೇಶಾನಿ ನಮೋಸ್ತುತೇ ||೩||     ಹೇ! ಅಮ್ಮಾ; ಬ್ರಹ್ಮಚಾರಿಣಿಯೇ,ಬ್ರಹ್ಮಾಂಡವನ್ನು ವ್ಯಾಪಿಸಿರುವವಳೇ,ನಿರಂತರ ಆನಂದ ದಾಯಕಿಯಾಗಿ ಮಾಯಾಸ್ವರೂಪಿಣಿಯೂ ಆಗಿರುವ ಮಾತೆಯೇ, ನಿನಗಿದೋ ಪ್ರಣಾಮಗಳು. ತ್ವಂ ಬ್ರಹ್ಮಾ ತ್ವಂ ಹರಿ: ಸಾಕ್ಷಾದ್ ರುದ್ರಸ್ತ್ವಮಿಂದ್ರ ದೇವತಾ | ಮಿತ್ರಸ್ತ್ವಂ ವರುಣಸ್ತ್ವಂ ಚ ತ್ವಮ್ ಅಗ್ನಿರಶ್ವಿನೌ ಭಗ: ||೪||     ಹೇ! ಅಮ್ಮಾ: ನೀನು ಬ್ರಹ್ಮ ಸ್ವರೂಪಿಯು. ನೀನು ಹರಿ ಸ್ವರೂಪಳು.ಸಾಕ್ಷಾತ್ ರುದ್ರ ಸ್ವರೂಪಿಣಿಯೂ ಇಂದ್ರ ದೇವತೆಯೂ ಆಗಿರುವೆ.ನೀನೇ ಸೂರ್ಯ,ಚಂದ್ರ, ಅಗ್ನಿ,ವರುಣ,ಅಶ್ವಿನೀ ದೇವತೆಯರೂ ಆಗಿರುವೆ.ತಾಯಿಯೇ ನಿನಗಿದೋ ಪ್ರಣಾಮಗಳು. ಪೂಷಾರ್ಯಮಾ ಮರುತ್ವಾಂಶ್ಚ ಋಷಯೋsಪಿ ಮುನೀಶ್

ನದೀ ತಾರತಮ್ಯ ಸ್ತೋತ್ರಮ್ - ಶ್ರೀ ರಾಘವೇಂದ್ರಯತಿಕೃತ

ವಿಷ್ಣುಪಾದಾಬ್ಜ ಸಂಭೂತಾ ಗಂಗಾ ಸರ್ವಾಧಿಕಾ ಮತಾ | ತತೋ ಗೋದಾವರೀ ನ್ಯೂನಾ ಕೃಷ್ಣವೇಣೀ ತತೋsಧಮಾ || 1 || ಸ್ವಾಮಿ ಚಂದ್ರಾ ಪುಷ್ಕರಿಣ್ಯೌ ಮಾನಸಂ ಚ ಸರೋವರಂ | ಕೃಷ್ಣವೇಣ್ಯಾ ಸಮಸ್ತಾಭ್ಯ ಕಾವೇರೀ ಚ ಸರಸ್ವತೀ || 2 || ಹಿನೇsನ್ಯೋನ್ಯಸಮೇ ತಾಭ್ಯಾಮೂನಾ ಚ ಸರಯೂ ತಥಾ | ತುಂಗಭದ್ರಾ ಸಮಾ ತಸ್ಯಾಃ ಕಾಲಿಂದ್ಯೂನಾ ತತೋsಧಮೇ || 3 || ನರ್ಮದಾಸಿಂಧುಸರಿತೌ ತತ್ಸಮಾ ಭವನಾಶಿನೀ | ತತಃ ಕುಮುದ್ವತೀನೀಚಾ ತತೋ ನೀಚಾ ಮಲಾಪಹಾ || 4 || ತಾಮ್ರಪರ್ಣೀ ಭೀಮರಥೀ ವಂಜುಲಾ ಚ ಪಿನಾಕಿನೀ | ಪೃಥಕ್ ಸಾಗರಗಾಮಿನ್ಯೋ ನದ್ಯೋ ಭೀಮರಥೀಸಮಾಃ || 5 || ತತೋsನ್ಯಾಃ ಸರಿತೋ ನೀಚಾಸ್ತಟಾಕಾಶ್ಚ ತತೋsಧಮಾಃ | ತತೋ ನೀಚಾಃ ಪುಷ್ಕರೀಣ್ಯೋ ದೇವಖಾತಾಶ್ಚ ತತ್ಸಮಾಃ || 6 || ತತೋ ವಾಪ್ಯೋsಧಮಾಸ್ತಾಭ್ಯಃ ಕೂಪಾಃ ಸವಾಧಮಾ ಮತಾಃ| ಸ್ವೋತ್ತಮಾರ್ಘ್ಯಂ ಪ್ರದಾತವ್ಯಂ ಅವರಾಸು ನ ಚಾನ್ಯಥಾ || 7 || ರಾಘವೇಂದ್ರೇಣ ಯತಿನಾ ಬ್ರಹ್ಮಾಂಡಾಖ್ಯಂ ಪುರಾಣಗಃ | ಇತ್ಯಧ್ವ್ರತಃ ಸಾರಭಾಗೋ ನದೀ ನೀಚೋಚ್ಚ ಸೂಚಕಃ || 8 || || ಇತಿ ಶ್ರೀ ರಾಘವೇಂದ್ರಯತಿಕೃತ ನದೀತಾರತಮ್ಯಸ್ತೋತ್ರಂ ||

ನವಗ್ರಹ ಸ್ತೋತ್ರಮ್

ನಮ: ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ | ಗುರುಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮ: ||     ನವಗ್ರಹರಾದ ಸೂರ್ಯ,ಚಂದ್ರ, ಕುಜ,ಬುಧ,ಗುರು,ಶುಕ್ರ,ಶನಿ ರಾಹು ಮತ್ತು ಕೇತು ಗ್ರಹಗಳಿಗೆ ಪ್ರಣಾಮಗಳು. ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ | ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಮ್ ||೧||     ದಾಸವಾಳ ಪುಷ್ಪದ ಸಾದೃಶ್ಯವುಳ್ಳವನೂ, ಕಶ್ಯಪ ತನಯನೂ, ಮಹಾ ಕಾಂತಿಯಿಂದ ಕೂಡಿದವನೂ,ಕತ್ತಲಿನ ವೈರಿಯೂ, ಸರ್ವ ಪಾಪಗಳ ವಿನಾಶಕನೂ ಆಗಿರುವ ಸೂರ್ಯ ದೇವನಿಗೆ ನಮಸ್ಕರಿಸುವೆ. ದಧಿ ಶಂಖ ತುಷಾರಾಭಂ ಕ್ಷೀರೋದಾರ್ಣವ ಸಂಭವಮ್ | ನಮಾಮಿ ಶಶಿನಂ ಸೋಮಂ ಶಂಭೋರ್ಮುಕುಟ ಭೂಷಣಂ ||೨||     ಮೊಸರು,ಶಂಖ,ಹಾಗೂ ಮಂಜಿನಹನಿಗಳವರ್ಣವುಳ್ಳವನೂ,ಕ್ಷೀರಸಾಗರದಿಂದ ಉದ್ಭವಿಸಿದವನೂ,ಪರಶಿವನ ಶಿರೋಭೂಷಣನೂ ಆಗಿರುವ ಸೌಮ್ಯಸ್ವರೂಪಿಯಾಗಿರುವ ಚಂದ್ರನಿಗೆ ನಾನು ನಮಸ್ಕರಿಸುವೆ. ಧರಣೀಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ | ಕುಮಾರಂ ಶಕ್ತಿಹಸ್ತಂಚ ಮಂಗಲಂ ಪ್ರಣಮಾಮ್ಯಹಮ್ ||೩||     ಪೃಥ್ವಿಯ ಗರ್ಭ ಸಂಜಾತನೂ,ವಿದ್ಯುತ್ತಿನ ಪ್ರಕಾಶ ಸದೃಶವಾದ ಬೆಳಕನ್ನು ಹೊಂದಿರುವವನೂ,ಕುಮಾರನೂ ಶಕ್ತಿಹಸ್ತನೂ ಆಗಿರುವ ಮಂಗಲದಾಯಕನಾದ ಕುಜನಿಗೆ ನಾನು ನಮಸ್ಕರಿಸುವೆ. ಪ್ರಿಯಂಗುಕಲಿಕಾಶ್ಯಾಮಂ ರೂಪೇಣಾಪ್ರತಿಮಂ ಬುಧಮ್ | ಸೌಮ್ಯಂ ಸೌಮ್ಯಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್ ||೪||     ಹಿಪ್ಪಲಿಯ ಮೊಗ್ಗಿನಂತೆ ನೀಲವರ್ಣನೂ,ಅಪ್ರತಿಮರೂಪವುಳ್ಳವನೂ,ಸೌಮ್ಯ ಸ್ವಭಾವದವನೂ,ಶಾಸ್ತ

ವಿಷ್ಣುಸೂಕ್ತ

ಓಂ ಅತೋ ದೇವಾ ಅವಂತು ನೋ ಯತೋ ವಿಷ್ಣುರ್ವಿಚಕ್ರಮೇ | ಪೃಥಿವ್ಯಾಃ ಸಪ್ತಧಾಮಭಿಃ ||1||     ವಿಷ್ಣುವು ಅಸುರರ ವಶದಲ್ಲಿದ್ದ ಭೂಮಿಯೇ ಮೊದಲಾದ ಏಳು ಲೋಕಗಳನ್ನು ಆಕ್ರಮಿಸಿ ದೇವತೆಗಳನ್ನು ಅವರಿಗೆ ಯೋಗ್ಯವಾದ ಸ್ಥಾನಗಳಲ್ಲಿ ಸ್ಥಾಪಿಸಿದ್ದಾನೆ. ಅಂಥಹ ದೇವತೆಗಳು ನಮ್ಮನ್ನು ರಕ್ಷಿಸಲಿ. ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಂ | ಸಮೂಹ್ಳಮಸ್ಯ ಪಾಂಸುರೇ ||2||     ವಿಷ್ಣುವು ಕೇವಲ ಮೂರು ಹೆಜ್ಜೆಗಳನ್ನು ಇಟ್ಟು ಇಡೀ ವಿಶ್ವವನ್ನೇ ಆಕ್ರಮಿಸಿದನು. ವಿಶ್ವವು ವಿಷ್ಣುವಿನ ಪಾದದಲ್ಲಿ ಧೂಳಿನಂತೆ ಶೋಭಿಸಿತು. ತ್ರೀಣಿ ಪದಾ ವಿಚಕ್ರಮೇ ವಿಷ್ಣುರ್ಗೋಪಾ ಅದಾಭ್ಯಃ | ತತೋ ಧರ್ಮಾಣಿ ಧಾರಯನ್ ||3||     ಅಮಿತ ಶಕ್ತಿಯುಳ್ಳ ವಿಷ್ಣುವು ಮೂರು ಲೋಕಗಳನ್ನು ಮೀರಿ ನಿಂತವನು. ಅವುಗಳಿಗೆ ಆತ ರಕ್ಷಕನಾಗಿರುವನು. ವಿಶ್ವಧಾರಕನೂ ಆಗಿರುವುದರಿಂದ ದೇವತೆಗಳಿಗೂ ಅವನೇ ಧಾರಕನಾಗಿರುವನು. ವಿಷ್ಣೋಃ ಕರ್ಮಾಣಿ ಪಶ್ಯತ ಯತೋ ವ್ರತಾನಿ ಪಸ್ಪಶೇ | ಇಂದ್ರಸ್ಯ ಯುಜ್ಯಸ್ಸಖಾ ||4||     ವಿಷ್ಣುವು ಮಾಡುವ ಲೀಲೆಗಳನ್ನು ನೋಡಿರಿ. ಜೀವಿಗಳ ಎಲ್ಲ ಕಾರ್ಯಗಳೂ ಅವನಿಂದಲೇ ನಡೆಯುತ್ತಿವೆ. ಅವನು ಇಂದ್ರ ಮತ್ತುವಾಯುವಿಗೆ ಸದಾ ಜೊತೆಯಲ್ಲಿರುವ ಮಿತ್ರನಾಗಿದ್ದಾನೆ. ತದ್ವಿಷ್ಣೋಃ ಪರಮಂ ಪದಂ ಸದಾ ಪಶ್ಯಂತಿ ಸೂರಯಃ | ದಿವೀವ ಚಕ್ಷುರಾತತಮ್ ||5||     ಆ ವಿಷ್ಣುವಿನ ಶ್ರೇಷ್ಠವಾದ ಸ್ವರೂಪವನ್ನು ಯೋಗಿಗಳು ಸದಾಕಾಲವೂ ನೋಡುತ್ತಿರುತ್ತಾರೆ. ತೇಜೋರೂಪವಾದ ಅವನ ಪ್ರಭೆಯು ಆಕಾಶದಲ್ಲಿ

ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತಾ ಸದಾಚಾರಸ್ಮೃತಿಃ

ವೈಷ್ಣವರ ಕರ್ಮಾಚರಣೆಯ ವಿಧಿವಿಧಾನಗಳನ್ನು ಶ್ರುತಿಸ್ಮೃತಿಗಳ ಅನುಸಾರವಾಗಿ ಶಿಷ್ಯರಿಗೆ ಬೋಧಿಸಿ ಉದ್ಧರಿಸಲಿಕ್ಕಾಗಿ ಶ್ರೀಮಧ್ವಾಚಾರ್ಯರು ರಚಿಸಿರುವ ಸುಮಾರು 39 ಶ್ಲೋಕಗಳ ಅತ್ಯಂತ ಮಹತ್ವವಾದ ಚಿಕ್ಕ ಗ್ರಂಥವೇ ಸದಾಚಾರಸ್ಮೃತಿ. ಮೊದಲಿಗೆ ಅಚ್ಯುತನ ಸ್ಮರಣೆಯೊಂದಿಗೆ ಶ್ರೀಮದಾಚಾರ್ಯರು ಈ ಕೃತಿಯನ್ನು ಪ್ರಾರಂಭಿಸುತ್ತಿದ್ದಾರೆ. ಯಸ್ಮಿನ್ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮ ಚೇತಸಾ | ನಿರಾಶೀರ್ನಿಮಮೋ ಯಾತಿ ಪರಂ ಜಯತಿ ಸೋsಚ್ಯುತಃ || 1 ||     ಚತುರ್ವಿಧ ನಾಶರಹಿತನಾದ ಅಚ್ಯುತನು ಸವೋತ್ಕೃಷ್ಣನು. ಪರಮಾತ್ಮನ ಬಗ್ಗೆ ಈ ರೀತಿಯ ಜ್ಞಾನವನ್ನು ಹೊಂದಿದ ಸಾಧಕನು ಮಮಕಾರ ಮತ್ತು ಅಹಂಕಾರಗಳನ್ನು ತ್ಯಜಿಸಿ, ಯಾವುದೇ ಐಹಿಕ ಆಸೆ ಆಕಾಂಕ್ಷೆಗಳನ್ನು ಹೊಂದದೆ ತಾನು ಮಾಡುವ ಎಲ್ಲ ಕರ್ಮಗಳೂ ಸ್ವತಂತ್ರನಾದ ಪರಮಾತ್ಮನಿಂದಲೇ ಆಗುತ್ತಿವೆ, ತಾನು ಕೇವಲ ಉಪಕರಣ ಎಂದು ಭಾವಿಸಿ, ಎಲ್ಲ ಕರ್ಮಗಳನ್ನೂ ಪರಮಾತ್ಮನಿಗೆ ಭಕ್ತಿಯಿಂದ ಸಮರ್ಪಿಸಬೇಕು. ಹೀಗೆ ಮಾಡುವುದೇ ಗೀತೋಕ್ತ ನಿಷ್ಕಾಮ ಕರ್ಮ. ಇದರಿಂದ ಅಪರೋಕ್ಷಜ್ಞಾನ ದ್ವಾರಾ ಪರಮಾತ್ಮನ ಪರಮಪ್ರಸಾದವಾದ ವೋಕ್ಷಪ್ರಾಪ್ತಿ ಎಂಬ ಪ್ರಮೇಯವನ್ನು ಶ್ರೀಮದಾಚಾರ್ಯರು ಈ ಮಂಗಲ ಶ್ಲೋಕದಲ್ಲಿ ತಿಳಿಸಿದ್ದಾರೆ. ಸ್ಮೃತ್ವಾ ವಿಷ್ಣುಂ ಸಮುತ್ಥಾಯ ಕೃತಶೌಚೋ ಯಥಾವಿಧಿ | ಧೌತದಂತಃ ಸಮಾಚಮ್ಯ ಸ್ನಾನಂ ಕುರ್ಯಾದ್ವಿಧಾನತಃ || 2 ||     ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿಯೇ ಹಾಸಿಗೆಯಿಂದ ಮೇಲಕ್ಕೇಳಬೇಕು. ಸೂರ್ಯೋದಯಕ್ಕಿಂತ ಮೊದಲಿ

ಶ್ರೀ ರಾಘವೇಂದ್ರತೀರ್ಥಕೃತ ಶ್ರೀರಾಮಚಾರಿತ್ರ್ಯ ಮಂಜರೀ

Image
ಶ್ರೀಮಾನ್ ಪೂರ್ವಂ ಪ್ರಜಾತೋ ದಶರಥನೃಪತೇ ರಾಮನಾಮಾsಥ ನೀತೋ | ವಿಶ್ವಾಮಿತ್ರೇಣ ಮಂತ್ರಾಹೃದನುಜಸಹಿತಸ್ತಾಟಕಾಘಾತುಕೋsಸ್ತ್ರಮ್ | ಬ್ರಹ್ಮಾದ್ಯಂ ಪ್ರಾಪ್ಯ ಹತ್ವಾ ನಿಶಿಚರನಿಕರಂ ಯಜ್ಞಪಾಲೋ ವಿಮೋಚ್ಯಾ - ಹಲ್ಯಾಮ್ ಶಾಪಂ ಚ ಭಂಕ್ತ್ವಾಶಿವಧನುರುಪಯನ್ ಜಾನಕೀಂನಃ ಪ್ರಸೀದೇತ್ | 1 |     ಶ್ರೀಮನ್ನಾರಾಯಣನು ದಶರಥ-ಕೌಸಲ್ಯ ರಾಜದಂಪತಿಗಳ ಪುತ್ರನಾಗಿ "ರಾಮ"ನೆಂಬ ಹೆಸರಿನಿಮದವತರಿಸಿ, ವಿಶ್ವಾಮಿತ್ರರೊಂದಿಗೆ ಯಜ್ಞ ರಕ್ಷಣೆಗಾಗಿ ಸಿದ್ಧಾಶ್ರಮವನ್ನು ಕುರಿತು ಹೊರಟು ತಾಟಕೀ ಎಂಬ ರಾಕ್ಷಸಿಯನ್ನು ಸಂಹರಿಸಿ, ವರ ಪಡೆದ ನಿಶಾಚರರಾದ ಸುಬಾಹು ಮೊದಲಾದ ರಾಕ್ಷಸರ ಸಮೂಹವನ್ನೇ ನಿಗ್ರಹಿಸಿ ಯಜ್ಞವನ್ನು ರಕ್ಷಿಸಿ ಗೌತಮರ ಪತ್ನಿಯಾದ ಅಹಲ್ಯೆಯ ಶಾಪ ವಿಮೋಚನೆ ಮಾಡಿ, ಶಿವಧನಸ್ನು ಮುರಿದು ಜನಕರಾಜನ ಪುತ್ರಿಯಾದ ಜಾನಕಿಯನ್ನು ವಿವಾಹವಾದ ಶ್ರೀಮನ್ನಾರಾಯಣನು ನಮಗೆ ಪ್ರಸನ್ನನಾಗಲಿ. ಆಯನ್ ರಾಮಸ್ಸಭಾರ್ಯೋsಧ್ವನಿ ನಿಜಸಹಜೈರ್ಭಾರ್ಗವೇಷ್ವಾಸರೋಪಾತ್ ತದ್ಗಂ ಹತ್ವಾ ಸುರಾರಿಂ ಪುರಗ ಉತ ನುತಸ್ತಾಪಸೈರ್ಭೋಪಪೃಷ್ಟ್ಯೈಃ | ಕಲ್ಯಾಣಾನಂತಧರ್ಮೋsಗುಣಲವಹರಿತಃ ಪ್ರಾಣಿನಾಮಂತರಾತ್ಮೇ - ತ್ಯಾದ್ಯುಕ್ತಶ್ಚಾಭಿಷೇಕೇ ಪುರಜನಮಹಿತೋ ಮಹ್ಯತಾಂ ಮೇ ವಚೋಭಿಃ || 2 ||     ಪತ್ನೀ ಸಮೇತನಾಗಿ, ಲಕ್ಷ್ಮಣಾದಿಗಳೊಡನೆ, ರಾಮಚಂದ್ರದೇವರು, ಅಯೋಧ್ಯೆಯನ್ನು ಕುರಿತು ಹೊರಡುವಾಗ ಮಾಗಮಧ್ಯದಲ್ಲಿ ತನ್ನದೇ ರೂಪವಾದ ಭಾರ್ಗವರಾಮ (ಪರಶುರಾಮ)ನನ್ನು ಸಂಧಿಸಿ ಅವನು ನೀಡಿದ ಧನಸ್ಸಿನಿಂದ ಪ

ಪುರುಷಸೂಕ್ತ

||ಸಹಸ್ರಶೀರ್ಷಾ ನಾರಾಯಣೋ ಋಷಿಃ ಪುರುಷೋ ದೇವತಾ  ಅನುಷ್ಟುಪ್ ಛಂದಃ ಅಂತ್ಯಾ ತ್ರಿಷ್ಟುಪ್ ಮಹಾಭಿಷೇಕೇ ವಿನಿಯೋಗಃ || ಓಂ ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರ ಪಾತ್ | ಸಃ ಭೂಮಿಂ ವಿಶ್ವತೋ ವೃತ್ತ್ವಾsತ್ಯತಿಷ್ಟದ್ದಶಾಂಗುಲಮ್ ||1||     ಪುರುಷ ಶಬ್ದದಿಂದ ಮುಖ್ಯತಃ ವಾಚ್ಯನಾದ ನಾರಾಯಣನ ಶಿರಸ್ಸುಗಳು, ಕಣ್ಣುಗಳು, ಪಾದಗಳು, ಉಪಲಕ್ಷಣಯಾ ತೊಡೆ ಮೊದಲಾದ ಎಲ್ಲ ಅಂಗಗಳೂ ಅನಂತವಾಗಿವೆ. ಇಲ್ಲಿ ಸಹಸ್ರ ಶಬ್ದವು ಅನಂತವನ್ನು ಹೇಳುತ್ತದೆ. ಈ ಪುರಷನು ಭೂಮಿ ಶಬ್ದದಿಂದ ವಾಚ್ಯವಾದ ಬ್ರಹ್ಮಾಂಡದೊಳಗಿನ ಸಮಸ್ತ ಜಗತ್ತನ್ನು ಬಹಳವಾಗಿ ವ್ಯಾಪಿಸಿದ್ದರೂ ಅಂಗುಷ್ಟ ಗಾತ್ರದ ಹೃದಯದಲ್ಲಿಯೂ ಇರುತ್ತಾನೆ. ಅಂದರೆ ಅಲ್ಪವಾದ ಹೃದಯದಲ್ಲಿದ್ದು ಅಚಿಂತ್ಯ ಶಕ್ತಿಯಿಂದ ಇಡೀ ಬ್ರಹ್ಮಾಂಡವನ್ನು ವ್ಯಾಪಿಸಿರುತ್ತಾನೆ. ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಚ ಭವ್ಯಮ್ | ಉತಾಮೃತತ್ವಾಸ್ಯೇಶಾನೋ ಯದನ್ನೇನಾತಿರೋಹತಿ ||2||     ಹಿಂದೆ ಆಗಿಹೋದ, ಈಗಿರುವ ಮತ್ತು ಮುಂದೆ ಬರಲಿರುವ ಸಕಲ ಜಗತ್ತು ಸದಾ ಕಾಲದಲ್ಲಿಯೂ ಈ ಪುರುಷನ ಅಧೀನವೇ ಆಗಿರುವುದು. ಆತನೇ ಮುಕ್ತರಿಗೂ ಅಮುಕ್ತರಿಗೂ ಮತ್ತು ಮುಕ್ತಿಗೂ ಸ್ವಾಮಿಯು. ಅಂದರೆ ಮುಕ್ತರಿಗೂ ಅಮುಕ್ತರಿಗೂ ಆಶ್ರಯನು. ಈ ಪುರುಷನು ಅನ್ನ ಶಬ್ದದಿಂದ ವಾಚ್ಯಳಾದ ಶ್ರೀರಮಾದೇವಿಯನ್ನೂ ಮೀರಿನಿಂತಿರುವನು. ಏತಾವಾನಸ್ಯ ಮಹಿಮಾsತೋ ಜ್ಯಾಯಾಂಶ್ಚ ಪೂರುಷಃ | ಪಾದೋsಸ್ಯ ವಿಶ್ವಾಭೂತಾನಿ ತ್ರಿಪಾದಸ್ಯಾಮೃತಂ ದಿವಿ ||3||     "ಸಹಸ್ರಶೀ

ಕನಕಧಾರಾ ಸ್ತೋತ್ರ

Image
ಕನಕಧಾರಾ ಸ್ತೋತ್ರದ ವಿಶೇಷ - ಹಿನ್ನೆಲೆ     ಶ್ರೀ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಅದ್ವೈತಕೇಸರಿ ಜಗದ್ಗುರು ಶ್ರೀ ಶಂಕರಾಚಾರ್ಯರಿಂದ ವಿರಚಿತವಾದ ಕನಕಧಾರಾ ಸ್ತೋತ್ರವನ್ನು ನಿತ್ಯವೂ ಪಠಿಸುವುದರಿಂದ ನಮ್ಮ ಸಕಲ ಮನೋಕಾಮನೆಗಳು ಪೂರ್ಣಗೊಳ್ಳುವುದರ ಜೊತೆಗೆ ಪ್ರಾಪಂಚಿಕ, ಪಾರಮಾರ್ಥಿಕ ಎರಡೂ ಸಾಧನೆಗಳು ಪೂರ್ಣಗೊಳ್ಳುತ್ತವೆ. ನಮಗೆ ಧನ - ಕನಕ, ಸಿರಿ - ಸಂಪತ್ತು, ಐಶ್ವರ್ಯ, ಯಶಸ್ನು, ಸೌಭಾಗ್ಯ, ವಿಜಯಗಳನ್ನು ದಯಪಾಲಿಸುವ ಮಹಾ ಕಾಮಧೇನು " ಕನಕಧಾರಾ ಸ್ತೋತ್ರ "     ಭಾಗ್ಯವಂತರ ಮನೆಗಳಲ್ಲಿ ಐಶ್ವರ್ಯ ಸ್ವರೂಪಳಾಗಿ, ಜ್ಞಾನಿಗಳ ಅಂತರಂಗದಲ್ಲಿ ಬುದ್ಧಿಸ್ವರೂಪಳಾಗಿ, ಭಕ್ತರ ಹೃದಯದಲ್ಲಿ ಶ್ರದ್ಧಾ ಸ್ವರೂಪಳಾಗಿ, ಮೋಕ್ಷೇಚ್ಛುಗಳ ಆಂತರ್ಯದಲ್ಲಿ ಮುಕ್ತಿಸ್ವರೂಪಳಾಗಿ ರಾರಾಜಿಸುತ್ತಿರುವ ಮಹಾಲಕ್ಷ್ಮಿಯ ಕರುಣಾ ಕಟಾಕ್ಷ ಶ್ರೀ ಶಂಕರಾಚಾರ್ಯರ ಕೃಪಾಶೀರ್ವಾದದಿಂದ ಚಿನ್ನದ ಮಳೆಯನ್ನೇ ಕರೆದ ಮಹಾಸ್ತೋತ್ರವೇ " ಕನಕಧಾರಾ ಸ್ತೋತ್ರ ". ಅದರ ಹಿನ್ನೆಲೆ ಹೀಗೆದೆ.     ಪರಮಹಂಸ ಪರಿವ್ರಾಜಕ ಶ್ರೀ ಶಂಕರಭಗವತ್ಪಾದರು ಸನ್ಯಾಸಿಗಳಾದ್ದರಿಂದ ಮಧುಕರ ( ಭಿಕ್ಷೆ ) ವೃತ್ತಿಯನ್ನು ಅನುಸರಿಸುತ್ತಿದ್ದರು. ತಮ್ಮ ದಿಗ್ವಿಜಯ ಸಂಚಾರ ಕಾಲದಲ್ಲಿ ಒಮ್ಮೆ ಕೇರಳದ ಕುಗ್ರಾಮವೋಂದಕ್ಕೆ ಬರುತ್ತಾರೆ. ತಮ್ಮ ಶಿಷ್ಯರೊಡಗೂಡಿ         ದೈವಭಕ್ತನಾದ ಒಬ್ಬ ಬಡ ಬ್ರಾಹ್ಮಣನ ಮನೆಯ ಮುಂದೆನಿಂತು, "ಭವತಿ ಭಿಕ್ಷಾಂದೇಹಿ " ಎಂದು ಭಿಕ್

ಅನ್ನ ಪೂರ್ಣಾ ಸ್ತೋತ್ರಮ್

Image
ನಿತ್ಯಾನಂದಕರೀ ವರಾಭಯಕರೀ ಸೌಂದರ್ಯರತ್ನಾಕರೀ ನಿರ್ಧೂತಾಖಿಲಘೋರಪಾವನಕರೀ ಪ್ರತ್ಯಕ್ಷಮಾಹೇಶ್ವರೀ | ಪ್ರಾಲೇಯಾಚಲವಂಶಪಾವನಕರೀ ಕಾಶೀಪುರಾಧೀಶ್ವರೀ ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||೧|| ನಿತ್ಯವೂ ಆನಂದವನ್ನು ನೀಡುವವಳೂ,ಭಕ್ತರಿಗೆ ವರವನ್ನೂ ಅಭಯವನ್ನೂ ಕರುಣಿಸುವವಳೂ,ಸೌಂದರ್ಯದ ನಿಧಿಯೂ,ಭಕ್ತರ ಪಾಪಗಳನ್ನು ಕಳೆದು ಅವರನ್ನು ಪಾವನರನ್ನಾಗಿಸುವವಳೂ,ಸಾಕ್ಷಾತ್ ಮಾಹೇಶ್ವರೀ ಸ್ವರೂಪಳೂ,ಪರ್ವತರಾಜನ ವಂಶವನ್ನು ಪುನೀತಗೊಳಿಸಿದವಳೂ,ಕಾಶೀ ಪಟ್ಟಣದ ಅಧೀಶ್ವರಿಯೂ,ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು. ನಾನಾರತ್ನವಿಚಿತ್ರಭೂಷಣಕರೀ ಹೇಮಾಂಬರಾಡಂಬರೀ ಮುಕ್ತಾಹಾರವಿಲಂಬಮಾನವಿಲಸದ್ವಕ್ಷೋಜಕುಂಭಾಂತರೀ | ಕಾಶ್ಮೀರಾಗರುವಾಸಿತಾ ರುಚಿಕರೀ ಕಾಶೀಪುರಾಧೀಶ್ವರೀ ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||೨|| ವಿಧವಿಧವಾಗಿರುವ ಚಿತ್ರವಿಚಿತ್ರವಾಗಿರುವ ಆಶ್ಚರ್ಯಕಾರಕವಾದ ರತ್ನಾಭರಣಗಳನ್ನು ಧರಿಸಿದವಳೂ ಹೊಂಬಣ್ಣದ ವಸನಗಳಿಂದ ಶೋಭಿಸುತ್ತಿರುವವಳೂ,ವಕ್ಷಸ್ಥಳದ ಮೇಲೆ ಪ್ರಕಾಶಮಾನವಾದಂತಹಾ ಮುತ್ತಿನ ಹಾರವನ್ನು ಧರಿಸಿಕೊಂಡಿರುವವಳೂ,ಕೇಸರಿ-ಅಗರುಗಳಿಂದ ಸುವಾಸಿತಳಾದವಳೂ,ಕಾಂತಿಯುತಳಾಗಿರುವವಳೂ ಕಾಶೀ ಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು. ಯೋಗಾನಂದಕರೀ ರಿಪುಕ್ಷ

ಅಭಿಲಾಷಾಷ್ಟಕಂ

Image
ಕದಾ ಪಕ್ಷೀಂದ್ರಾಂಸೋಪರಿ ಗತಮಜಂ ಕಂಚನಯನಂ ರಮಾಸಂಶ್ಲಿಷ್ಟಾಂಗಂ ಗಗನರುಚಮಾಪೀತವಸನಂ | ಗದಾಶಂಖಾಂಭೋಜಾರಿವರಮಾಲೋಕ್ಯ ಸುಚಿರಂ ಗಮಿಷ್ಯತ್ಯೇತನ್ಮೇ ನನು ಸಫಲತಾಂ ನೇತ್ರಯುಗಲಂ || 1 ||     ಪಕ್ಷಿಗಳ ರಾಜನನ್ನು ವಾಹನವಾಗಿಸಿಕೊಂಡಿರುವ, ಜನ್ಮರಹಿತನಾದ, ಕಮಲದ ಕಣ್ಣುಗಳುರುವ, ಶರೀರವೆಲ್ಲಾ ರಮಾಳಿಂದ ( ಲಕ್ಷ್ಮೀದೇವಿಯಿಂದ ) ಆಲಂಗಿಸಿರುವ, ಆಕಾಶದ ನೀಲವರ್ಣವಿರುವ, ಪೀತಾಂಬರವನ್ನು ಧರಿಸಿರುವ, ಶಂಖ - ಚಕ್ರ - ಗದಾ - ಪದ್ಮಗಳನ್ನು ಹಿಡಿದಿರುವ ಅವನನ್ನು ಈ ನನ್ನ ಕಣ್ಣುಗಳು ನೋಡುವ ಸೌಭಾಗ್ಯವೆಂದು ? ಕದಾ ಕ್ಷೀರಾಬ್ಧ್ಯಂತಃ ಸುರತರುವನಾಂತರ್ಮಣಿಮಯೇ ಸಮಾಸೀನಂ ಪೀಠೇ ಜಲಧಿತನಯಾಲಿಂಗಿತತನುಂ | ಸ್ತುತಂ ದೇವೈರ್ನಿತ್ಯಂ ಮುನಿವರಕದಂಬೈರಭಿನುತಂ ಸ್ತವೈಃ ಸಂತೋಷ್ಯಾಮಿ ಶ್ರುತಿವಚನಗರ್ಭೈ ಸುರಗುರುಂ || 2 ||     ಕ್ಷೀರಸಾಗರದಲ್ಲಿ, ಕಲ್ಲವೃಕ್ಷದ ನೆರಳಿನಲ್ಲಿ ಮಣಿಗಳಿಂದ ಅಲಂಕೃತವಾದ ಪೀಠದಲ್ಲಿ ಆಸೀನವಾಗಿರುವ, ಸಮುದ್ರ ರಾಜನ ಮಗಳ ( ಲಕ್ಷ್ಮಿಯ ) ಕಣ್ಣುಗಳಿಂದ ಆಲಂಗಿಸಲ್ಪಟ್ಟ, ದೇವ - ಮುನಿಗಳಿಂದ ಸ್ತುತಿಸಲ್ಪಡುವವನನ್ನು ನಾನೆಂದು ಹಾಡಿ ಸ್ತುತಿಸಲು ಶಕ್ತನಾಗುವೆನು ? ಕದಾಮಾಭೀತಂ ಭಯಜಲಧಿತಸ್ತಾಪಸತನುಂ ಗತಾ ರಾಗಂ ಗಂಗಾತಟಗಿರಿಗುಹಾವಾಸಸಹನಂ | ಲಪಂತಂ ಹೇ ವಿಷ್ಣೋ ಸುರವರ ರಮೇಶೇತಿ ಸತತಂ ಸಮಭ್ಯೇತ್ಯೋದಾರಂ ಕಮಲನಯನೋ ವಕ್ಷ್ಯತಿ ವಚಃ || 3 ||     ಸಂಸಾರ ಸಾಗರದಿಂದ ಭಯಗೊಂಡು ಗಂಗಾತೀರದ ಪರ್ವತ ಗುಹೆಗಳನ್ನೇ ವಾಸಸ್ಥಾನ ಮಾಡಿಕೊಂಡ ಹೇ ವಿಷ್ಣು! ದೇವ